ಅಫ್ಘಾನಿಸ್ತಾನದಲ್ಲಿ ತೀವ್ರ ಭೂಕಂಪದ ನಂತರ ಕಾಬೂಲ್​​​ಗೆ ಮಾನವೀಯ ನೆರವು ಕಳುಹಿಸಿದ ಭಾರತ

ತನ್ನ ತಾಂತ್ರಿಕ ತಂಡವನ್ನು ಕಾಬೂಲ್‌ಗೆ ವಾಪಸ್ ಕಳುಹಿಸುವ ಭಾರತದ ನಿರ್ಧಾರವನ್ನು ಅಫ್ಘಾನ್ ಸ್ವಾಗತಿಸಿದೆ.ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ (ಎಲ್‌ಇಎ) ಅಫ್ಘಾನಿಸ್ತಾನದ ಜನರೊಂದಿಗೆ ತಮ್ಮ ಸಂಬಂಧವನ್ನು...

ಅಫ್ಘಾನಿಸ್ತಾನದಲ್ಲಿ ತೀವ್ರ ಭೂಕಂಪದ ನಂತರ ಕಾಬೂಲ್​​​ಗೆ ಮಾನವೀಯ ನೆರವು ಕಳುಹಿಸಿದ ಭಾರತ
ಅಫ್ಘಾನಿಸ್ತಾನಕ್ಕೆ ಭಾರತ ನೆರವು
Updated By: ರಶ್ಮಿ ಕಲ್ಲಕಟ್ಟ

Updated on: Jun 24, 2022 | 2:59 PM

ಅಫ್ಘಾನಿಸ್ತಾನದಲ್ಲಿ (Afghanistan) ಭೀಕರ ಭೂಕಂಪದಿಂದಾಗಿ (Earthquake) 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಸಹಾಯ ಪ್ರಯತ್ನಗಳನ್ನು ಹೆಚ್ಚಿಸಿದೆ. “ಮಾನವೀಯ ನೆರವಿನ ವಿತರಣೆಗಾಗಿ ವಿವಿಧ ಮಧ್ಯಸ್ಥಗಾರರ ಪ್ರಯತ್ನಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು, ಸಂಘಟಿಸಲು ಮತ್ತು ಅಫ್ಘನ್ ಜನರಿಗೆ ಸಹಾಯ ಮಾಡಲು ಭಾರತೀಯ ತಾಂತ್ರಿಕ ತಂಡವು ಇಂದು ಕಾಬೂಲ್ (Kabul) ತಲುಪಿದೆ. ಈ ತಂಡವನ್ನು ನಮ್ಮ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಗಿದೆ ಎಂದು ಗುರುವಾರ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. ಭಾರತ ನಿಜವಾದ ಮೊದಲ ಪ್ರತಿಸ್ಪಂದಕ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಭಾರತವು ಅಫ್ಘನ್ ಜನರೊಂದಿಗೆ ಐತಿಹಾಸಿಕ ಮತ್ತು ನಾಗರಿಕ ಸಂಬಂಧವನ್ನು ಹೊಂದಿದೆ. ನಮ್ಮ ಮಾನವೀಯ ನೆರವಿನ ವಿತರಣಾ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಇತ್ತೀಚೆಗೆ ಭಾರತದ ಇನ್ನೊಂದು ತಂಡವು ಕಾಬೂಲ್ ಗೆ ತಲುಪಿದ್ದು ತಾಲಿಬಾನ್‌ನ ಹಿರಿಯ ಸದಸ್ಯರನ್ನು ಭೇಟಿಯಾದರು. ಭೇಟಿಯ ಸಮಯದಲ್ಲಿ ಭದ್ರತಾ ಪರಿಸ್ಥಿತಿಯ ಮೌಲ್ಯಮಾಪನವನ್ನು ಸಹ ನಡೆಸಲಾಯಿತು. ಅಫ್ಘಾನಿಸ್ತಾನದ ಸಮಾಜದೊಂದಿಗೆ ನಮ್ಮ ದೀರ್ಘಕಾಲದ ಸಂಪರ್ಕಗಳು ಮತ್ತು ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ಸೇರಿದಂತೆ ನಮ್ಮ ಅಭಿವೃದ್ಧಿ ಸಹಭಾಗಿತ್ವವು ನಮ್ಮ ಮಾರ್ಗವನ್ನು ಮುನ್ನಡೆಸುವುದನ್ನು ಮುಂದುವರಿಸುತ್ತದೆ ಎಂದು ಸಚಿವಾಲಯ ಹೇಳಿದೆ. ಈ ವಾರದ ಆರಂಭದಲ್ಲಿ ಪೂರ್ವ ಪಕ್ಟಿಕಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ ನೂರಾರು ಮನೆಗಳು ನಾಶವಾಗಿವೆ.ಸುಮಾರು 10 ತಿಂಗಳ ಹಿಂದೆ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಾಗ ಅನೇಕ ಅಂತರರಾಷ್ಟ್ರೀಯ ನೆರವು ಸಂಸ್ಥೆಗಳು ಅಫ್ಘಾನಿಸ್ತಾನದಿಂದ ಹೊರಹೋಗಿದ್ದವು.

ತನ್ನ ತಾಂತ್ರಿಕ ತಂಡವನ್ನು ಕಾಬೂಲ್‌ಗೆ ವಾಪಸ್ ಕಳುಹಿಸುವ ಭಾರತದ ನಿರ್ಧಾರವನ್ನು ಅಫ್ಘಾನ್ ಸ್ವಾಗತಿಸಿದೆ.ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ (ಎಲ್‌ಇಎ) ಅಫ್ಘಾನಿಸ್ತಾನದ ಜನರೊಂದಿಗೆ ತಮ್ಮ ಸಂಬಂಧವನ್ನು ಮತ್ತು ಅವರ ಮಾನವೀಯ ನೆರವು ಮುಂದುವರಿಸಲು ರಾಜತಾಂತ್ರಿಕರು ಮತ್ತು ತಾಂತ್ರಿಕ ತಂಡವನ್ನು ಕಾಬೂಲ್‌ನಲ್ಲಿರುವ ತಮ್ಮ ರಾಯಭಾರ ಕಚೇರಿಗೆ ಕಳಿಸಿರುವ ಭಾರತದ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದು ತಾಲಿಬಾನ್ ವಕ್ತಾರ ಅಬ್ದುಲ್ ಕಹರ್ ಬಾಲ್ಖಿ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ
Earthquake: ನೇಪಾಳದ ಕಠ್ಮಂಡುವಿನಲ್ಲಿ ಇಂದು ಮುಂಜಾನೆ 4.3 ತೀವ್ರತೆಯ ಲಘು ಭೂಕಂಪ
Karnataka Earthquake: ಹಾಸನ, ಕೊಡಗಿನ ವಿವಿಧೆಡೆ ಭೂಕಂಪ: ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 3.4 ದಾಖಲು
ಪೂರ್ವ ಅಫ್ಘಾನಿಸ್ತಾನದಲ್ಲಿ ತೀವ್ರ ಭೂಕಂಪ: 1,000 ಜನರು ಸಾವು, 1,500 ಕ್ಕೂ ಹೆಚ್ಚು ಜನರಿಗೆ ಗಾಯ


ಅಫ್ಘಾನಿಸ್ತಾನದ ಜನರಿಗೆ ಭಾರತದ ಭೂಕಂಪ ಪರಿಹಾರ ಸಹಾಯದ ಮೊದಲ ರವಾನೆ ಕಾಬೂಲ್ ತಲುಪಿದೆ. ಅಲ್ಲಿ ಭಾರತ ತಂಡದಿಂದ ಹಸ್ತಾಂತರಿಸಲಾಗುತ್ತಿದೆ. ಮತ್ತಷ್ಟು ವಸ್ತುಗಳನ್ನು ಸಾಗಿಸಲಾಗುವುದು ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

Published On - 2:40 pm, Fri, 24 June 22