AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದುವರಿದ ಮಿಷನ್​ ಸಾಗರ್​; ಜಕಾರ್ತ ಬಂದರು ತಲುಪಿದ ಐಎನ್​ಎಸ್​ ಐರಾವತ್​​

ಜಕಾರ್ತದ ತಂಜುಂಗ್ ಪ್ರಿಯಕ್ ಬಂದರಿನಲ್ಲಿ ನಿಂತಿರುವ ಐಎನ್​ಎಸ್​ ಐರಾವತ್​ ಹಡಗಿನ ಫೋಟೋವನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​ ಶೇರ್ ಮಾಡಿಕೊಂಡಿದ್ದಾರೆ

ಮುಂದುವರಿದ ಮಿಷನ್​ ಸಾಗರ್​; ಜಕಾರ್ತ ಬಂದರು ತಲುಪಿದ ಐಎನ್​ಎಸ್​ ಐರಾವತ್​​
ಜಕಾರ್ತ ತಲುಪಿದ ಐಎನ್​ಎಸ್​ ಐರಾವತ್​
TV9 Web
| Edited By: |

Updated on: Aug 24, 2021 | 3:32 PM

Share

ದೆಹಲಿ: ಇಡೀ ಜಗತ್ತು ಕೊರೊನಾ ಸೋಂಕಿ (Covid 19)ನಿಂದ ಸಂಕಷ್ಟಕ್ಕೀಡಾಗಿದೆ. ಭಾರತವೂ ಸಹ ವೈರಸ್​ ಭೀಕರತೆಯನ್ನು ಕಂಡಿದೆ. ಆದರೆ ನಮ್ಮ ದೇಶ ಈ ಹೋರಾಟದಲ್ಲಿ ಬೇರೆ ದೇಶಗಳಿಗೂ ತನ್ನ ಕೈಲಾದ ಸಹಾಯ ಮಾಡಿದೆ. ಪ್ರಾರಂಭದಲ್ಲಿ ಕೊರೊನಾ ಮಾತ್ರೆಗಳಿಂದ ಹಿಡಿದು, ಕೊವಿಡ್​ 19 ಲಸಿಕೆಗಳು, ದ್ರವೀಕೃತ ವೈದ್ಯಕೀಯ ಆಕ್ಸಿಜನ್ (Liquid Medical Oxygen)​ನ್ನು ಬೇರೆ ಅಗತ್ಯ ಇರುವ ದೇಶಗಳಿಗೆ ಕಳಿಸಿದೆ. ಹಾಗೇ, ಈಗ ಮತ್ತೆ ಇಂಡೋನೇಷ್ಯಾ (Indonesia) ದೇಶಕ್ಕೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (Liquid Medical Oxygen)ದ 10 ಕಂಟೇನರ್​​ಗಳನ್ನು ಕಳಿಸಿಕೊಟ್ಟಿದೆ. ಈ ಕಂಟೇನರ್​ಗಳನ್ನು ಹೊತ್ತ ಭಾರತೀಯ ನೌಕಾಪಡೆಯ ಲ್ಯಾಂಡಿಂಗ್​ ಶಿಪ್​ ಐಎನ್​ಎಸ್ ಐರಾವತ್​ ಇಂದು ಇಂಡೋನೇಷ್ಯಾದ ರಾಜಧಾನಿ ಜಕಾರ್ತಕ್ಕೆ ತಲುಪಿದೆ.

ಈ ಬಗ್ಗೆ ಟ್ವೀಟ್ ಮಾಡಿಕೊಂಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​ ಜಕಾರ್ತದ ತಂಜುಂಗ್ ಪ್ರಿಯಕ್ ಬಂದರಿನಲ್ಲಿ ನಿಂತಿರುವ ಐಎನ್​ಎಸ್​ ಐರಾವತ್​ ಹಡಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಮತ್ತು ಭಾರತೀಯ ನೌಕಾಪಡೆಯನ್ನು ಶ್ಲಾಘಿಸಿದ್ದಾರೆ.

ಭಾರತದ ನೌಕಾಪಡೆಯಲ್ಲಿರುವ ಈ ಐರಾವತ್​ ಹಡಗುಗಳು ಉಭಯಚರ ಯುದ್ಧ ನೌಕೆಗಳಾಗಿವೆ. ಹಾಗೇ, ವಿಪತ್ತು ಪರಿಹಾರ ಕಾರ್ಯಾಚರಣೆ ಮತ್ತು ಮಾನವರಿಗೆ ನೆರವು ನೀಡುವ ಕಾರ್ಯಾಚರಣೆ  ಎರಡಕ್ಕೂ ಬಳಕೆಯಾಗುತ್ತದೆ. ಅದರಲ್ಲೂ ಈ ಹಿಂದೆ ಹಿಂದೂ ಮಹಾಸಾಗರದಲ್ಲಿ ನಡೆದ ವಿವಿಧ ಕಾರ್ಯಾಚರಣೆಗಳಲ್ಲಿ ಈ ಐರಾವತ್​ ಬಳಕೆಯಾಗಿದೆ. ಈ ಹಿಂದೆ ಕೂಡ ಐಎನ್​ಎಸ್​ ಐರಾವತ್​ ಮೂಲಕವೇ ಇಂಡೋನೇಷ್ಯಾಕ್ಕೆ ವೈದ್ಯಕೀಯ ನೆರವು ನೀಡಲಾಗಿದೆ. ಆಗ 5 ದ್ರವೀಕೃತ ವೈದ್ಯಕೀಯ ಆಕ್ಸಿಜನ್​ ಕಂಟೇನರ್​ಗಳು ಮತ್ತು 300 ಆಕ್ಸಿಜನ್ ಸಾಂದ್ರಕಗಳನ್ನು ಸಾಗಿಸಲಾಗಿತ್ತು.

ಭಾರತ ಮತ್ತು ಇಂಡೋನೇಷ್ಯಾ ನಡುವೆ ಉತ್ತಮ ಬಾಂಧವ್ಯ ಇದ್ದು, ಕೊವಿಡ್​ 19 ಕಾಲದಲ್ಲಿ ಆ ದೇಶಕ್ಕೆ ಭಾರತ ಸಹಾಯಕ್ಕೆ ನಿಂತಿದೆ. ಈಗ ಮಿಷನ್ ಸಾಗರ್​ ಯೋಜನೆಯಡಿ ಮತ್ತೆ ನೆರವು ನೀಡಲಾಗಿದೆ. ಹಿಂದೂ ಮಹಾ ಸಾಗರದ ಸುತ್ತಲಿನ ದೇಶಗಳ ಭದ್ರತೆ ಮತ್ತು ಅಭಿವೃದ್ಧಿಗಾಗಿ ಪ್ರಧಾನಿ ಮೋದಿಯವರು ರೂಪಿಸಿದ SAGARನ ಭಾಗವಾಗಿ ಈ ಮಿಷನ್​ ಸಾಗರ್​ ರೂಪುಗೊಂಡಿದೆ.

 ಇದನ್ನೂ ಓದಿ: ದಸರಾ ಜಂಬೂ ಸವಾರಿಗೆ ಆನೆಗಳ ಆಯ್ಕೆ; ವಿವಿಧ ಕ್ಯಾಂಪ್​ಗಳಿಂದ 14 ಆನೆ ಪಟ್ಟಿ ಮಾಡಿದ ಅರಣ್ಯಾಧಿಕಾರಿಗಳು

Abhishek Bachchan: ಚಿತ್ರೀಕರಣದ ವೇಳೆ ಖ್ಯಾತ ನಟ ಅಭಿಷೇಕ್ ಬಚ್ಚನ್​ಗೆ ಗಾಯ, ಆಸ್ಪತ್ರೆಗೆ ದಾಖಲು

(INS Airavat reached Indonesia with 10 liquid medical oxygen containers)

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ