Covid 19 Vaccines: ಆಗಸ್ಟ್​​ನಲ್ಲಿ ಭಾರತ ತಲುಪಲಿವೆ 40 ಲಕ್ಷ ಡೋಸ್​ಗಳಷ್ಟು ಫೈಜರ್​, ಮಾಡೆರ್ನಾ ಲಸಿಕೆಗಳು..

ಕೊರೊನಾ ಲಸಿಕೆಯ ಅತಿದೊಡ್ಡ ಉತ್ಪಾದಕ ದೇಶ ಭಾರತ ಏಪ್ರಿಲ್​ವರೆಗೂ ನಮ್ಮಲ್ಲಿ ಉತ್ಪಾದನೆಯಾದ ಲಸಿಕೆಯನ್ನು ಕೊವ್ಯಾಕ್ಸ್ ಪ್ರೋಗ್ರಾಂನಡಿ ವಿವಿಧ ದೇಶಗಳಿಗೆ ನೀಡಿದೆ. ಆದರೆ ಏಪ್ರಿಲ್​ನಲ್ಲಿ ನಮ್ಮ ದೇಶದಲ್ಲಿಯೇ ಲಸಿಕೆ ಕೊರತೆ ಉಂಟಾದಾಗ ಅನಿವಾರ್ಯವಾಗಿ ನಿಲ್ಲಿಸಿದೆ.

Covid 19 Vaccines: ಆಗಸ್ಟ್​​ನಲ್ಲಿ ಭಾರತ ತಲುಪಲಿವೆ 40 ಲಕ್ಷ ಡೋಸ್​ಗಳಷ್ಟು ಫೈಜರ್​, ಮಾಡೆರ್ನಾ ಲಸಿಕೆಗಳು..
ಲಸಿಕೆ (ಪ್ರಾತಿನಿಧಿಕ ಚಿತ್ರ)
Follow us
| Updated By: Lakshmi Hegde

Updated on:Jul 08, 2021 | 5:27 PM

ದೆಹಲಿ: ಕೊರೊನಾ ಮೂರನೇ ಅಲೆ ಏಳುವ ಹೊತ್ತಿಗೆ ಹೇಗಾದರೂ ಸರಿ ದೇಶದಲ್ಲಿ ಶೇ.70ರಷ್ಟಾದರೂ ಜನರಿಗೆ ಕೊವಿಡ್​ 19 ಲಸಿಕೆ ನೀಡಿ ಮುಗಿಸಿರಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ವಿದೇಶಿ ಲಸಿಕೆಗಳನ್ನು ಭಾರತದಲ್ಲಿ ಬಳಸುವ ಸಂಬಂಧ ಪರೀಕ್ಷೆಗಳು ತ್ವರಿತರಗತಿಯಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೊವ್ಯಾಕ್ಸ್​ ಎಂಬ ಜಾಗತಿಕ ಮಟ್ಟದ ಕೊರೊನಾ ಲಸಿಕೆ ಹಂಚಿಕೆ ಕಾರ್ಯಕ್ರಮದಡಿ ಮೊದಲ ಬಾರಿಗೆ ಭಾರತಕ್ಕೆ ವಿದೇಶಿ ನಿರ್ಮಿತ ಕೊವಿಡ್​ 19 ಲಸಿಕೆಗಳು ತಲುಪಲಿವೆ ಎಂದು ರಾಯಿಟರ್ಸ್​ ವರದಿ ಮಾಡಿದೆ. ಈ ಕಾರ್ಯಕ್ರಮದಡಿ ಭಾರತಕ್ಕೆ 30-40 ಲಕ್ಷದಷ್ಟು ಫೈಜರ್​ ಹಾಗೂ ಮಾಡೆರ್ನಾ ಲಸಿಕೆಗಳು ಆಗಸ್ಟ್​ನಲ್ಲಿ ತಲುಪಲಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಲಸಿಕೆ ಮತ್ತು ರೋಗನಿರೋಧಕಗಳ ಜಾಗತಿಕ ಒಕ್ಕೂಟ (GAVI)ದ ವಕ್ತಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಲಸಿಕೆ ಹಂಚಿಕೆ ಕೊವ್ಯಾಕ್ಸ್ ಕಾರ್ಯಕ್ರಮದಡಿ ಅಮೆರಿಕ ನೀಡಲಿರುವ ಲಸಿಕೆಯ ಡೋಸ್​ಗಳು ಶೀಘ್ರದಲ್ಲೇ ಭಾರತಕ್ಕೆ ತಲುಪಲಿವೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಲಸಿಕೆಯ ಅತಿದೊಡ್ಡ ಉತ್ಪಾದಕ ದೇಶ ಭಾರತ ಏಪ್ರಿಲ್​ವರೆಗೂ ನಮ್ಮಲ್ಲಿ ಉತ್ಪಾದನೆಯಾದ ಲಸಿಕೆಯನ್ನು ಕೊವ್ಯಾಕ್ಸ್ ಪ್ರೋಗ್ರಾಂನಡಿ ವಿವಿಧ ದೇಶಗಳಿಗೆ ನೀಡಿದೆ. ಆದರೆ ಏಪ್ರಿಲ್​ನಲ್ಲಿ ನಮ್ಮ ದೇಶದಲ್ಲಿಯೇ ಲಸಿಕೆ ಕೊರತೆ ಉಂಟಾದಾಗ ಅನಿವಾರ್ಯವಾಗಿ ನಿಲ್ಲಿಸಿದೆ. ಈಗ ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದ್ದು, ಮೂರನೇ ಅಲೆ ಶುರುವಾಗುವುದಕ್ಕೂ ಮೊದಲು ಲಸಿಕೆ ನೀಡಿ ಮುಗಿಯಬೇಕಿದೆ. ಸದ್ಯ ಭಾರತದಲ್ಲಿ ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳು ಬಳಕೆಯಾಗುತ್ತಿದೆ. ಅದರಲ್ಲೂ ದೇಶಾದ್ಯಂತ ಅತಿ ಹೆಚ್ಚು ಬಳಕೆಯಾಗುತ್ತಿರುವುದು ಸದ್ಯ ಕೊವಿಶೀಲ್ಡ್ ಎರಡು ಡೋಸ್​ಗಳ ಲಸಿಕೆ.

ಇದನ್ನೂ ಓದಿ: K Annamalai: ಮೋದಿ ಸಂಪುಟ ವಿಸ್ತರಣೆ ಎಫೆಕ್ಟ್; ಅಣ್ಣಾಮಲೈಗೆ ಒಲಿದು ಬರುತ್ತದಾ ಆ ಅದೃಷ್ಟ!?

India May Receive Pfizer, Moderna COVID 19 Vaccine By August

Published On - 12:56 pm, Thu, 8 July 21

ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು