ಲೋಕಸಭಾ ಚುನಾವಣೆ 2024: ನಾಮಪತ್ರ ಸಲ್ಲಿಕೆಗೂ ಮುನ್ನ ಇಂದು ವಾರಾಣಸಿಯಲ್ಲಿ ಪ್ರಧಾನಿ ಮೋದಿ ರೋಡ್​ ಶೋ

|

Updated on: May 13, 2024 | 11:27 AM

ಪ್ರಧಾನಿ ಮೋದಿ ವಾರಾಣಸಿಯಿಂದ ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್​ ಶೋ ನಡೆಸಲಿದ್ದಾರೆ. ಇಂದು ಬಿಎಚ್​ಯು ಸಿಂಗ್​ದ್ವಾರದಿಂದ ವಿಶ್ವನಾಥ್ ಧಾಮದವರೆಗೆ ರೋಡ್​ ಶೋ ನಡೆಸಲಿದೆ. 2014,2019ರ ನಂತರ ಪ್ರಧಾನಿ ಮತ್ತೊಮ್ಮೆ 2024ರಲ್ಲಿ ವಾರಾಣಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ.

ಲೋಕಸಭಾ ಚುನಾವಣೆ 2024: ನಾಮಪತ್ರ ಸಲ್ಲಿಕೆಗೂ ಮುನ್ನ ಇಂದು ವಾರಾಣಸಿಯಲ್ಲಿ ಪ್ರಧಾನಿ ಮೋದಿ ರೋಡ್​ ಶೋ
ನರೇಂದ್ರ ಮೋದಿ
Image Credit source: Hindustan Times
Follow us on

ಮೂರನೇ ಬಾರಿಗೆ ಲೋಕಸಭಾ ಚುನಾವಣೆ(Lok Sabha Election)ಯಲ್ಲಿ ಸ್ಪರ್ಧಿಸಲು ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಕಾಶಿಗೆ ಆಗಮಿಸುತ್ತಿದ್ದು ಸಂಜೆ ರೋಡ್​ ಶೋ ನಡೆಸಲಿದ್ದಾರೆ. ವಾರಾಣಸಿ(Varanasi)ಯಲ್ಲಿ ಮೇ 14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅದಕ್ಕೂ ಮುನ್ನ ಮೋದಿ ರೋಡ್​ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿಯವರನ್ನು ಬರಮಾಡಿಕೊಳ್ಳಲು ವಾರಾಣಸಿ ಸಜ್ಜಾಗಿದೆ.

ಇಂದು ಬಿಎಚ್​ಯು ಸಿಂಗ್​ದ್ವಾರದಿಂದ ವಿಶ್ವನಾಥ್ ಧಾಮದವರೆಗೆ ರೋಡ್​ ಶೋ ನಡೆಸಲಿದೆ. 2014,2019ರ ನಂತರ ಪ್ರಧಾನಿ ಮತ್ತೊಮ್ಮೆ 2024ರಲ್ಲಿ ವಾರಾಣಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ತಮ್ಮ ಎರಡು ದಿನಗಳ ಕಾರ್ಯಕ್ರಮದಲ್ಲಿ ಅವರು ಬಿಹಾರ ಹಾಗೂ ಜಾರ್ಖಂಡ್​ನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಮೇ 13ರಂದು ಸಂಜೆ 4 ಗಂಟೆಗೆ ಬಬತ್​ಪುರ ವಿಮಾನ ನಿಲ್ದಾಣ ತಲುಪಲಿದ್ದಾರೆ.

ಇಲ್ಲಿಂದ ಸೇನಾ ಹೆಲಿಕಾಪ್ಟರ್​ ಬಿಎಚ್​ಯು ಹೆಲಿಪ್ಯಾಡ್ ತಲುಪಲಿದೆ. ಅಲ್ಲಿಂದ ತೆರೆದ ವಾಹನದಲ್ಲಿ ಮೋದಿ ಲಂಕಾದ ಸಿಂಗ್​ದ್ವಾರಕ್ಕೆ ಬರಲಿದ್ದಾರೆ. ಇಲ್ಲಿ 5 ಗಂಟೆಗೆ ಮಾಳವೀಯರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಹಾಮಾನ ಪಂಡಿತ ವಿಶ್ವನಾಥ್ ಧಾಮವನ್ನು ತಲುಪಲು ಸುಮಾರು 4 ಗಂಟೆಗಳು ಬೇಕಾಗುತ್ತದೆ. ವಿಶ್ವನಾಥ ದೇಗುಲದಲ್ಲಿ ಷೋಡಶೋಪಚಾರ ದರ್ಶನ ಹಾಗೂ ಪೂಜೆ ಸಲ್ಲಿಸಿದ ಬಳಿಕ ರಸ್ತೆ ಮಾರ್ಗವಾಗಿ ಬರೇಕ ಅತಿಥಿಗೃಹಕ್ಕೆ ತೆರಳಲಿದ್ದಾರೆ.

ಮತ್ತಷ್ಟು ಓದಿ: Lok Sabha Elections 2024: ಮಹಿಳಾ ಸಬಲೀಕರಣ ನನ್ನ ಬದ್ಧತೆ; ಪ್ರಧಾನಿ ನರೇಂದ್ರ ಮೋದಿ

ಮೇ14ರಂದು ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸೇರಿದಂತೆ 12 ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿರಲಿದ್ದಾರೆ. ಇದಲ್ಲದೆ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್ ಸೇರಿದಂತೆ ಅನೇಕ ಕೇಂದ್ರ ಸಚಿವರೂ ಇರಲಿದ್ದಾರೆ.

ಪ್ರಿಯಾಂಕಾ, ರಾಹುಲ್ ಮತ್ತು ಖರ್ಗೆ ಸಭೆಗಳು
ಕಾಂಗ್ರೆಸ್ ಕೂಡ ಲೋಕಸಭೆ ಚುನಾವಣೆಗೆ ಸಂಪೂರ್ಣ ಒತ್ತು ನೀಡಿದೆ. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸೋಮವಾರ ಅಮೇಥಿಗೆ ಬರಲಿದ್ದಾರೆ. ಸಂಗ್ರಾಮಪುರ, ಟಿಕರ್ಮಾಫಿ ಹಾಗೂ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಪರ ಪ್ರಚಾರ ನಡೆಸಲಿದ್ದಾರೆ. ಅಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಝಾನ್ಸಿ ತಲುಪಲಿದ್ದಾರೆ. ಝಾನ್ಸಿಯ ಕ್ರಾಫ್ಟ್ ಮೇಳ ಮೈದಾನದಲ್ಲಿ ಮಧ್ಯಾಹ್ನ 2:30ಕ್ಕೆ ಅಭ್ಯರ್ಥಿ ಪ್ರದೀಪ್ ಜೈನ್ ಆದಿತ್ಯ ಪರ ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಉತ್ತರ ಪ್ರದೇಶ ಚುನಾವಣಾ ಕ್ಷೇತ್ರದಲ್ಲಿ ಪ್ರಯತ್ನ ನಡೆಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯಾಹ್ನ 12.15ಕ್ಕೆ ಮಹಾರಾಜಗಂಜ್‌ಗೆ ತೆರಳಲಿದ್ದಾರೆ. ಅಲ್ಲಿ ಅಭ್ಯರ್ಥಿ ಶಾಸಕ ವೀರೇಂದ್ರ ಚೌಧರಿ ಪರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಾದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಧ್ಯಾಹ್ನ 2.30ಕ್ಕೆ ಗೋರಖ್‌ಪುರದ ಸರ್ವೋದಯ ಕಿಸಾನ್ ಇಂಟರ್ ಕಾಲೇಜಿಗೆ ತೆರಳಲಿದ್ದಾರೆ. ಅಲ್ಲಿ ಅಭ್ಯರ್ಥಿ ಸದಲ್ ಪ್ರಸಾದ್ ಪರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:27 am, Mon, 13 May 24