ಉತ್ತರಾಖಂಡ್​​ನಲ್ಲಿ ಭೀಕರ ಅಪಘಾತ; ಆಳವಾದ ಕಂದಕಕ್ಕೆ ಬಿದ್ದ ವಾಹನ, 13 ಮಂದಿ ದುರ್ಮರಣ

| Updated By: Lakshmi Hegde

Updated on: Oct 31, 2021 | 11:28 AM

ಇದೊಂದು ಯುಟಿಲಿಟಿ ವಾಹನವಾಗಿದ್ದು ಡೆಹ್ರಾಡೂನ್​​ನ ಬೈಲಾ ಗ್ರಾಮದಿಂದ ವಿಕಾಸನಗರಕ್ಕೆ ಹೋಗುತ್ತಿದ್ದಾಗ ಚಕ್ರತಾ ಬಳಿ ಕಲ್ಲಿನಿಂದ ಕೂಡಿದ ಕಂದಕಕ್ಕೆ ಬಿದ್ದಿದೆ. ಇದರಲ್ಲಿ ಸುಮಾರು 16 ಜನರಿದ್ದರು ಎಂದು ಮಾಹಿತಿ ಸಿಕ್ಕಿದೆ.

ಉತ್ತರಾಖಂಡ್​​ನಲ್ಲಿ ಭೀಕರ ಅಪಘಾತ; ಆಳವಾದ ಕಂದಕಕ್ಕೆ ಬಿದ್ದ ವಾಹನ, 13 ಮಂದಿ ದುರ್ಮರಣ
ಅಪಘಾತ ನಡೆದ ಸ್ಥಳ
Follow us on

ಡೆಹ್ರಾಡೂನ್​: ಉತ್ತರಾಖಂಡ್​​ನ ರಾಜಧಾನಿ ಡೆಹ್ರಾಡೂನ್​ನಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ನಡೆದಿದೆ. ಇಲ್ಲಿನ ಚಕ್ರತಾ ಪ್ರದೇಶದ ಬುಲ್ಹಾದ್​-ಬೈಲಾ ರಸ್ತೆಯಲ್ಲಿ ವಾಹವೊಂದು ಕಂದಕಕ್ಕೆ ಬಿದ್ದ ಪರಿಣಾಮ 13 ಮಂದಿ ದುರ್ಮರಣಹೊಂದಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದೊಂದು ಯುಟಿಲಿಟಿ ವಾಹನವಾಗಿದ್ದು ಡೆಹ್ರಾಡೂನ್​​ನ ಬೈಲಾ ಗ್ರಾಮದಿಂದ ವಿಕಾಸನಗರಕ್ಕೆ ಹೋಗುತ್ತಿದ್ದಾಗ ಚಕ್ರತಾ ಬಳಿ ಕಲ್ಲಿನಿಂದ ಕೂಡಿದ ಕಂದಕಕ್ಕೆ ಬಿದ್ದಿದೆ. ಇದರಲ್ಲಿ ಸುಮಾರು 16 ಜನರಿದ್ದರು ಎಂದು ಮಾಹಿತಿ ಸಿಕ್ಕಿದೆ. ಮೃತದೇಹಗಳನ್ನು ಕಂದಕದಿಂದ ಹೊರಗೆ ತೆಗೆಯಲಾಗಿದೆ. ಈ ಪ್ರದೇಶ ಸ್ವಲ್ಪ ದುರ್ಗಮವಾಗಿದ್ದರಿಂದ ರಕ್ಷಣಾ ತಂಡಗಳು ಅಲ್ಲಿಗೆ ತಲುಪಲು ವಿಳಂಬವಾಯಿತು. ಆದರೆ ಸ್ಥಳೀಯ ಜನರು ಸುಮ್ಮನೆ ಕೂರಲಿಲ್ಲ. ಗ್ರಾಮಸ್ಥರೇ ಸೇರಿಕೊಂಡು ರಕ್ಷಣಾ ಕಾರ್ಯ ನಡೆಸಿದರು. ಸದ್ಯ ಸ್ಥಳಕ್ಕೆ ಪೊಲೀಸರು, ಎಸ್​ಡಿಆರ್​ಎಫ್​ ಸಿಬ್ಬಂದಿ, ಜಿಲ್ಲಾಧಿಕಾರಿ ಸೇರಿ ಹಲವು ಧಾವಿಸಿದ್ದಾರೆ.  ಹಾಗೇ ಪ್ರತಿಪಕ್ಷ ನಾಯಕ ಪ್ರೀತಂ ಸಿಂಗ್​ ಕೂಡ ಸ್ಥಳಕ್ಕೆ ತೆರಳಿ, ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಸರ್ಕಾರಿ ಕಚೇರಿಗಳನ್ನು ಗಲ್ಲ ಮಂಡಿಗಳನ್ನಾಗಿ ಪರಿವರ್ತಿಸುವ ಎಚ್ಚರಿಕೆ ನೀಡಿದ ರಾಕೇಶ್​ ಟಿಕಾಯತ್​

Coronavirus cases in India: ಭಾರತದಲ್ಲಿ 12,830 ಹೊಸ ಕೊವಿಡ್ ಪ್ರಕರಣ ಪತ್ತೆ, 446 ಮಂದಿ ಸಾವು

Published On - 11:27 am, Sun, 31 October 21