AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್ ಟೈಲರ್​ಗೆ 7 ಸಾವಿರ ರೂ. ದಂಡ ಹಾಕಿದ ನ್ಯಾಯಾಲಯ, ಕಾರಣವೇನು?

ಗುಜರಾತ್​ನ ಟೈಲರ್​ಗೆ ಗ್ರಾಹಕರ ನ್ಯಾಯಾಲಯವು 7 ಸಾವಿರ ರೂ. ದಂಡ ವಿಧಿಸಿದೆ. ಡಿಸೆಂಬರ್ 24ರಂದು ಅಹಮದಾಬಾದ್‌ನ ಮಹಿಳೆಯೊಬ್ಬರು ಸಂಬಂಧಿಕರ ಮದುವೆಗೆಂದು ಬ್ಲೌಸ್ ಹೊಲಿಯಲು ಕೊಟ್ಟಿದ್ದರು. ಹಿಂದಿನ ತಿಂಗಳೇ 4,395ರೂ. ಮುಂಗಡವಾಗಿ ಪಾವತಿಸಿದ್ದರು. ಡಿಸೆಂಬರ್ 14ರಂದು ಬ್ಲೌಸ್ ಪಡೆಯಲು ಹೋದಾಗ ಅವರು ಹೇಳಿದಂತೆ ಟೈಲರ್ ಬ್ಲೌಸ್ ಹೊಲಿದಿರಲಿಲ್ಲ. ತಪ್ಪನ್ನು ಸರಿಪಡಿಸುವುದಾಗಿ ಅವರಿಗೆ ಭರವಸೆ ನೀಡಿದ್ದರು. ಮದುವೆ ಮುಗಿದು ಹೋದರೂ ಬ್ಲೌಸ್ ಸಿಕ್ಕಿರಲಿಲ್ಲ.

ಗುಜರಾತ್ ಟೈಲರ್​ಗೆ 7 ಸಾವಿರ ರೂ. ದಂಡ ಹಾಕಿದ ನ್ಯಾಯಾಲಯ, ಕಾರಣವೇನು?
ಟೈಲರ್Image Credit source: Google
ನಯನಾ ರಾಜೀವ್
|

Updated on: Oct 29, 2025 | 7:50 AM

Share

ಅಹಮದಾಬಾದ್, ಅಕ್ಟೋಬರ್ 29: ಸಾಮಾನ್ಯವಾಗಿ ಮದುವೆ, ಹಬ್ಬಗಳು ಏನೇ ಇರಲಿ ವರ್ಷದಲ್ಲಿ ಹತ್ತಾರು ಬಾರಿ ಟೈಲರ್​ಗಳ ಬಳಿ ಹೋಗಲೇಬೇಕು. ಅವರು ಹೇಳಿರುವ ಸಮಯದಲ್ಲಿ ಬಟ್ಟೆ(Cloth) ಕೊಡದಿದ್ದಾಗ ಕೋಪ ಮಾಡಿಕೊಂಡು ನಮ್ಮನ್ನು ನಾವು ಸುಧಾರಿಸಿಕೊಂಡು ಮತ್ತೆ ಅವರ ಬಳಿಯೇ ಕೊಡುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ಮದುವೆಗೆ ಸಕಾಲದಲ್ಲಿ ಬ್ಲೌಸ್ ಹೊಲಿದುಕೊಟ್ಟಿಲ್ಲ ಎಂದು ಟೈಲರ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಳು.

ಕುಟುಂಬದಲ್ಲಿ ಸಂತೋಷದ ಸಂದರ್ಭವಾಗಬೇಕಿದ್ದ ಈ ಸಂದರ್ಭ ಗ್ರಾಹಕ ನ್ಯಾಯಾಲಯದ ವಿವಾದವಾಗಿ ಪರಿವರ್ತನೆಗೊಂಡಿತ್ತು. ಗ್ರಾಹಕರ ನ್ಯಾಯಾಲಯವು ಟೈಲರ್​ಗೆ 7 ಸಾವಿರ ರೂ. ದಂಡ ವಿಧಿಸಿದೆ.

ಡಿಸೆಂಬರ್ 24ರಂದು ಅಹಮದಾಬಾದ್‌ನ ಮಹಿಳೆಯೊಬ್ಬರು ಸಂಬಂಧಿಕರ ಮದುವೆಗೆಂದು ಬ್ಲೌಸ್ ಹೊಲಿಯಲು ಕೊಟ್ಟಿದ್ದರು. ಹಿಂದಿನ ತಿಂಗಳೇ 4,395ರೂ. ಮುಂಗಡವಾಗಿ ಪಾವತಿಸಿದ್ದರು. ಡಿಸೆಂಬರ್ 14ರಂದು ಬ್ಲೌಸ್ ಪಡೆಯಲು ಹೋದಾಗ ಅವರು ಹೇಳಿದಂತೆ ಟೈಲರ್ ಬ್ಲೌಸ್ ಹೊಲಿದಿರಲಿಲ್ಲ. ತಪ್ಪನ್ನು ಸರಿಪಡಿಸುವುದಾಗಿ ಅವರಿಗೆ ಭರವಸೆ ನೀಡಿದ್ದರು. ಮದುವೆ ಮುಗಿದು ಹೋದರೂ ಬ್ಲೌಸ್ ಸಿಕ್ಕಿರಲಿಲ್ಲ.

ಮತ್ತಷ್ಟು ಓದಿ: ಬಿಗಿಯಾಗಿ, ಮೈಗೆ ಅಂಟಿಕೊಳ್ಳುವ ಬಟ್ಟೆ ಹಾಕಿಕೊಳ್ಳುವುದಕ್ಕೆ ತುಂಬಾ ಇಷ್ಟನಾ? ಹಾಗಿದ್ರೆ ಈ ಸ್ಟೋರಿ ತಪ್ಪದೆ ಓದಿ

ನಂತರ ಮಹಿಳೆ ಟೈಲರ್​ಗೆ ನೋಟಿಸ್ ಕಳುಹಿಸಿದ್ದಾರೆ, ಟೈಲರ್ ಆಯೋಗದ ಮುಂದೆ ಹಾಜರಾಗಲಿಲ್ಲ. ಬ್ಲೌಸ್ ತಲುಪಿಸಲು ಟೈಲರ್ ವಿಫಲವಾದ ಕಾರಣ ಆತನನ್ನು ತಪ್ಪಿತಸ್ಥನೆಂದು ನ್ಯಾಯಾಲಯ ಘೋಷಿಸಿತು. ದೂರದಾರ ಮಾನಸಿಕ ಕಿರುಕುಳ ಅನುಭವಿಸಿದ್ದಾರೆಂದು ನ್ಯಾಯಾಲಯ ತೀರ್ಪು ನೀಡಿತು. ನ್ಯಾಯಾಲಯವು ಟೈಲರ್​ಗೆ ವಾರ್ಷಿಕ ಶೇ.7ರಷ್ಟು ಬಡ್ಡಿಯೊಂದಿಗೆ ಹೆಚ್ಚುವರಿ ಪರಿಹಾರವನ್ನು ಪಾವತಿಸುವಂತೆ ನಿರ್ದೇಶಿಸಿತು, ಇದು ಸುಮಾರು ರೂ. 7,000 ರಷ್ಟಾಗಿದೆ.

ಕೇರಳದಲ್ಲೂ ಇಂಥದ್ದೇ ಪ್ರಕರಣ ನಡೆದಿತ್ತು ಈ ವರ್ಷದ ಏಪ್ರಿಲ್‌ನಲ್ಲಿ ಕೇರಳದ ಕೊಚ್ಚಿಯಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿತ್ತು.ಎರ್ನಾಕುಲಂ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು, ನೀಡಿದ ಅಳತೆಗಳ ಪ್ರಕಾರ ಶರ್ಟ್ ಹೊಲಿಯಲು ವಿಫಲವಾದ ಕಾರಣ, ಗ್ರಾಹಕನಿಗೆ 15,000 ರೂ. ಪರಿಹಾರವನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ