ಕುಡಿದ ನಶೆಯಲ್ಲಿ ಅಪರಿಚಿತನಿಗೆ ಕಾರು ಕೊಟ್ಟು ಮೆಟ್ರೋ ಮೂಲಕ ಮನೆಗೆ ಬಂದ ಯುವಕ

ವ್ಯಕ್ತಿಯೊಬ್ಬ ಕುಡಿದ ನಶೆಯಲ್ಲಿ ಅಪರಿಚಿತನಿಗೆ ಕಾರು ಕೊಟ್ಟು, ತಾನು ಮೆಟ್ರೋ ಮೂಲಕ ಮನೆಗೆ ಬಂದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಆತ ದೆಹಲಿಯ ಗ್ರೇಟರ್ ಕೈಲಾಶ್​-2ನಲ್ಲಿ ವಾಸಿಸುತ್ತಿದ್ದರು.

ಕುಡಿದ ನಶೆಯಲ್ಲಿ ಅಪರಿಚಿತನಿಗೆ ಕಾರು ಕೊಟ್ಟು ಮೆಟ್ರೋ ಮೂಲಕ ಮನೆಗೆ ಬಂದ ಯುವಕ
ಮದ್ಯಪಾನ ಆರೋಗ್ಯಕ್ಕೆ ಹಾನಿಕರ
Image Credit source: iStock

Updated on: Jun 13, 2023 | 8:30 AM

ವ್ಯಕ್ತಿಯೊಬ್ಬ ಕುಡಿದ ನಶೆಯಲ್ಲಿ ಅಪರಿಚಿತನಿಗೆ ಕಾರು ಕೊಟ್ಟು, ತಾನು ಮೆಟ್ರೋ ಮೂಲಕ ಮನೆಗೆ ಬಂದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಆತ ದೆಹಲಿಯ ಗ್ರೇಟರ್ ಕೈಲಾಶ್​-2ನಲ್ಲಿ ವಾಸಿಸುತ್ತಿದ್ದರು. ಅಂದು ಕುಡಿಯುವ ಮನಸ್ಸಾಯಿತೆಂದು ಕೆಲಸ ಮುಗಿಸಿ ಗುರುಗ್ರಾಮಕ್ಕೆ ತೆರಳಿದ್ದಾರೆ. ಅಪರಿಚಿತನ ಜತೆಗೆ ಕುಳಿತು ಕುಡಿದಿದ್ದಾರೆ. ಆತನಿಗೆ ಎಚ್ಚರವಾದಾಗ ಕಾರು ಇಲ್ಲದಿರುವುದು ಗೊತ್ತಾಗಿದೆ. ಬಳಿಕ ಮೆಟ್ರೋ ಏರಿ ಮನೆಗೆ ತಲುಪಿದ್ದಾರೆ.
ವ್ಯಕ್ತಿ ಮತ್ತೊಬ್ಬ ಅಪರಿಚಿತ ಇಬ್ಬರೂ ಕಾರಿನಲ್ಲಿಯೇ ಕುಡಿದಿದ್ದಾರೆ, ಬಳಿಕ ಆತ ಕಾರಿನಿಂದ ಇಳಿಯುವಂತೆ ಈತನಿಗೆ ಹೇಳಿದ್ದಾನೆ ಇವರಿಗೆ ಅದು ತನ್ನ ಸ್ವಂತ ಕಾರು ಎಂಬ ಅರಿವಿಲ್ಲದೆ ಕಾರಿನಿಂದ ಇಳಿದಿದ್ದಾರೆ.

ಬಳಿಕ ಆತ ಕಾರು ಕದ್ದು ಪರಾರಿಯಾಗಿದ್ದಾರೆ, ಅದರಲ್ಲಿ ಲ್ಯಾಪ್​ಟಾಪ್, ಮೊಬೈಲ್, 18 ಸಾವಿರ ರೂ ನಗದು ಇತ್ತು ಎಂದು ಪ್ರಕಾಶ್ ಹೇಳಿದ್ದಾರೆ.
ಪೊಲೀಸರು ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 379 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮದ್ಯದ ಅಮಲಿನಲ್ಲಿ ಎಣ್ಣೆಗೆ 20,000 ರೂಪಾಯಿ ನೀಡಿದ್ದೆ. ಬಾಟಲಿ ಕೇವಲ 2 ಸಾವಿರ ರೂಪಾಯಿದ್ದಾಗಿತ್ತು.

ಅಂಗಡಿ ಮಾಲೀಕರು ನನಗೆ 18,000 ರೂಪಾಯಿ ನಗದು ವಾಪಸ್ ಕೊಟ್ಟಿದ್ದರು. ಇದಾದ ನಂತರ ನಾನು ನನ್ನ ಕಾರಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದೆ. ಅಷ್ಟರಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಬಂದು ಒಟ್ಟಿಗೆ ಡ್ರಿಂಕ್ಸ್ ಮಾಡೋಣ ಎಂದು ಕೇಳಿದ್ದ ನಾನು ಒಪ್ಪಿಕೊಂಡೆ.
ಇದಾದ ಬಳಿಕ ಕಾರು ಚಲಾಯಿಸಿಕೊಂಡು ಸುಭಾಷ್ ಚೌಕ್ ತಲುಪಿದ್ದಾಗಿ ಪ್ರಕಾಶ್ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಪ್ರಕಾಶ್​ನನ್ನು ಕಾರಿನಿಂದ ಕೆಳಗಿಳಿಸಿ ಆ ವ್ಯಕ್ತಿ ಕಾರು ಸಮೇತ ಪರಾರಿಯಾಗಿದ್ದಾರೆ.

ಮತ್ತಷ್ಟು ಓದಿ: Mysuru News: ಮೈಸೂರಿನಲ್ಲಿ ಮಾಜಿ ಸಚಿವರ ಕಾರನ್ನೇ ಕದ್ದ ಖದೀಮ, ಕಳ್ಳನ ಕೈಚಳ ಸಿಸಿಟಿವಿಯಲ್ಲಿ ಸೆರೆ

ದೂರುದಾರ ಯುವಕನಿಗೆ ಅಪರಿಚಿತ ವ್ಯಕ್ತಿಯ ಬಗ್ಗೆ ಹೆಚ್ಚು ನೆನಪಿಲ್ಲ ಎಂದು ಗುರುಗ್ರಾಮ್ ಪೊಲೀಸ್ ವಕ್ತಾರ ಸುಭಾಷ್ ಬೋಕನ್ ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಮೂಲಕ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us