AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದಲ್ಲಿ ಕ್ವೀನ್ ವಿರುದ್ಧ ಶಿವಸೇನೆ ಸಮರ, ಕಂಗನಾಗೆ ವೈ ಪ್ಲಸ್ ಭದ್ರತೆ

ದೆಹಲಿ: ಕಂಗನಾ ರಣಾವತ್‌ ವಿವಾದಗಳು ಒಂದೆರೆಡಲ್ಲ. ಮುಂಬೈಯನ್ನು ಪಿಓಕೆ, ತಾಲಿಬಾನ್ ಎಂದೆಲ್ಲಾ ಕರೆದ ಮೇಲೆ ತೀವ್ರ ಟೀಕೆ ಎದುರಾಗಿತ್ತು. ಹಾಗೇ ಶಿವಸೇನೆ ಹಾಗೂ ಎನ್‌ಸಿಪಿ ನಾಯಕರು ಕಂಗನಾ ಮೇಲೆ ಮುಗಿಬಿದ್ದಿದ್ದರು. ಮುಂಬೈಗೆ ಭೇಟಿ ನೀಡದಂತೆ ಬೆದರಿಕೆಯೊಡ್ಡಿದ್ದರು. ಇದರ ಇಂಪ್ಯಾಕ್ಟ್ ಎಂಬಂತೆ ಕಂಗನಾಗೆ ಕೇಂದ್ರದಿಂದ ವೈ ಕೆಟಗರಿ ಭದ್ರತೆ ನೀಡಲಾಗಿದ್ದು, ಕಂಗನಾ ಮೆಂಟಲ್ ಮಹಿಳೆ ಎಂದು ಶಿವಸೇನೆ ವಕ್ತಾರ ರಾವತ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಕಂಗನಾ ಅಂದಮೇಲೆ ಕಾಂಟ್ರವರ್ಸಿ, ಕಾಂಟ್ರವರ್ಸಿ ಇರುವ ಜಾಗದಲ್ಲಿ ಕಂಗನಾ ಎಂಟ್ರಿ. ಇತ್ತೀಚೆಗೆ ಮುಂಬೈ […]

ಮಹಾರಾಷ್ಟ್ರದಲ್ಲಿ ಕ್ವೀನ್ ವಿರುದ್ಧ ಶಿವಸೇನೆ ಸಮರ, ಕಂಗನಾಗೆ ವೈ ಪ್ಲಸ್ ಭದ್ರತೆ
ಕಂಗನಾ ರಣಾವತ್​
ಆಯೇಷಾ ಬಾನು
|

Updated on: Sep 08, 2020 | 7:22 AM

Share

ದೆಹಲಿ: ಕಂಗನಾ ರಣಾವತ್‌ ವಿವಾದಗಳು ಒಂದೆರೆಡಲ್ಲ. ಮುಂಬೈಯನ್ನು ಪಿಓಕೆ, ತಾಲಿಬಾನ್ ಎಂದೆಲ್ಲಾ ಕರೆದ ಮೇಲೆ ತೀವ್ರ ಟೀಕೆ ಎದುರಾಗಿತ್ತು. ಹಾಗೇ ಶಿವಸೇನೆ ಹಾಗೂ ಎನ್‌ಸಿಪಿ ನಾಯಕರು ಕಂಗನಾ ಮೇಲೆ ಮುಗಿಬಿದ್ದಿದ್ದರು. ಮುಂಬೈಗೆ ಭೇಟಿ ನೀಡದಂತೆ ಬೆದರಿಕೆಯೊಡ್ಡಿದ್ದರು. ಇದರ ಇಂಪ್ಯಾಕ್ಟ್ ಎಂಬಂತೆ ಕಂಗನಾಗೆ ಕೇಂದ್ರದಿಂದ ವೈ ಕೆಟಗರಿ ಭದ್ರತೆ ನೀಡಲಾಗಿದ್ದು, ಕಂಗನಾ ಮೆಂಟಲ್ ಮಹಿಳೆ ಎಂದು ಶಿವಸೇನೆ ವಕ್ತಾರ ರಾವತ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಕಂಗನಾ ಅಂದಮೇಲೆ ಕಾಂಟ್ರವರ್ಸಿ, ಕಾಂಟ್ರವರ್ಸಿ ಇರುವ ಜಾಗದಲ್ಲಿ ಕಂಗನಾ ಎಂಟ್ರಿ. ಇತ್ತೀಚೆಗೆ ಮುಂಬೈ ನಗರವನ್ನ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಈಗ ಅದು ಎಲ್ಲೆಲ್ಲಿಗೋ ಹೋಗಿ ಕಡೆಗೆ ಕಂಗನಾ ವರ್ಸಸ್ ಶಿವಸೇನೆ ಎಂಬಂತಾಗಿದೆ. ಇಂಥಾ ಹೊತ್ತಲ್ಲೇ ವಿವಾದದ ಕಿಡಿಗೆ ಪೆಟ್ರೋಲ್ ಸುರಿದಿದ್ದಾರೆ ಸಂಜಯ್ ರಾವತ್.

ಕಂಗನಾ ವಿರುದ್ಧ ರೊಚ್ಚಿಗೆದ್ದ ಮಹಾರಾಷ್ಟ್ರ ಸಿಎಂ! ತನಗನಿಸಿದ್ದನ್ನೆಲ್ಲಾ ನೇರವಾಗಿ ಹೇಳುವ ನಟಿ ಕಂಗನಾ ದಿಟ್ಟತನವೇ ಅನೇಕ ಸಮಸ್ಯೆ, ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಕಂಗನಾರ ಪಾಕ್‌ ಆಕ್ರಮಿತ ಕಾಶ್ಮೀರ ಟ್ವೀಟ್‌ ನಂತ್ರ ಮುಂಬೈಗೆ ಬಂದ್ರೆ ಪ್ರತಿಭಟನೆ ನಡೆಸ್ತೀವಿ ಅಂತಾ ಶಿವಸೇನೆ ವಾರ್ನ್‌ ಮಾಡಿತ್ತು. ಆದ್ರೆ, ಇದಕ್ಕೆ ಸವಾಲೊಡ್ಡಿದ್ದ ಕಂಗನಾ ಸೆಪ್ಟಂಬರ್ 9ಕ್ಕೆ ಬರ್ತೀನಿ. ಧಮ್ ಇದ್ದರೆ, ತಡೆಯಿರಿ ಎಂದು ಪ್ರತ್ಯುತ್ತರ ನೀಡಿದ್ದರು. ಇದೀಗ ಕಂಗನಾ ಬಗ್ಗೆ ವಾಗ್ದಾಳಿ ನಡೆಸಲು ಖುದ್ದು ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಎಂಟ್ರಿಯಾಗಿದ್ದು, ಕೆಲವರು ಮುಂಬೈನಲ್ಲಿ ತಮ್ಮ ಕೆರಿಯರ್ ಬೆಳವಣಿಗೆ ಮಾಡಿಕೊಳ್ಳುತ್ತಾರೆ. ಆದರೆ ಮುಂಬೈಗೆ ಋಣಿಯಾಗಿರಲ್ಲ ಎಂದು ಹೇಳುವ ಮೂಲಕ ಕಂಗನಾ ಮುಂಬೈಗೆ ಋಣಿಯಾಗಿಲ್ಲ ಎಂದು ಟೀಕಿಸಿದ್ದಾರೆ.

Y ಕೆಟಗರಿ ಭದ್ರತೆ ನೀಡಲು ಕೇಂದ್ರದ ನಿರ್ಧಾರ! ಅಂದಹಾಗೆ ಕಂಗನಾ ಬೆಂಬಲಕ್ಕೆ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನಿಂತಿದೆ. ಕಂಗನಾಗೆ ಶಿವಸೇನೆ ಬೆದರಿಕೆ ಹಾಕಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದ ಹಿಮಾಚಲ ಸಿಎಂ ಜಯರಾಮ ಠಾಕೂರ್, ಕಂಗನಾ ಹಿಮಾಚಲದ ಹೆಣ್ಣು ಮಗಳು. ಹಿಮಾಚಲ ಪ್ರದೇಶದ ಪೊಲೀಸರು ಮುಂಬೈನಲ್ಲೂ ಕಂಗನಾಗೆ ರಕ್ಷಣೆ ನೀಡ್ತಾರೆ ಎಂದಿದ್ದರು. ನಂತರ ಹಿಮಾಚಲ ಸರ್ಕಾರದ ಶಿಫಾರಸ್ಸಿನ ಮೇರೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿರುವ ಕಂಗನಾಗೆ ವೈ ಕೆಟಗರಿ ಭದ್ರತೆ ನೀಡಲು ಕೇಂದ್ರ ಗೃಹಇಲಾಖೆ ನಿರ್ಧರಿಸಿದೆ.ವೈ ಕೆಟಗರಿ ಭದ್ರತೆ ಅಡಿ ಕಂಗನಾಗೆ ದಿನದ 24 ಗಂಟೆ ಪ್ಯಾರಾ ಮಿಲಿಟರಿ ಪಡೆಯ ರಕ್ಷಣೆ ಸಿಗಲಿದೆ. ವೈ ಕೆಟಗರಿ ಭದ್ರತೆಯಡಿ ಇಬ್ಬರು ಶಸ್ತ್ರಧಾರಿ ಭದ್ರತಾ ಸಿಬ್ಬಂದಿ ಸದಾ ರಕ್ಷಣೆ ನೀಡ್ತಾರೆ.

ಒಟ್ನಲ್ಲಿ ಕಂಗನಾ ವಿಚಾರ ರಾಜ್ಯ ರಾಜ್ಯಗಳ ನಡುವೆ ಕಿಚ್ಚು ಹೊತ್ತಿಸಿದೆ. ಅತ್ತ ಕೇಂದ್ರ ಸರ್ಕಾರ ಕೂಡ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ನಾಳೆಯೇ ಕಂಗನಾ ರಣಾವತ್ ಮುಂಬೈಗೆ ಭೇಟಿ ನೀಡಲಿದ್ದು, ಮುಂದೆ ಏನಾಗಲಿದೆ..? ಅನ್ನೋದನ್ನ ಕಾದು ನೋಡಬೇಕಿದೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್