Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್ ಗ್ಯಾಂಗ್‌ ರೇಪ್‌: ಕಾಮುಕರ ಗುರುತು ಪತ್ತೆ, ಮೂವರಿಗಾಗಿ ಪೊಲೀಸ್ ತಂಡಗಳಿಂದ ಶೋಧ

Hyderabad Gang Rape | ಹೈದರಾಬಾದ್​ನಲ್ಲಿ ದಿಶಾ ಗ್ಯಾಂಗ್​ರೇಪ್, ಎನ್​ಕೌಂಟರ್ ಪ್ರಕರಣ ಮರೆಯೋ ಮುನ್ನವೇ ಮತ್ತೊಂದು ಸಾಮೂಹಿಕ ಅತ್ಯಾಚಾರ ನಡೆದಿರೋದು ಭಾಗ್ಯ ನಗರಿ ಜನರಿಗೆ ಶಾಕ್ ನೀಡಿದೆ. ಇದರ ನಡುವೆ ಪೊಲೀಸರು ಕೃತ್ಯ ಎಸಗಿದ ಕಾಮುಕರನ್ನ ಗುರುತಿಸಿದ್ದು, ಕಾರ್ಯಾಚರಣೆ ಕೈಗೊಂಡಿದ್ದಾರೆ. ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಹೈದರಾಬಾದ್ ಗ್ಯಾಂಗ್‌ ರೇಪ್‌: ಕಾಮುಕರ ಗುರುತು ಪತ್ತೆ, ಮೂವರಿಗಾಗಿ ಪೊಲೀಸ್ ತಂಡಗಳಿಂದ ಶೋಧ
ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ
Follow us
ಆಯೇಷಾ ಬಾನು
|

Updated on:Feb 12, 2021 | 7:18 AM

ಹೈದರಾಬಾದ್​ನಲ್ಲಿ ನಡೆದಿರೋ ಗ್ಯಾಂಗ್​ರೇಪ್​.. ಸುಮಾರು ಒಂದೂ ಕಾಲು ವರ್ಷದ ಹಿಂದೆ ನಡೆದಿದ್ದ ದಿಶಾ ಅತ್ಯಾಚಾರ ಪ್ರಕರಣವನ್ನ ಮತ್ತೆ ನೆನಪಿಸಿದೆ. ಈ ಮೂಲಕ ಹೈದರಾಬಾದ್​​ನಲ್ಲಿ ಮತ್ತೊಮ್ಮೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ಮನೆಗೆ ಹೋಗಲು ಆಟೋ ಹತ್ತಿದ ಯುವತಿಯ ಮೇಲೆ ಡ್ರೈವರ್ ಕಣ್ಣು ಬಿದ್ದಿದೆ. ಯುವತಿ ಇಳಿಯಬೇಕಾದ ಸ್ಥಳದ ಬಳಿ ಗಾಡಿ ನಿಲ್ಲಿಸಲು ಹೇಳಿದ್ರೂ ಡ್ರೈವರ್ ಆಟೋ ನಿಲ್ಲಿಸದೇ ವೇಗವಾಗಿ ಘಟ್ಕೇಸರ್ ಕಡೆ ಹೊರಟಿದ್ದ. ತಕ್ಷಣ ಎಚ್ಚೆತ್ತ ಯುವತಿ ತನ್ನ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ತಕ್ಷಣ ಅವರ ತಾಯಿ ಸಂಬಂಧಿಯ ನೆರವಿನಿಂದ 100ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ರು. ಅಷ್ಟರಲ್ಲಾಗಲೇ ಆಟೋ ಡ್ರೈವರ್ ತನ್ನ ಸ್ನೇಹಿತರಿಗೆ ಕರೆ ಮಾಡಿ, ಬೇರೊಂದು ವ್ಯಾನ್​ ಕರೆಸಿಕೊಂಡು ಯುವತಿಯ ಮೇಲೆ ಹಲ್ಲೆ ಮಾಡಿ ವ್ಯಾನ್​ಗೆ ಶಿಫ್ಟ್ ಮಾಡಿದ್ದ. ಬುಧವಾರ ಸಂಜೆ 6.15 ರಿಂದ 6.30ರ ಸಮಯದಲ್ಲಿ ಈ ಎಲ್ಲ ಘಟನೆಗಳು ನಡೆದು ಹೋಗಿದ್ವು.

ಕರೆ ಬಂದ ತಕ್ಷಣ ಫುಲ್ ಅಲರ್ಟ್ ಆಗಿದ್ರು ಪೊಲೀಸರು ಪೊಲೀಸರಿಗೆ ಯುವತಿಯ ಕುರಿತು ಮಾಹಿತಿ ಸಿಗುತ್ತಿದ್ದಂತೆ ಫುಲ್​ ಅಲರ್ಟ್ ಆಗಿದ್ರು. ಅಲ್ದೇ, ಘಟ್ಕೇಸರ್ ಠಾಣೆಯ ಪೊಲೀಸರು ಯುವತಿಯ ಮೊಬೈಲ್ ಜಾಡು ಹಿಡಿದು ಪತ್ತೆಗೆ ಮುಂದಾದ್ರು. ಪೊಲೀಸರ ಸೈರನ್ ಸದ್ದು ಕೇಳಿಸ್ತಿದ್ದಂತೆ ಕಾಮುಕರು, ಯುವತಿಯನ್ನ ಘಟ್ಕೇಸರ್​ ರಿಂಗ್​ ರೋಡ್​ನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ, ಮಣ್ಣಿನ ಗುಡ್ಡೆಯ ಮೇಲೆ ಎಸೆದು ಪರಾರಿಯಾಗಿದ್ದಾರೆ. ಹಾಗೂ ಹೀಗೂ ಮಾಡಿ ಪೊಲೀಸರು 7.30ರ ಸುಮಾರಿಗೆ ಯುವತಿಯನ್ನ ಪತ್ತೆ ಹಚ್ಚಿ ಹತ್ತಿರದಲ್ಲೇ ಇದ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು. ಬುಧವಾರ ಅಲ್ಲಿಯೇ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಸಿಕಂದರಾಬಾದ್​ನಲ್ಲಿರೋ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಡಾಕ್ಟರ್ ಸೌಜನ್ಯ ರೆಡ್ಡಿ ಯುವತಿಯ ಮೇಲೆ ಅತ್ಯಾಚಾರ ಆಗಿದೆ ಅನ್ನೋದನ್ನ ದೃಢಪಡಿಸಿದ್ದಾರೆ. ಅಲ್ದೆ, ಯುವತಿಯ ಪರಿಸ್ಥಿತಿಯನ್ನ ವಿವರಿಸಿದ್ದಾರೆ.

ಯುವತಿಗೆ ಪ್ರಜ್ಞೆ ಇಲ್ಲ. ಆಕೆ ಭಯದಿಂದ ಕೂಡಿದ ಅರೆಪ್ರಜ್ಞಾವಸ್ಥೆಯಲ್ಲಿರುವಾಗ ನಾವು ಮಾಹಿತಿ ಪಡೆಯಬಾರದು. ಮೊದಲು ಚಿಕಿತ್ಸೆ ನೀಡಬೇಕು. ನಾವು ಚಿಕಿತ್ಸೆ ಶುರು ಮಾಡಿದೆವು. ನಂತರ ಪೊಲೀಸ್ ಇಲಾಖೆಯವರು ನೀಡಿದ ಮಾಹಿತಿಯನ್ನ ಆಧರಿಸಿ ಚಿಕಿತ್ಸೆ ಕೊಡುತ್ತಿದ್ದೇವೆ. ಪ್ರಾಥಮಿಕ ಪರೀಕ್ಷೆಯಲ್ಲಿ ಲೈಂಗಿಕ ಕಿರುಕುಳ ನೀಡಿರೋದು ದೃಢವಾಗಿದೆ ಎಂದು ಡಾಕ್ಟರ್ ಸೌಜನ್ಯ ರೆಡ್ಡಿ ತಿಳಿಸಿದ್ದಾರೆ.

ಸದ್ಯಕ್ಕೆ ಯುವತಿ ಮೇಲೆ ಅತ್ಯಾಚಾರ ನಡೆದಿರೋದು ವೈದ್ಯರ ಹೇಳಿಕೆಯಿಂದ ದೃಢವಾಗಿದೆ. ಕೋಮಾಸ್ಥಿತಿಯಲ್ಲಿರೋ ಯುವತಿ ಎಚ್ಚರವಾದ್ಮೇಲೆಯೇ ಘಟನೆಯ ಸಂಪೂರ್ಣ ಮಾಹಿತಿ ಸಿಗಲಿದೆ. ಪೊಲೀಸರು ಕೃತ್ಯ ಎಸಗಿದ ಆರೋಪಿಗಳನ್ನ ಪತ್ತೆ ಹಚ್ಚಿದ್ದು, ಪ್ರಮುಖ ಆರೋಪಿಯನ್ನ ಈಗ ರಾಜು ಅಂತಾ ಗುರುತಿಸಿದ್ದಾರೆ. ಶೀಘ್ರದಲ್ಲೇ ಆರೋಪಿಗಳ ಹೆಡೆಮುರಿ ಕಟ್ತೀವಿ ಅಂತಾ ಹೇಳಿದ್ದಾರೆ.

ಇದನ್ನೋ ಓದಿ: ಆಟೋ ಹತ್ತಿದ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌.. ಕೃತ್ಯ ಎಸಗಿ ರಸ್ತೆ ಬದಿ ಬೆತ್ತಲೆ ಬಿಸಾಡಿ ಹೋದ ಕೀಚಕರು

Published On - 7:13 am, Fri, 12 February 21

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್