AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹಿತ ಮಹಿಳೆಯಲ್ಲಿ ಮನೆಗೆಲಸ ಮಾಡಲು ಹೇಳಿದರೆ ಅದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಭಾಗ್ಯನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು  ತನ್ನ ಅತ್ತೆ ಮತ್ತು ಪತಿ ವಿರುದ್ಧ ದೂರು ನೀಡಿದ್ದರು, ಮದುವೆಯಾದ ಒಂದು ತಿಂಗಳವರೆಗೆ ತನಗೆ ಚೆನ್ನಾಗಿ ಉಪಚಾರ ಮಾಡಿದರು. ಆದರೆ ನಂತರ ಅವರು ತನ್ನನ್ನು ದಾಸಿಯಂತೆ ನಡೆಸಿಕೊಳ್ಳಲಾರಂಭಿಸಿದರು ಎಂದು ದೂರು ನೀಡಿದ್ದರು.

ವಿವಾಹಿತ ಮಹಿಳೆಯಲ್ಲಿ ಮನೆಗೆಲಸ ಮಾಡಲು ಹೇಳಿದರೆ ಅದು ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್
TV9 Web
| Edited By: |

Updated on:Oct 28, 2022 | 3:28 PM

Share

ವಿವಾಹಿತ ಮಹಿಳೆಗೆ ಮನೆಕೆಲಸ ಮಾಡುವಂತೆ ಕೇಳಿದರೆ, ಅದನ್ನು ಮನೆ ಕೆಲಸದಾಕೆಯ ಕೆಲಸದಂತೆ ನೋಡಬಾರದು. ಇದು ಕ್ರೌರ್ಯವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ (Bombay High Court) ಔರಂಗಾಬಾದ್ ಪೀಠ ಹೇಳಿದೆ. ತನಗೆ ಇಷ್ಟವಿಲ್ಲದಿದ್ದರೆ ಮನೆಕೆಲಸ ಮಾಡುವುದಿಲ್ಲ ಎಂದು ಮದುವೆಗೆ ಮುನ್ನವೇ ಮಹಿಳೆ ಹೇಳಬೇಕು ಎಂದು ನ್ಯಾಯಾಲಯ ಹೇಳಿದೆ. ವಿವಾಹಿತ ಮಹಿಳೆಯಲ್ಲಿ ತಮ್ಮ ಕುಟುಂಬಕ್ಕಾಗಿ ಮನೆಕೆಲಸ ಮಾಡಬೇಕೆಂದು ಕೇಳಿದರೆ ಆಕೆ ಮನೆಕೆಲಸದಾಕೆಯಂತೆ ಎಂದು ಹೇಳಲಾಗುವುದಿಲ್ಲ. ಆಕೆ ತನ್ನ ಮನೆಯ ಕೆಲಸಗಳನ್ನು ಮಾಡಲು ಬಯಸದಿದ್ದರೆ, ಮದುವೆಗೆ ಮುಂಚೆಯೇ ಅವಳು ಅವರಿಗೆ ತಿಳಿಸಬೇಕಾಗಿತ್ತು, ಇದರಿಂದ ವರನು ಮದುವೆಯ ಬಗ್ಗೆ ಮರು ಯೋಚಿಸಬಹುದು ಅಥವಾ ಮದುವೆಯ ಮುಂಚೆಯೇ ವಿಷಯವನ್ನು ಪರಿಹರಿಸಬಹುದು ಎಂದು ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ರಾಜೇಶ್ ಪಾಟೀಲ್ ಅವರ ಪೀಠ ಹೇಳಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅಡಿಯಲ್ಲಿ ಕ್ರೌರ್ಯ ನಡೆದಿದೆ ಎಂದು ಪತ್ನಿ ದಾಖಲಿಸಿದ ಪ್ರಕರಣದ ವಿರುದ್ಧ ಆಕೆಯ ಪತಿ ಮತ್ತು ಅವರ ಕುಟುಂಬ ಸದಸ್ಯರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

ಸೆಕ್ಷನ್ 498A ಹೇಳುವುದೇನೆಂದರೆ ಒಬ್ಬ ಮಹಿಳೆಯ ಗಂಡ ಅಥವಾ ಸಂಬಂಧಿಯು ಅವಳನ್ನು ಕ್ರೌರ್ಯಕ್ಕೆ ಒಳಪಡಿಸಿದರೆ, ಅವರು ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಮತ್ತು ಅವರಿಗೆ ದಂಡ ವಿಧಿಸಲಾಗುತ್ತದೆ. ಸೆಕ್ಷನ್ 498 ಎ ಜೊತೆಗೆ ಪತಿ ವಿರುದ್ಧ ಐಪಿಸಿಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ.

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಭಾಗ್ಯನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು  ತನ್ನ ಅತ್ತೆ ಮತ್ತು ಪತಿ ವಿರುದ್ಧ ದೂರು ನೀಡಿದ್ದರು, ಮದುವೆಯಾದ ಒಂದು ತಿಂಗಳವರೆಗೆ ತನಗೆ ಚೆನ್ನಾಗಿ ಉಪಚಾರ ಮಾಡಿದರು. ಆದರೆ ನಂತರ ಅವರು ತನ್ನನ್ನು ದಾಸಿಯಂತೆ ನಡೆಸಿಕೊಳ್ಳಲಾರಂಭಿಸಿದರು ಎಂದು ದೂರು ನೀಡಿದ್ದರು.

ಮದುವೆಯಾದ ಒಂದು ತಿಂಗಳ ನಂತರ ಆಕೆಯ ಅತ್ತೆ ಮತ್ತು ಪತಿ ಕಾರು ಖರೀದಿಸಲು 4 ಲಕ್ಷ ರೂಪಾಯಿಗೆ ಬೇಡಿಕೆಯಿಡಲು ಪ್ರಾರಂಭಿಸಿದರು, ಅದನ್ನು ತನ್ನ ತಂದೆಗೆ ಭರಿಸಲಾಗುತ್ತಿರಲಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ನಂತರ ಪತಿ ತನಗೆ ಥಳಿಸಿ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಹಿಂದೆ ಮದುವೆಯಾಗಿದ್ದ ಆತನ ಪತ್ನಿ ತನ್ನ ಮೊದಲ ಪತಿ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದಾರೆ ಎಂದು ಆರೋಪಿ ವ್ಯಕ್ತಿ ಮತ್ತು ಆತನ ಕುಟುಂಬದವರು ಪೀಠಕ್ಕೆ ತಿಳಿಸಿದರು. ಅವಳು ಈ ಚಿತ್ರಹಿಂಸೆ ಕತೆಗಳನ್ನು ಹೆಣೆದಿದ್ದಾಳೆ. ಪತ್ನಿಯ ಮೊದಲ ಪತಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದು ವ್ಯಕ್ತಿ ನ್ಯಾಯಾಲಯಕ್ಕೆ ಹೇಳಿದ್ದಾರೆ.

ಮಹಿಳೆಗೆ ಈ ರೀತಿ ಆರೋಪ ಹೊರಿಸಿ ಹಣ ಕೀಳುವ ಅಭ್ಯಾಸವಿದೆ ಎಂದು ಹಿಂದಿನ ದೂರುಗಳಿಂದ ತೀರ್ಮಾನಿಸಲು ಸಾಧ್ಯವಿಲ್ಲ. ಆಕೆಯ ವಿರುದ್ಧ ಪತಿ ಸಲ್ಲಿಸಿದ ಅಂತಹ ಸಲ್ಲಿಕೆಗಳನ್ನು ಅವರು ಸಾಬೀತುಪಡಿಸಬೇಕು ಎಂದು ಪೀಠ ಹೇಳಿದೆ. ಆದಾಗ್ಯೂ, ಅಂತಹ ಕೃತ್ಯಗಳನ್ನು ವಿವರಿಸದ ಹೊರತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A ರ ನಿಬಂಧನೆಗಳನ್ನು ವಿಧಿಸಲು ‘ಮಾನಸಿಕ ಮತ್ತು ದೈಹಿಕವಾಗಿ’ ಕಿರುಕುಳ ಎಂಬ ಪದಗಳ ಬಳಕೆ ಸಾಕಾಗುವುದಿಲ್ಲ ಎಂದು ಪೀಠವು ಒತ್ತಿಹೇಳಿತು.

Published On - 3:26 pm, Fri, 28 October 22

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ