AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಪೊಲೀಸ್ ಅಧಿಕಾರಿಯ ಕೊಲೆ ಮಾಡಿ ಅವರ ಠಾಣೆಯಲ್ಲೇ ಶರಣಾದ ಸಿಆರ್​ಪಿಎಫ್ ಜವಾನ

ಕೆಲವೊಮ್ಮೆ ನಂಬಿದವರೇ ಕುತ್ತಿಗೆ ಕೊಯ್ಯುವ ಕೆಲಸ ಮಾಡುತ್ತಾರೆ. ಮಹಿಳಾ ಎಎಸ್​ಐ ಹಾಗೂ ಸಿಆರ್​ಪಿಎಫ್​ ಯೋಧರಿಬ್ಬರೂ ಲಿವಿಂಗ್ ಸಂಬಂಧದಲ್ಲಿದ್ದರು. ಯಾವುದೋ ಕಾರಣಕ್ಕೆ ಕೋಪಗೊಂಡು ಯೋಧ ಮಹಿಳಾ  ಪೊಲೀಸ್(Police) ಅಧಿಕಾರಿಯನ್ನು ಕೊಲೆ ಮಾಡಿ ಕೊನೆಗೆ ಅವರು ನಿಯೋಜನೆಗೊಂಡಿದ್ದ ಪೊಲೀಸ್​ ಠಾಣೆಯಲ್ಲೇ ಶರಣಾಗಿರುವ ಘಟನೆ ಗುಜರಾತ್​ನ ಕಚ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಎಲ್ಲೆಡೆ ಸಂಚಲನ ಮೂಡಿಸಿದೆ.

ಮಹಿಳಾ ಪೊಲೀಸ್ ಅಧಿಕಾರಿಯ ಕೊಲೆ ಮಾಡಿ ಅವರ ಠಾಣೆಯಲ್ಲೇ ಶರಣಾದ ಸಿಆರ್​ಪಿಎಫ್ ಜವಾನ
ಅರುಣಾ
ನಯನಾ ರಾಜೀವ್
|

Updated on:Jul 20, 2025 | 12:21 PM

Share

ಕಚ್, ಜುಲೈ 20: ಕೆಲವೊಮ್ಮೆ ನಂಬಿದವರೇ ಕುತ್ತಿಗೆ ಕೊಯ್ಯುವ ಕೆಲಸ ಮಾಡುತ್ತಾರೆ. ಮಹಿಳಾ ಎಎಸ್​ಐ ಹಾಗೂ ಸಿಆರ್​ಪಿಎಫ್​ ಯೋಧ ಈ ಇಬ್ಬರೂ ಲಿವಿಂಗ್ ಸಂಬಂಧದಲ್ಲಿದ್ದರು. ಯಾವುದೋ ಕಾರಣಕ್ಕೆ ಕೋಪಗೊಂಡು ಯೋಧ ಮಹಿಳಾ  ಪೊಲೀಸ್(Police) ಅಧಿಕಾರಿಯನ್ನು ಕೊಲೆ ಮಾಡಿ ಕೊನೆಗೆ ಅವರು ನಿಯೋಜನೆಗೊಂಡಿದ್ದ ಪೊಲೀಸ್​ ಠಾಣೆಯಲ್ಲೇ ಶರಣಾಗಿರುವ ಘಟನೆ ಗುಜರಾತ್​ನ ಕಚ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಎಲ್ಲೆಡೆ ಸಂಚಲನ ಮೂಡಿಸಿದೆ. ಆತ ಠಾಣೆಗೆ ಶರಣಾಗುವ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಂಜಾರ್ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ನಿಯೋಜಿತರಾಗಿದ್ದ ಅರುಣಾ ನಟು ಜಾದವ್ ಅವರನ್ನು ಅವರ ಲಿವ್-ಇನ್ ಸಂಗಾತಿ ಮತ್ತು ಸಿಆರ್‌ಪಿಎಫ್ ಜವಾನ ದಿಲೀಪ್ ದಂಗಾಚಿಯಾ ಕೊಲೆ ಮಾಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಈ ಘಟನೆ ಶುಕ್ರವಾರ (ಜುಲೈ 18) ರಾತ್ರಿ ನಡೆದಿದೆ. ತೂಹಲಕಾರಿ ವಿಷಯವೆಂದರೆ ಆರೋಪಿ ಸ್ವತಃ ಮಹಿಳಾ ಅಧಿಕಾರಿಯನ್ನು ನಿಯೋಜಿತಗೊಳಿಸಲಾಗಿದ್ದ ಅದೇ ಪೊಲೀಸ್ ಠಾಣೆಗೆ ಬಂದು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಘಟನೆ ನಡೆದ ರಾತ್ರಿ ಏನಾಯಿತು? ಈ ಘಟನೆ ಶುಕ್ರವಾರ (ಜುಲೈ 18) ರಾತ್ರಿ ಅಂಜಾರ್‌ನಲ್ಲಿರುವ ಅವರ ಮನೆಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ರಾತ್ರಿ 10 ಗಂಟೆ ಸುಮಾರಿಗೆ ಅರುಣಾ ಮತ್ತು ದಿಲೀಪ್ ನಡುವೆ ಯಾವುದೋ ವಿಷಯಕ್ಕೆ ಜಗಳವಾಯಿತು. ಈ ಜಗಳ ಎಷ್ಟು ಉಲ್ಬಣಗೊಂಡಿತೆಂದರೆ, ದಿಲೀಪ್ ಕೋಪದಿಂದ ಅರುಣಾಳನ್ನು ಕತ್ತು ಹಿಸುಕಿ ಸ್ಥಳದಲ್ಲೇ ಕೊಂದಿದ್ದಾನೆ.

ಇನ್‌ಸ್ಟಾಗ್ರಾಮ್‌ನಿಂದ ಆರಂಭವಾದ ಸಂಬಂಧ ಕೊಲೆಯಲ್ಲಿ ಕೊನೆಗೊಂಡಿತು ಅರುಣಾ ಮತ್ತು ದಿಲೀಪ್ 2021 ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಭೇಟಿಯಾದರು ಎಂದು ಅಂಜರ್ ವಿಭಾಗದ ಉಪ ಎಸ್‌ಪಿ ಮುಖೇಶ್ ಚೌಧರಿ ಹೇಳಿದ್ದಾರೆ. ಇಬ್ಬರೂ ಸ್ವಲ್ಪ ಸಮಯದಿಂದ ಒಟ್ಟಿಗೆ ವಾಸಿಸುತ್ತಿದ್ದರು. ಶನಿವಾರ (ಜುಲೈ 19) ಬೆಳಗ್ಗೆ ಆರೋಪಿ ದಿಲೀಪ್ ಸ್ವತಃ ಅಂಜರ್ ಪೊಲೀಸ್ ಠಾಣೆಗೆ ಬಂದು ಶರಣಾದ ಬಳಿಕಘಟನೆ ಬೆಳಕಿಗೆ ಬಂದಿದೆ.

ಮತ್ತಷ್ಟು ಓದಿ: ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ; ವಿಡಿಯೋ ನೋಡಿ

ದಿಲೀಪ್ ದಂಗಾಚಿಯಾ ಶರಣಾದ ನಂತರ, ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ಆರಂಭಿಕ ತನಿಖೆಯಲ್ಲಿ, ಕೌಟುಂಬಿಕ ವಿವಾದವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಅದೇ ಸಮಯದಲ್ಲಿ, ಮಹಿಳಾ ಅಧಿಕಾರಿಯ ಸಾವಿನಿಂದ ಪೊಲೀಸ್ ಇಲಾಖೆಯಲ್ಲಿ ಶೋಕದ ಅಲೆ ಆವರಿಸಿದೆ.

ಅರುಣಾ ಜಾದವ್ ಅವರನ್ನು ಅಂಜರ್ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ನೇಮಿಸಲಾಗಿತ್ತು.ಆರೋಪಿ ದಿಲೀಪ್ ದಂಗಾಚಿಯಾ ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಆಗಿದ್ದು, ಅರುಣಾ ಅವರ ಲಿವ್-ಇನ್ ಸಂಗಾತಿಯಾಗಿದ್ದ. ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಜಗಳ ಮತ್ತು ಜಗಳದ ನಂತರ ದಿಲೀಪ್ ಅರುಣಾ ಅವರನ್ನು ಕತ್ತು ಹಿಸುಕಿ ಕೊಂದು ಶರಣಾಗಿದ್ದಾರೆ. ಈಗ ಪೊಲೀಸರು ಪ್ರಕರಣದಲ್ಲಿ ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:20 pm, Sun, 20 July 25

Follow Us
ದೇಶದಲ್ಲಿ ಹೆಚ್ಚಿದ H1N1 ಭೀತಿ: 'ಆತಂಕ ಬೇಡ' ಎಂದ ಯು.ಟಿ. ಖಾದರ್
ದೇಶದಲ್ಲಿ ಹೆಚ್ಚಿದ H1N1 ಭೀತಿ: 'ಆತಂಕ ಬೇಡ' ಎಂದ ಯು.ಟಿ. ಖಾದರ್
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​