AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Manya Singh ಉತ್ತರ ಪ್ರದೇಶದ ಆಟೋ ಚಾಲಕನ ಪುತ್ರಿಗೆ Miss India 2020 ರನ್ನರ್​ ಅಪ್ ‘ಮಾನ್ಯ’ತೆ!

ಜೀವನದ ಕಹಿ ಅನುಭವಗಳನ್ನ ಹಂಚಿಕೊಂಡ ಮಾನ್ಯಾ, ಅದೆಷ್ಟೋ ಬಾರಿ ಹಣ ಉಳಿಸಲು ನಾನು ಮೈಲಿಗಟ್ಟಿಲೇ ನಡೆದುಕೊಂಡೇ ಹೋಗಿದ್ದು ಸಹ ಉಂಟು. ಆದರೆ, ಇಂದು ನನ್ನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ನನ್ನ ಕನಸುಗಳನ್ನು ನನಸಾಗಿಸುವ ಧೈರ್ಯ ತುಂಬಿದೆ ಎಂದು ಹೇಳಿದರು.

Manya Singh ಉತ್ತರ ಪ್ರದೇಶದ ಆಟೋ ಚಾಲಕನ ಪುತ್ರಿಗೆ Miss India 2020 ರನ್ನರ್​ ಅಪ್ ‘ಮಾನ್ಯ’ತೆ!
ಮಿಸ್​ ಇಂಡಿಯಾ 2020ರ ರನ್ನರ್​ ಅಪ್​ ಮಾನ್ಯಾ ಸಿಂಗ್
KUSHAL V
| Edited By: |

Updated on:Feb 19, 2021 | 8:17 PM

Share

ಮುಂಬೈ: ಸಾಧನೆಯ ಹಾದಿ ಬಲು ದುರ್ಗಮ. ಆದರೆ, ಸಾಧಿಸಲೇಬೇಕೆಂಬ ಛಲವೊಂದಿದ್ದರೆ ಸಾಕು. ಎಂಥ ಕಡಿದಾದ ಹಾದಿಯಲ್ಲೂ ಅಂಜದೆ ಮುನ್ನುಗ್ಗಬಹುದು. ಇದಕ್ಕೆ ಬೆಸ್ಟ್​ ಉದಾಹರಣೆ ಎಂದರೆ ಮಿಸ್​ ಇಂಡಿಯಾ 2020ರ ರನ್ನರ್​ ಅಪ್​ ಮಾನ್ಯಾ ಸಿಂಗ್​.

ಹೌದು, ಉತ್ತರ ಪ್ರದೇಶದ ಖುಷಿನಗರದ ನಿವಾಸಿಯಾದ ಮಾನ್ಯಾ ಸಿಂಗ್​ ಓರ್ವ ಆಟೋ ಚಾಲಕನ ಪುತ್ರಿ. ತಂದೆಗೆ ಬರುತ್ತಿದ್ದ ಅಲ್ಪಸ್ವಲ್ಪ ಆದಾಯದಲ್ಲೇ ಮಾನ್ಯಾಳ ಕುಟುಂಬವು ಬದುಕು ಸಾಗಿಸಬೇಕಿತ್ತು. ಕೆಲವೊಮ್ಮೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಿಸಬೇಕಿತ್ತು. ಅದೆಷ್ಟೋ ಬಾರಿ ಶಾಲೆಯ ಫೀಸ್​ ಕಟ್ಟೋಕೆ ಆಗದೆ ಸಹಪಾಠಿಗಳ ಎದುರು ಮಾನ್ಯಾ ಅವಮಾನಕ್ಕೆ ಗುರಿಯಾಗಿದ್ದು ಸಹ ಉಂಟು. ಒಮ್ಮೆ ತನ್ನ ಪರೀಕ್ಷೆಯ ಶುಲ್ಕ ಕಟ್ಟಲು ತನ್ನ ತಾಯಿಯ ಒಡವೆಯನ್ನು ಅಡವಿಟ್ಟಿದ್ದ ಬಗ್ಗೆ ಸಹ ಮಾನ್ಯಾ ಹಂಚಿಕೊಂಡಿದ್ದಾರೆ.

ಆದರೆ, ಇದ್ಯಾವುದಕ್ಕೂ ಧೃತಿಗೆಡದ ಮಾನ್ಯಾ, ಕಷ್ಟಪಟ್ಟು ಓದಿ 12ನೇ ತರಗತಿಯಲ್ಲಿ ಒಳ್ಳೇ ಅಂಕಗಳನ್ನು ಪಡೆದು ಶಾಲೆಯ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದರು. ಅಮ್ಮನ ಮುದ್ದಿನ ಮಗಳಾದ ಮಾನ್ಯಾಗೆ ತನ್ನ ತಾಯಿಯೇ ಅತಿದೊಡ್ಡ ಸ್ಫೂರ್ತಿ. ಹಾಗಾಗಿ, ತನ್ನ ಅಮ್ಮನ ಹಾಗೇ ಶ್ರಮಜೀವಿಯಾಗಿರುವ ಮಾನ್ಯಾ ತಮ್ಮ ಕಾಲೇಜು ದಿನಗಳಲ್ಲಿ ವ್ಯಾಸಂಗದ ಜೊತೆ ಮನೆಗೆಲಸ ಹಾಗೂ ಕಾಲ್​ ಸೆಂಟರ್​ನಲ್ಲಿ ಸಹ ಕೆಲಸ ಮಾಡಿದ್ದಾರೆ.

ತಮ್ಮ ಜೀವನದ ಕಹಿ ಅನುಭವಗಳನ್ನ ಹಂಚಿಕೊಂಡ ಮಾನ್ಯಾ, ಅದೆಷ್ಟೋ ಬಾರಿ ಹಣ ಉಳಿಸಲು ನಾನು ಮೈಲಿಗಟ್ಟಿಲೇ ನಡೆದುಕೊಂಡೇ ಹೋಗಿದ್ದು ಸಹ ಉಂಟು. ಆದರೆ, ಇಂದು ನನ್ನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ನನ್ನ ಕನಸುಗಳನ್ನು ನನಸಾಗಿಸುವ ಧೈರ್ಯ ತುಂಬಿದೆ. ಇದೀಗ, ಈ ಮಿಸ್​ ಇಂಡಿಯಾ ವೇದಿಕೆ ಮುಖಾಂತರ ತನ್ನಂಥ ಇತರರಿಗೂ ಸ್ಫೂರ್ತಿಯ ಸೆಲೆಯಾಗಲು ಬಯಸುತ್ತೇನೆ ಎಂದು ಹೇಳಿದರು.

ಅಂದ ಹಾಗೆ, ಶಿಕ್ಷಣ ಎಂಬುದು ಓರ್ವ ಮನುಷ್ಯನ ಬಳಿ ಇರಬಹುದಾದ ಅತ್ಯುತ್ತಮ ಅಸ್ತ್ರ ಎಂದು ಮಾನ್ಯಾ ಸಿಂಗ್​ ಬಲವಾಗಿ ನಂಬಿದ್ದಾರೆ. ಹಾಗಾಗಿ, ಮಾನ್ಯ ಇದೀಗ ಮ್ಯಾನೇಜ್​ಮೆಂಟ್​ನಲ್ಲಿ ಉನ್ನತ ವ್ಯಾಸಂಗ ಮುಂದುವರಿಸುವ ಕನಸು ಹೊತ್ತಿದ್ದಾರೆ.

Published On - 11:42 pm, Thu, 11 February 21

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!