AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Farmers Protest: ಗಣರಾಜ್ಯೋತ್ಸವ ದಿನದ ಹಿಂಸಾಚಾರ, ವಿಶ್ವಸಂಸ್ಥೆ ಬಾಗಿಲು ಬಡಿಯಬೇಕಾಗಿ ಬರಬಹುದು: ಟಿಕಾಯತ್​

ನಿಷ್ಪಕ್ಷಪಾತ ತನಿಖೆ ನಡೆಸುವ ಯಾವುದೇ ಸಂಸ್ಥೆ ಇಲ್ಲಿ ಇದೆಯೇ? ಇಲ್ಲದಿದ್ದರೆ, ನಾವು ಈ ವಿಷಯವನ್ನು ಯುಎನ್‌ಗೆ ತೆಗೆದುಕೊಳ್ಳಬೇಕೇ ಎಂದು ರೈತ ನಾಯಕರು ಹೇಳುತ್ತಿದ್ದಾರೆ ಎಂಬ ವಿವರ ಹೊರಹಾಕಿ ಭಾರತೀಯ ಕಿಸಾನ್​ ಯೂನಿಯನ್​ನ ಮುಖ್ಯಸ್ಥ ರಾಕೇಶ್​ ಟಿಕಾಯತ್​ ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ.

Farmers Protest: ಗಣರಾಜ್ಯೋತ್ಸವ ದಿನದ ಹಿಂಸಾಚಾರ, ವಿಶ್ವಸಂಸ್ಥೆ ಬಾಗಿಲು ಬಡಿಯಬೇಕಾಗಿ ಬರಬಹುದು: ಟಿಕಾಯತ್​
ಪ್ರಾತಿನಿಧಿಕ ಚಿತ್ರ
TV9 Web
| Updated By: guruganesh bhat|

Updated on: Jul 10, 2021 | 4:41 PM

Share

ಈ ವರ್ಷದ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ‘ನಿಷ್ಪಕ್ಷಪಾತ ತನಿಖೆ’ಯ ಅಗತ್ಯವಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ (Rakesh Tikait)​ ಶನಿವಾರ ಹೇಳಿದ್ದಾರೆ. ಇದಕ್ಕಾಗಿ ರೈತರು ವಿಶ್ವಸಂಸ್ಥೆಯ (ಯುಎನ್) ಬಾಗಿಲು ಬಡಿಯಬೇಕಾಗಬಹುದು. “ನಾವು ಯಾವತ್ತೂ ಕೃಷಿ ಕಾನೂನುಗಳ ಬಗ್ಗೆ ವಿಶ್ವಸಂಸ್ಥೆ ಹೋಗುವ ಬಗ್ಗೆ ಮಾತನಾಡಿಲ್ಲ. ಜನವರಿ 26 ರ ಘಟನೆಗೆ ಸಂಬಂಧಿಸಿದಂತೆ ಮಾತ್ರ ನಮ್ಮ ರೈತ ಮುಖಂಡರು ಚರ್ಚಿಸಿದ್ದಾರೆ,” ಎಂದು ಹೇಳುವ ಮೂಲಕ ಅನಗತ್ಯ ವಿವಾದ ಹುಟ್ಟುಹಾಕಿದ್ದಾರೆ.

“ನಿಷ್ಪಕ್ಷಪಾತ ತನಿಖೆ ನಡೆಸುವ ಯಾವುದೇ ಸಂಸ್ಥೆ ಇಲ್ಲಿ ಇದೆಯೇ? ಇಲ್ಲದಿದ್ದರೆ, ನಾವು ಈ ವಿಷಯವನ್ನು ಯುಎನ್‌ಗೆ ತೆಗೆದುಕೊಳ್ಳಬೇಕೇ?” ರಾಷ್ಟ್ರ ರಾಜಧಾನಿ ದೆಹಲಿಯ ಗಡಿ ಭಾಗದಲ್ಲಿ ಮಾತನಾಡುತ್ತಿದ್ದ ಟಿಕಾಯತ್​ ಈ ವಿಚಾರವನ್ನು ಪ್ರಸ್ತಾಪಿಸಿದರು. “ವಿಶ್ವಸಂಸ್ಥೆಯಲ್ಲಿ ಹೊಸ ಕೃಷಿ ಮಸೂದೆಗಳ ವಿಷಯವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ನಾವು ಹೇಳಲಿಲ್ಲ. ಜನವರಿ 26 ರ ಘಟನೆಯ ಪ್ರಶ್ನೆಗೆ ಮಾತ್ರ ನಾವು ಪ್ರತಿಕ್ರಿಯಿಸಿದ್ದೇವೆ” ಎಂದು ಟಿಕಾಯತ್​ ಹೇಳಿದರು.

ಜನವರಿ 26 ರಂದು, ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಒಂದು ಭಾಗವು ಪೊಲೀಸರೊಂದಿಗೆ ಘರ್ಷಣೆ ನಡೆಸಿತ್ತು ಮತ್ತು ಯೋಜಿಸಿದ ಟ್ರ್ಯಾಕ್ಟರ್ ರಾಲಿಯನ್ನು ಗೊತ್ತುಪಡಿಸಿದ ಮಾರ್ಗದಿಂದ ಬೇರೆಡೆಗೆ ತಿರುಗಿಸಿ ಕೆಂಪು ಕೋಟೆಗೆ ನುಗ್ಗಿತು. ಅವರು ಧಾರ್ಮಿಕ ಧ್ವಜವನ್ನು ಮತ್ತು ರೈತರ ಒಕ್ಕೂಟವನ್ನು ಅದರ ಗುಮ್ಮಟಗಳ ಮೇಲೆ ಹಾರಿಸಿದ್ದರು.

ಟಿಕಾಯತ್​ ಕೀಳು ರಾಜಕೀಯ? ಕೇಂದ್ರ ಸರಕಾರ ತಂದ ಮೂರು ರೈತ ಕಾನೂನನ್ನು ಇಟ್ಟುಕೊಂಡು ಪ್ರಾರಂಭವಾದ ಚಳುವಳಿ ಪಂಜಾಬಿನ ಕೆಲವು ಪ್ರಾಂತ್ಯ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ಜೋರಾಗಿತ್ತು. ಆಮೇಲೆ ಉತ್ತರ ಪ್ರದೇಶದಿಂದ ಬಂದ ಟಿಕಾಯತ್​ ಈ ಚಳುವಳಿಯ ನೇತೃತ್ವವಹಿಸಿದರು. ಅವರು ನೇತೃತ್ವವಹಿಸಿದಾಗಿನಿಂದ ಇಡೀ ಚಳುವಳಿ ರಾಜಕೀ ಬಣ್ಣ ಪಡೆದಿದೆ. ಈ ಚಳುವಳಿಗೆ ಹೊಸ ರೂಪ ಕೊಡಬೇಕೆಂದು ಟಿಕಾಯತ್​ ಏನೆಲ್ಲ ಪ್ರಯತ್ನ ಮಾಡಿದರೂ ಅದು ಈಡೇರುತ್ತಿಲ್ಲ.

ಕಳೆದ ಜೂನ್​  25 ರಂದು ಟಿಕಾಯತ್​ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದರು. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿ ತುಂಬಾ ಟೀಕೆಗೆ ಒಳಗಾಗಿದ್ದರು. ಕಣಿವೆಯಲ್ಲಿ ಕೆಲವೇ ಕೆಲವು ಖಾಸಗಿ ಕಂಪನಿಗಳು ಮಾತ್ರ ಲಾಭ ಪಡೆಯುತ್ತಿವೆ ಮತ್ತು ಇದನ್ನು ವಿರೋಧಿಸುತ್ತಿರುವ ರೈತರನ್ನು ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಟಿಕಾಯತ್​ ಹೇಳಿದ್ದರು. ಇವರ ಈ ಹೇಳಿಕೆ ಬಗ್ಗೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆ ನೀಡುವಾಗ ಯಾವ ಸಾಕ್ಷ್ಯವನ್ನು ಅವರು ನೀಡದೇ ಇದ್ದುದರಿಂದ ಅವರು ಟೀಕೆಗೆ ಗುರಿಯಾಗಿದ್ದರು.

ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್‌ಗಳು ಬಹಳ ಟ್ರೋಲ್​ ಆಗಿತ್ತು. “ರಾಕೇಶ್ ಟಿಕಾಯತ್​ ಅವರನ್ನು ನಿರ್ಲಕ್ಷಿಸುವ ಮೂಲಕ, ಮೋದಿಜಿ ಅವರನ್ನು ಒಂದು ತಮಾಷೆ (joke)ಯಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಪಾಠ ಕಲಿಸುವ ಬಗ್ಗೆ ಟಿಕಾಯತ್​ ಅವರ ಬೆದರಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷ ರಾಜ್‌ಕುಮಾರ್ ಚಹರ್, ರೈತ ನಾಯಕನಿಗೆ ರೈತರೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಮೂರು ಕೃಷಿ ಕಾನೂನುಗಳ ಬಗ್ಗೆ ನಿರಂತರವಾಗಿ ಅಸತ್ಯವನ್ನು ಹರಡುತ್ತಿದ್ದಾರೆ ಎಂದು ಹೇಳಿದ್ದರು. “ರಾಕೇಶ್ ಟಿಕಾಯತ್ ನಿರಂತರವಾಗಿ ಸಾರ್ವಜನಿಕರ ಮುಂದೆ ಸುಳ್ಳಿನ ಗುಂಪನ್ನು ಪ್ರಸ್ತುತಪಡಿಸುತ್ತಿದ್ದಾರೆ. ಅವರಿ ಇದು ತಿಳಿದಿದೆ. ಅವರು ನಿರಂತರವಾಗಿ ಸುಳ್ಳು ಹೇಳುತ್ತಿದ್ದಾರೆ ಮತ್ತು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ,” ಎಂದು ಚಹರ್ ಹೇಳಿದ್ದರು. ಕಾಂಗ್ರೆಸ್ ಮತ್ತು ಎಡಪಂಥೀಯರು ತಮ್ಮನ್ನು ರಾಜಕೀಯವಾಗಿ ಬಳಸಿಕೊಳ್ಳಲು ಟಿಕಾಯತ್​ ಅವಕಾಶ ನೀಡಿದ್ದಾರೆ ಎಂದು ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ:

Rakesh Tikait: ಗುಜರಾತ್ ಜನರ ಸ್ವಾತಂತ್ರ್ಯವನ್ನು ಬಿಜೆಪಿ ಸರ್ಕಾರಗಳು ಕಸಿದುಕೊಂಡಿವೆ; ರಾಕೇಶ್ ಟಿಕಾಯತ್

Rakesh Tikait: ನರೇಂದ್ರ ಮೋದಿ ಘೋಷಿಸಿದ ಬೆಂಬಲ ಬೆಲೆ ಬದ್ಧತೆಯನ್ನು ಅನುಮಾನಿಸಿದ ರಾಕೇಶ್ ಟಿಕಾಯತ್

(Bharatiya Kisan Union chief Rakesh Tikait kicked up controversy saying Republic Day violence issue can be taken up with UN)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ