Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಹಿಂದೂ, ಹಿಂದುತ್ವವಾದಿ ಅಲ್ಲ: ಜೈಪುರದಲ್ಲಿ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Rahul Gandhi . ನಾನು ಹಿಂದುವೇ ಹೊರತು ಹಿಂದುತ್ವವಾದಿಯಲ್ಲ. ಹಿಂದೂ ಮತ್ತು ಹಿಂದುತ್ವವಾದಿಗಳ ನಡುವಿನ ವ್ಯತ್ಯಾಸವೆಂದರೆ, ಹಿಂದೂ ಸತ್ಯವನ್ನು ಹುಡುಕುತ್ತದೆ, ಅದನ್ನು ಸತ್ಯಾಗ್ರಹ ಎಂದು ಕರೆಯಲಾಗುತ್ತದೆ. ಆದರೆ ಹಿಂದುತ್ವವಾದಿ ಶಕ್ತಿ (ಅಧಿಕಾರ) ಗಾಗಿ ಹುಡುಕುತ್ತದೆ.

ನಾನು ಹಿಂದೂ, ಹಿಂದುತ್ವವಾದಿ ಅಲ್ಲ: ಜೈಪುರದಲ್ಲಿ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 12, 2021 | 3:14 PM

ಜೈಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾನುವಾರ ಜೈಪುರದಲ್ಲಿ(Jaipur) ಹಿಂದೂ ಮತ್ತು ಹಿಂದುತ್ವವಾದಿಗಳ ಬಗ್ಗೆ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಜೈಪುರದಲ್ಲಿ ‘ಮೆಹೆಂಗಾಯೀ ಹಟಾವೋ ಮಹಾ ರ್ಯಾಲಿ’ (Mehngai Hatao Maha Rally ಬೆಲೆಯೇರಿಕೆ ವಿರುದ್ಧದ ರ್ಯಾಲಿ)ಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ದೇಶದ ಮುಂದೆ ಇಂದು ಇರುವ ಯುದ್ಧ ಯಾವುದು? ಇಂದು ದೇಶದ ರಾಜಕೀಯದಲ್ಲಿ ಎರಡು ಪದಗಳ ಘರ್ಷಣೆ ನಡೆಯುತ್ತಿದೆ. ಒಂದು ಪದ ಹಿಂದೂ ಮತ್ತು ಇನ್ನೊಂದು ಪದ ಹಿಂದುತ್ವ. ಇದು ಒಂದೇ ವಿಷಯವಲ್ಲ. ಎರಡು ವಿಭಿನ್ನ ಪದಗಳಿವೆ ಮತ್ತು ವಿಭಿನ್ನ ಅರ್ಥಗಳಿವೆ. ನಾನು ಹಿಂದುವೇ ಹೊರತು ಹಿಂದುತ್ವವಾದಿಯಲ್ಲ. ಹಿಂದೂ ಮತ್ತು ಹಿಂದುತ್ವವಾದಿಗಳ ನಡುವಿನ ವ್ಯತ್ಯಾಸವೆಂದರೆ, ಹಿಂದೂ ಸತ್ಯವನ್ನು ಹುಡುಕುತ್ತದೆ, ಅದನ್ನು ಸತ್ಯಾಗ್ರಹ ಎಂದು ಕರೆಯಲಾಗುತ್ತದೆ. ಆದರೆ ಹಿಂದುತ್ವವಾದಿ ಶಕ್ತಿ (ಅಧಿಕಾರ) ಗಾಗಿ ಹುಡುಕುತ್ತದೆ ಮತ್ತು ಅದನ್ನು ಸತ್ತಾಗ್ರಹ (ಹಿಂದಿಯಲ್ಲಿ ಸತ್ತಾ ಎಂದರೆ ಅಧಿಕಾರ) ಎಂದು ಕರೆಯಲಾಗುತ್ತದೆ.  ಮೋದಿ ಸರಕಾರವನ್ನು ಗುರಿಯಾಗಿಸಿ ಮಾತನಾಡಿದ ಗಾಂಧಿ, “ಇಂದು ಭಾರತದ ಜನಸಂಖ್ಯೆಯ ಶೇಕಡಾ ಒಂದರಷ್ಟು ಜನರು ತಮ್ಮ ಕೈಯಲ್ಲಿ ಶೇಕಡಾ 33 ರಷ್ಟು ಸಂಪತ್ತನ್ನು ಹೊಂದಿದ್ದಾರೆ. 10ರಷ್ಟು ಜನಸಂಖ್ಯೆಯ ಕೈಯಲ್ಲಿ ಶೇ65ರಷ್ಟು ಹಣವಿದೆ. ಮತ್ತು ಜನಸಂಖ್ಯೆಯ 50 ಪ್ರತಿಶತದಷ್ಟು ಬಡವರ ಕೈಯಲ್ಲಿ ಕೇವಲ 6 ಪ್ರತಿಶತದಷ್ಟು ಹಣವಿದೆ ಎಂದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಹಣದುಬ್ಬರದ ಬಗ್ಗೆ ಎನ್‌ಡಿಎ ಸರ್ಕಾರದ ವಿರುದ್ಧ ರ್ಯಾಲಿಯಲ್ಲಿ ಭಾಗವಹಿಸಲು ಜೈಪುರದಲ್ಲಿ ಹಾಜರಿದ್ದರು.

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ  ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ 70 ವರ್ಷಗಳಲ್ಲಿ ಏನು ಮಾಡಿದೆ ಎಂದು ಕೇಳುವವರು, ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ, 70 ವರ್ಷಗಳ ಬಗ್ಗೆ ಈ ಮಾತು ಬಿಡಿ. ಕಳೆದ ಏಳು ವರ್ಷಗಳಲ್ಲಿ ನೀವು ಏನು ಮಾಡಿದ್ದೀರಿ? ಏಮ್ಸ್, ನಿಮ್ಮ ವಿಮಾನ ಹಾರುವ ವಿಮಾನ ನಿಲ್ದಾಣವನ್ನು ಕಾಂಗ್ರೆಸ್ ನಿರ್ಮಿಸಿದೆ. 70 ವರ್ಷಗಳಲ್ಲಿ ಕಾಂಗ್ರೆಸ್ ಸೃಷ್ಟಿಸಿದ್ದನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ. ಈ ಸರ್ಕಾರ ತನ್ನ ಕೈಗಾರಿಕೋದ್ಯಮಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದೆ.

ಕೇಂದ್ರ ಸರ್ಕಾರವನ್ನು ಉತ್ತರಿಸುವಂತೆ ಸಾರ್ವಜನಿಕರನ್ನು ಒತ್ತಾಯಿಸಿದ ವಾದ್ರಾ, ಹಣದುಬ್ಬರದ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷವು ತಮ್ಮೊಂದಿಗೆ ನಿಂತಿದೆ ಎಂದು ಹೇಳಿದರು. “ನೀವೆಲ್ಲರೂ ಇಲ್ಲಿಗೆ ಏಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದೀರಿ? ನಿಮ್ಮ ಜೀವನ ಕಷ್ಟಕರವಾಗಿದ್ದರಿಂದ ನೀವು ಇಲ್ಲಿಗೆ ಬಂದಿದ್ದೀರಿ. ಇಂದು ಒಂದು ಗ್ಯಾಸ್ ಸಿಲಿಂಡರ್ ಬೆಲೆ ರೂ. 1,000 ಸಾಸಿವೆ ಎಣ್ಣೆ ರೂ. 200, ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರಿದೆ. ನಿಮ್ಮ ದೈನಂದಿನ ಜೀವನವು ಕಷ್ಟಕರವಾಗಿದೆ ಮತ್ತು ಯಾರೂ ನಿಮ್ಮ ಮಾತನ್ನು ಕೇಳುವುದಿಲ್ಲ, ”ಎಂದು ಅವರು ಹೇಳಿದರು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಹುಲ್ ಗಾಂಧಿ ಅವರು ನಾಗರಿಕರಿಗೆ ಮುಖ್ಯವಾದ ಸಮಸ್ಯೆಗಳನ್ನು ಎತ್ತಿದ್ದಾರೆ ಎಂದು ಶ್ಲಾಘಿಸಿದರು. ಏಳು ವರ್ಷಗಳ ಮೋದಿ ಸರ್ಕಾರದ ದುರಾಡಳಿತ ನಿಮ್ಮ ಮುಂದಿದೆ. ದೇಶದಲ್ಲಿ ಯಾರಾದರೂ ವಿರೋಧ ಪಕ್ಷವಾಗಿ ಧ್ವನಿ ಎತ್ತಿದ್ದರೆ ಅದು ರಾಹುಲ್ ಗಾಂಧಿ ಎಂದು ಅವರು ಹೇಳಿದರು. ಇದೇ ವೇಳೆ ಮಾತನಾಡಿದ ಮಾಜಿ ಉಪ ಸಿಎಂ ಸಚಿನ್ ಪೈಲಟ್, ಬಿಜೆಪಿಗೆ ರಿವರ್ಸ್ ಕೌಂಟ್ ಡೌನ್ ಶುರುವಾಗಿದೆ ಎಂದಿದ್ದಾರೆ.

ಜೈಪುರದ ವಿದ್ಯಾಧರ್ ನಗರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ನಾಯಕರಾದ ಆದಿರ್ ರಂಜನ್ ಚೌಧರಿ, ಭೂಪೇಶ್ ಬಾಘೇಲ್, ಮಲ್ಲಿಕಾರ್ಜುನ ಖರ್ಗೆ, ಕುಮಾರಿ ಸೆಲ್ಜಾ ಕೂಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ:  ನಾಳೆ ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟಿಸಲಿದ್ದಾರೆ ನರೇಂದ್ರ ಮೋದಿ, ಹೇಗಿದೆ ಪ್ರಧಾನಿಯವರ ಕನಸಿನ ಯೋಜನೆ?