ಮನೆಗೆ ಓಡೋಡಿ ಬಂದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸರು

ಪೊಲೀಸರು ವ್ಯಕ್ತಿ ಮನೆಗೆ ಬಂದು ಆತ್ಮಹತ್ಯೆ ಯತ್ನವನ್ನು ತಡೆಯುವವಲ್ಲಿ ಯಶಸ್ವಿಯಾಗಿದ್ದಾರೆ. ಸಿಕಂದರಾಬಾದ್‌ನ ಗೋಪಾಲಪುರಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಅಪರಿಚಿತ ವ್ಯಕ್ತಿಯಿಂದ ಸುಳಿವು ಪಡೆದ ನಂತರ ಮನೆಗೆ ಓಡಿ ಬಂದು ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಮನೆಗೆ ಓಡೋಡಿ ಬಂದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸರು
ಪೊಲೀಸ್Image Credit source: India Today
Follow us
|

Updated on:Sep 08, 2024 | 8:43 AM

ಪೊಲೀಸರು ವ್ಯಕ್ತಿ ಮನೆಗೆ ಬಂದು ಆತ್ಮಹತ್ಯೆ ಯತ್ನವನ್ನು ತಡೆಯುವವಲ್ಲಿ ಯಶಸ್ವಿಯಾಗಿದ್ದಾರೆ. ಹೈದರಾಬಾದ್​ನಲ್ಲಿ ಈ ಘಟನೆ ನಡೆದಿದ್ದು,  ಸಿಕಂದರಾಬಾದ್‌ನ ಗೋಪಾಲಪುರಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಅಪರಿಚಿತ ವ್ಯಕ್ತಿಯಿಂದ ಸುಳಿವು ಪಡೆದ ನಂತರ ಮನೆಗೆ ಓಡಿ ಬಂದು ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಪಂಚವಟಿ ಲಾಡ್ಜ್ ಬಳಿ ಗಸ್ತು ತಿರುಗುತ್ತಿದ್ದಾಗ, ಶ್ರವಣಕುಮಾರ್ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು.

ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬಾಗಿಲು ಮುರಿದು ನೋಡಿದಾಗ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು, ಆದರೆ ಇನ್ನೂ ಉಸಿರಿತ್ತು.

ಮತ್ತಷ್ಟು ಓದಿ: ಆತ್ಮಹತ್ಯೆಗೆ ಯತ್ನ, ತಾನು ಸಾಯುವ ಮೊದಲು ತಮ್ಮನಿಗೆ ರಾಖಿ ಕಟ್ಟಿದ ಅಕ್ಕ

ಪೊಲೀಸರು ತಕ್ಷಣ ಸಿಪಿಆರ್ ಮಾಡಿ ಸಿಕಂದರಾಬಾದ್‌ನ ವಿಜಯಾ ಹೆಲ್ತ್ ಸರ್ವೀಸ್‌ಗೆ ಕಳುಹಿಸಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಕುಮಾರ್ ಅವರ ಆರೋಗ್ಯ ಸ್ಥಿರವಾಗಿದೆ.

ಇದೇ ತಿಂಗಳ ಆರಂಭದಲ್ಲಿ ಸೆಪ್ಟೆಂಬರ್ 2 ರಂದು, ತಮಿಳುನಾಡಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವ ತರಬೇತಿ ವೈದ್ಯರೊಬ್ಬರು ಕ್ಯಾಂಪಸ್‌ನಲ್ಲಿರುವ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದರು. ಕಾಂಚಿಪುರಂ ಜಿಲ್ಲೆಯ ಖಾಸಗಿ ಆಸ್ಪತ್ರೆ ಮೀನಾಕ್ಷಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

23 ವರ್ಷದ ಶೆರ್ಲಿನ್, ತಿರುನಲ್ವೇಲಿ ಮೂಲದವರಾಗಿದ್ದು, ಸಂಸ್ಥೆಯಲ್ಲಿ ಐದನೇ ವರ್ಷದ ವಿದ್ಯಾರ್ಥಿ ಮತ್ತು ತರಬೇತಿ ನಿರತ ವೈದ್ಯರಾಗಿದ್ದರು. ಭಾನುವಾರ ರಾತ್ರಿ, ಐದನೇ ಮಹಡಿಯ ಕಿಟಕಿಯ ಹಲಗೆಯ ಹೊರಗೆ ಬಹಳ ಹೊತ್ತು ಕುಳಿತಿದ್ದ ಇತರ ವಿದ್ಯಾರ್ಥಿಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:42 am, Sun, 8 September 24