AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಹೆಂಡತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಮಗನನ್ನು ವಿವಸ್ತ್ರಗೊಳಿಸಿದ ಗುಂಪು

ಪುರುಷರ ಗುಂಪೊಂದು ಮನೆಗೆ ನುಗ್ಗಿ ಮನೆ ಮಾಲೀಕನನ್ನು ಥಳಿಸಿ ಅವರ ಪತ್ನಿಗೆ ಲೈಂಗಿಕ ಕಿರುಕುಳ ನೀಡಿ ಅವರ ಮಗನನ್ನು ವಿವಸ್ತ್ರಗೊಳಿಸಿ ಥಳಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದುಷ್ಕರ್ಮಿಗಳಿಂದ ಥಳಿತಕ್ಕೊಳಗಾದ ರಾಜೇಶ್ ಗರ್ಗ್ ತನ್ನ ಮನೆಯಲ್ಲಿ ಜಿಮ್ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಮ್‌ನ ಉಸ್ತುವಾರಿ ಸತೀಶ್ ಯಾದವ್ ತಮ್ಮನ್ನು ವಂಚಿಸಿ ವಾಣಿಜ್ಯ ಉದ್ಯಮವನ್ನು ವಹಿಸಿಕೊಂಡಿದ್ದಾರೆ ಎಂದು ಗರ್ಗ್ ಆರೋಪಿಸಿದ್ದಾರೆ.

ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಹೆಂಡತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಮಗನನ್ನು ವಿವಸ್ತ್ರಗೊಳಿಸಿದ ಗುಂಪು
ಕ್ರೈಂ
ನಯನಾ ರಾಜೀವ್
|

Updated on: Jan 05, 2026 | 1:13 PM

Share

ನವದೆಹಲಿ, ಜನವರಿ 05: ದೆಹಲಿ(Delhi)ಯ ಲಕ್ಷ್ಮಿನಗರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬನನ್ನು ಥಳಿಸಿ ಅವರ ಹೆಂಡತಿಗೆ ಲೈಂಗಿಕ ಕಿರುಕುಳ ನೀಡಿ ಮಗನನ್ನು ವಿವಸ್ತ್ರಗೊಳಿಸಿ ಚಿತ್ರಹಿಂಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಜನವರಿ 2 ರಂದು ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಸಿಕ್ಕಿವೆ. ಅವರ ಮಗನನ್ನು ಬೀದಿಯಲ್ಲಿ ಬೆತ್ತಲೆ ಮಾಡಿ ಪುರುಷರ ಗುಂಪೊಂದು ಥಳಿಸಿದೆ.

ದುಷ್ಕರ್ಮಿಗಳಿಂದ ಥಳಿತಕ್ಕೊಳಗಾದ ರಾಜೇಶ್ ಗರ್ಗ್ ತನ್ನ ಮನೆಯಲ್ಲಿ ಜಿಮ್ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಮ್‌ನ ಉಸ್ತುವಾರಿ ಸತೀಶ್ ಯಾದವ್ ತಮ್ಮನ್ನು ವಂಚಿಸಿ ವಾಣಿಜ್ಯ ಉದ್ಯಮವನ್ನು ವಹಿಸಿಕೊಂಡಿದ್ದಾರೆ ಎಂದು ಗರ್ಗ್ ಆರೋಪಿಸಿದ್ದಾರೆ.

ಜನವರಿ 2 ರಂದು, ಗಾರ್ಗ್ ಮತ್ತು ಅವರ ಪತ್ನಿ ನೀರಿನ ಸೋರಿಕೆಯನ್ನು ಪರಿಶೀಲಿಸಲು ನೆಲಮಾಳಿಗೆಗೆ ಹೋಗಿದ್ದರು, ಆಗ ಯಾದವ್ ಮತ್ತು ಕೆಲವರು ಕೂಡ ಅಲ್ಲಿಗೆ ಹೋಗಿದ್ದರು. ಅವರು ತಮಗೆ ಹೊಡೆದು ಒದ್ದು, ತನ್ನ ಹೆಂಡತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗರ್ಗ್ ಹೇಳಿದ್ದಾರೆ. ಅವರ ಮಗ ಅವರನ್ನು ನೋಡಲು ಬಂದಾಗ, ಆ ಪುರುಷರು ಆತನನ್ನು ಹಿಡಿದು, ಮನೆಯ ಹೊರಗಿನ ಬೀದಿಗೆ ಕರೆದೊಯ್ದು ವಿವಸ್ತ್ರಗೊಳಿಸಿದ್ದಾರೆ ಎಂದು ಗರ್ಗ್ ಹೇಳಿದರು.

ವಿಡಿಯೋ ಇಲ್ಲಿದೆ

ಪ್ರಕರಣ ದಾಖಲಾಗಿದ್ದು, ಸತೀಶ್ ಯಾದವ್​ನನ್ನು ಬಂಧಿಸಲಾಗಿದೆ. ವಿಕಾಸ್ ಯಾದವ್, ಶುಭಂ ಯಾದವ್ ಮತ್ತು ಓಂಕಾರ್ ಯಾದವ್ ಎಂಬುವವರು ಪರಾರಿಯಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ