AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ದಿನದಲ್ಲೇ ಅನ್​ಲಾಕ್ 2.0 ಎಂಡ್, ಇಂದು ಪ್ರಧಾನಿ ಮೋದಿ ಸಂಪುಟ ಸಭೆಯಲ್ಲಿ ಚರ್ಚೆ

ದೆಹಲಿ: ದೇಶದಲ್ಲಿ ಅನ್​ಲಾಕ್​ 2.0 ಮುಗಿಯಲು ಉಳಿದಿರೋದು ಕೇವಲ 3 ದಿನ ಮಾತ್ರ. ಈ ಹಿನ್ನೆಲೆಯಲ್ಲಿ ಅನ್​ಲಾಕ್ 3.0 ನಿಯಮಗಳು ಹೇಗಿರುತ್ತವೆ ಅನ್ನೋ ಕುತೂಹಲ ದೇಶದ ಜನರಲ್ಲಿ ಮೂಡಿದೆ. ಹೀಗಾಗಿ ಇಂದು ಪ್ರಧಾನಿ ನೇತೃತ್ವದಲ್ಲಿ ನಡೆಯಲಿರೋ ಸಂಪುಟ ಸಭೆ ಮೇಲೆ ದೇಶದ ಜನರ ಚಿತ್ತ ನೆಟ್ಟಿದೆ. ದೇಶದಲ್ಲಿ ಈಗ ಜಾರಿಯಲ್ಲಿರೋ ಅನ್​ಲಾಕ್​ 2.0 ಮುಗಿಯಲು ಉಳಿದಿರೋದು ಕೇವಲ ಮೂರು ದಿನ ಮಾತ್ರ. ಆಗಸ್ಟ್ 1ರ ಮಧ್ಯರಾತ್ರಿಯಿಂದಲೇ 3ನೇ ಹಂತದ ಅನ್​ಲಾಕ್ ನಿಯಮಗಳು ಜಾರಿಗೆ ಬರಬೇಕಿದೆ. ಹೀಗಾಗಿ ಅನ್​ಲಾಕ್​ […]

3 ದಿನದಲ್ಲೇ ಅನ್​ಲಾಕ್ 2.0 ಎಂಡ್, ಇಂದು ಪ್ರಧಾನಿ ಮೋದಿ ಸಂಪುಟ ಸಭೆಯಲ್ಲಿ ಚರ್ಚೆ
ಪ್ರಧಾನಿ ನರೇಂದ್ರ ಮೋದಿ (ಸಾಂದರ್ಭಿಕ ಚಿತ್ರ)
ಆಯೇಷಾ ಬಾನು
| Edited By: |

Updated on:Jul 30, 2020 | 8:26 PM

Share

ದೆಹಲಿ: ದೇಶದಲ್ಲಿ ಅನ್​ಲಾಕ್​ 2.0 ಮುಗಿಯಲು ಉಳಿದಿರೋದು ಕೇವಲ 3 ದಿನ ಮಾತ್ರ. ಈ ಹಿನ್ನೆಲೆಯಲ್ಲಿ ಅನ್​ಲಾಕ್ 3.0 ನಿಯಮಗಳು ಹೇಗಿರುತ್ತವೆ ಅನ್ನೋ ಕುತೂಹಲ ದೇಶದ ಜನರಲ್ಲಿ ಮೂಡಿದೆ. ಹೀಗಾಗಿ ಇಂದು ಪ್ರಧಾನಿ ನೇತೃತ್ವದಲ್ಲಿ ನಡೆಯಲಿರೋ ಸಂಪುಟ ಸಭೆ ಮೇಲೆ ದೇಶದ ಜನರ ಚಿತ್ತ ನೆಟ್ಟಿದೆ.

ದೇಶದಲ್ಲಿ ಈಗ ಜಾರಿಯಲ್ಲಿರೋ ಅನ್​ಲಾಕ್​ 2.0 ಮುಗಿಯಲು ಉಳಿದಿರೋದು ಕೇವಲ ಮೂರು ದಿನ ಮಾತ್ರ. ಆಗಸ್ಟ್ 1ರ ಮಧ್ಯರಾತ್ರಿಯಿಂದಲೇ 3ನೇ ಹಂತದ ಅನ್​ಲಾಕ್ ನಿಯಮಗಳು ಜಾರಿಗೆ ಬರಬೇಕಿದೆ. ಹೀಗಾಗಿ ಅನ್​ಲಾಕ್​ 3.0 ಕುರಿತು ಚರ್ಚಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅನ್​ಲಾಕ್ 3.0 ರೂಲ್ಸ್​ಗಳನ್ನ ಫೈನಲ್ ಮಾಡೋ ಸಾಧ್ಯತೆಗಳಿವೆ. ಹೀಗಾಗಿ ಈಗಿರೋ ವಿನಾಯ್ತಿಗಳ ಜೊತೆಗೆ ಮತ್ತೆ ಯಾವುದಕ್ಕೆಲ್ಲಾ ವಿನಾಯ್ತಿ ಸಿಗಬಹುದು ಅನ್ನೋ ಕುರಿತು ದೇಶದಲ್ಲಿ ಈಗಾಗಲೇ ಭಾರಿ ಚರ್ಚೆ ನಡೆಯುತ್ತಿದೆ.

ಅನ್​ಲಾಕ್​ 3.0ನಲ್ಲಿ ಯಾವುದಕ್ಕೆಲ್ಲಾ ವಿನಾಯಿತಿ ಸಿಗಬಹುದು? ಆಗಸ್ಟ್ 1ರಿಂದ ಮತ್ತಷ್ಟು ವಿನಾಯಿತಿ ನೀಡುವ ಸಾಧ್ಯಗಳಿದ್ದು, ಕೆಲವು ನಿರ್ಬಂಧಗಳನ್ನು ಮುಂದುವರಿಸುವ ಸಾಧ್ಯತೆಗಳಿವೆ. ಹೀಗಾಗಿ ಯಾವುದು ಲಾಕ್, ಯಾವುದು ಅನ್ಲಾಕ್ ಆಗುವ ಸಾಧ್ಯತೆಗಳಿದೆ ಅಂತಾ ಒಮ್ಮೆ ನೋಡೋದಾದ್ರೆ.

ಅನ್​ಲಾಕ್​ 3.0 ಹೇಗಿರುತ್ತೆ? – ದೇಶಾದ್ಯಂತ ಶಾಲೆಗಳು ಈಗ ತೆರೆಯೋದು ಅನುಮಾನ – ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅವಕಾಶ..? – ಖಾಸಗಿ ಕೋಚಿಂಗ್ ಸಂಸ್ಥೆಗಳಿಗೆ ಷರತ್ತು ಬದ್ಧ ಅವಕಾಶ – ಮೆಟ್ರೋ ಸಂಚಾರ ನಿಷೇಧ ಮುಂದುವರಿಯುವ ಸಾಧ್ಯತೆ – ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರವೂ ಇರುವುದಿಲ್ಲ – ಜಿಮ್​ಗಳಿಗೆ ಷರತ್ತು ಬದ್ಧ ಅವಕಾಶ ನೀಡುವ ಸಾಧ್ಯತೆ – 25% ಪ್ರೇಕ್ಷಕರೊಂದಿಗೆ ಸಿನಿಮಾ ಮಂದಿರ ಓಪನ್..? – ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ..? – ಕಂಟೇನ್ಮೆಂಟ್ ಬಿಟ್ಟು ಉಳಿದೆಡೆ ಮತ್ತಷ್ಟು ವಿನಾಯಿತಿ..?

ಇಂದು ಪ್ರಧಾನಿ ನೇತೃತ್ವದಲ್ಲಿ ನಡೆಯೋ ಸಂಪುಟ ಸಭೆಯಲ್ಲಿ ಅನ್​ಲಾಕ್ 3.0 ಬಗ್ಗೆ ಚರ್ಚೆ ನಡೆಸೋ ಸಾಧ್ಯತೆಗಳು ದಟ್ಟವಾಗಿವೆ. ಸಂಪುಟ ಸಭೆಯ ಬಳಿಕ ಅನ್​ಲಾಕ್​ 3.0 ರೂಲ್ಸ್ ಬಗ್ಗೆ ಜನರಿಗೆ ಒಂದು ಕ್ಲಾರಿಟಿ ಸಿಗಬಹುದು.

Published On - 7:12 am, Wed, 29 July 20

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?