AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಯುರ್ವೇದ ಕ್ಷೇತ್ರದ ದಿಗ್ಗಜ ವೈದ್ಯ, ಶತಾಯುಷಿ ಪಿ.ಕೆ.ವಾರಿಯರ್​ ಇನ್ನಿಲ್ಲ; ದೇಶದ ಹಲವು ವಿವಿಐಪಿಗಳಿಗೆ ಚಿಕಿತ್ಸೆ ನೀಡಿದ್ದರು

P.K.Warrier: ಪಿ.ಕೆ.ವಾರಿಯರ್ 1999ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2010ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1999ರಲ್ಲಿ ಕ್ಯಾಲಿಕಟ್​ ವಿಶ್ವವಿದ್ಯಾಲಯದಿಂದ ಡಿ ಲಿಟ್​ ಗೌರವ ಸಂದಿದೆ.

ಆಯುರ್ವೇದ ಕ್ಷೇತ್ರದ ದಿಗ್ಗಜ ವೈದ್ಯ, ಶತಾಯುಷಿ ಪಿ.ಕೆ.ವಾರಿಯರ್​ ಇನ್ನಿಲ್ಲ; ದೇಶದ ಹಲವು ವಿವಿಐಪಿಗಳಿಗೆ ಚಿಕಿತ್ಸೆ ನೀಡಿದ್ದರು
ಪಿ.ಕೆ.ವಾರಿಯರ್​
TV9 Web
| Edited By: |

Updated on:Jul 10, 2021 | 4:05 PM

Share

ಆಯುರ್ವೇದ ಕ್ಷೇತ್ರದ ವರಿಷ್ಠ, ವಿಶ್ವದಾದ್ಯಂತ ಹೆಸರು ಮಾಡಿದ್ದ ಆರ್ಯವೈದ್ಯ ಪಿ.ಕೆ.ವಾರಿಯರ್ (ಪನ್ನಿಯಂಪಿಲ್ಲಿ ಕೃಷ್ಣಂಕುಟಿ ವಾರಿಯರ್- P.K. Warrier​) ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು. ಇಂದು ಕೇರಳದ ಕೊಟ್ಟಕಲ್​​ನಲ್ಲಿರುವ ವೈದ್ಯರತ್ನ ಪಿ.ಎಸ್​. ವಾರಿಯರ್ಸ್​ ಅವರ ಆರ್ಯ ವೈದ್ಯ ಶಾಲೆ (Arya vaidya sala)ಯ ಪ್ರಧಾನ ಕಚೇರಿಯಾದ ಕೈಲಾಸ ಮಂದಿರಂನಲ್ಲಿ ಕೊನೆಯುಸಿರೆಳೆದಿದ್ದಾರೆ. 1921ರ ಜೂನ್​ 5ರಂದು ಜನಿಸಿದ್ದ ಪಿ.ಕೆ.ವಾರಿಯರ್ಸ್​ ಇಂದು 2021ರ ಜುಲೈ 10ರಂದು ನಿಧನರಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಆರ್ಯ ವೈದ್ಯ ಶಾಲೆವತಿಯಿಂದ ಅವರ 100ನೇ ವರ್ಷದ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗಿತ್ತು.

ಆಯುರ್ವೇದ ಲೋಕದಲ್ಲಿ ದಿಗ್ಗಜರೆನಿಸಿಕೊಂಡಿದ್ದ ಡಾ. ಪಿ.ಕೆ.ವಾರಿಯರ್ ಮೂಲತಃ ಕೇರಳದ ಮಲ್ಲಪುರಂನ ಕೊಟ್ಟಕಲ್​ನವರು. ಆರ್ಯ ವೈದ್ಯ ಶಾಲೆಯ ಸಂಸ್ಥಾಪಕರಾದ ವೈದ್ಯರತ್ನ ಪಿ.ಎಸ್. ವಾರಿಯರ್ ಅವರ ಹತ್ತಿರದ ಸಂಬಂಧಿ. 1954ರಿಂದಲೂ ಆರ್ಯ ವೈದ್ಯ ಶಾಲೆಯ ವ್ಯವಸ್ಥಾಪಕ ಟ್ರಸ್ಟಿ ಆಗಿದ್ದಾರೆ. ಶತಮಾನಗಳಷ್ಟು ಹಳೆಯಾದದ ಈ ಆರ್ಯವೈದ್ಯ ಶಾಲೆಯ ಖ್ಯಾತಿಯನ್ನು ಉತ್ತುಂಗಕ್ಕೆ ಏರಿಸುವಲ್ಲಿ ಇವರು ತುಂಬ ಪ್ರಮುಖ ಪಾತ್ರ ವಹಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಡಾ. ವಾರಿಯರ್ ತಮ್ಮ ಏಳು ದಶಕಗಳ ಸೇವೆಯಲ್ಲಿ​ ಆಯುರ್ವೇದಕ್ಕೆ ಒಂದು ಹೊಸ ಆಯಾಮವನ್ನು ಕೊಟ್ಟಿದ್ದಾರೆ. ಆಯುರ್ವೇದವೆಂದರೆ ಮನುಷ್ಯನ ದೇಹ ಮತ್ತು ಮನಸು ಎರಡನ್ನೂ ಪರಿಗಣಿಸಿ, ಸಮಗ್ರವಾಗಿ ತಪಾಸಣೆ ಮಾಡುವ ವಿಧಾನ ಎಂದು ಅವರು ಹೇಳಿದ್ದರು. ಇವರು ಬರೆದ ಸ್ಮೃತಿ ಪರ್ವಮ್​ ಆತ್ಮಚರಿತ್ರೆಗೆ 2009ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇದರ ಇಂಗ್ಲಿಷ್ ತರ್ಜುಮೆಯ ಪುಸ್ತಕ ಕೂಡ ತುಂಬ ಖ್ಯಾತಿ ಗಳಿಸಿದೆ. ಅಖಿಲ ಭಾರತೀಯ ಆಯುರ್ವೇದ ಕಾಂಗ್ರೆಸ್​ಗೆ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕೊಟ್ಟಕ್ಕಲ್​ ಆರ್ಯ ವೈದ್ಯ ಶಾಲಾದ ಮುಖ್ಯ ವೈದ್ಯರಾಗಿದ್ದ ಪಿ.ಕೆ.ವಾರಿಯರ್​, ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಸೇರಿ ದೇಶದ ಹಲವು ವಿವಿಐಪಿಗಳಿಗೆ ಚಿಕಿತ್ಸೆಯನ್ನೂ ನೀಡಿದ್ದಾರೆ.

ಪಿ.ಕೆ.ವಾರಿಯರ್ 1999ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2010ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1999ರಲ್ಲಿ ಕ್ಯಾಲಿಕಟ್​ ವಿಶ್ವವಿದ್ಯಾಲಯದಿಂದ ಡಿ ಲಿಟ್​ ಗೌರವ ಸಂದಿದೆ. ಕೋಪನ್​ಹೇಗನ್​ ಯೂನಿವರ್ಸಿಟಿಯಿಂದ ಡಾಕ್ಟರ್ ಆಫ್​ ಮೆಡಿಸಿನ್ ಪ್ರಶಸ್ತಿ ಲಭಿಸಿದೆ. ಕೆಲವು ವರ್ಷಗಳ ಹಿಂದೆ ಪಿ.ಕೆ.ವಾರಿಯರ್​ ಅವರ ಪತ್ನಿ ಮಾಧವಿಕುಟ್ಟಿ ಮತ್ತು ಮಗ ವಿಜಯನ್​ ವಾರಿಯರ್​ ಮೃತಪಟ್ಟಿದ್ದಾರೆ. ಇನ್ನೊಬ್ಬ ಪುತ್ರ ಬಾಲಚಂದ್ರ ವಾರಿಯರ್ ಮತ್ತು ಮಗಳು ಸುಭದ್ರಾ ರಾಮಚಂದ್ರನ್​ರೊಂದಿಗೆ ವಾಸವಾಗಿದ್ದರು.

ಇದನ್ನೂ ಓದಿ: ವಿಶ್ವ ಸಂಸ್ಥೆಯ ಕಾರ್ಮಿಕ ಕಾರ್ಡ್ ನೀಡೋದಾಗಿ ಮಹಿಳೆಯರಿಗೆ ವಂಚನೆ‌: ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು

Indian Ayurveda practitioner P K Warrier Died In Kottakkal Kerala

Published On - 4:05 pm, Sat, 10 July 21

Follow Us
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​