AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದಲ್ಲಿ ಕ್ವೀನ್ ವಿರುದ್ಧ ಶಿವಸೇನೆ ಸಮರ, ಕಂಗನಾಗೆ ವೈ ಪ್ಲಸ್ ಭದ್ರತೆ

ದೆಹಲಿ: ಕಂಗನಾ ರಣಾವತ್‌ ವಿವಾದಗಳು ಒಂದೆರೆಡಲ್ಲ. ಮುಂಬೈಯನ್ನು ಪಿಓಕೆ, ತಾಲಿಬಾನ್ ಎಂದೆಲ್ಲಾ ಕರೆದ ಮೇಲೆ ತೀವ್ರ ಟೀಕೆ ಎದುರಾಗಿತ್ತು. ಹಾಗೇ ಶಿವಸೇನೆ ಹಾಗೂ ಎನ್‌ಸಿಪಿ ನಾಯಕರು ಕಂಗನಾ ಮೇಲೆ ಮುಗಿಬಿದ್ದಿದ್ದರು. ಮುಂಬೈಗೆ ಭೇಟಿ ನೀಡದಂತೆ ಬೆದರಿಕೆಯೊಡ್ಡಿದ್ದರು. ಇದರ ಇಂಪ್ಯಾಕ್ಟ್ ಎಂಬಂತೆ ಕಂಗನಾಗೆ ಕೇಂದ್ರದಿಂದ ವೈ ಕೆಟಗರಿ ಭದ್ರತೆ ನೀಡಲಾಗಿದ್ದು, ಕಂಗನಾ ಮೆಂಟಲ್ ಮಹಿಳೆ ಎಂದು ಶಿವಸೇನೆ ವಕ್ತಾರ ರಾವತ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಕಂಗನಾ ಅಂದಮೇಲೆ ಕಾಂಟ್ರವರ್ಸಿ, ಕಾಂಟ್ರವರ್ಸಿ ಇರುವ ಜಾಗದಲ್ಲಿ ಕಂಗನಾ ಎಂಟ್ರಿ. ಇತ್ತೀಚೆಗೆ ಮುಂಬೈ […]

ಮಹಾರಾಷ್ಟ್ರದಲ್ಲಿ ಕ್ವೀನ್ ವಿರುದ್ಧ ಶಿವಸೇನೆ ಸಮರ, ಕಂಗನಾಗೆ ವೈ ಪ್ಲಸ್ ಭದ್ರತೆ
ಕಂಗನಾ ರಣಾವತ್​
ಆಯೇಷಾ ಬಾನು
ಆಯೇಷಾ ಬಾನು|

Updated on: Sep 08, 2020 | 7:22 AM

Share

ದೆಹಲಿ: ಕಂಗನಾ ರಣಾವತ್‌ ವಿವಾದಗಳು ಒಂದೆರೆಡಲ್ಲ. ಮುಂಬೈಯನ್ನು ಪಿಓಕೆ, ತಾಲಿಬಾನ್ ಎಂದೆಲ್ಲಾ ಕರೆದ ಮೇಲೆ ತೀವ್ರ ಟೀಕೆ ಎದುರಾಗಿತ್ತು. ಹಾಗೇ ಶಿವಸೇನೆ ಹಾಗೂ ಎನ್‌ಸಿಪಿ ನಾಯಕರು ಕಂಗನಾ ಮೇಲೆ ಮುಗಿಬಿದ್ದಿದ್ದರು. ಮುಂಬೈಗೆ ಭೇಟಿ ನೀಡದಂತೆ ಬೆದರಿಕೆಯೊಡ್ಡಿದ್ದರು. ಇದರ ಇಂಪ್ಯಾಕ್ಟ್ ಎಂಬಂತೆ ಕಂಗನಾಗೆ ಕೇಂದ್ರದಿಂದ ವೈ ಕೆಟಗರಿ ಭದ್ರತೆ ನೀಡಲಾಗಿದ್ದು, ಕಂಗನಾ ಮೆಂಟಲ್ ಮಹಿಳೆ ಎಂದು ಶಿವಸೇನೆ ವಕ್ತಾರ ರಾವತ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಕಂಗನಾ ಅಂದಮೇಲೆ ಕಾಂಟ್ರವರ್ಸಿ, ಕಾಂಟ್ರವರ್ಸಿ ಇರುವ ಜಾಗದಲ್ಲಿ ಕಂಗನಾ ಎಂಟ್ರಿ. ಇತ್ತೀಚೆಗೆ ಮುಂಬೈ ನಗರವನ್ನ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಈಗ ಅದು ಎಲ್ಲೆಲ್ಲಿಗೋ ಹೋಗಿ ಕಡೆಗೆ ಕಂಗನಾ ವರ್ಸಸ್ ಶಿವಸೇನೆ ಎಂಬಂತಾಗಿದೆ. ಇಂಥಾ ಹೊತ್ತಲ್ಲೇ ವಿವಾದದ ಕಿಡಿಗೆ ಪೆಟ್ರೋಲ್ ಸುರಿದಿದ್ದಾರೆ ಸಂಜಯ್ ರಾವತ್.

ಕಂಗನಾ ವಿರುದ್ಧ ರೊಚ್ಚಿಗೆದ್ದ ಮಹಾರಾಷ್ಟ್ರ ಸಿಎಂ! ತನಗನಿಸಿದ್ದನ್ನೆಲ್ಲಾ ನೇರವಾಗಿ ಹೇಳುವ ನಟಿ ಕಂಗನಾ ದಿಟ್ಟತನವೇ ಅನೇಕ ಸಮಸ್ಯೆ, ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಕಂಗನಾರ ಪಾಕ್‌ ಆಕ್ರಮಿತ ಕಾಶ್ಮೀರ ಟ್ವೀಟ್‌ ನಂತ್ರ ಮುಂಬೈಗೆ ಬಂದ್ರೆ ಪ್ರತಿಭಟನೆ ನಡೆಸ್ತೀವಿ ಅಂತಾ ಶಿವಸೇನೆ ವಾರ್ನ್‌ ಮಾಡಿತ್ತು. ಆದ್ರೆ, ಇದಕ್ಕೆ ಸವಾಲೊಡ್ಡಿದ್ದ ಕಂಗನಾ ಸೆಪ್ಟಂಬರ್ 9ಕ್ಕೆ ಬರ್ತೀನಿ. ಧಮ್ ಇದ್ದರೆ, ತಡೆಯಿರಿ ಎಂದು ಪ್ರತ್ಯುತ್ತರ ನೀಡಿದ್ದರು. ಇದೀಗ ಕಂಗನಾ ಬಗ್ಗೆ ವಾಗ್ದಾಳಿ ನಡೆಸಲು ಖುದ್ದು ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಎಂಟ್ರಿಯಾಗಿದ್ದು, ಕೆಲವರು ಮುಂಬೈನಲ್ಲಿ ತಮ್ಮ ಕೆರಿಯರ್ ಬೆಳವಣಿಗೆ ಮಾಡಿಕೊಳ್ಳುತ್ತಾರೆ. ಆದರೆ ಮುಂಬೈಗೆ ಋಣಿಯಾಗಿರಲ್ಲ ಎಂದು ಹೇಳುವ ಮೂಲಕ ಕಂಗನಾ ಮುಂಬೈಗೆ ಋಣಿಯಾಗಿಲ್ಲ ಎಂದು ಟೀಕಿಸಿದ್ದಾರೆ.

Y ಕೆಟಗರಿ ಭದ್ರತೆ ನೀಡಲು ಕೇಂದ್ರದ ನಿರ್ಧಾರ! ಅಂದಹಾಗೆ ಕಂಗನಾ ಬೆಂಬಲಕ್ಕೆ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನಿಂತಿದೆ. ಕಂಗನಾಗೆ ಶಿವಸೇನೆ ಬೆದರಿಕೆ ಹಾಕಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದ ಹಿಮಾಚಲ ಸಿಎಂ ಜಯರಾಮ ಠಾಕೂರ್, ಕಂಗನಾ ಹಿಮಾಚಲದ ಹೆಣ್ಣು ಮಗಳು. ಹಿಮಾಚಲ ಪ್ರದೇಶದ ಪೊಲೀಸರು ಮುಂಬೈನಲ್ಲೂ ಕಂಗನಾಗೆ ರಕ್ಷಣೆ ನೀಡ್ತಾರೆ ಎಂದಿದ್ದರು. ನಂತರ ಹಿಮಾಚಲ ಸರ್ಕಾರದ ಶಿಫಾರಸ್ಸಿನ ಮೇರೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿರುವ ಕಂಗನಾಗೆ ವೈ ಕೆಟಗರಿ ಭದ್ರತೆ ನೀಡಲು ಕೇಂದ್ರ ಗೃಹಇಲಾಖೆ ನಿರ್ಧರಿಸಿದೆ.ವೈ ಕೆಟಗರಿ ಭದ್ರತೆ ಅಡಿ ಕಂಗನಾಗೆ ದಿನದ 24 ಗಂಟೆ ಪ್ಯಾರಾ ಮಿಲಿಟರಿ ಪಡೆಯ ರಕ್ಷಣೆ ಸಿಗಲಿದೆ. ವೈ ಕೆಟಗರಿ ಭದ್ರತೆಯಡಿ ಇಬ್ಬರು ಶಸ್ತ್ರಧಾರಿ ಭದ್ರತಾ ಸಿಬ್ಬಂದಿ ಸದಾ ರಕ್ಷಣೆ ನೀಡ್ತಾರೆ.

ಒಟ್ನಲ್ಲಿ ಕಂಗನಾ ವಿಚಾರ ರಾಜ್ಯ ರಾಜ್ಯಗಳ ನಡುವೆ ಕಿಚ್ಚು ಹೊತ್ತಿಸಿದೆ. ಅತ್ತ ಕೇಂದ್ರ ಸರ್ಕಾರ ಕೂಡ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ನಾಳೆಯೇ ಕಂಗನಾ ರಣಾವತ್ ಮುಂಬೈಗೆ ಭೇಟಿ ನೀಡಲಿದ್ದು, ಮುಂದೆ ಏನಾಗಲಿದೆ..? ಅನ್ನೋದನ್ನ ಕಾದು ನೋಡಬೇಕಿದೆ.

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ