AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಕೊನೆಯ ಅಂಚೆ ಕಚೇರಿ, ಈಗ ದೇಶದ ಮೊದಲ ಅಂಚೆ ಕಚೇರಿ ಆಗಿದ್ಹೇಗೆ?

ದೇಶ ಗಡಿಯ ಕೊನೆಯ ಅಂಚೆ ಕಚೇರಿಯನ್ನು ಇದೀಗ ಸೈನ್ಯವು ಅದನ್ನು ಮೊದಲ ಅಂಚೆ ಕಚೇರಿಯಾನ್ನಾಗಿ ಬದಲಾಯಿಸಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಮತ್ತು ಪಾಕಿಸ್ತಾನ ಅಸ್ತಿತ್ವಕ್ಕೆ ಬರುವ ಮೊದಲೇ ಈ ಅಂಚೆ ಕಛೇರಿ ಕಾರ್ಯ ನಿರ್ವಹಿಸುತ್ತಿತ್ತು.

ಭಾರತದ ಕೊನೆಯ ಅಂಚೆ ಕಚೇರಿ, ಈಗ ದೇಶದ ಮೊದಲ ಅಂಚೆ ಕಚೇರಿ ಆಗಿದ್ಹೇಗೆ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Aug 11, 2023 | 12:17 PM

Share

193224 PIN ಕೋಡ್ ಹೊಂದಿರುವ ಭಾರತದ ಮೊದಲ ಅಂಚೆ ಕಛೇರಿ ( post office) ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ವಾಸ್ತವಿಕ ನಿಯಂತ್ರಣ ರೇಖೆ (LoC) ಕಿಶನ್​​ಗಂಗಾ ನದಿಯ ದಡದಲ್ಲಿದೆ. ಈ ಮೊದಲು ಈ ಅಂಚೆ ಕಛೇರಿಯನ್ನು ದೇಶದ ಕೊನೆಯ ಅಂಚೆ ಕಛೇರಿ ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ಭಾರತದ ಸೈನ್‌ಬೋರ್ಡ್ ಇದನ್ನು “ಭಾರತದ ಮೊದಲ ಅಂಚೆ ಕಚೇರಿ” ಎಂದು ಕರೆದಿದೆ. ಏಕೆಂದರೆ ಇದು ಎಲ್ಒಸಿ ಅಥವಾ ಗಡಿಯಿಂದ ದೂರದಲ್ಲಿರುವ ಮೊದಲ ಅಂಚೆ ಕಚೇರಿ ಎಂದು ಕರೆಯಲಾಗಿದೆ. ಬಾರಾಮುಲ್ಲಾ ವಿಭಾಗದ ಅಂಚೆ ಕಚೇರಿಗಳ ಮೇಲ್ವಿಚಾರಕ ಅಬ್ದುಲ್ ಹಮೀದ್ ಕುಮಾರ್ ಅವರು ಈ ಹಿಂದೆ ಇದನ್ನು ಕೊನೆಯ ಅಂಚೆ ಕಚೇರಿ ಎಂದು ಕರೆಯಲಾಗುತ್ತಿತ್ತು, ಯಾಕೆಂದರೆ ಅದು ತುಂಬಾ ದೂರದಲ್ಲಿ ಇತ್ತು. ದೇಶ ಗಡಿಯ ಕೊನೆಯ ಅಂಚೆ ಕಚೇರಿಯಾಗಿತ್ತು, ಆದರೆ ಇದೀಗ ಸೈನ್ಯವು ಅದನ್ನು ಮೊದಲ ಅಂಚೆ ಕಚೇರಿಯಾನ್ನಾಗಿ ಬದಲಾಯಿಸಿದೆ ಎಂದು ಹೇಳಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಮತ್ತು ಪಾಕಿಸ್ತಾನ ಅಸ್ತಿತ್ವಕ್ಕೆ ಬರುವ ಮೊದಲೇ ಈ ಅಂಚೆ ಕಛೇರಿ ಕಾರ್ಯ ನಿರ್ವಹಿಸುತ್ತಿತ್ತು ಎಂದು ಕುಗ್ರಾಮದ ನಿವಾಸಿಗಳು ಹೇಳಿದ್ದಾರೆ. ಭಾರತ 1965, 1971 ರಲ್ಲಿ ಉಚ್ಛ್ರಾಯ (ಅಭಿವೃದ್ಧಿ) ಸ್ಥಿತಿಯಲ್ಲಿದ್ದರೂ ಕೂಡ ಈ ಅಂಚೆಯನ್ನು ಬಳಸಲಾಗಿತ್ತು. ಆದರೆ 1990ರಲ್ಲಿ ಪಾಕಿಸ್ತಾನ ಉಗ್ರರು ಈ ಪ್ರದೇಶದ ಮೇಲೆ ಶೆಲ್ ದಾಳಿ ನಡೆಸಿದ ಸಂದರ್ಭದಲ್ಲಿ ಇದರ ಮೇಲೆಯೂ ದಾಳಿ ಮಾಡಿದ್ದರು. ಅದರೂ ಇದು ತನ್ನ ಕಾರ್ಯಚಟುವಟಿಕೆಯನ್ನು ನಿಲ್ಲಿಸಲಿಲ್ಲ.

ಇದನ್ನೂ ಓದಿ:ಭಾರತದಾದ್ಯಂತ ಶೈಕ್ಷಣಿಕ ಪ್ರವಾಸಕ್ಕೆ ಹೋಗಲಿರುವ ಜಮ್ಮು ಮತ್ತು ಕಾಶ್ಮೀರ ವಿಶ್ವವಿದ್ಯಾಲಯಗಳ 1100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು

1993ರಲ್ಲಿ ಕೆರಾನ್ ವಲಯಕ್ಕೆ ಹಠಾತ್ ಪ್ರವಾಹವೊಂದು ಅಪ್ಪಳಿಸಿತು. ಈ ಸಮಯದಲ್ಲಿ ಅಂಚೆ ಕಚೇರಿ ಕೂಡ ಈ ಪ್ರವಾಹದಲ್ಲಿ ಕೊಚ್ಚಿಹೋಗಿತ್ತು. ಆದರೆ ಪೋಸ್ಟ್ ಮಾಸ್ಟರ್ ಶಾಕೀರ್ ಭಟ್ ಇದನ್ನು ತಮ್ಮ ಮನೆಯಲ್ಲಿ ನಿರ್ವಹಿಸುವ ಸಾಹಸ ಮಾಡಿದರು. ಈ ಬಗ್ಗೆ ಮಾತನಾಡಿದ ಶಾಕೀರ್ ಭಟ್ 1947ರಲ್ಲಿ ಇಲ್ಲಿಗೆ ಬಂದಿರುವ ಅಂಚೆ ಕಚೇರಿ ಸೇವೆಯನ್ನು ಎಂದಿಗೂ ನಿಲ್ಲಿಸಿಲ್ಲ. ನಾನು 1992ರಲ್ಲಿ ಇಲಾಖೆಗೆ ನೇಮಕಗೊಂಡಿದ್ದೆ. 1993ರ ಪ್ರವಾಹದ ನಂತರ ನನ್ನ ಮನೆಯಿಂದಲೇ ಅಂಚೆ ಕಚೇರಿ ಕೆಲಸವನ್ನು ಮಾಡಿತ್ತಿದ್ದೆ. ಸರ್ಕಾರದಿಂದ ಯಾವುದೆ ಮನೆ ಬಾಡಿಗೆಗೆ ಎಂದು ಹಣ ಪಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

2021ರ ಕದನ ವಿರಾಮದ ಮೊದಲು (ಭಾರತ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದ) ಪತ್ರಗಳು ಹೊರಗೆ ಹೋಗುವುದು, ಅಂಚೆ ತಲುಪಿಸುವುದು ಅಥವಾ ಪೋಸ್ಟ್‌ಗಳನ್ನು ತೆಗೆದುಕೊಳ್ಳುವುದು ತುಂಬಾ ಅಪಾಯಕಾರಿ. ಹಾಗಾಗಿ ಮತ್ತೆ ಇಲ್ಲಿ ಶಾಂತಿ ಸ್ಥಾಪನೆ ಮಾಡಬೇಕು. ಎರಡು ರಾಷ್ಟ್ರಗಳ ನಡುವೆ ಶಾಂತಿ ನೆಲೆಸಬೇಕೆಂದು ನಾವು ಬಯಸುತ್ತೇವೆ ಎಂದು ಭಟ್ ಪಿಟಿಐಗೆ ತಿಳಿಸಿದ್ದಾರೆ.

ಇನ್ನು ಇಲ್ಲಿ ವಿಶ್ವಾಸಾರ್ಹ ಸಂವಹನ ಸೌಲಭ್ಯದ ಕೊರತೆಯಿಂದಾಗಿ ಈ ಅಂಚೆ ಕಚೇರಿಯು ದೇಶಾದ್ಯಂತ ಇತರ ಅಂಚೆ ಕಚೇರಿಗಳಂತೆ ಆನ್‌ಲೈನ್ ಸೇವೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಶಾಕೀರ್ ಭಟ್ ಹೇಳಿದ್ದಾರೆ. ಇಲ್ಲಿ ಯಾವುದೇ ನೆಟ್​​ವರ್ಕ್​​ಗಳು ಇರುವುದಿಲ್ಲ. ಡಿಜಿಟಲ್​​​ ಸಂಪರ್ಕದಿಂದ ಈ ಊರು ದೂರು ಇದೆ. ಇನ್ನು ಇಲ್ಲಿಗೆ ಪ್ರವಾಸಿಗರು ಹೆಚ್ಚು ಬರುವ ಕಾರಣ ಇಲ್ಲಿ ಸ್ವಲ್ಪ ಶಾಂತಿ ಇದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:15 pm, Fri, 11 August 23

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್