AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರ ಗ್ರಹಣದಂದು ಭಕ್ತರಿಗೆ ಮಂತ್ರಾಲಯ ರಾಯರ ದರ್ಶನ ಇರುತ್ತಾ? ಇಲ್ಲಿದೆ ಮಾಹಿತಿ

ನಾಳೆ ಹೋಳಿ ಹುಣ್ಣಿಮೆ. ನಾಳೆಯೇ ಚಂದ್ರನಿಗೆ ಗ್ರಹಣ ಹಿಡಿಯಲಿದೆ. ನಿತ್ಯ ಬೂದು ಬಣ್ಣದಲ್ಲಿರುವ ಚಂದ್ರ ನಾಳೆ ಕೆಂಪು ವರ್ಣದಲ್ಲಿ ಕಂಗೊಳಿಸಲಿದ್ದಾನೆ. ಈ ದಿನದಂದು ದೇವಸ್ಥಾನಗಳ ಬಾಗಿಲು ಬಂದ್​​ ಮಾಡಲಾಗುತ್ತಿದೆ. ಆದರೆ ಮಂತ್ರಾಲಯದ ರಾಯರ ಮಠ ಮಾತ್ರ ಎಂದಿನಂತೆ ತೆರೆಯಲಿದ್ದು, ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಚಂದ್ರ ಗ್ರಹಣದಂದು ಭಕ್ತರಿಗೆ ಮಂತ್ರಾಲಯ ರಾಯರ ದರ್ಶನ ಇರುತ್ತಾ? ಇಲ್ಲಿದೆ ಮಾಹಿತಿ
ರಾಯರ ಮಠImage Credit source: tv9 kannada
ಭೀಮೇಶ್​​ ಪೂಜಾರ್
| Edited By: |

Updated on: Mar 02, 2026 | 7:18 PM

Share

ರಾಯಚೂರು, ಮಾರ್ಚ್​ 02: ನಾಳೆ ಖಗ್ರಾಸ್ ಚಂದ್ರಗ್ರಹಣ ಹಿನ್ನೆಲೆ ದೇವಸ್ಥಾನಗಳ ಬಾಗಿಲು ಬಂದ್ ಆಗಲಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಆದರೆ ಮಂತ್ರಾಲಯ ರಾಯರ ಮಠದಲ್ಲಿ (Mantralaya Raghavendra Swamy Mutt) ಮಾತ್ರ ಎಂದಿನಂತೆ ಗ್ರಹಣವದ ವೇಳೆಯೂ ಭಕ್ತರಿಗೆ ರಾಯರ ದರ್ಶನಕ್ಕೆ ಅವಕಾಶ ಇದೆ. ಧಾರ್ಮಿಕ ಸೇವೆಗಳು, ಪ್ರಸಾದ ಸೇವೆ ಇರಲ್ಲ. ಅಷ್ಟೇ ಅಲ್ಲ, ರಾಯರಿಗೂ ವಿಶೇಷ ಅಲಂಕಾರಗಳು ಇರಲ್ಲ, ಕೇವಲ ಜಲಾಭಿಷೇಕ ಮಾತ್ರ ಇರತ್ತೆ.

ಧಾರ್ಮಿಕ ಸೇವೆಗಳು ಮಾತ್ರ ಸ್ಥಗಿತ

ಸಾಮಾನ್ಯವಾಗಿ ಗ್ರಹಣಗಳು ಗೋಚರಿಸುವ ವೇಳೆ ಧಾರ್ಮಿಕ ಕೇಂದ್ರಗಳಲ್ಲಿ ದೇವಸ್ಥಾನಗಳ ಬಾಗಿಲುಗಳನ್ನ ಹಾಕಿ, ಗ್ರಹಣದ ಸಂದರ್ಭದಲ್ಲಿ ಕೆಲ ಧಾರ್ಮಿಕ ಪದ್ದತಿಗಳನ್ನ ಅನುಸರಿಸಲಾಗತ್ತೆ. ಆದರೆ ಈ ವರ್ಷದ ಮೊದಲ ಖಗ್ರಾಸ್ ಚಂದ್ರಗ್ರಹಣದ ಹಿನ್ನೆಲೆ, ಮಂತ್ರಾಲಯದ ರಾಯರ ಮಠದಲ್ಲಿ ಯಾವುದೇ ನಿರ್ಬಂಧಗಳಿಲ್ಲ. ರಾಯರ ಭಕ್ತರು ಎಂದಿನಂತೆ ಶ್ರೀ ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆಯಲು ಮುಕ್ತ ಅವಕಾಶ ಇದೆ.

ಇದನ್ನೂ ಓದಿ: Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ಇಲ್ಲಿದೆ ನೋಡಿ

ಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆ ರಾಯರ ಮಠಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ನಾಳೆ ಗ್ರಹಣ ಇರುವ ಹಿನ್ನೆಲೆ ಸೂರ್ಯೋದಯದಿಂದ ಗ್ರಹಣ ಮುಕ್ತಾಯದವರೆಗೆ ಶ್ರೀ ಮಠದಲ್ಲಿ ಎಂದಿನಂತೆ ಭಕ್ತರಿಗೆ ರಾಯರ ದರ್ಶನ ಲಭ್ಯವಿರುತ್ತದೆ.

ಗ್ರಹಣದ ವೇಳೆ ರಾಯರ ಮಠದಲ್ಲಿ ಏನಿರತ್ತೆ, ಏನಿರಲ್ಲ?

  • ವಿಶೇಷ ಪೂಜೆಗಳು, ಸೇವೆಗಳು ಮತ್ತು ಪ್ರಸಾದದ ವ್ಯವಸ್ಥೆ ಇರಲ್ಲ
  • ರಾಯರ ಮೂಲಬೃಂದಾವನಕ್ಕೆ ಅಲಂಕಾರ ಇರಲ್ಲ, ಕೇವಲ ಜಲಾಭಿಷೇಕ ಮಾತ್ರ ನಡೆಯಲಿದೆ.
  • ಮಠದ ನಿಗದಿತ ಸಮಯದ ಅವಧಿಯಂತೆ ದರ್ಶನಕ್ಕೆ ಅವಕಾಶ ಇರುತ್ತದೆ.
  • ಭಕ್ತರಿಗೆ ತೀರ್ಥ ಪ್ರಸಾದ ಮಾತ್ರ ವಿತರಿಸಲಾಗುತ್ತದೆ.

ಮಂತ್ರಾಲಯ ವಿದ್ಯಾಪೀಠದ ಪ್ರಾಂಶುಪಾಲ ವಾದಿರಾಜಾಚಾರ್ಯ ಹೇಳಿದ್ದಿಷ್ಟು 

ಇತ್ತ ಚಂದ್ರಗ್ರಹಣ ಬಗ್ಗೆ ಮಂತ್ರಾಲಯ ವಿದ್ಯಾಪೀಠದ ಪ್ರಾಂಶುಪಾಲ ವಾದಿರಾಜಾಚಾರ್ಯ ಟಿವಿ9ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ದೇವಸ್ಥಾನಗಳಲ್ಲಿ ಬಾಗಿಲು ಹಾಕಲಾಗತ್ತೆ, ರಾಯರ ಮಠದಲ್ಲಿ ಆ ರೀತಿ ಬಾಗಿಲು ಹಾಕುವ ಪದ್ದತಿ ಇಲ್ಲ. ಭಕ್ತರಿಗೆ ರಾಯರ ದರ್ಶನಕ್ಕೆ ಮುಕ್ತವಾದ ಅವಕಾಶ ಇದೆ ಅಂತ ಹೇಳಿದ್ದಾರೆ.

ಸಾಮಾನ್ಯವಾಗಿ ದೇವತಾ ಸನ್ನಿವೇಶಗಳಲ್ಲಿ ಇರುವ ದೇವಸ್ಥಾನಗಳಲ್ಲಿ ಗ್ರಹಣದ ವೇಳೆ ಬಾಗಿಲು ಹಾಕುವ ಪದ್ಧತಿ ಇದೆ. ಆದರೆ ಇಲ್ಲಿ ರಾಯರು ಯತಿಗಳು, ಅವರು ಈ ಸನ್ನಿಧಿಯಲ್ಲಿ ನೆಲೆಸಿದ್ದಾರೆ ಎಂಬ ಭಕ್ತರ ನಂಬಿಕೆ ಇದೆ. ಸುಮಾರು 350ಕ್ಕೂ ಹೆಚ್ಚು ವರ್ಷಗಳಾದರೂ ರಾಯರು ದೇಹ ತ್ಯಜಿಸಿಲ್ಲ, ಸಾಧನೆಗಾಗಿ ಅಭಿವ್ಯಕ್ತರಾಗಿದ್ದಾರೆ ಎಂಬ ಭಕ್ತಿ ಪರಂಪರೆ ಇದೆ. ಹೀಗಾಗಿ ಇಲ್ಲಿ ಬಾಗಿಲನ್ನ ಹಾಕುವ ಪದ್ದತಿ ಇಲ್ಲ ಅಂತ ವಾದಿರಾಜಾಚಾರ್ಯರು ಮಾಹಿತಿ ಬಂದಿಲ್ಲ.

ಗ್ರಸ್ತೋದಯ ಚಂದ್ರಗ್ರಹಣ ಎಂದರೇನು ಗೊತ್ತಾ?

ಇದಷ್ಟೇ ಅಲ್ಲ, ಗ್ರಹಣದ ಸಮಯದ ಬಗ್ಗೆ ಕೂಡ ವಾದಿರಾಜಾಚಾರ್ಯರು ಪ್ರತಿಕ್ರಿಯಿಸಿದ್ದು, ಗ್ರಹಣ ವಿಶೇಷತೆ, ಅದರ ಅವಧಿ, ಆ ವೇಳೆ ಮಾಡಬೇಕಾದ ಕಾರ್ಯಗಳ ಬಗ್ಗೆಯೂ ತಿಳಿಸಿದ್ದಾರೆ. ಪೂರ್ಣಗ್ರಾಸ ಗ್ರಸ್ತೋದಯ ಚಂದ್ರಗ್ರಹಣ ಎಂದರೆ ಚಂದ್ರ ಹುಟ್ಟಿದ ಸಮಯದಲ್ಲಿ ಗ್ರಹಣದ ಆರಂಭವಾಗುವುದು. ಸಾಮಾನ್ಯವಾಗಿ, ಚಂದ್ರಗ್ರಹಣವು ಚಂದ್ರ ಉದಯದ ನಂತರ ಸಿದ್ಧವಾಗುತ್ತದೆ, ಆದರೆ ಈ ಬಾರಿಗೆ ಚಂದ್ರ ಉದಯದ ಜೊತೆ ಗ್ರಹಣವು ಸಂಭವಿಸಲಿದೆ ಎಂದರು.

ಗ್ರಹಣದ ಸಮಯದಲ್ಲಿ ತಂತ್ರಪ್ರಕಾರವಾಗಿ, 6:26ರ ಸಮಯದಲ್ಲಿ ಚಂದ್ರೋದಯವಾಗುತ್ತದೆ. ಮತ್ತು 6:26 ರಿಂದ 6:47 ರವರೆಗೆ ಗ್ರಹಣದ ಅವಧಿ ಇರುತ್ತದೆ. ಈ ಅವಧಿಯಲ್ಲಿ ಕಣ್ಣಿಗೆ ದೃಶ್ಯವಾಗುವ ಗ್ರಹಣವನ್ನು ನೀವು ಅನುಭವಿಸಬಹುದು ಅಂತ ತಿಳಿಸಿದ್ದಾರೆ. ಅಲ್ಲದೇ ಗ್ರಹಣದ ಅನುಷ್ಠಾನವನ್ನು ಈ ಸಮಯದಲ್ಲಿ ಮಾತ್ರ ಮಾಡುವುದಾದ್ದರಿಂದ, 6:26 ರಿಂದ 6:47 ರವರೆಗೆ 21 ನಿಮಿಷಗಳ ಅವಧಿಯಲ್ಲೇ ಅನುಷ್ಠಾನವನ್ನು ಮಾಡುವುದು ಶ್ರೇಯಕರಾಗುತ್ತದೆ ಎಂದು ವಾದಿರಾಜಾಚಾರ್ಯರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Lunar Eclipse: ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!

ಬರೀ ಇದಷ್ಟೇ ಅಲ್ಲ, ರಾಯರ ಮಠದಲ್ಲಿ ನಾಳೆ ಗ್ರಹಣದ ವೇಳೆ ವಿಶೇಷ ಹೋಮ-ಹವನಗಳು ನಡೆಯಲಿದ್ದು, ಅದರಲ್ಲಿ ಭಕ್ತರು ಮುಕ್ತವಾಗಿ ಭಾಗವಹಿಸಲು ಅವಕಾಶವೂ ಇದೆ. ಇತ್ತ ಗ್ರಹಣದ ಬಳಿಕ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿ ರಾಯರ ದರ್ಶನ ಪಡೆಯುವ ವಾಡಿಕೆಯೂ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!
ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!
ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ
ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ
ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು
ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು