
ನವದೆಹಲಿ, ಡಿಸೆಂಬರ್ 9: ಕಾಂಗ್ರೆಸ್ ಪಕ್ಷವು ರಾಜಕೀಯಕ್ಕಾಗಿ ರಾಷ್ಟ್ರೀಯ ಗೀತೆ ವಂದೇ ಮಾತರಂ (Vande Mataram) ಅನ್ನು ವಿಭಜಿಸದಿದ್ದರೆ ದೇಶವೂ ವಿಭಜನೆಯಾಗುತ್ತಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ಗೀತೆ ವಂದೇ ಮಾತರಂ 100 ವರ್ಷಗಳನ್ನು ಪೂರೈಸಿದಾಗ ಭಾರತ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಕಾರಣದಿಂದ ವಂದೇ ಮಾತರಂಗೆ ಅದಕ್ಕೆ ಸಲ್ಲಬೇಕಾದ ಮನ್ನಣೆ ಸಿಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
“50 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ವಂದೇ ಮಾತರಂ ಅನ್ನು ಮೊಟಕುಗೊಳಿಸಿದಾಗ ತುಷ್ಟೀಕರಣ ಪ್ರಾರಂಭವಾಯಿತು. ಆ ತುಷ್ಟೀಕರಣವು ದೇಶದ ವಿಭಜನೆಗೆ ಕಾರಣವಾಯಿತು. ಕಾಂಗ್ರೆಸ್ ವಂದೇ ಮಾತರಂ ಅನ್ನು ತುಷ್ಟೀಕರಣಕ್ಕಾಗಿ ವಿಭಜಿಸದಿದ್ದರೆ ದೇಶವು ಎರಡು ಭಾಗವಾಗುತ್ತಿರಲಿಲ್ಲ. ವಂದೇ ಮಾತರಂ 100 ವರ್ಷಗಳನ್ನು ಪೂರೈಸಿದಾಗ, ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ರಾಷ್ಟ್ರಗೀತೆಯ ವೈಭವೀಕರಣಕ್ಕೆ ಅವಕಾಶವಿರಲಿಲ್ಲ. ವಂದೇ ಮಾತರಂ ಘೋಷಣೆಯನ್ನು ಪ್ರಚಾರ ಮಾಡಿದವರನ್ನು ಇಂದಿರಾ ಗಾಂಧಿ ಬಂಧಿಸಿದರು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಂದೇ ಮಾತರಂ ಗೀತೆ ಬ್ರಿಟಿಷರ ಎದುರು ಬಂಡೆಯಂತೆ ನಿಂತಿತ್ತು: ಪ್ರಧಾನಿ ಮೋದಿ
ಪ್ರಿಯಾಂಕ ಗಾಂಧಿಯನ್ನು ಹೆಸರಿಸದೆ, ವಂದೇ ಮಾತರಂನ 150 ವರ್ಷಗಳನ್ನು ಆಚರಿಸಲು ಚರ್ಚೆ ನಡೆಸುವ ಅಗತ್ಯವನ್ನು ಕೆಲವು ಸದಸ್ಯರು ಪ್ರಶ್ನಿಸಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. “ವಂದೇ ಮಾತರಂ ಗೀತೆಯನ್ನು ಬರೆದಾಗ, ಭಾರತ ಸ್ವತಂತ್ರವಾದಾಗ, ಇಂದು ಮತ್ತು 2047ರಲ್ಲೂ ವಂದೇ ಮಾತರಂ ಬಗ್ಗೆ ಚರ್ಚೆ ಮತ್ತು ಅದರ ಬಗ್ಗೆ ಸಮರ್ಪಣೆಯ ಅಗತ್ಯವಿತ್ತು” ಎಂದು ಅವರು ಹೇಳಿದ್ದಾರೆ. ವಂದೇ ಭಾರತ್ ಬಗ್ಗೆ ಏಕೆ ಚರ್ಚಿಸಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
#WATCH | Union Home Minister Amit Shah says, “… Congress MPs are questioning the need for having discussions on Vande Mataram and calling it a political strategy and a way of diverting from the issues. Nobody is scared of discussions on issues. We are not the ones boycotting… pic.twitter.com/iMYau9Gkes
— ANI (@ANI) December 9, 2025
“ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ವಂದೇ ಮಾತರಂ ಅನ್ನು ವಿಭಜಿಸಿ ಅದರ 50ನೇ ವಾರ್ಷಿಕೋತ್ಸವದಂದು ಅದನ್ನು 2 ಚರಣಗಳಿಗೆ ಸೀಮಿತಗೊಳಿಸಿದರು. ಆಗಲೇ ಓಲೈಕೆ ಆರಂಭವಾಯಿತು. ಆ ಓಲೈಕೆ ವಿಭಜನೆಗೆ ಕಾರಣವಾಯಿತು. ವಂದೇ ಮಾತರಂ ಅನ್ನು ಓಲೈಕೆ ನೀತಿಯಿಂದ ವಿಭಜಿಸದಿದ್ದರೆ, ದೇಶ ವಿಭಜನೆ ಆಗುತ್ತಿರಲಿಲ್ಲ ಎಂದು ನನ್ನಂತಹ ಅನೇಕರು ನಂಬುತ್ತಾರೆ” ಎಂದು ಅವರು ಹೇಳಿದ್ದಾರೆ.
#WATCH | Union Home Minister Amit Shah says, “… Congress MPs are questioning the need for having discussions on Vande Mataram and calling it a political strategy and a way of diverting from the issues. Nobody is scared of discussions on issues. We are not the ones boycotting… pic.twitter.com/iMYau9Gkes
— ANI (@ANI) December 9, 2025
ಇದನ್ನೂ ಓದಿ: ವಂದೇ ಮಾತರಂ ಕುರಿತ ನೆಹರು ಪತ್ರ ಓದಿದ ಪ್ರಿಯಾಂಕಾ ಗಾಂಧಿ, ಬಿಜೆಪಿಗೆ ತರಾಟೆ
ನಿನ್ನೆ ಸದನವನ್ನುದ್ದೇಶಿಸಿ ಮಾತನಾಡಿದ ವಯನಾಡ್ ಸಂಸದೆ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಮುಂದಿನ ವರ್ಷನಡೆಯುವ ಪಶ್ಚಿಮ ಬಂಗಾಳದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ವಂದೇ ಮಾತರಂ ಬಗ್ಗೆ ಚರ್ಚಿಸುತ್ತಿದೆ ಎಂದು ಹೇಳಿದ್ದರು. “ಈ ಗೀತೆ 150 ವರ್ಷಗಳಿಗೂ ಹೆಚ್ಚು ಕಾಲ ನಮ್ಮ ಹೃದಯದಲ್ಲಿ ಸ್ಥಾನ ಪಡೆದಿದೆ. ನಮ್ಮ ದೇಶ 75 ವರ್ಷಗಳಿಂದ ಸ್ವತಂತ್ರವಾಗಿದೆ. ಈಗ ಈ ಚರ್ಚೆಯ ಅಗತ್ಯವೇನು? ನಾವು ಇದರ ಬಗ್ಗೆ ಚರ್ಚಿಸದಿದ್ದರೆ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆಯನ್ನು ನಿರಾಕರಿಸಿದ್ದೀರಿ. ಇದು ನಮ್ಮ ರಾಷ್ಟ್ರೀಯ ಗೀತೆ. ಚರ್ಚೆ ಏಕೆ?” ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ