AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರಮಿಕ್​​ ಟ್ರೈನ್​ಗಳಿಂದ ರೈಲ್ವೇ ಇಲಾಖೆ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?

ದೆಹಲಿ: ಲಾಕ್​ಡೌನ್​ನಿಂದ ದೇಶದ ಸಹಸ್ರಾರು ಜನರು ಸಂಕಷ್ಟ ಎದುರಿಸಿದ್ದರು. ಇದರಲ್ಲಿ ವಲಸೆ ಕಾರ್ಮಿಕರು ಸಹ ಸೇರಿದ್ದರು. ಕೆಲಸವಿಲ್ಲದೆ, ತಿನ್ನೋಕೆ ಊಟ ಸಿಗದೆ ಪರದಾಡಿದ್ದ ಕಾರ್ಮಿಕರಿಗೆ ಕೊನೆಗೆ ಕೇಂದ್ರ ಸರ್ಕಾರ ನರವಿನ ಹಸ್ತ ಚಾಚಿತ್ತು.ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಶ್ರಮಿಕ್​ ಟ್ರೈನ್​ಗಳ ವ್ಯವಸ್ಥೆ ಮಾಡಿತ್ತು. ಇದರಿಂದ ದೇಶವ ವಿವಿಧೆಡೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ತವರೂರಿಗೆ ಮರಳಲು ಸಹಕಾರಿಯಾಗಿತ್ತು. ಶ್ರಮಿಕ್​ ಸ್ಪೆಷಲ್​ ಟ್ರೈನ್​ಗಳನ್ನ ಓಡಿಸುವ ಮೂಲಕ ರೈಲ್ವೆ ಇಲಾಖೆ ಒಂದಲ್ಲ ಎರಡಲ್ಲ, ಬರೋಬ್ಬರಿ 428 ಕೋಟಿ […]

ಶ್ರಮಿಕ್​​ ಟ್ರೈನ್​ಗಳಿಂದ ರೈಲ್ವೇ ಇಲಾಖೆ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?
KUSHAL V
| Edited By: |

Updated on:Jul 28, 2020 | 12:34 AM

Share

ದೆಹಲಿ: ಲಾಕ್​ಡೌನ್​ನಿಂದ ದೇಶದ ಸಹಸ್ರಾರು ಜನರು ಸಂಕಷ್ಟ ಎದುರಿಸಿದ್ದರು. ಇದರಲ್ಲಿ ವಲಸೆ ಕಾರ್ಮಿಕರು ಸಹ ಸೇರಿದ್ದರು. ಕೆಲಸವಿಲ್ಲದೆ, ತಿನ್ನೋಕೆ ಊಟ ಸಿಗದೆ ಪರದಾಡಿದ್ದ ಕಾರ್ಮಿಕರಿಗೆ ಕೊನೆಗೆ ಕೇಂದ್ರ ಸರ್ಕಾರ ನರವಿನ ಹಸ್ತ ಚಾಚಿತ್ತು.ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಶ್ರಮಿಕ್​ ಟ್ರೈನ್​ಗಳ ವ್ಯವಸ್ಥೆ ಮಾಡಿತ್ತು. ಇದರಿಂದ ದೇಶವ ವಿವಿಧೆಡೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ತವರೂರಿಗೆ ಮರಳಲು ಸಹಕಾರಿಯಾಗಿತ್ತು.

ಶ್ರಮಿಕ್​ ಸ್ಪೆಷಲ್​ ಟ್ರೈನ್​ಗಳನ್ನ ಓಡಿಸುವ ಮೂಲಕ ರೈಲ್ವೆ ಇಲಾಖೆ ಒಂದಲ್ಲ ಎರಡಲ್ಲ, ಬರೋಬ್ಬರಿ 428 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ತಿಳಿದುಬಂದಿದೆ. ಹೌದು, ಸರಿಸುಮಾರು 62 ಲಕ್ಷ ವಲಸೆ ಕಾರ್ಮಿಕರನ್ನ ಹೊತ್ತೊಯ್ದ ಈ ವಿಶೇಷ ರೈಲುಗಳ ಸೇವೆ ಆರಂಭವಾದ ಸಮಯದಿಂದ ಈಗಿನವರೆಗೆ 428 ಕೋಟಿ ರೂಪಾಯಿ ಗಳಿಸಿದೆ. ಅಂದ ಹಾಗೆ, ಈ ಮಾಹಿತಿಯನ್ನು ಅಜಯ್​ ಬೋಸ್ ಎಂಬುವವರು RTI ಮೂಲಕ ರೈಲ್ವೇ ಇಲಾಖೆಯಿಂದ ಪಡೆದಿದ್ದಾರೆ.

ಕಾರ್ಮಿಕರಿಂದ ಟಿಕೆಟ್​ ದರ ಪಡೆದಿಲ್ಲ: ಸ್ಪಷ್ಟನೆ ಹೀಗಾಗಿ, ಕೇಂದ್ರ ಸರ್ಕಾರ ವಲಸಿಗರನ್ನ ಉಚಿತವಾಗಿ ಕರೆದುಕೊಂಡು ಹೋಗಿಲ್ಲ ಎಂಬುದು ಅವರ ವಾದ. ಆದರೆ, ಇದಕ್ಕೆ ಸ್ಪಷ್ಟೀಕರಣ ನೀಡಿರುವ ಇಲಾಖೆಯು ಈ ಮೊತ್ತವನ್ನು ನಾವು ಆಯಾ ರಾಜ್ಯಗಳಿಂದ ಪಡೆದಿದ್ದೇವೆ. ಹಾಗಾಗಿ, ನಾವು ಕಾರ್ಮಿಕರಿಂದ ಟಿಕೆಟ್​ ದರ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ, ವಿಶೇಷ ರೈಲು ಚಲಾಯಿಸುವ ಶೇಕಡಾ 85 ರಷ್ಟು ಮೊತ್ತವನ್ನ ನಾವೇ ಭರಿಸಿದ್ದೇವೆ ಎಂದು ತಿಳಿಸಿದ್ದಾರೆ.

Published On - 3:00 pm, Mon, 27 July 20

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ