ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ: ಬದರಿನಾಥದಲ್ಲಿ ಉದ್ಧವ್ ಠಾಕ್ರೆ ಕುಟುಂಬದವರ ಎದುರು ಘೋಷಣೆ ಕೂಗಿದ ಬೆಳಗಾವಿ ನಿವಾಸಿಗಳು

|

Updated on: Nov 04, 2023 | 11:45 AM

ಉದ್ಧವ್ ಠಾಕ್ರೆ ಅವರನ್ನು ಉತ್ತರಾಖಂಡಕ್ಕೆ ಸ್ವಾಗತಿಸಲು ಗಡಿ ಭಾಗದ ಜನರು ಗುರುವಾರ ಬದರಿನಾಥಕ್ಕೆ ಭೇಟಿ ನೀಡಿದ್ದರು.ಈ ಸಂದರ್ಭದಲ್ಲಿ ಬೆಳಗಾವಿಯ ಗಡಿ ಭಾಗದ ಜನರು ಅವರ ಎದುರು ಘೋಷಣೆಗಳನ್ನು ಕೂಗಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿಗಳೊಂದಿಗೆ ಮಹಾರಾಷ್ಟ್ರವನ್ನು ಒಗ್ಗೂಡಿಸಬೇಕು ಎಂದು ಕರ್ನಾಟಕ ಗಡಿ ನಿವಾಸಿಗಳು ಘೋಷಣೆ ಕೂಗಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ: ಬದರಿನಾಥದಲ್ಲಿ ಉದ್ಧವ್ ಠಾಕ್ರೆ ಕುಟುಂಬದವರ ಎದುರು ಘೋಷಣೆ ಕೂಗಿದ ಬೆಳಗಾವಿ ನಿವಾಸಿಗಳು
ಬದರಿನಾಥದಲ್ಲಿ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಹಾಗೂ ಕುಟುಂಬದವರು ಬೆಳಗಾವಿ ನಿವಾಸಿಗಳ ಜತೆ
Follow us on

ಕೇದಾರನಾಥ, ನವೆಂಬರ್ 04: ಕರ್ನಾಟಕ, ಮಹಾರಾಷ್ಟ್ರ ನಡುವಣ ಗಡಿ ವಿವಾದದ (Karnataka, Maharashtra border dispute) ಬಿಸಿ ಉತ್ತರಾಖಂಡ ಪ್ರವಾಸಕ್ಕೆ ತೆರಳಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಹಾಗೂ ಅವರ ಕುಟುಂಬದವರಿಗೂ ತಟ್ಟಿದೆ. ಉದ್ಧವ್ ಠಾಕ್ರೆ ಶುಕ್ರವಾರ ಬದರಿನಾಥಕ್ಕೆ (Badrinath) ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬೆಳಗಾವಿಯ ಗಡಿ ಭಾಗದ ಜನರು ಅವರ ಎದುರು ಘೋಷಣೆಗಳನ್ನು ಕೂಗಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿಗಳೊಂದಿಗೆ ಮಹಾರಾಷ್ಟ್ರವನ್ನು ಒಗ್ಗೂಡಿಸಬೇಕು ಎಂದು ಕರ್ನಾಟಕ ಗಡಿ ನಿವಾಸಿಗಳು ಘೋಷಣೆ ಕೂಗಿದ್ದಾರೆ.

ಉದ್ಧವ್ ಸಾಹೇಬ್, ಆದಿತ್ಯ ಸಾಹೇಬ್ ನೀವು ಯಾವುದಕ್ಕೂ ಚಿಂತಿಸಬೇಡಿ. ನಾವು ನಿಮ್ಮೊಂದಿಗಿದ್ದೇವೆ ಎಂದು ಗಡಿ ಭಾಗದ ನಿವಾಸಿಗಳು ಠಾಕ್ರೆಗೆ ಬೆಂಬಲ ನೀಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನಾಮಸ್ಮರಣೆ ಮಾಡಿದ್ದಾರೆ. ಉದ್ಧವ್ ಠಾಕ್ರೆ ಕುಟುಂಬ ಶನಿವಾರ ಬೆಳಗ್ಗೆ ಕೇದಾರನಾಥ ತಲುಪಿದೆ.

ಉದ್ಧವ್ ಠಾಕ್ರೆ ಅವರನ್ನು ಉತ್ತರಾಖಂಡಕ್ಕೆ ಸ್ವಾಗತಿಸಲು ಗಡಿ ಭಾಗದ ಜನರು ಗುರುವಾರ ಬದರಿನಾಥಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಉದ್ಧವ್ ಠಾಕ್ರೆ, ರಶ್ಮಿ ಠಾಕ್ರೆ, ತೇಜಸ್ ಠಾಕ್ರೆ ಮತ್ತು ಶಿವಸೇನಾ ಕಾರ್ಯದರ್ಶಿ ಮಿಲಿಂದ್ ನಾರ್ವೇಕರ್ ಉಪಸ್ಥಿತರಿದ್ದರು. ಈ ಗಡಿ ಭಾಗದ ನಾಗರಿಕರು ಬೆಳಗಾವಿ, ಕಾರವಾರ, ನಿಪ್ಪಾಣಿಗಳೊಂದಿಗೆ ಅಖಂಡ ಮಹಾರಾಷ್ಟ್ರವಾಗಬೇಕು ಮತ್ತು ‘ಜಾಯೇಂಗೆ ಮಹಾರಾಷ್ಟ್ರ ಮೇ ನಹೀ ತೋ ಜೈಲ್ ಮೇ’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಉದ್ಧವ್ ಠಾಕ್ರೆ ಕೂಡ ಘೋಷಣೆಗಳಿಗೆ ದನಿಗೂಡಿಸಿದರು.

ಬದರಿನಾಥಕ್ಕೆ ಭೇಟಿ ನೀಡಿದ ಭಕ್ತರಲ್ಲಿ ಕೆಲವು ಶಿವಸೇನಾ ಕಾರ್ಯಕರ್ತರು ಕೂಡ ಸೇರಿದ್ದಾರೆ. ಉದ್ಧವ್ ಠಾಕ್ರೆ ಅವರ ಕುಟುಂಬ ಬಂದಿರುವುದು ಗೊತ್ತಾದ ಕೂಡಲೇ ಅವರು ‘ಠಾಕ್ರೆ’ ಹೆಸರಿನಲ್ಲಿ ಘೋಷಣೆಗಳನ್ನು ಮಾಡತೊಡಗಿದ್ದಾರೆ. ಜೈಘೋಷ್ ಮಂದಿರದ ಸುತ್ತಮುತ್ತ ನೆರೆದಿದ್ದ ಕೆಲವರಿಂದ ಜೈ ಭವಾನಿ, ಜೈ ಶಿವಾಜಿ ಎಂಬ ಘೋಷಣೆಗಳು ಕೇಳಿದವು. ಪೂಜೆ ಮುಗಿಸಿ ಹೊರಬಂದ ಠಾಕ್ರೆ ಬದರಿನಾಥ ದರ್ಶನಕ್ಕೆ ಬಂದಿದ್ದ ಶಿವಸೇನಾ ಕಾರ್ಯಕರ್ತ ಭಕ್ತರೊಂದಿಗೆ ಭಾವಚಿತ್ರ ತೆಗೆಸಿಕೊಂಡು ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿ: ಗಡಿ ಕ್ಯಾತೆ ಆಯ್ತು ಈಗ ಕರ್ನಾಟಕಕ್ಕೆ ಹರಿದು ಬರುವ ದೂಧ್‌ಗಂಗಾ ನದಿ ನೀರಿನ ಮೇಲೆ ಮಹಾರಾಷ್ಟ್ರ ಕಣ್ಣು

ಕರ್ನಾಟಕ ನಾಮಕರಣ, ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1 ಅನ್ನು ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದ ಮರಾಠಿಗರು ಕರಾಳ ದಿನವನ್ನಾಗಿ ಆಚರಿಸುತ್ತಾರೆ. ಸಂಯುಕ್ತ ಮಹಾರಾಷ್ಟ್ರ ಚಳವಳಿಯಿಂದ ಆರಂಭವಾದ ಈ ಕರಾಳ ದಿನವನ್ನು ಹಲವು ವರ್ಷಗಳಿಂದ ಆಚರಿಸಲಾಗುತ್ತಿದೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿಯಲ್ಲಿ ಮಹಾರಾಷ್ಟ್ರವನ್ನು ಒಗ್ಗೂಡಿಸಬೇಕು ಎಂದು ಗಡಿ ಭಾಗದ ನಾಗರಿಕರು ಒತ್ತಾಯಿಸುತ್ತಿದ್ದಾರೆ. ಅವರು ಉದ್ಧವ್ ಠಾಕ್ರೆ ಅವರ ಸಮ್ಮುಖದಲ್ಲಿ ಬದರಿನಾಥದಲ್ಲಿ ಅದೇ ಬೇಡಿಕೆಯನ್ನು ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ