AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Farmer’s Protest: ರೈತರಿಗೆ ದೆಹಲಿ ಸರ್ಕಾರ ಬೆಂಬಲ; ಶಂಭು ಗಡಿಯಲ್ಲಿ ಹರ್ಯಾಣ ಪೊಲೀಸರಿಂದ ಅಶ್ರುವಾಯು ಪ್ರಯೋಗ

Delhi chalo:ರೈತರು ದೆಹಲಿಯೊಳಗೆ ಬಂದರೆ ಬವಾನಾ ಕ್ರೀಡಾಂಗಣವನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸುವ ಕೇಂದ್ರದ ಮನವಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ. ಈ ಬಗ್ಗೆ ಮಾತನಾಡಿದ ಎಎಪಿ ಸಚಿವ ಕೈಲಾಶ್ ಗಹ್ಲೋಟ್, ರೈತರ ಬೇಡಿಕೆಗಳು ಸರಿಯಾದವು.ಶಾಂತಿಯುತ ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ ಎಂದಿದ್ದಾರೆ.

Farmer's Protest: ರೈತರಿಗೆ ದೆಹಲಿ ಸರ್ಕಾರ ಬೆಂಬಲ; ಶಂಭು ಗಡಿಯಲ್ಲಿ ಹರ್ಯಾಣ ಪೊಲೀಸರಿಂದ ಅಶ್ರುವಾಯು ಪ್ರಯೋಗ
ರೈತರ ಪ್ರತಿಭಟನೆ
ರಶ್ಮಿ ಕಲ್ಲಕಟ್ಟ
|

Updated on:Feb 13, 2024 | 2:26 PM

Share

ದೆಹಲಿ ಫೆಬ್ರುವರಿ 13: ಪಂಜಾಬ್‌ನಿಂದ ಹರ್ಯಾಣ (Haryana) ಅಥವಾ ಹರ್ಯಾಣದಿಂದ ದೆಹಲಿಗೆ (Delhi) ಯಾವುದೇ ರಾಜ್ಯದ ಗಡಿ ದಾಟಲು ರೈತರಿಗೆ (Farmer’s Protest) ಅವಕಾಶ ನೀಡದಂತೆ ಕಟ್ಟುನಿಟ್ಟಿನ ಪೂರ್ವಭಾವಿ ಕ್ರಮಗಳ ನಡುವೆ ಮಂಗಳವಾರ ಪಂಜಾಬ್‌ನಿಂದ ರೈತರು ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದರು. ಗಡಿಗಳಲ್ಲಿ ಕಾಂಕ್ರೀಟ್ ಚಪ್ಪಡಿಗಳು ಮತ್ತು ತಂತಿಗಳನ್ನು ಹಾಕಲಾಗಿದೆ. ಪ್ರತಿಭಟನಾಕಾರರನ್ನು  ತಡೆಯಲು ರಸ್ತೆಗಳಲ್ಲಿ ಮೊಳೆಗಳನ್ನು ಹಾಕಲಾಗಿದೆ. ಏತನ್ಮಧ್ಯೆ, ರೈತರು ದೆಹಲಿಯೊಳಗೆ ಬಂದರೆ ಬವಾನಾ ಕ್ರೀಡಾಂಗಣವನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸುವ ಕೇಂದ್ರದ ಮನವಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ. ಎಎಪಿ ಸಚಿವ ಕೈಲಾಶ್ ಗಹ್ಲೋಟ್ ಮಾತನಾಡಿ, ರೈತರ ಬೇಡಿಕೆಗಳು ಸರಿಯಾದವು.ಶಾಂತಿಯುತ ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ ಎಂದಿದ್ದಾರೆ.  ಪ್ರತಿಭಟನಾಕಾರರು ತಮ್ಮ ಮೆರವಣಿಗೆ ಪ್ರಾರಂಭವಾದ ಎರಡು ಗಂಟೆಗಳ ನಂತರ ಶಂಭು ಗಡಿಯನ್ನು ತಲುಪುತ್ತಿದ್ದಂತೆ ಹರ್ಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಲು ಪ್ರಾರಂಭಿಸಿದರು.

ಪ್ರತಿಭಟನೆ ಈಗ ಹರ್ಯಾಣವನ್ನು ಅವಲಂಬಿಸಿದೆ

ಪಂಜಾಬ್ ಮತ್ತು ಹರ್ಯಾಣದ ಗಡಿಯಾದ ಶಂಭು ಗಡಿಯಲ್ಲಿ ಪ್ರತಿರೋಧವನ್ನು ಎದುರಿಸುತ್ತಿರುವ ಕಿಸಾನ್ ಮಜ್ದೂರ್ ಮೋರ್ಚಾದ ಸಂಯೋಜಕ ಸರ್ವಾನ್ ಸಿಂಗ್ ಪಂಧೇರ್, ಪ್ರತಿಭಟನೆಯನ್ನು ಮುಂದಕ್ಕೆ ಕೊಂಡೊಯ್ಯುವ ಸರದಿ ಹರ್ಯಾಣ ರೈತರದ್ದಾಗಿದೆ ಎಂದು ಹೇಳಿದರು. ವಿಡಿಯೊ ಸಂದೇಶದಲ್ಲಿ, ಪ್ರತಿಭಟನಾಕಾರರು ಅಧಿಕಾರಿಗಳೊಂದಿಗೆ ಯಾವುದೇ ಘರ್ಷಣೆಯನ್ನು ಬಯಸುವುದಿಲ್ಲ ಎಂದಿದ್ದಾರೆ ಪಂಧೇರ್.

‘ನಾವು ರಸ್ತೆಗಳನ್ನು ತಡೆಯುತ್ತಿಲ್ಲ’ : ರೈತರು

ಬೆಳಗ್ಗೆ 10 ಗಂಟೆಗೆ ರೈತರು ಚಲೋ ದೆಹಲಿ ಮೆರವಣಿಗೆ ಆರಂಭಿಸುತ್ತಿದ್ದಂತೆ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಮಾತನಾಡಿ, ಪಂಜಾಬ್ ಮತ್ತು ಹರ್ಯಾಣ ನಡುವಿನ ಗಡಿಗಳು ರಾಜ್ಯದ ಗಡಿಯಂತೆ ಕಾಣುತ್ತಿಲ್ಲ ಆದರೆ ಅಂತಾರಾಷ್ಟ್ರೀಯ ಗಡಿಯಂತೆ ಕಾಣುತ್ತಿವೆ. “ಇಂದಿಗೂ ನಾವು ರಸ್ತೆಗಳನ್ನು ನಿರ್ಬಂಧಿಸುತ್ತೇವೆ ಎಂದು ಹೇಳುತ್ತಿಲ್ಲ. ಕಳೆದ ಎರಡು-ಮೂರು ದಿನಗಳಿಂದ ಸರ್ಕಾರವೇ ರಸ್ತೆಗಳನ್ನು ನಿರ್ಬಂಧಿಸಿದೆ” ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಂಧೇರ್ ಹೇಳಿದರು. ಹರ್ಯಾಣದ ಬೇಲಿಯನ್ನು ಟೀಕಿಸಿದ ರೈತ ನಾಯಕ, ಹರ್ಯಾಣವು ಕಾಶ್ಮೀರ ಕಣಿವೆಯಾಗಿದೆ ಎಂದು ಹೇಳಿದರು.

‘ಕಾಂಗ್ರೆಸ್ ನಮ್ಮೊಂದಿಗಿಲ್ಲ’

ಈ ದೆಹಲಿ ಯಾತ್ರೆಗೆ ಕಾಂಗ್ರೆಸ್ ಬೆಂಬಲವಿಲ್ಲ ಎಂದು ಕಿಸಾನ್ ಮಜ್ದೂರ್ ಮೋರ್ಚಾ ಹೇಳಿದೆ. “ಕಾಂಗ್ರೆಸ್ ಪಕ್ಷವು ನಮ್ಮನ್ನು ಬೆಂಬಲಿಸುವುದಿಲ್ಲ, ನಾವು ಕಾಂಗ್ರೆಸ್ ಅನ್ನು ಬಿಜೆಪಿಯಷ್ಟೇ ಹೊಣೆಗಾರರನ್ನಾಗಿ ಪರಿಗಣಿಸುತ್ತೇವೆ. ಈ ಕಾನೂನುಗಳನ್ನು ಕಾಂಗ್ರೆಸ್ ತಂದಿದೆ. ನಾವು ಯಾರ ಪರವಾಗಿಲ್ಲ, ನಾವು ರೈತರ ಪರ, ನಾವು ರೈತರ ಧ್ವನಿಯನ್ನು ಎತ್ತುತ್ತೇವೆ…. ನಾವು ಬಿಡುವುದಿಲ್ಲ, ಬಂಗಾಳವನ್ನು ಆಳಿದ ಸಿಪಿಐ ಮತ್ತು ಸಿಪಿಎಂ 20 ತಪ್ಪುಗಳನ್ನು ಮಾಡಿದೆ, ಪಶ್ಚಿಮ ಬಂಗಾಳದಲ್ಲಿ ಯಾವ ರೀತಿಯ ಕ್ರಾಂತಿ ಬಂದಿದೆ, ನಾವು ಯಾರ ಪರವಾಗಿಯೂ ಇಲ್ಲ, ನಾವು ರೈತರು ಮತ್ತು ಕಾರ್ಮಿಕರು, ನಾವು ನಮ್ಮ ಜನರಿಗೆ ಮನವಿ ಮಾಡುತ್ತೇವೆ, ಅವರು ಪಂಜಾಬ್‌ನ ಹಾಡುಗಾರರಾಗಿರಲಿ ಅಥವಾ ದೇಶ ಅಥವಾ ಬುದ್ಧಿಜೀವಿಗಳು, ಎನ್‌ಆರ್‌ಐ ಸಹೋದರರೇ, ಇದು ಪತ್ರಕರ್ತರನ್ನು ಒಳಗೊಂಡಿರುವ ಮತ್ತೊಂದು ನಾಗರಿಕ ಸಮಾಜವಾಗಲಿ, ಇದು ನಮ್ಮದೇ ವಿಷಯವಲ್ಲ. ಈ ದೊಡ್ಡ ಆಂದೋಲನದಲ್ಲಿ, ಕೇವಲ ನಮ್ಮದಲ್ಲ, ಇದು 140 ಕೋಟಿ ದೇಶವಾಸಿಗಳ ಬೇಡಿಕೆಯಾಗಿದೆ, ”ಎಂದು ಪಂಧೇರ್ ಹೇಳಿದರು.

ರೈತರಿಗೆ ದೆಹಲಿ ಸರ್ಕಾರ ಬೆಂಬಲ

“ಕೇಂದ್ರ ಸರ್ಕಾರವು ಅವರನ್ನು ಮಾತುಕತೆಗೆ ಆಹ್ವಾನಿಸಿ ಅವರ ನಿಜವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ದೇಶದ ರೈತರು ನಮ್ಮ ಅನ್ನದಾತರು ಮತ್ತು ಅವರನ್ನು ಬಂಧಿಸುವ ಮೂಲಕ ಈ ರೀತಿ ನಡೆಸಿಕೊಳ್ಳುವುದು ಅವರ ಗಾಯಕ್ಕೆ ಉಪ್ಪು ಸವರಿದಂತೆ” ಎಂದು ಹೇಳಿದರು. ದೆಹಲಿ ಸರ್ಕಾರವು ಬವಾನಾ ಕ್ರೀಡಾಂಗಣವನ್ನು ಜೈಲಿಗೆ ತಳ್ಳಲು ನಿರಾಕರಿಸಿ ಕೇಂದ್ರಕ್ಕೆ ಪತ್ರ ಬರೆದಿದೆ.

ಇದನ್ನೂ ಓದಿ: Delhi Chalo: ರೈತರ ಪ್ರತಿಭಟನೆ: ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ 

ಪಂಜಾಬ್ ಪೊಲೀಸರು ಪ್ರತಿಭಟನಾಕಾರರನ್ನು ತಡೆಯುತ್ತಿಲ್ಲ

ದೆಹಲಿಯ ಎಎಪಿ ಸರ್ಕಾರ ಪ್ರತಿಭಟನಾ ನಿರತ ರೈತರಿಗೆ ಒಗ್ಗಟ್ಟು ಪ್ರದರ್ಶಿಸುತ್ತಿದ್ದಂತೆ, ಪಂಜಾಬ್ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲಿಲ್ಲ.

ಮುಳ್ಳುತಂತಿ, ಅಶ್ರುವಾಯು: ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

ಮುಳ್ಳುತಂತಿ, ಡ್ರೋನ್‌ಗಳಿಂದ ಅಶ್ರುವಾಯು, ಮೊಳೆಗಳು ಮತ್ತು ಬಂದೂಕುಗಳು… ಎಲ್ಲವನ್ನೂ ಜೋಡಿಸಲಾಗಿದೆ. ಸರ್ವಾಧಿಕಾರಿ ಮೋದಿ ಸರ್ಕಾರ ರೈತರ ಧ್ವನಿಗೆ ಕಡಿವಾಣ ಹಾಕಲು ಯತ್ನಿಸುತ್ತಿದೆ. ರೈತನನ್ನು ಆಂದೋಲನಜೀವಿ, ಪರಾವಲಂಬಿ ಎಂದು ಕರೆದು ಮಾನಹಾನಿ ಮಾಡಿ 750 ರೈತರು ಹೇಗೆ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Tue, 13 February 24

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ