ದೆಹಲಿಗೆ ಹಾರಿದ ಸಿಎಂ ಬಸವರಾಜ ಬೊಮ್ಮಾಯಿ; ವರಿಷ್ಠರ ಭೇಟಿ, ಧನ್ಯವಾದ ಸಲ್ಲಿಕೆ ನೆಪದಲ್ಲಿ ಸಂಪುಟ ಫೈನಲ್?

Basavaraj Bommai: ಸಿಎಂಆಗಿ‌‌ ಪ್ರಮಾಣವವನ ಸ್ವೀಕರಿಸಿದ ಎರಡು ದಿನಗಳ ಬಳಿಕ ಸಿಎ‌ಂ ಬಸವರಾಜ್ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ಸಂಸದರ ಸಭೆ ಕೂಡ ನಡೆಸಲಿದ್ದಾರೆ.

ದೆಹಲಿಗೆ ಹಾರಿದ ಸಿಎಂ ಬಸವರಾಜ ಬೊಮ್ಮಾಯಿ; ವರಿಷ್ಠರ ಭೇಟಿ, ಧನ್ಯವಾದ ಸಲ್ಲಿಕೆ ನೆಪದಲ್ಲಿ ಸಂಪುಟ ಫೈನಲ್?
ದೆಹಲಿಗೆ ಹಾರಿದ ಸಿಎಂ ಬೊಮ್ಮಾಯಿ
Edited By: ಆಯೇಷಾ ಬಾನು

Updated on: Jul 30, 2021 | 7:01 AM

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರೋ ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ದೆಹಲಿಗೆ ತೆರಳಿದ್ದಾರೆ. ಸಚಿವ ಸ್ಥಾನಕ್ಕಾಗಿ ಲಾಬಿ ಹೆಚ್ಚಾಗಿರುವಂತೆಯೇ ಸಿಎಂ ದೆಹಲಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ವರಿಷ್ಠರಿಗೆ ಧನ್ಯವಾದ ಹೇಳೋ ಹೆಸ್ರಲ್ಲಿ ತಮ್ಮ ಕ್ಯಾಬಿನೆಟ್ ಟೀಂ ಸೆಟ್ ಮಾಡ್ಕೊಂಡು ಬರ್ತಾರೆ ಅನ್ನೊದೇ ಸದ್ಯದ ಹಾಟ್ ಟಾಪಿಕ್.

ಸಿಎಂ ಬಸವರಾಜ ಬೊಮ್ಮಾಯಿ ಬೆಳಗ್ಗೆ 6.10ಕ್ಕೆ ಇರುವ ಏರ್‌ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ್ದಾರೆ. ಸಿಎಂ ಬೊಮ್ಮಾಯಿ ಜತೆ ಸಂಸದ ಜಿ.ಎಂ.ಸಿದ್ದೇಶ್ವರ್ ಕೂಡ ತೆರಳಿದ್ದಾರೆ. ತಮ್ಮನ್ನು ಸಿಎಂ ಆಗಿ ಆಯ್ಕೆ ಮಾಡಿರೋ ಬಿಜೆಪಿ ವರಿಷ್ಠ ನಾಯಕರಿಗೆ ಬೊಮ್ಮಾಯಿ ಧನ್ಯವಾದ ತಿಳಿಸಲು ದೆಹಲಿಗೆ ತೆರಳಿದ್ದಾರಂತೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾಗಿ ಕೃತಜ್ಞತೆಯನ್ನು ತಿಳಿಸಲಿದ್ದಾರೆ. ಈ ವೇಳೆ ಅವರು ನೂತನ ಸಚಿವ ಸಂಪುಟ ರಚನೆ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.

ದೆಹಲಿ ಪ್ರವಾಸದ ಕುರಿತು ಈಗಾಗಲೇ ಮಾತನಾಡಿರೋ ಸಿಎಂ, ನಾನು ದೆಹಲಿಗೆ ಭೇಟಿ ನೀಡುತ್ತಿದ್ದು, ಪ್ರಧಾನಿ, ಗೃಹ ಸಚಿವರು ಹಾಗೂ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತಿದ್ದೇನೆ. ವರಿಷ್ಠರಿಗೆ ಧನ್ಯವಾದ ಹೇಳಿದ ಬಳಿಕ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಲಿದ್ದೇವೆ ಅಂತಾ ಪ್ರಮಾಣವಚನ ಸ್ವೀಕರಿಸಿದ ದಿನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಆದರೆ ಸಂಪುಟ ರಚನೆ ಇವತ್ತೇ ಫೈನಲ್ ಆಗುತ್ತಾ ಅಂತಾ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನಿನ್ನೆ ರಿಯಾಕ್ಟ್ ಮಾಡಿರೋ ಸಿಎಂ ಬೊಮ್ಮಾಯಿ, ಸಂಪುಟದ ಬಗ್ಗೆ ಚರ್ಚೆ ನಡೆದ್ರೂ, ಈ ಭೇಟಿಯಲ್ಲೇ ಆಗಲ್ಲ ಇನ್ನೊಂದು ಭೇಟಿಯಲ್ಲಿ ಆಗುತ್ತೆ ಅಂತಾ ಸ್ಪಷ್ಟಪಡಿಸಿದ್ರು.

ಸಿಎಂ ದೆಹಲಿ ಪ್ಲ್ಯಾನ್!
ಬೆಳಗ್ಗೆ 6.10 : ಬೆಂಗಳೂರು ಏರ್ಪೋರ್ಟ್ನಿಂದ ದೆಹಲಿಗೆ
ಬೆಳಗ್ಗೆ 9 : ದೆಹಲಿಗೆ ತಲುಪಲಿರುವ ಸಿಎಂ ಬೊಮ್ಮಾಯಿ
ಬೆಳಗ್ಗೆ 10 : ಕರ್ನಾಟಕ ಭವನ ತಲುಪಲಿರೋ ಮುಖ್ಯಮಂತ್ರಿ
ಸಾಧ್ಯವಾದ್ರೆ ಪ್ರಧಾನಿ ಮೋದಿ, ಅಮಿತ್ ಶಾ ಭೇಟಿಯಾಗಿ ಚರ್ಚೆ
ಮಧ್ಯಾಹ್ನ 1 ಗಂಟೆ : ರಾಜ್ಯದ ಸಂಸದರು, ಅಧಿಕಾರಿಗಳೊಂದಿಗೆ ಸಭೆ

ರಾಜ್ಯದ ಸಂಸದರೊಂದಿಗೂ ಸಿಎಂ ಬೊಮ್ಮಾಯಿ ಚರ್ಚೆ
ಅವಕಾಶ ಹೈಕಮಾಂಡ್ ನಾಯಕರ ಭೇಟಿಯಾದ್ರೆ, ಬಳಿಕ ಸಿಎಂ ಮಧ್ಯಾಹ್ನ ರಾಜ್ಯ ಸಂಸದರ ಸಭೆಯನ್ನು ಕರೆದಿದ್ದಾರೆ. ಮಧ್ಯಾಹ್ನ 1 ಗಂಟೆಗೆ ದೆಹಲಿಯ ಅಶೋಕ ಹೊಟೇಲ್ನಲ್ಲಿ ಸಂಸದರ ಸಭೆಯನ್ನು ಕರೆದಿದ್ದು, ಸಂಸತ್ತಿನಲ್ಲಿ ರಾಜ್ಯದ ವಿಷಯಗಳನ್ನು ಚರ್ಚಿಸುವ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ರಾಜ್ಯದ ನೀರಾವರಿ ಯೋಜನೆ ಸೇರಿದಂತೆ ಉಳಿದ ವಿಚಾರಗಳ ಕುರಿತು ಇದೇ ವೇಳೆ ಸಿಎಂ ಚರ್ಚೆ ನಡೆಸಲಿದ್ದಾರೆ. ರಾಜ್ಯದ ಕೇಂದ್ರ ಸಚಿವರನ್ನು ಭೇಟಿಯಾಗಿ ಸಿಎಂ ಶುಭಾಶಯ ಕೋರಲಿದ್ದಾರೆ.

ಇಂದು ಸಿಎಂ‌ ದೆಹಲಿಯ ಕರ್ನಾಟಕ ಭವನದಲ್ಲಿಯೇ ವಾಸ್ತವ್ಯ ಹೂಡಲಿದ್ದು, ನಾಳೆ ಬೆಂಗಳೂರಿಗೆ ವಾಪಾಸ್ ಆಗುವ ಸಾಧ್ಯತೆ ಇದೆ. ಪ್ರಧಾನಿ ಮೋದಿ‌, ಗೃಹ ಸಚಿವ ಅಮಿತ್ ಶಾ ಭೇಟಿಗೆ ಇನ್ನು ಸಮಯ ಫಿಕ್ಸ್ ಆಗಿಲ್ಲ.. ಇಂದು ಸಂಜೆಯೊಳಗೆ ಪ್ರಧಾನಿ ಮೋದಿ, ಅಮಿತ್ ಶಾ ಭೇಟಿಗೆ ಟೈಂ ಫಿಕ್ಸ್ ಆಗಲಿದೆ. ಮೋದಿ ಯಾವಾಗ ಟೈಂ ಕೊಡ್ತಾರೆ ಆಗ ಸಿಎಂ ಭೇಟಿ ಮಾಡಲಿದ್ದಾರೆ. ಆದ್ರೆ ಸಿಎಂ ಬೊಮ್ಮಾಯಿ ದೆಹಲಿ ಭೇಟಿ ಸಚಿವ ಸ್ಥಾನಾಕಾಂಕ್ಷಿಗಳನ್ನ ತುದಿಗಾಲಲ್ಲಿ ನಿಲ್ಲಿಸಿರೋದು ಸುಳ್ಳಲ್ಲ.

Basavaraj Bommai

ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: Uttara Kannada Flood: ಭೂಕುಸಿತಕ್ಕೊಳಗಾದ ಕಳಚೆ ಗ್ರಾಮದ ಸಂಪೂರ್ಣ ಸ್ಥಳಾಂತರ, ನೊಂದವರಿಗೆ ಶೀಘ್ರ ಪರಿಹಾರ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

Loading...
Unable to load recommendations.
Follow Us