AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಮಹಾಸಾಗರದ ಮೇಲೆ ರೇಡಿಯೊ ಬ್ಲ್ಯಾಕೌಟ್​​ಗೆ ಕಾರಣವಾಗಲಿದೆ ಸೂರ್ಯನ ಸೌರ ಜ್ವಾಲೆ

ಸೌರ ಜ್ವಾಲೆಯು ಸೂರ್ಯನ ಮೇಲ್ಮೈಯಲ್ಲಿ ಹಠಾತ್, ಕ್ಷಿಪ್ರ ಮತ್ತು ತೀವ್ರವಾದ ಸ್ಫೋಟವಾಗಿದ್ದು ಅದು ಕಾಂತೀಯ ಕ್ಷೇತ್ರಗಳಲ್ಲಿ ಸಂಗ್ರಹವಾಗಿರುವ ಬೃಹತ್ ಪ್ರಮಾಣದ ಶಕ್ತಿಯನ್ನು ಇದ್ದಕ್ಕಿದ್ದಂತೆ ಬಿಡುಗಡೆ ಮಾಡಿದಾಗ ಸಂಭವಿಸುತ್ತದೆ

ಹಿಂದೂ ಮಹಾಸಾಗರದ ಮೇಲೆ ರೇಡಿಯೊ ಬ್ಲ್ಯಾಕೌಟ್​​ಗೆ ಕಾರಣವಾಗಲಿದೆ ಸೂರ್ಯನ ಸೌರ ಜ್ವಾಲೆ
ಸೌರ ಜ್ವಾಲೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 21, 2022 | 1:55 PM

ತನ್ನ ಹೊಸ ಚಕ್ರವನ್ನು ಪ್ರವೇಶಿಸಿ, ಗುರುವಾರ ಪ್ರಕಾಶಮಾನವಾದ ನಕ್ಷತ್ರವು ಪ್ರಮುಖ ಜ್ವಾಲೆಯನ್ನು ಹೊರಸೂಸುತ್ತಿದ್ದಂತೆ ಸೂರ್ಯನ ಚಟುವಟಿಕೆಗಳು ವೇಗವನ್ನು ಪಡೆದುಕೊಳ್ಳುತ್ತಿವೆ. ಸನ್‌ಸ್ಪಾಟ್ AR2929 ಸ್ಫೋಟಗೊಂಡು ಪ್ರಬಲವಾದ M5.5-ಕ್ಲಾಸ್ ಸೌರ ಜ್ವಾಲೆಯನ್ನು(Solar flare) ಉತ್ಪಾದಿಸಿತು.ಇದನ್ನು ನಾಸಾದ ಸೋಲಾರ್ ಡೈನಾಮಿಕ್ಸ್ ಅಬ್ಸರ್ವೇಟರಿಯು ತೀವ್ರವಾದ ನೇರಳಾತೀತ ಫ್ಲ್ಯಾಷ್‌ನಲ್ಲಿ ದಾಖಲಿಸಿದೆ. spaceweather.com ಪ್ರಕಾರ ಜ್ವಾಲೆಯ ಸಮಯದಲ್ಲಿ, ಎಕ್ಸ್ ರೇ ಕಂಪನಗಳು ಭೂಮಿಯ ವಾತಾವರಣದ ಮೇಲ್ಭಾಗವನ್ನು ಐಯೋನೈಸ್ ಮಾಡಿತು. ಇದು ಹಿಂದೂ ಮಹಾಸಾಗರದ ಸುತ್ತಲೂ ಶಾರ್ಟ್‌ವೇವ್ ರೇಡಿಯೊ ಬ್ಲ್ಯಾಕೌಟ್ ಅನ್ನು ಉಂಟುಮಾಡುತ್ತದೆ. “ಏವಿಯೇಟರ್‌ಗಳು, ನಾವಿಕರು ಮತ್ತು ಹ್ಯಾಮ್ ರೇಡಿಯೊ ಆಪರೇಟರ್‌ಗಳು 30 MHz ಗಿಂತ ಕಡಿಮೆ ಆವರ್ತನಗಳಲ್ಲಿ ಅಸಾಮಾನ್ಯ ಪ್ರಸರಣ ಪರಿಣಾಮಗಳನ್ನು ಗಮನಿಸಿರಬಹುದು” ಎಂದು ಅದು ಹೇಳಿದೆ.  ಸೌರ ಜ್ವಾಲೆಗಳು ಸಾಮಾನ್ಯವಾಗಿ ಸಕ್ರಿಯ ಪ್ರದೇಶಗಳಲ್ಲಿ ನಡೆಯುತ್ತವೆ, ಅವು ಸೂರ್ಯನ ಮೇಲೆ ಬಲವಾದ ಕಾಂತೀಯ ಕ್ಷೇತ್ರಗಳ ಉಪಸ್ಥಿತಿಯಿಂದ ಗುರುತಿಸಲ್ಪಟ್ಟ ಪ್ರದೇಶಗಳಾಗಿವೆ, ಸಾಮಾನ್ಯವಾಗಿ ಸನ್‌ಸ್ಪಾಟ್ ಗುಂಪುಗಳೊಂದಿಗೆ ಸಂಬಂಧಿಸಿರುತ್ತವೆ. ಈ ಕಾಂತೀಯ ಕ್ಷೇತ್ರಗಳು ವಿಕಸನಗೊಂಡಂತೆ, ಅವು ಅಸ್ಥಿರತೆಯ ಹಂತವನ್ನು ತಲುಪಬಹುದು ಮತ್ತು ವಿವಿಧ ರೂಪಗಳಲ್ಲಿ ಶಕ್ತಿಯನ್ನು ಬಿಡುಗಡೆ ಮಾಡಬಹುದು.

ಸೌರ ಜ್ವಾಲೆ ಎಂದರೇನು? ಸೌರ ಜ್ವಾಲೆಯು ಸೂರ್ಯನ ಮೇಲ್ಮೈಯಲ್ಲಿ ಹಠಾತ್, ಕ್ಷಿಪ್ರ ಮತ್ತು ತೀವ್ರವಾದ ಸ್ಫೋಟವಾಗಿದ್ದು ಅದು ಕಾಂತೀಯ ಕ್ಷೇತ್ರಗಳಲ್ಲಿ ಸಂಗ್ರಹವಾಗಿರುವ ಬೃಹತ್ ಪ್ರಮಾಣದ ಶಕ್ತಿಯನ್ನು ಇದ್ದಕ್ಕಿದ್ದಂತೆ ಬಿಡುಗಡೆ ಮಾಡಿದಾಗ ಸಂಭವಿಸುತ್ತದೆ. ಸ್ಫೋಟವು ಬ್ರಹ್ಮಾಂಡದ ಉದ್ದ ಮತ್ತು ಅಗಲದಾದ್ಯಂತ ವಿಕಿರಣವನ್ನು ಹೊರಸೂಸುತ್ತದೆ, ಸೌರವ್ಯೂಹದ ಗ್ರಹಗಳನ್ನು ಹಾನಿಗೊಳಿಸುತ್ತವೆ. ಈ ವಿಕಿರಣಗಳು ರೇಡಿಯೋ ತರಂಗಗಳು, ಕ್ಷ-ಕಿರಣಗಳು ಮತ್ತು ಗಾಮಾ ಕಿರಣಗಳನ್ನು ಹೊಂದಿರುತ್ತವೆ.

ಸೌರ ಜ್ವಾಲೆಯ ಮೂರು ಹಂತಗಳಿವೆ: ಮೊದಲನೆಯದು, ಪೂರ್ವಗಾಮಿ ಹಂತ, ಅಲ್ಲಿ ಕಾಂತೀಯ ಶಕ್ತಿಯ ಬಿಡುಗಡೆಯು ಮೃದುವಾದ ಎಕ್ಸ್-ರೇ ಹೊರಸೂಸುವಿಕೆಯೊಂದಿಗೆ ಪ್ರಚೋದಿಸಲ್ಪಡುತ್ತದೆ. ಪ್ರಚೋದಕ ಎಂದು ಹೇಳಲಾಗುವ ಎರಡನೇ ಹಂತವು ಪ್ರೋಟಾನ್‌ಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಒಂದು ಮಿಲಿಯನ್ ಎಲೆಕ್ಟ್ರಾನ್ ವೋಲ್ಟ್‌ಗಳಿಗೆ ಸಮಾನವಾದ ಶಕ್ತಿಗಳಿಗೆ ವೇಗಗೊಳಿಸಿದಾಗ ಸಂಭವಿಸುತ್ತದೆ. ಮೂರನೇ ಹಂತವು ಎಕ್ಸ್ ರೇಯ ಕ್ರಮೇಣ ನಿರ್ಮಾಣ ಮತ್ತು ಕ್ಷೀಣಿಸುವುದಾಗಿದೆ.

ಗುರುವಾರದ ಸ್ಫೋಟವನ್ನು ಮಧ್ಯಮ ಗಾತ್ರದ M ವರ್ಗ ಎಂದು ವರ್ಗೀಕರಿಸಲಾಗಿದೆ. ಅವು ಭೂಮಿಯ ಧ್ರುವ ಪ್ರದೇಶಗಳ ಮೇಲೆ ಪರಿಣಾಮ ಬೀರುವ ಸಂಕ್ಷಿಪ್ತ ರೇಡಿಯೊ ಬ್ಲ್ಯಾಕೌಟ್‌ಗಳನ್ನು ಉಂಟುಮಾಡಬಹುದು. ಸಣ್ಣ ವಿಕಿರಣ ಬಿರುಗಾಳಿಗಳು ಕೆಲವೊಮ್ಮೆ M-ವರ್ಗದ ಜ್ವಾಲೆಯನ್ನು ಅನುಸರಿಸುತ್ತವೆ.

ಇದು ಜಿಯೋಮ್ಯಾಗ್ನೆಟಿಕ್ ಕ್ಷೋಭೆಗೆ ಕಾರಣವಾಗುತ್ತದೆಯೇ? ಸ್ಪೇಸ್‌ವೆದರ್ ಡಾಟ್ ಕಾಮ್ ಪ್ರಕಾರ, ಕರೋನಲ್ ಮಾಸ್ ಎಜೆಕ್ಷನ್‌ಗಳ (Coronal Mass Ejections CME)ಸರಣಿಯು ಭೂಮಿಯ ಕಾಂತಕ್ಷೇತ್ರಕ್ಕೆ ಗ್ಲಾನ್ಸಿಂಗ್ ಹೊಡೆತಗಳನ್ನು ನೀಡುವುದರಿಂದ ಜನವರಿ 22-23-24 ರಂದು ಭೂಕಾಂತೀಯ ಕ್ಷೋಭೆ ಸಾಧ್ಯತೆ ಇದೆ. ಈ ಪೈಕಿ ಎರಡು ಸಿಎಂಇಗಳು  ಸನ್‌ಸ್ಪಾಟ್ AR2929 ನಿಂದ ಸೂಸುವ M-ಕ್ಲಾಸ್ ಫ್ಲೇರ್‌ಗಳಿಂದ ಬಾಹ್ಯಾಕಾಶಕ್ಕೆ ಎಸೆಯಲ್ಪಟ್ಟವು. ಮೂರನೆಯದ್ದು ಸೂರ್ಯನ ಮೇಲ್ಮೈಯಿಂದ ಹೊರ ಹೋಗಿದೆ. ಅವು ನೇರವಾಗಿ ಗ್ರಹವನ್ನು ಹೊಡೆಯುವುದಿಲ್ಲವಾದರೂ, ಮೂರು ಒಟ್ಟಿಗೆ ಸಣ್ಣ G1-ವರ್ಗದ ಭೂಕಾಂತೀಯ ಬಿರುಗಾಳಿಗಳನ್ನು ಉಂಟುಮಾಡಬಹುದು. ಭೂಕಾಂತೀಯ ಚಂಡಮಾರುತವು ಭೂಮಿಯ ಮ್ಯಾಗ್ನೆಟೋಸ್ಪಿಯರ್‌ನ ಪ್ರಮುಖ ಅಡಚಣೆಯಾಗಿದ್ದು ಅದು ಸೌರ ಮಾರುತದಿಂದ ಭೂಮಿಯ ಸುತ್ತಲಿನ ಬಾಹ್ಯಾಕಾಶ ಪರಿಸರಕ್ಕೆ ಶಕ್ತಿಯ ಅತ್ಯಂತ ಪರಿಣಾಮಕಾರಿ ವಿನಿಮಯವಾದಾಗ ಸಂಭವಿಸುತ್ತದೆ.

ಇದನ್ನೂ ಓದಿ: ಬಿಜೆಪಿಗೆ ಸೇರಿದ ನಂತರ ಮುಲಾಯಂ ಸಿಂಗ್ ಯಾದವ್ ಅವರ ಆಶೀರ್ವಾದ ಪಡೆದ ಸೊಸೆ ಅಪರ್ಣಾ ಯಾದವ್

Published On - 1:55 pm, Fri, 21 January 22

ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ