AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್ ಗೌರವ್ ಯೋಜನೆಯಡಿಯಲ್ಲಿ ದೇಶದ ಮೊದಲ ಖಾಸಗಿ ರೈಲು ಸೇವೆ ಆರಂಭ

ಭಾರತ ಗೌರವ್ ರೈಲು ಕೊಯಮತ್ತೂರು (Coimbatore) ಉತ್ತರದಿಂದ ಸಾಯಿನಗರ ಶಿರಡಿಗೆ 14 ಜೂನ್ 2022 ರಂದು (ಮಂಗಳವಾರ) 18:00 ಗಂಟೆಗೆ  ಹೊರಟಿದ್ದು ತಿರುಪ್ಪೂರ್, ಈರೋಡ್, ಸೇಲಂ, ಯಲಹಂಕ, ಧರ್ಮಾವರಂ, ಮಂತ್ರಾಲಯ ರಸ್ತೆ ಮತ್ತು ವಾಡಿ ಸ್ಟೇಷನ್ ಗಳಲ್ಲಿ ನಿಲುಗಡೆಯೊಂದಿಗೆ 16 ಜೂನ್ 2022 ರಂದು...

ಭಾರತ್ ಗೌರವ್ ಯೋಜನೆಯಡಿಯಲ್ಲಿ ದೇಶದ ಮೊದಲ ಖಾಸಗಿ ರೈಲು ಸೇವೆ ಆರಂಭ
ಭಾರತ್ ಗೌರವ್ ರೈಲು
TV9 Web
| Edited By: |

Updated on: Jun 16, 2022 | 8:16 AM

Share

ದೆಹಲಿ: ಭಾರತೀಯ ರೈಲ್ವೆಯ ದಕ್ಷಿಣ ರೈಲ್ವೇ ವಲಯವು (Southern Railway zone) ತಮಿಳುನಾಡಿನ ಕೊಯಮತ್ತೂರಿನಿಂದ ಮಹಾರಾಷ್ಟ್ರದ ಶಿರಡಿಗೆ ಖಾಸಗಿಯಾಗಿ ನಡೆಸುವ ಭಾರತ್ ಗೌರವ್ ರೈಲುಗಳ (Bharat Gaurav Trains) ಮೊದಲ ಸೇವೆಯನ್ನು ಪ್ರಾರಂಭಿಸಿದ್ದು ಈ ರೈಲು ಇಂದು ಗಮ್ಯ ತಲುಪಿದೆ. “ಭಾರತ ಗೌರವ್ ರೈಲು ಕೊಯಮತ್ತೂರು (Coimbatore) ಉತ್ತರದಿಂದ ಸಾಯಿನಗರ ಶಿರಡಿಗೆ 14 ಜೂನ್ 2022 ರಂದು (ಮಂಗಳವಾರ) 18:00 ಗಂಟೆಗೆ  ಹೊರಟಿದ್ದು ತಿರುಪ್ಪೂರ್, ಈರೋಡ್, ಸೇಲಂ, ಯಲಹಂಕ, ಧರ್ಮಾವರಂ, ಮಂತ್ರಾಲಯ ರಸ್ತೆ ಮತ್ತು ವಾಡಿ ಸ್ಟೇಷನ್ ಗಳಲ್ಲಿ ನಿಲುಗಡೆಯೊಂದಿಗೆ 16 ಜೂನ್ 2022 ರಂದು (ಗುರುವಾರ) ಸಾಯಿನಗರ ಶಿರಡಿಯನ್ನು 07:25 ಗಂಟೆಗೆ ತಲುಪುತ್ತದೆ ಎಂದು ರೈಲ್ವೆ ಸಚಿವಾಲಯ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ. ಮಂಗಳವಾರ ಕೊಯಮತ್ತೂರಿನಿಂದ ಶಿರಡಿಗೆ ಸುಮಾರು 1100 ಪ್ರಯಾಣಿಕರು ಮೊದಲ ರೈಲು ಪ್ರಯಾಣ ಮಾಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಖಾಸಗಿ ಸೇವೆಯನ್ನು ನೋಂದಾಯಿತ ಸೇವಾ ಪೂರೈಕೆದಾರರು ನೀಡುತ್ತಿದ್ದು ಇದು ಐದು ದಿನಗಳ ಪ್ರಯಾಣವಾಗಿದೆ. ಇದು ಕೊಯಮತ್ತೂರಿನಿಂದ ಶಿರಡಿಗೆ ಮತ್ತು ಅಲ್ಲಿಂದ ಹಿಂತಿರುಗುವ ಪ್ರಯಾಣ ಆಗಿರುತ್ತದೆ. ಈ ಖಾಸಗಿ ರೈಲನ್ನು ಸೌತ್ ಸ್ಟಾರ್ ರೈಲ್ ಎಂಬ ನೋಂದಾಯಿತ ಸೇವಾ ಪೂರೈಕೆದಾರರು ನಿರ್ವಹಿಸುತ್ತಿದ್ದಾರೆ. ಇದು ಕೊಯಮತ್ತೂರು ಮೂಲದ ಕಂಪನಿ ಆಗಿದ್ದು ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಭಾಗವಾಗಿದೆ. 20 ಕೋಚ್‌ಗಳ ಸಂಯೋಜನೆಯೊಂದಿಗೆ ಸೇವಾ ಪೂರೈಕೆದಾರರು ದಕ್ಷಿಣ ರೈಲ್ವೆಗೆ ಭದ್ರತಾ ಠೇವಣಿಯಾಗಿ ರೂ 1 ಕೋಟಿ ಪಾವತಿಸಿದ್ದಾರೆ.

“ಇದಲ್ಲದೆ, ಕಂಪನಿಯು ವಾರ್ಷಿಕ ಬಳಕೆಯ ಹಕ್ಕು ಶುಲ್ಕಗಳು ಮತ್ತು ರೂ.76.77 ಲಕ್ಷಗಳ ತ್ರೈಮಾಸಿಕ ಸ್ಥಿರ ಸಾಗಣೆ ಶುಲ್ಕಗಳಿಗಾಗಿ ರೂ.27.79 ಲಕ್ಷಗಳನ್ನು ಪಾವತಿಸಿದೆ. ಹೆಚ್ಚುವರಿಯಾಗಿ, ವೇರಿಯಬಲ್ ಸಾಗಣೆ ಶುಲ್ಕ ರೂ. 38.22 ಲಕ್ಷಗಳನ್ನು ಪ್ರಸ್ತುತ ಸುತ್ತಿನ ಪ್ರವಾಸಕ್ಕಾಗಿ ಸಂಗ್ರಹಿಸಲಾಗಿದೆ. ಈ ಎಲ್ಲಾ ಶುಲ್ಕಗಳು ಜಿಎಸ್‌ಟಿಯನ್ನು ಹೊರತುಪಡಿಸಿವೆ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ
Image
2020-21ರ ಕಾರ್ಮಿಕ ಸಮೀಕ್ಷೆ ಪ್ರಕಾರ ದೇಶದಲ್ಲಿ ನಿರುದ್ಯೋಗ ದರ ಕುಸಿತ; ಏನಿದು ಲೆಕ್ಕಾಚಾರ?
Image
Indian Railways: ರೈಲಿನಲ್ಲಿ ಪ್ರಯಾಣಿಸುವಾಗ ಆತಂಕ ಇಲ್ಲದಂತೆ ಮಲಗಲು ಹೊಸ ಸೇವೆ ಆರಂಭ
Image
ಪ್ರಯಾಣಿಕರು ರೈಲಿನಲ್ಲಿ ಹೆಚ್ಚು ಲಗೇಜ್ ಸಾಗಿಸಿದರೆ ಹೆಚ್ಚು ಹಣ ತೆರಬೇಕು; ಹೊಸ ನಿಯಮ ಘೋಷಿಸಿದ ರೈಲ್ವೆ ಸಚಿವಾಲಯ

ಯೋಜನೆಯಡಿಯಲ್ಲಿರುವ ರೈಲುಗಳು ಒಂದು ಎಸಿ ಕೋಚ್, ಮೂರು 2 ಟೈರ್ ಎಸಿ ಕೋಚ್‌ಗಳು ಮತ್ತು ಎಂಟು 3-ಟೈರ್ ಕೋಚ್‌ಗಳು ಜೊತೆಗೆ ಐದು ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ಹೊಂದಿವೆ. ರೈಲ್ವೇ ಪೋಲೀಸ್ ಫೋರ್ಸ್ ಜೊತೆಗೆ ತೊಡಗಿಸಿಕೊಂಡಿರುವ ರಿವೇಟ್ ಸೆಕ್ಯುರಿಟಿಗಳೊಂದಿಗೆ ಯಾವುದೇ ತುರ್ತು ಪರಿಸ್ಥಿತಿಗೆ ಹಾಜರಾಗಲು ರೈಲಿನಲ್ಲಿ ವೈದ್ಯರೂ ಇರುತ್ತಾರೆ.

ಭಾರತೀಯ ರೈಲ್ವೇಯು ಐತಿಹಾಸಿಕ ಸ್ಥಳಗಳನ್ನು ಸಂಪರ್ಕಿಸುವ ಉದ್ದೇಶದಿಂದ ನವೆಂಬರ್ 2021 ರಲ್ಲಿ ಥೀಮ್ ಆಧಾರಿತ ಭಾರತ್ ಗೌರವ್ ರೈಲಿನ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ