AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್​ ಖುರ್ಷಿದ್​ ಪುಸ್ತಕ ನಿಷೇಧಿಸಲಾಗದು, ನೀವೇ ಓದುವುದನ್ನು ಬಿಡಬಹುದು: ದೆಹಲಿ ಹೈಕೋರ್ಟ್​​

ಸಲ್ಮಾನ್ ಖುರ್ಷಿದ್​ ಪುಸ್ತಕದಲ್ಲಿ ಹೇಳಲಾದ ವಿಚಾರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿದಾರರು, ಪ್ರತಿಯೊಬ್ಬರಿಗೂ ವಾಕ್​ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಅದು ನಿಯಂತ್ರಣ ಮೀರಬಾರದು ಎಂದಿದ್ದರು.

ಸಲ್ಮಾನ್​ ಖುರ್ಷಿದ್​ ಪುಸ್ತಕ ನಿಷೇಧಿಸಲಾಗದು, ನೀವೇ ಓದುವುದನ್ನು ಬಿಡಬಹುದು: ದೆಹಲಿ ಹೈಕೋರ್ಟ್​​
ದೆಹಲಿ ಹೈಕೋರ್ಟ್​
TV9 Web
| Edited By: |

Updated on: Nov 25, 2021 | 4:37 PM

Share

ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್​ ಬರೆದ ಸನ್​ರೈಸ್ ಓವರ್ ಅಯೋಧ್ಯಾ ಎಂಬ ಪುಸ್ತಕ ಇತ್ತೀಚೆಗೆ ವಿವಾದ ಸೃಷ್ಟಿಸಿದೆ. ಆ ಪುಸ್ತಕದಲ್ಲಿ ಸಲ್ಮಾನ್ ಖುರ್ಷಿದ್​ ಹಿಂದುತ್ವವನ್ನು, ಇಸ್ಲಾಂ ಉಗ್ರ ಸಂಘಟನೆಗಳಾದ ಐಸಿಸ್​ ಮತ್ತು ಬೋಕೋ ಹರಾಮ್​ಗೆ ಹೋಲಿಸಿದ್ದೇ ಈ ವಿವಾದ, ವಿರೋಧಕ್ಕೆ ಕಾರಣ. ಕೆಲವರು ಆ ಪುಸ್ತಕವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ದೆಹಲಿ ಹೈಕೋರ್ಟ್​ಗೆ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ದೆಹಲಿ ಹೈಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿದೆ. ‘ಈ ಪುಸ್ತಕ ಓದುವುದರಿಂದ ಯಾರ ಭಾವನೆಗೆ ಧಕ್ಕೆಯಾಗುತ್ತದೆಯೋ, ಅಂಥವರು ಇದನ್ನು ಓದಲೇಬೇಡಿ. ಬೇರೆ ಏನಾದರೂ ಒಳ್ಳೆಯದನ್ನು ಓದಿ’ ಎಂದು ಸಲಹೆ ನೀಡಿದೆ.  

‘ಪುಸ್ತಕ ನಿಷೇಧಿಸಬೇಕು ಎಂದು ಇಲ್ಲಿ ಅರ್ಜಿ ಸಲ್ಲಿಸುವ ಬದಲು, ನೀವ್ಯಾಕೆ ಜನರಿಗೇ ಹೇಳಬಾರದು. ಈ ಪುಸ್ತಕವನ್ನು ಖರೀದಿಸಬೇಡಿ, ಓದಬೇಡಿ ಎಂದು ಜನರಿಗೇ ನೇರವಾಗಿ ಹೇಳಿ. ಈ ಪುಸ್ತಕದಲ್ಲಿ ಕೆಟ್ಟದಾಗಿ ಬರೆಯಲಾಗಿದೆ. ಹಾಗಾಗಿ ಓದಬೇಡಿ ಎಂದು ಪ್ರತಿಯೊಬ್ಬರಿಗೂ ಹೇಳಿ. ಇದರಲ್ಲಿ ಏನಾದರೂ ನೋವುಂಟಾಗುವ ವಿಷಯಗಳಿದ್ದರೆ, ಅದನ್ನು ಓದುವುದನ್ನು ಬಿಟ್ಟು, ಬೇರೆ ಏನಾದರೂ ಓದುವುದು ಒಳ್ಳೆಯದು’ ಎಂದು ಹೈಕೋರ್ಟ್ ಅರ್ಜಿದಾರರಿಗೆ ಹೇಳಿದೆ.

ಸಲ್ಮಾನ್ ಖುರ್ಷಿದ್​ ಪುಸ್ತಕದಲ್ಲಿ ಹೇಳಲಾದ ವಿಚಾರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿದಾರರು, ಪ್ರತಿಯೊಬ್ಬರಿಗೂ ವಾಕ್​ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಅದು ನಿಯಂತ್ರಣ ಮೀರಬಾರದು. ಯಾರಿಗೂ ಇತರರ ಭಾವನೆಗಳನ್ನು ಉಲ್ಲಂಘಿಸುವ ಹಕ್ಕು ಇಲ್ಲ. ಆರ್ಟಿಕಲ್​ 19ರಲ್ಲಿರುವ ನಿರ್ಬಂಧಗಳನ್ನು ಮೀರಿದಂತೆ ಆಗುತ್ತದೆ ಎಂದು ದೆಹಲಿ ಹೈಕೋರ್ಟ್​ಗೆ ಹೇಳಿದ್ದರು. ಆದರೆ ಹೈಕೋರ್ಟ್​ ಪುಸ್ತಕ ನಿರ್ಬಂಧಿಸಲಾಗದು ಎಂದು ಖಡಾಖಂಡಿತವಾಗಿ ಹೇಳಿದೆ.  ಅಷ್ಟೇ ಅಲ್ಲ, ಅರ್ಜಿದಾರರು ಹೇಳುತ್ತಿರುವ ವಿಚಾರ ಪುಸ್ತಕದ ಒಂದು ಆಯ್ದ ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಆದರೆ ಅದಕ್ಕಾಗಿ ಪ್ರಕಾಶಕರ ಪರವಾನಗಿಯನ್ನು ರದ್ದುಪಡಿಸಲಾಗದು. ನಮಗೆ ಇಡೀ ಪುಸ್ತಕವನ್ನೂ ಕೊಟ್ಟಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ: IPL 2022: ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರ ನೇರ ಆಯ್ಕೆ: ಏನಿದು ನಿಯಮ?

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ