AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Madhya Pradesh: ಮದುವೆ ಮೆರವಣಿಗೆಯಲ್ಲಿ ಡ್ರೈವಿಂಗ್ ಬಾರದವನಿಗೆ ಜೀಪ್​ನ ಕೀ ಕೊಟ್ಟ ವ್ಯಕ್ತಿ, ದುರಂತವೇ ನಡೆದುಹೋಯ್ತು

ಖುಷಿ ಖುಷಿಯಿಂದ ಇರಬೇಕಿದ್ದ ಮದುವೆ ಮನೆಯು ಕ್ಷಣದಲ್ಲೇ ಸ್ಮಶಾನವಾಗಿ ಹೋಯಿತು, ವ್ಯಕ್ತಿಯೊಬ್ಬನ ಅಜಾಗರೂಕತೆಯಿಂದ ಇಬ್ಬರ ಪ್ರಾಣವೇ ಹೋಯ್ತು

Madhya Pradesh: ಮದುವೆ ಮೆರವಣಿಗೆಯಲ್ಲಿ ಡ್ರೈವಿಂಗ್ ಬಾರದವನಿಗೆ ಜೀಪ್​ನ ಕೀ ಕೊಟ್ಟ ವ್ಯಕ್ತಿ, ದುರಂತವೇ ನಡೆದುಹೋಯ್ತು
ಪೊಲೀಸ್ ವಾಹನImage Credit source: NDTV
ನಯನಾ ರಾಜೀವ್
|

Updated on: Feb 24, 2023 | 8:22 AM

Share

ಖುಷಿ ಖುಷಿಯಿಂದ ಇರಬೇಕಿದ್ದ ಮದುವೆ ಮನೆಯು ಕ್ಷಣದಲ್ಲೇ ಸ್ಮಶಾನವಾಗಿ ಹೋಯಿತು, ವ್ಯಕ್ತಿಯೊಬ್ಬನ ಅಜಾಗರೂಕತೆಯಿಂದ ಇಬ್ಬರ ಪ್ರಾಣವೇ ಹೋಯ್ತು. ಅಂದು ಮದುವೆಯ ದಿಬ್ಬಣ ತೆರಳುತ್ತಿತ್ತು, ರಸ್ತೆಯಲ್ಲಿ 30-40 ಮಂದಿ ಹಾಡುತ್ತಾ, ಕುಣಿಯುತ್ತಾ, ಒಬ್ಬರೊನ್ನಬ್ಬರು ಕಾಲು ಎಳೆಯುತ್ತಾ ಸಂತಸದಿಂದಿದ್ದ ಕ್ಷಣ. ಜೀಪ್​ನ ಚಾಲಕನೊಬ್ಬ ತಾನೂ ಆ ಮೆರವಣಿಗೆಯಲ್ಲಿ ಎಂಜಾಯ್ ಮಾಡಬೇಕೆಂದು ಹೇಳಿ ಚಾಲನೆಯೇ ಬಾರದ ವ್ಯಕ್ತಿಯ ಕೈಗೆ ಜೀಪ್​ನ ಕೀ ಕೊಟ್ಟು ತಾನು ಡ್ಯಾನ್ಸ್ ಮಾಡಲು ತೆರಳಿದ.

ಆತ ಸ್ವಲ್ಪ ದೂರದವರೆಗೆ ನಿಧಾನವಾಗಿ ಜೀಪ್ ಚಲಾಯಿಸಿದ್ದಾನೆ, ನಂತರ ವೇಗ ಹೆಚ್ಚಾಗಿ ಅದು ಹತ್ತಾರು ಜನರ ಮೇಲೆ ಹತ್ತಿತ್ತು. ಬಳಿಕ ಇಬ್ಬರು ಮೃತಪಟ್ಟಿದ್ದು 8ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ, ಆ ಚಾಲಕನ ಅಜಾಗರೂಕತೆಯಿಂದ ಎರಡು ಮುಗ್ದ ಜೀವಗಳು ಬಲಿಯಾಗಿವೆ. ಗಾಯಗೊಂಡಿರುವ ಇತರರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್​ಗೆ ಕಳುಹಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಸಮಯದಲ್ಲಿ ಜೀಪ್​ನಲ್ಲಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ