AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರಮಿಕ್​​ ಟ್ರೈನ್​ಗಳಿಂದ ರೈಲ್ವೇ ಇಲಾಖೆ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

ದೆಹಲಿ: ಲಾಕ್​ಡೌನ್​ನಿಂದ ದೇಶದ ಸಹಸ್ರಾರು ಜನರು ಸಂಕಷ್ಟ ಎದುರಿಸಿದ್ದರು. ಇದರಲ್ಲಿ ವಲಸೆ ಕಾರ್ಮಿಕರು ಸಹ ಸೇರಿದ್ದರು. ಕೆಲಸವಿಲ್ಲದೆ, ತಿನ್ನೋಕೆ ಊಟ ಸಿಗದೆ ಪರದಾಡಿದ್ದ ಕಾರ್ಮಿಕರಿಗೆ ಕೊನೆಗೆ ಕೇಂದ್ರ ಸರ್ಕಾರ ನರವಿನ ಹಸ್ತ ಚಾಚಿತ್ತು.ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಶ್ರಮಿಕ್​ ಟ್ರೈನ್​ಗಳ ವ್ಯವಸ್ಥೆ ಮಾಡಿತ್ತು. ಇದರಿಂದ ದೇಶವ ವಿವಿಧೆಡೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ತವರೂರಿಗೆ ಮರಳಲು ಸಹಕಾರಿಯಾಗಿತ್ತು. ಶ್ರಮಿಕ್​ ಸ್ಪೆಷಲ್​ ಟ್ರೈನ್​ಗಳನ್ನ ಓಡಿಸುವ ಮೂಲಕ ರೈಲ್ವೆ ಇಲಾಖೆ ಒಂದಲ್ಲ ಎರಡಲ್ಲ, ಬರೋಬ್ಬರಿ 428 ಕೋಟಿ […]

ಶ್ರಮಿಕ್​​ ಟ್ರೈನ್​ಗಳಿಂದ ರೈಲ್ವೇ ಇಲಾಖೆ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?
KUSHAL V
| Edited By: |

Updated on:Jul 28, 2020 | 12:34 AM

Share

ದೆಹಲಿ: ಲಾಕ್​ಡೌನ್​ನಿಂದ ದೇಶದ ಸಹಸ್ರಾರು ಜನರು ಸಂಕಷ್ಟ ಎದುರಿಸಿದ್ದರು. ಇದರಲ್ಲಿ ವಲಸೆ ಕಾರ್ಮಿಕರು ಸಹ ಸೇರಿದ್ದರು. ಕೆಲಸವಿಲ್ಲದೆ, ತಿನ್ನೋಕೆ ಊಟ ಸಿಗದೆ ಪರದಾಡಿದ್ದ ಕಾರ್ಮಿಕರಿಗೆ ಕೊನೆಗೆ ಕೇಂದ್ರ ಸರ್ಕಾರ ನರವಿನ ಹಸ್ತ ಚಾಚಿತ್ತು.ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಶ್ರಮಿಕ್​ ಟ್ರೈನ್​ಗಳ ವ್ಯವಸ್ಥೆ ಮಾಡಿತ್ತು. ಇದರಿಂದ ದೇಶವ ವಿವಿಧೆಡೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ತವರೂರಿಗೆ ಮರಳಲು ಸಹಕಾರಿಯಾಗಿತ್ತು.

ಶ್ರಮಿಕ್​ ಸ್ಪೆಷಲ್​ ಟ್ರೈನ್​ಗಳನ್ನ ಓಡಿಸುವ ಮೂಲಕ ರೈಲ್ವೆ ಇಲಾಖೆ ಒಂದಲ್ಲ ಎರಡಲ್ಲ, ಬರೋಬ್ಬರಿ 428 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ತಿಳಿದುಬಂದಿದೆ. ಹೌದು, ಸರಿಸುಮಾರು 62 ಲಕ್ಷ ವಲಸೆ ಕಾರ್ಮಿಕರನ್ನ ಹೊತ್ತೊಯ್ದ ಈ ವಿಶೇಷ ರೈಲುಗಳ ಸೇವೆ ಆರಂಭವಾದ ಸಮಯದಿಂದ ಈಗಿನವರೆಗೆ 428 ಕೋಟಿ ರೂಪಾಯಿ ಗಳಿಸಿದೆ. ಅಂದ ಹಾಗೆ, ಈ ಮಾಹಿತಿಯನ್ನು ಅಜಯ್​ ಬೋಸ್ ಎಂಬುವವರು RTI ಮೂಲಕ ರೈಲ್ವೇ ಇಲಾಖೆಯಿಂದ ಪಡೆದಿದ್ದಾರೆ.

ಕಾರ್ಮಿಕರಿಂದ ಟಿಕೆಟ್​ ದರ ಪಡೆದಿಲ್ಲ: ಸ್ಪಷ್ಟನೆ ಹೀಗಾಗಿ, ಕೇಂದ್ರ ಸರ್ಕಾರ ವಲಸಿಗರನ್ನ ಉಚಿತವಾಗಿ ಕರೆದುಕೊಂಡು ಹೋಗಿಲ್ಲ ಎಂಬುದು ಅವರ ವಾದ. ಆದರೆ, ಇದಕ್ಕೆ ಸ್ಪಷ್ಟೀಕರಣ ನೀಡಿರುವ ಇಲಾಖೆಯು ಈ ಮೊತ್ತವನ್ನು ನಾವು ಆಯಾ ರಾಜ್ಯಗಳಿಂದ ಪಡೆದಿದ್ದೇವೆ. ಹಾಗಾಗಿ, ನಾವು ಕಾರ್ಮಿಕರಿಂದ ಟಿಕೆಟ್​ ದರ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ, ವಿಶೇಷ ರೈಲು ಚಲಾಯಿಸುವ ಶೇಕಡಾ 85 ರಷ್ಟು ಮೊತ್ತವನ್ನ ನಾವೇ ಭರಿಸಿದ್ದೇವೆ ಎಂದು ತಿಳಿಸಿದ್ದಾರೆ.

Published On - 3:00 pm, Mon, 27 July 20

Follow Us
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!