AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲ ಪ್ರದೇಶದಲ್ಲಿ ಟಾಯ್ಲೆಟ್ ಸೀಟ್ ಟ್ಯಾಕ್ಸ್?; ಇದೆಲ್ಲ ಆಧಾರರಹಿತ ಎಂದ ಸಿಎಂ ಸುಖವಿಂದರ್ ಸಿಂಗ್ ಸುಖು

ಹರ್ಯಾಣದಲ್ಲಿ ಚುನಾವಣೆ ಇರುವುದರಿಂದ ಅವರು (ಬಿಜೆಪಿ) ಹಿಂದೂ-ಮುಸ್ಲಿಂ ಮತ್ತು ಒಳಚರಂಡಿ ಬಗ್ಗೆ ಮಾತನಾಡುತ್ತಾರೆ ಆದರೆ ಅಂತಹದ್ದೇನೂ ಇಲ್ಲ. ಇದು ಸಂಪೂರ್ಣ ಸುಳ್ಳು ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಟಾಯ್ಲೆಟ್ ಸೀಟ್ ಟ್ಯಾಕ್ಸ್?; ಇದೆಲ್ಲ ಆಧಾರರಹಿತ ಎಂದ ಸಿಎಂ ಸುಖವಿಂದರ್ ಸಿಂಗ್ ಸುಖು
ಸುಖವಿಂದರ್ ಸಿಂಗ್ ಸುಖು
ರಶ್ಮಿ ಕಲ್ಲಕಟ್ಟ
|

Updated on: Oct 04, 2024 | 3:30 PM

Share

ಶಿಮ್ಲಾ ಅಕ್ಟೋಬರ್ 04: ಹಿಮಾಚಲ ಪ್ರದೇಶದಲ್ಲಿ (Himachal Pradesh) ರಾಜ್ಯ ಸರ್ಕಾರವು ಹೊಸ “ಟಾಯ್ಲೆಟ್ ಸೀಟ್ ಟ್ಯಾಕ್ಸ್”  (toilet seat tax) ವಿಧಿಸುತ್ತಿದೆ ಎಂಬ ವರದಿಗಳನ್ನು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು (Sukhvinder Singh Sukhu) ಅವರು  “ಆಧಾರರಹಿತ” ಎಂದು ಕರೆದಿದ್ದಾರೆ.ಇದು ಸತ್ಯಗಳಿಂದ ದೂರವಾದುದು. ಹರ್ಯಾಣದಲ್ಲಿ ಚುನಾವಣೆ ಇರುವುದರಿಂದ ಅವರು (ಬಿಜೆಪಿ) ಹಿಂದೂ-ಮುಸ್ಲಿಂ ಮತ್ತು ಒಳಚರಂಡಿ ಬಗ್ಗೆ ಮಾತನಾಡುತ್ತಾರೆ ಆದರೆ ಅಂತಹದ್ದೇನೂ ಇಲ್ಲ. ಇದು ಸಂಪೂರ್ಣ ಸುಳ್ಳು ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.

ಈ ಹಿಂದೆ, ಹಿಮಾಚಲ ಪ್ರದೇಶ ಸರ್ಕಾರವು ನಗರ ಪ್ರದೇಶಗಳಲ್ಲಿ ವಾಸಿಸುವವರ ಮನೆಗಳಲ್ಲಿ ನಿರ್ಮಿಸಲಾದ ಟಾಯ್ಲೆಟ್ ಸೀಟ್‌ಗೆ ₹ 25 ಶುಲ್ಕವನ್ನು ಸಂಗ್ರಹಿಸುತ್ತದೆ ಎಂದು ಮಾಧ್ಯಮ ವರದಿಗಳು ಹೇಳಿಕೊಂಡಿವೆ. ನಗದು ಕೊರತೆಯಿರುವ ರಾಜ್ಯವು ಜಲ ಶಕ್ತಿ ಮಂಡಳಿಗೆ ಪಾವತಿಸುವ ಸಾಮಾನ್ಯ ಒಳಚರಂಡಿ ಮತ್ತು ನೀರಿನ ಬಿಲ್‌ನ ಭಾಗವಾಗಿ ನಗರ ಮನೆಯೊಂದರಲ್ಲಿ ಟಾಯ್ಲೆಟ್ ಸೀಟಿಗೆ ₹ 25 ಶುಲ್ಕವನ್ನು ವಿಧಿಸಲು ನಿರ್ಧರಿಸಿದೆ ಎಂದು ನ್ಯೂಸ್ 18 ವರದಿ ಮಾಡಿದೆ.

ಒಳಚರಂಡಿ ಬಿಲ್ ನೀರಿನ ಬಿಲ್‌ನ ಶೇಕಡಾ 30 ರಷ್ಟಿರುತ್ತದೆ. ಸ್ವಂತ ಮೂಲದಿಂದ ನೀರು ಬಳಸುವವರು ಮತ್ತು ಸರ್ಕಾರಿ ಇಲಾಖೆಯಿಂದ ಒಳಚರಂಡಿ ಸಂಪರ್ಕವನ್ನು ಮಾತ್ರ ಬಳಸುವವರು ಪ್ರತಿ ತಿಂಗಳು ಟಾಯ್ಲೆಟ್ ಸೀಟಿಗೆ ₹ 25 ಶುಲ್ಕವನ್ನು ಪಾವತಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ವರದಿಯಾಗಿದೆ. ಈ ಸಂಬಂಧ ಎಲ್ಲಾ ವಿಭಾಗೀಯ ಅಧಿಕಾರಿಗಳಿಗೆ ಇಲಾಖೆ ಆದೇಶ ಹೊರಡಿಸಿದೆ.

ಈ ಕ್ರಮಕ್ಕೆ ಬಿಜೆಪಿಯಿಂದ ತೀವ್ರವಾದ ಟೀಕೆ ವ್ಯಕ್ತವಾಗಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಇದು ಕಾಂಗ್ರೆಸ್ ಸರ್ಕಾರದ “ಕಪ್ಪು ನಾಯಕತ್ವ” ದ ಶ್ರೇಷ್ಠ ಸಂಕೇತ ಎಂದು ಕರೆದಿದ್ದಾರೆ.

ಇದನ್ನೂ ಓದಿ: ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾ ವೇಗವಾಗಿ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ: ಐಎಎಫ್ ಮುಖ್ಯಸ್ಥ ಎಪಿ ಸಿಂಗ್

ಎಕ್ಸ್‌ನಲ್ಲಿನ ಹೇಳಿಕೆಯಲ್ಲಿ, ಅಮಿತ್ ಮಾಳವಿಯಾ, “ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರವು ಈಗ ನಾಗರಿಕರು ಮನೆಯಲ್ಲಿ ಹೊಂದಿರುವ ಶೌಚಾಲಯದ ಆಸನಗಳ ಸಂಖ್ಯೆಯನ್ನು ಆಧರಿಸಿ ತೆರಿಗೆ ವಿಧಿಸುತ್ತದೆ. ನೀವು ಅದನ್ನು ಸರಿಯಾಗಿ ಓದಿದ್ದೀರಿ – ಟಾಯ್ಲೆಟ್ ಸೀಟ್‌ಗಳ ಸಂಖ್ಯೆ! ಪ್ರಧಾನಿ ಮೋದಿ ಶೌಚಾಲಯ ಕಟ್ಟುತ್ತಿದ್ದಾರೆ, ಕಾಂಗ್ರೆಸ್ ಅದಕ್ಕೆ ತೆರಿಗೆ ವಿಧಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ” ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು ಎಕ್ಸ್‌ನಲ್ಲಿ ವಿಡಿಯೊ ಶೇರ್ ಮಾಡಿ ಇದುಕಾಂಗ್ರೆಸ್ ಪಕ್ಷದ “ಖಟಾಖತ್” ಮಾದರಿ ಎಂದು ಕರೆದರು.

ಪೂನಾವಾಲಾ ಟ್ವೀಟ್ 

ಇದು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರ ಖಟಾಖಟ್ ಮಾದರಿಯ ಉತ್ತುಂಗವಾಗಿದೆ, ಈಗ ಶೌಚಾಲಯಗಳು ಸಹ ಈ ಪಕ್ಷದ ವ್ಯಾಪ್ತಿಯಿಂದ ಹೊರಗಿಲ್ಲ. ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್, ಡೀಸೆಲ್, ಹಾಲು, ನೀರು, ಬಸ್ ದರಗಳು ಮತ್ತು ಮುದ್ರಾಂಕ ಶುಲ್ಕದ ನಂತರ ಎಲ್ಲದಕ್ಕೂ ತೆರಿಗೆ ವಿಧಿಸಲಾಗಿದೆ.

ಹಿಮಾಚಲ ಪ್ರದೇಶದ ಕಾಂಗ್ರೆಸ್ ನಾಯಕತ್ವವನ್ನು “ಹೊರಹಾಕಿ” ಎಂದು ಕೇಳುವ ಮೂಲಕ ಸಿಎಂ ಸುಖು ನೇತೃತ್ವದ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮಂಜಿಂದರ್ ಸಿಂಗ್ ಸಿರ್ಸಾ ಅವರು “ವಿಫಲ ಮತ್ತು ಅಸಮರ್ಥ ಕಾಂಗ್ರೆಸ್ ಸರ್ಕಾರದ ಮತ್ತೊಂದು ಉದಾಹರಣೆ!!” ಎಂದು ಇದನ್ನು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಕೂಡ ಅಕ್ಟೋಬರ್‌ನಿಂದ ಪ್ರತಿ ಸಂಪರ್ಕಕ್ಕೆ ತಿಂಗಳಿಗೆ ₹100 ನೀರಿನ ಬಿಲ್ ನೀಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಉಚಿತ ನೀರು ನೀಡುವುದಾಗಿ ಹೇಳಿತ್ತು

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ