ತಮಿಳುನಾಡು: 67 ಕೆಜಿ ತೂಕದ ಅರಿಶಿನ ಮಾಲೆ, ಕೈಯಲ್ಲೇ ನೇಯ್ದ ಶಾಲು, ಈರೋಡ್​ನ ಜನತೆ ಮೋದಿಯನ್ನು ಸ್ವಾಗತಿಸಿದ್ದು ಹೀಗೆ

|

Updated on: Feb 28, 2024 | 7:57 AM

ತಮಿಳುನಾಡಿನ ಜನತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 67 ಕೆಜಿ ಅರಿಶಿನದ ಹಾರ, ಕೈಯಿಂದ ಮಾಡಿದ ಶಾಲು ಮತ್ತು ಜಲ್ಲಿಕಟ್ಟು ಗೂಳಿಯ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಪಲ್ಲಡಂನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

ತಮಿಳುನಾಡು: 67 ಕೆಜಿ ತೂಕದ ಅರಿಶಿನ ಮಾಲೆ, ಕೈಯಲ್ಲೇ ನೇಯ್ದ ಶಾಲು, ಈರೋಡ್​ನ ಜನತೆ ಮೋದಿಯನ್ನು ಸ್ವಾಗತಿಸಿದ್ದು ಹೀಗೆ
ನರೇಂದ್ರ ಮೋದಿ
Follow us on

ಲೋಕಸಭೆ ಚುನಾವಣೆ(Lok Sabha Election)ಯ ರಣಕಹಳೆ ಮೊಳಗಿದೆ, ಪ್ರಧಾನಿ ನರೇಂದ್ರ ಮೋದಿ(Narendra Modi) ತಮಿಳುನಾಡಿನ ಈರೋಡ್​ಗೆ ತಲುಪುತ್ತಿದ್ದಂತೆ ಜನರು 67 ಕೆಜಿ ತೂಕದ ಅರಿಶಿನ ಮಾಲೆ, ಕೈಯಲ್ಲೇ ನೇಯ್ದ ಶಾಲಿನೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ದಕ್ಷಿಣದ ರಾಜ್ಯಗಳ ಪ್ರವಾಸದಲ್ಲಿದ್ದಾರೆ. ಅದರಲ್ಲೂ ಅವರ ತಮಿಳುನಾಡಿಗೆ ಭೇಟಿ ನೀಡುವುದು ಅತ್ಯಂತ ಮಹತ್ವದ್ದು ಎಂದು ಪರಿಗಣಿಸಲಾಗಿದ್ದು, ಇಲ್ಲಿ ಬಿಜೆಪಿ ಯಾವುದೇ ಮೈತ್ರಿ ಇಲ್ಲದೆ ಈ ಬಾರಿ ಕ್ಷೇತ್ರಕ್ಕೆ ಇಳಿಯಲು ಸಿದ್ಧತೆ ನಡೆಸಿದೆ.

ಪ್ರಮುಖ ಪಕ್ಷಗಳಾದ ದ್ರಾವಿಡ ಮುನ್ನೇತ್ರ ಕಳಗಂ ಅಂದರೆ ಡಿಎಂಕೆ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಇನ್ನೂ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿವೆ.

ಪ್ರಧಾನಿಗೆ 67 ಕೆಜಿ ಅರಿಶಿನ ಮಾಲೆಯನ್ನು ನೀಡಲಾಯಿತು
ಅರಿಶಿನ ಮಂಡಳಿ ಸ್ಥಾಪನೆಗೆ ಧನ್ಯವಾದ ಅರ್ಪಿಸಲು ಈರೋಡ್‌ನ ಜನರು ಪ್ರಧಾನಿಯವರಿಗೆ 67 ಕೆಜಿ ಅರಿಶಿನ ಮಾಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈರೋಡ್ ಪ್ರದೇಶವು ಅರಿಶಿನ ಕೃಷಿಗೆ ಹೆಸರುವಾಸಿಯಾಗಿದೆ. ಮಂಡಳಿ ಸ್ಥಾಪನೆಗೆ ಎನ್ ಡಿಎ ಸರ್ಕಾರದ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ರಫ್ತು ಹೆಚ್ಚಳವಾಗಲಿದೆ ಎಂಬುದು ಅಲ್ಲಿನ ರೈತರ ಅಭಿಪ್ರಾಯ.

ಬುಡಕಟ್ಟು ಸಮುದಾಯದವರು ಕೃತಜ್ಞತೆ ಸಲ್ಲಿಸಿದರು
ಅರಿಶಿನ ಮಾತ್ರವಲ್ಲದೆ, ಮಹಿಳಾ ಸ್ವಸಹಾಯ ಗುಂಪುಗಳು ನೀಲಗಿರಿಯ ಬುಡಕಟ್ಟು ಸಮುದಾಯದ ಕೈಯಿಂದ ಮಾಡಿದ ಶಾಲುಗಳನ್ನು ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಿ ಕೃತಜ್ಞತೆ ಸಲ್ಲಿಸಿದರು. ಯುಪಿಎ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಜಲ್ಲಿಕಟ್ಟು ನಿಷೇಧಿಸಿದ ನಂತರ ಜಲ್ಲಿಕಟ್ಟುವನ್ನು ಮರಳಿ ತಂದಿದ್ದಕ್ಕಾಗಿ ಧನ್ಯವಾದ ಅರ್ಪಿಸಲು ಜಲ್ಲಿಕಟ್ಟು ಗೂಳಿಯ ಪ್ರತಿಕೃತಿಯನ್ನು ಪ್ರಧಾನಿಗೆ ನೀಡಲಾಯಿತು.

ಮತ್ತಷ್ಟು ಓದಿ: ಇಂಡಿಯಾ ಬಣದ ಪಕ್ಷಗಳು ಸೋಲೊಪ್ಪಿಕೊಂಡಿವೆ: ತಮಿಳುನಾಡಿನಲ್ಲಿ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರದಲ್ಲಿಲ್ಲ, ಆದರೆ ರಾಜ್ಯ ಯಾವಾಗಲೂ ಬಿಜೆಪಿಯ ಹೃದಯದಲ್ಲಿದೆ. ತಮಿಳುನಾಡು ಜತೆಗಿನ ಸಂಬಂಧ ರಾಜಕೀಯವಲ್ಲ, ಹೃದಯ ಸಂಬಂಧಿ ಎಂದು ಹೇಳಿದ್ದಾರೆ.

ತಮಿಳುನಾಡಿನೊಂದಿಗಿನ ಅವರ ಸಂಬಂಧ ದಶಕಗಳ ಹಿಂದಿನದು. ದೆಹಲಿಯ ಎಸಿ ರೂಂಗಳಲ್ಲಿ ಕುಳಿತು ದೇಶದ ಅಖಂಡತೆಯನ್ನು ಒಡೆಯುವ ಕನಸು ಕಾಣುವವರು ಇಲ್ಲಿಗೆ ಬಂದು ನೋಡಬೇಕಾಗಿದೆ ಎಂದರು. ತಮಿಳುನಾಡು ಅವರ ಕಣ್ಣೆದುರೇ ಭಾರತದ ಭವಿಷ್ಯವನ್ನು ರೂಪಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ