Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿ ಕರಕುಶಲದ ಗಂಧದ ಘಮ ಹೈದರಾಬಾದ್ ಬಂಜಾರಾ ಹಿಲ್ಸ್ ಗೂ ಹರಡಿತು! ನೂತನ ಮಳಿಗೆ ಉದ್ಘಾಟನೆ

ಇದು ಹೈದರಾಬಾದಿನಲ್ಲಿ ಪ್ರಾರಂಭಗೊಂಡ ನಿಗಮದ ಮೊದಲ ಮಳಿಗೆ. ಮುಂದೆ ಚೆನ್ನೈನಲ್ಲೂ ಇಂತಹುದೆ ಒಂದು ಮಳಿಗೆ ತೆರೆಯಲಾಗುವುದು. ಆನ್​ಲೈನ್​ ವಹಿವಾಟಿಗೂ ಆದ್ಯತೆ ನಿಡಲಾಗಿದೆ ಎಂದು ಡಿ ರೂಪಾ ಅವರು ವಿವರಿಸಿದರು.

ಕಾವೇರಿ ಕರಕುಶಲದ ಗಂಧದ ಘಮ ಹೈದರಾಬಾದ್ ಬಂಜಾರಾ ಹಿಲ್ಸ್ ಗೂ ಹರಡಿತು! ನೂತನ ಮಳಿಗೆ ಉದ್ಘಾಟನೆ
ಕಾವೇರಿ ಕರಕುಶಲದ ಗಂಧದ ಘಮ ಹೈದರಾಬಾದ್ ಬಂಜಾರಾ ಹಿಲ್ಸ್ ಗೂ ಹರಡಿತು! ನೂತನ ಮಳಿಗೆ ಉದ್ಘಾಟನೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:May 09, 2022 | 5:54 PM

ಹೈದರಾಬಾದ್: ಕರ್ನಾಟಕ ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ (Cauvery handicrafts emporium -KSHDCL) ನೂತನ ಮಳಿಗೆಯನ್ನು ಹೈದರಾಬಾದ್ ಬಂಜಾರಾ ಹಿಲ್ಸ್ ನಲ್ಲಿರುವ ಸಿಟಿ ಸೆಂಟರ್ ಮಾಲ್ ನಲ್ಲಿ (City Centre Mall, Banjara Hills, Hyderabad) ಇತ್ತೀಚೆಗೆ ಉದ್ಘಾಟನೆ ಮಾಡಲಾಯಿತು. ಜಿ ಕಿಶನ್ ರೆಡ್ಡಿ, ಕೇಂದ್ರ ಸಂಸ್ಕೃತಿ ಮತ್ತು ಈಶಾನ್ಯ ಪ್ರಾಂತ್ಯದ ಅಭಿವೃದ್ಧಿ ಸಚಿವ ( G Kishan Reddy Union Minister for Culture and Tourism) ಅವರು ಈ ಆಯಕಟ್ಟಿನ ಮಳಿಗೆಯನ್ನು ನಿನ್ನೆ ಭಾನುವಾರ ಉದ್ಘಾಟಿಸಿದರು. KSHDCL ವ್ಯವಸ್ಥಾಪಕ ನಿರ್ದೇಶಕಿ, ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್, ಮತ್ತಿತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದರಿಂದ ಕರ್ನಾಟಕ ರಾಜ್ಯ ಕರಕುಶಲ ಕರ್ಮಿಗಳಿಗೆ ಇನ್ನೂ ಹೆಚ್ಚಿನ ಮಾರುಕಟ್ಟೆ ಬೆಂಬಲ ಹಾಗೂ ಸಹಕಾರ ಸಿಗುವ ಭರವಸೆ ದೊರೆತಿದೆ.

ಇದರೊಂದಿಗೆ ಗಂಧದ ನಾಡಿನ ಶುದ್ಧ ಗಂಧದಿಂದ ತಯಾರಾದ ಕಾವೇರಿ ಕರಕುಶಲ ವಸ್ತು ದೂರದ ಬಂಜಾರಾ ಹಿಲ್ಸ್ ನಲ್ಲಿ ಲಭ್ಯವಾಗಲಿದೆ. ಈ ಕುರಿತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅದರ ಸಾರಾಂಶ ಹೀಗಿದೆ: “Cauvery” will shortly be at City Center Mall,Banjara hills, Hyderabad. Karnataka handicrafts’ USP pure sandalwood articles soon to spread fragrance in Hyd. Inspecting the interiors for new showroom. #MakeInIndia #VocalForLocal

ಇದು ಹೈದರಾಬಾದಿನಲ್ಲಿ ಪ್ರಾರಂಭಗೊಂಡ ನಿಗಮದ ಮೊದಲ ಮಳಿಗೆ. ಮುಂದೆ ಚೆನ್ನೈನಲ್ಲೂ ಇಂತಹುದೆ ಒಂದು ಮಳಿಗೆ ತೆರೆಯಲಾಗುವುದು. ಆನ್​ಲೈನ್​ ವಹಿವಾಟಿಗೂ ಆದ್ಯತೆ ನಿಡಲಾಗಿದೆ ಎಂದು ಡಿ ರೂಪಾ ಅವರು ವಿವರಿಸಿದರು.

ಕರ್ನಾಟಕದ ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Mon, 9 May 22