AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಿಣಿಯರಿಗೆ ಗುಡ್​ ನ್ಯೂಸ್​: LPG ಗ್ಯಾಸ್​ ಸಿಲಿಂಡರ್​ ಬೆಲೆ ಕಡಿಮೆಯಾಗುವ ಲೆಕ್ಕಾಚಾರವಿದೆ!

ದೆಹಲಿ: ಲಾಕ್​ಡೌನ್​ ತಂದೊಡ್ಡಿರುವ ಆರ್ಥಿಕ ಸಂಕಷ್ಟ ಜನರ ಜೇಬಿಗೆ ಸಾಕಷ್ಟು ಹೊಡೆತ ಬಿದ್ದಿದೆ. ಉದ್ಯೋಗ ಕಳೆದುಕೊಂಡ ಕೆಲವರು ಇದ್ದರೆ, ಮತ್ತಷ್ಟು ಜನರ ಆದಾಯದ ಮೂಲ ಬತ್ತು ಹೋಗಿ ಪರದಾಡುವ ಸ್ಥಿತಿ ಎದುರಾಗಿದೆ. ಆದರೆ, ಇದೀಗ ಕೇಂದ್ರ ಸರ್ಕಾರ ಜನರಿಗೆ ಸಂಕಷ್ಟದಿಂದ ಕೊಂಚ ರಿಲೀಫ್​ ನೀಡಲು ಮುಂದಾಗಿದೆ. ಹೌದು, ಕೇಂದ್ರ ಸರ್ಕಾರ ಇದೀಗ ದ್ರವೀಕೃತ ಪೆಟ್ರೋಲಿಯಮ್​ ಅನಿಲ (LPG )​ ಸಿಲಿಂಡರ್​ಗಳ ಬೆಲೆಯನ್ನ ಮತ್ತಷ್ಟು ಅಗ್ಗಗೊಳಿಸಲು ಚಿಂತನೆ ನಡೆಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಸರ್ಕಾರವು LPG ಅನಿಲದ ಪರಿಷ್ಕೃತ […]

ಗೃಹಿಣಿಯರಿಗೆ ಗುಡ್​ ನ್ಯೂಸ್​: LPG ಗ್ಯಾಸ್​ ಸಿಲಿಂಡರ್​ ಬೆಲೆ ಕಡಿಮೆಯಾಗುವ ಲೆಕ್ಕಾಚಾರವಿದೆ!
KUSHAL V
| Edited By: |

Updated on:Aug 17, 2020 | 6:30 PM

Share

ದೆಹಲಿ: ಲಾಕ್​ಡೌನ್​ ತಂದೊಡ್ಡಿರುವ ಆರ್ಥಿಕ ಸಂಕಷ್ಟ ಜನರ ಜೇಬಿಗೆ ಸಾಕಷ್ಟು ಹೊಡೆತ ಬಿದ್ದಿದೆ. ಉದ್ಯೋಗ ಕಳೆದುಕೊಂಡ ಕೆಲವರು ಇದ್ದರೆ, ಮತ್ತಷ್ಟು ಜನರ ಆದಾಯದ ಮೂಲ ಬತ್ತು ಹೋಗಿ ಪರದಾಡುವ ಸ್ಥಿತಿ ಎದುರಾಗಿದೆ. ಆದರೆ, ಇದೀಗ ಕೇಂದ್ರ ಸರ್ಕಾರ ಜನರಿಗೆ ಸಂಕಷ್ಟದಿಂದ ಕೊಂಚ ರಿಲೀಫ್​ ನೀಡಲು ಮುಂದಾಗಿದೆ.

ಹೌದು, ಕೇಂದ್ರ ಸರ್ಕಾರ ಇದೀಗ ದ್ರವೀಕೃತ ಪೆಟ್ರೋಲಿಯಮ್​ ಅನಿಲ (LPG )​ ಸಿಲಿಂಡರ್​ಗಳ ಬೆಲೆಯನ್ನ ಮತ್ತಷ್ಟು ಅಗ್ಗಗೊಳಿಸಲು ಚಿಂತನೆ ನಡೆಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಸರ್ಕಾರವು LPG ಅನಿಲದ ಪರಿಷ್ಕೃತ ದರವನ್ನ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಮಾಡಲು ಮುಂದಾಗಿದೆ.

ಇದು ಅಕ್ಟೋಬರ್​ ತಿಂಗಳ ಲೆಕ್ಕಾಚಾರಕ್ಕೆ ಪ್ರತಿ ಮಿಲಿಯನ್​ ಬ್ರಿಟಿಷ್​ ಥರ್ಮಲ್​ ಯೂನಿಟ್ಸ್​ಗೆ (MMBtu) ಕೇಂದ್ರ ಸರ್ಕಾರವು ಅಕ್ಟೋಬರ್​ ತಿಂಗಳ ಖಾತೆಗೆ 1.94 ಡಾಲರ್ ದರ ನಿಗದಿ ಮಾಡಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ನಿಗದಿಯಾಗಿರುವ ಅತ್ಯಂತ ಕಡಿಮೆ ದರ ಎಂದು ತಿಳಿದುಬಂದಿದೆ. ಹೀಗಾಗಿ, ಪ್ರತಿ LPG ಸಿಲಿಂಡರ್​ನ ಬೆಲೆ ಮತ್ತಷ್ಟು ಅಗ್ಗ ಆಗಲಿದೆಯಂತೆ.

ಇನ್ನು ಪರಿಷ್ಕೃತ ದರ ಅಕ್ಟೋಬರ್​ 1ರಿಂದ ಜಾರಿಗೆ ಬರುವ ಸಾಧ್ಯತೆಯಿದ್ದು ಇದರಿಂದ ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆ ಕಡಿಮೆ ಆಗಲಿದೆ. ಆದರೆ, ಕೇಂದ್ರದ ಈ ನಿರ್ಧಾರದಿಂದ ಸರ್ಕಾರಿ ನೈಸರ್ಗಿಕ ತೈಲ ಉತ್ಪಾದಕ ONGC ಕಂಪನಿಗೆ ಮತ್ತಷ್ಟು ಆರ್ಥಿಕ ಹೊರೆ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಪರಿಷ್ಕೃತ ದರದಿಂದ ONGC ಸುಮಾರು 6,000 ಕೋಟಿ ರೂಪಾಯಿ ನಷ್ಟ ಅನುಭವಿಸುವ ಸ್ಥಿತಿ ಕಾಣಬಹುದು ಎಂದು ಅಂದಾಜಿಸಿದ್ದಾರೆ.

Published On - 6:30 pm, Mon, 17 August 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!