AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್​, ಡೀಸೆಲ್​ ಆಯ್ತು.. ಈಗ ದೇಶೀಯ ವಿಮಾನ ಪ್ರಯಾಣವೂ ತುಟ್ಟಿ

ವಿಮಾನದ ಪ್ರಯಾಣದ ಅವಧಿ ಆಧರಿಸಿ ಕಳೆದ ವರ್ಷ ಮೇ 21ರಂದು ವಿಮಾನಯಾನ ಸಚಿವಾಲಯ ಏಳು ಟಿಕೆಟ್​ ಬ್ಯಾಂಡ್​ಗಳನ್ನು ಸಿದ್ಧಪಡಿಸಿತ್ತು. ಈಗ ಎಲ್ಲಾ ಬ್ಯಾಂಡ್​ಗಳ ದರವನ್ನು ಹೆಚ್ಚಿಸಲಾಗಿದೆ.

ಪೆಟ್ರೋಲ್​, ಡೀಸೆಲ್​ ಆಯ್ತು.. ಈಗ ದೇಶೀಯ ವಿಮಾನ ಪ್ರಯಾಣವೂ ತುಟ್ಟಿ
ಇಂಡಿಗೊ ವಿಮಾನ
ರಾಜೇಶ್ ದುಗ್ಗುಮನೆ
|

Updated on:Feb 11, 2021 | 9:26 PM

Share

ನವದೆಹಲಿ: ದೇಶದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ಹೆಚ್ಚುತ್ತಲೇ ಇದೆ. ಇದು ಸಾಮಾನ್ಯ ವರ್ಗಕ್ಕೆ ದೊಡ್ಡ ಹೊರೆ ಆಗಿದೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಸಾಮಾನ್ಯರಿಗೆ ಮತ್ತೊಂದು ಹೊರೆಯನ್ನು ಹೊರಿಸಿದೆ. ದೇಶೀಯ ವಿಮಾನ ಹಾರಾಟ ಇನ್ನುಮುಂದೆ ಮತ್ತಷ್ಟು ತುಟ್ಟಿ ಆಗಲಿದೆ. ಕೇಂದ್ರ ಸರ್ಕಾರ ದೇಶೀಯ ವಿಮಾನಯಾನ ದರವನ್ನು ಶೇ.10-30 ಏರಿಕೆ ಮಾಡಿರುವುದು ಇದಕ್ಕೆ ಕಾರಣ. ಹೀಗಾಗಿ, ದೇಶದೊಳಗೆ ನೀವು ವಿಮಾನದಲ್ಲಿ ಪ್ರಯಾಣ ಮಾಡುತ್ತೀರಿ ಎಂದಾದರೆ, ಹೆಚ್ಚಿನ ಹಣ ನೀಡುವುದು ಅನಿವಾರ್ಯ ಆಗಿದೆ. ಈ ಹೊಸ ಆದೇಶ ಮಾರ್ಚ್​ 31,2021ರವರೆಗೆ ಜಾರಿಯಲ್ಲಿರಲಿದೆ. ನಂತರ ಯಾವುದೇ ಆದೇಶ ಕೇಂದ್ರ ಸರ್ಕಾರದ ಕಡೆಯಿಂದ ಬರದೆ ಇದ್ದರೆ, ಇದೇ ಆದೇಶ ಮುಂದುವರಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ವಿಮಾನದ ಪ್ರಯಾಣದ ಅವಧಿ ಆಧರಿಸಿ ಕಳೆದ ವರ್ಷ ಮೇ 21ರಂದು ವಿಮಾನಯಾನ ಸಚಿವಾಲಯ ಏಳು ಟಿಕೆಟ್​ ಬ್ಯಾಂಡ್​ಗಳನ್ನು ರಚಿಸಿತ್ತು. ಮೊದಲ ಬ್ಯಾಂಡ್​ನಲ್ಲಿ ಕನಿಷ್ಠ ದರವನ್ನು ಈಗ 2000 ರೂಪಾಯಿಯಿಂದ 2,200 ರೂಪಾಯಿಗೆ ಏರಿಕೆ ಮಾಡಿದೆ. ಈ ಬ್ಯಾಂಡ್​ನ ಗರಿಷ್ಠ ದರವನ್ನು 6000 ರೂಪಾಯಿಯಿಂದ 7,800 ರೂಪಾಯಿಗೆ ಹೆಚ್ಚಿಸಿದೆ.

ಉಳಿದ ವಿಮಾನಗಳ ದರದ ಬಗ್ಗೆ ಇಲ್ಲಿದೆ ಮಾಹಿತಿ:

ಪ್ರಯಾಣದ ಅವಧಿ                   ಹಳೆಯ ದರ                                              ಪರಿಷ್ಕೃತ ದರ (ನಿಮಿಷಗಳಲ್ಲಿ)    40-60                                              ₹ 2,500 – ₹ 7,500                                        ₹ 2,800 – ₹ 9,800 60-90                                            ₹ 3,000 – ₹ 9,000                                         ₹ 3,300 – ₹ 11,700 90-120                                          ₹ 3,500 – ₹ 10,000                                       ₹ 3,900 – ₹ 13,000 120-150                                         ₹ 4,500 – ₹ 13,000                                       ₹ 5,000 – ₹ 16,900 150-180                                         ₹ 5,500 – ₹ 15,700                                       ₹ 6,100 – ₹ 20,400 180-210                                        ₹ 6,500 – ₹ 18,600                                        ₹ 7,200 – ₹ 24,200

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ದೇಶದಲ್ಲಿ ವಿಮಾನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಮೇ 25ರಿಂ ದೇಶೀಯ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿತ್ತು.

ಇದನ್ನೂ ಓದಿ: Aero India 2021 ಲಘು ಯುದ್ಧ ವಿಮಾನ ತೇಜಸ್​ ಬೆನ್ನೇರಿದ ಸಂಸದ ತೇಜಸ್ವಿ ಸೂರ್ಯ.. Photos

Published On - 9:25 pm, Thu, 11 February 21

Follow Us
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!