AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದುಕೊಂಡಿರುವುದು ಎಲ್ಲಿ?

ಕೊರೊನಾ ಮಹಾಮಾರಿ ಕಾಡುತ್ತಿರುವಾಗ ಮುಕೇಶ್​ ಅಂಬಾನಿ ಕುಂಟುಂಬಸ್ತರು ಸೈಲೆಂಟಾಗಿ, ಯಾವುದೇ ಪ್ರಚಾರವಿಲ್ಲದೆ ಕೊರೊನಾದಿಂದ ದೂರವಾಗಿ ಉಳಿಯಲು ಗುಜರಾತ್​ನ ಜಾಮ್​ನಗರದಲ್ಲಿರುವ ತಮ್ಮದೇ ರಿಲಯನ್ಸ್​ ನಗರ ಸುರಕ್ಷಿತ ಪ್ರದೇಶ ಎಂದು ಅಲ್ಲಿ ವಾಸಿಸುತ್ತಿದ್ದಾರೆ. ಕೊರೊನಾ ಹಾವಳಿ ಕಡಿಮೆಯಾದ ಮೇಲೆ 2-3 ತಿಂಗಳ ಬಳಿಕ ಆಂಟಿಲಾಗೆ ವಾಪಸು ರುವ ಆಲೋಚನೆ ಮಾಡಿದ್ದಾರೆ ಮುಕೇಶ್​ ಅಂಬಾನಿ ಎಂದು ತಿಳಿದುಬಂದಿದೆ.

ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದುಕೊಂಡಿರುವುದು ಎಲ್ಲಿ?
ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದಿಕೊಂಡಿರುವುದು ಎಲ್ಲಿ?
ಸಾಧು ಶ್ರೀನಾಥ್​
| Edited By: |

Updated on:Apr 15, 2021 | 7:15 PM

Share

ದಶಕದ ಹಿಂದೆ ಆಂಟಿಲಾ ಎಂಬ ಬೆಟ್ಟದೆತ್ತರದ ಬಂಗಲೆ ಪ್ರವೇಶಿಸಿದ್ದ ಏಷ್ಯಾದ ಆಗರ್ಭ ಶ್ರೀಮಂತ ಮುಕೇಶ್ ಅಭಮಾನಿ ಕುಟುಂಬಸ್ಥರು ಈಗ ಎಲ್ಲಿದ್ದಾರೆ? ಎಂಬುದು ಕುತೂಹಲಕಾರಿಯಾಗಿದೆ. ಜಸ್ಟ್​ ವಾಜೆ ಎಂಬ ಪೊಲೀಸ್​ ಅಧಿಕಾರಿ ತನ್ನ ಆಂಟಿಲಾ ಎದುರಿನಲ್ಲಿಯೇ ಆರ್​ಡಿಎಕ್ಸ್​ಗಳನ್ನು ಇಟ್ಟುಬಿಟ್ಟ ಎಂಬ ಕಹಿ ಸುದ್ದಿ ಕಿವಿಗೆ ಬಿದ್ದಿದ್ದೇ ಮುಕೇಶ್​ ಅಂಬಾನಿ ಕುಟುಂಬಸ್ತರು ಕನಲಿಹೋಗಿದ್ದರು. ಅಂಥಾದ್ದರಲ್ಲಿ ಮಹಾರಾಷ್ಟ್ರದಲ್ಲಿ ಈಗ ಅತಿ ದೊಡ್ಡ ಭಯೋತ್ಪಾದಕ ಎಂದ್ರೆ ಕೊರೊನಾ ಮಹಾಮಾರಿ ಎಂಬಂತಾಗಿದೆ. ಇಂತಹ ಕೊರೊನಾ ಮಾರಿಗೆ ಹೆದರಿ ಮುಕೇಶ್​ ಅಂಬಾನಿಯ ಇಡೀ ಕುಟುಂಬ ಇದೀಗ ಮುಂಬೈ ಮಹಾನಗರವನ್ನು ತೊರೆದಿದೆ ಎಂದು ತಿಳಿದುಬಂದಿದೆ.

ಹೌದು ಮಹಾರಾಷ್ಟ್ರದಲ್ಲಿ ಕೊರೊನಾ ಕಾಟ ಮಿತಿಮೀರಿದೆ. ಅದು ಎತ್ತರದ ಆಂಟಿಲಾದಲ್ಲಿದ್ದರೂ ಬಿಡುವಂತಹುದ್ದಲ್ಲ; ಹಾಗಿದೆ ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ. ಪರಿಸ್ಥಿತಿ ಹೀಗಿರುವಾಗ ಮುಕೇಶ್​ ಅಂಬಾನಿ ಯಾವ ಧೈರ್ಯದ ಮೇಲೆ ಆಂಟಿಲಾದಲ್ಲಿ ಉಳಿದುಕೊಂಡಾರು? ಹಾಗೆಂದೇ ಅವರ ಇಡೀ ಪರಿವಾರ ಮುಂಬೈ ತೊರೆದು ಹೋಗಿದೆ.

ಕೊಲಾಬದಲ್ಲಿ ಕೂಡುಕುಟುಂಬಸ್ಥರಾಗಿ ತಂಗಿದ್ದ ಅಂಬಾನಿಗಳು..

Sea Wind is a residential project in Cuffe Parade

ಕೊಲಾಬದಲ್ಲಿ ಕೂಡುಕುಟುಂಬಸ್ಥರಾಗಿ ತಂಗಿದ್ದ ಅಂಬಾನಿಗಳು..

2011ರಲ್ಲಿ 24 ಅಂತಸ್ತಿನ ಇದೇ ಆಂಟಿಲಾ ಗೃಹಪ್ರವೇಶ ಮಾಡುವುದಕ್ಕೂ ಮುನ್ನ ಮುಕೇಶ್​ ಅಂಬಾನಿ ಕುಟುಂಬಸ್ತರು ಮುಂಬೈನ ಆಗಿನ ಪ್ರತಿಷ್ಠಿತ ಪ್ರದೇಶವಾದ ಕೊಲಾಬದಲ್ಲಿ ಕೂಡುಕುಟುಂಬವಾಗಿ ತಂಗಿದ್ದರು. ಅರಬ್ಬೀ ಸಮುದ್ರದ ಸಮ್ಮುಖದಲ್ಲಿ ಅಲ್ಲಿ ಕಫ್​ ಪರೇಡ್​ನಲ್ಲಿ ಸೀ ವಿಂಡ್​ ಎಂಬ ವಸತಿ ಸಮುಚ್ಚಯದಲ್ಲಿ 14 ಅಂತಸ್ತಿನ ಭವ್ಯ ಬಂಗ್ಲೆಯಲ್ಲಿ ನೆಲೆಸಿದ್ದರು. ಧೀರೂಭಾಯಿ ಅಂಬಾನಿ ಕಾಲಾಂತರವಾದ ಮೇಲೆ ಒಡಹುಟ್ಟಿದ ಅನಿಲ್ ಅಂಬಾನಿ ಹಿರಿಯ ಸೋದರ ಮುಕೇಶ್​ ಜೊತೆ ಕ್ಯಾತೆ ತೆಗೆದಾಗ ತಾಯಿ ಕೋಕಿಲಾಬೆನ್​ ಅನಿವಾರ್ಯವಾಗಿ ಸೀ ವಿಂಡ್​ ಮನೆಯನ್ನು ತೊರೆದಿದ್ದರು.

Mukesh Ambani 27 story home Antilia which has three helipads

ಬೆಟ್ಟದೆತ್ತರದ ಆಂಟಿಲಾ ಬಂಗಲೆ ಬಿಟ್ಟು ಜಾಂ​ನಗರಕ್ಕೆ ತೆರಳಿದ ಮುಕೇಶ್​ ಅಂಬಾನಿ ಕುಟುಂಬ

ಈಗ ಕೊರೊನಾ ಮಹಾಮಾರಿ ಕಾಡುತ್ತಿರುವಾಗ ಮುಕೇಶ್​ ಅಂಬಾನಿ ಕುಂಟುಂಬಸ್ತರು ಸೈಲೆಂಟಾಗಿ, ಯಾವುದೇ ಪ್ರಚಾರವಿಲ್ಲದೆ ಕೊರೊನಾದಿಂದ ದೂರವಾಗಿ ಉಳಿಯಲು ಗುಜರಾತ್​ನ ಜಾಮ್​ನಗರದಲ್ಲಿರುವ ತಮ್ಮದೇ ರಿಲಯನ್ಸ್​ ನಗರ ಸುರಕ್ಷಿತ ಪ್ರದೇಶ ಎಂದು ಅಲ್ಲಿ ವಾಸಿಸುತ್ತಿದ್ದಾರೆ. ಕೊರೊನಾ ಹಾವಳಿ ಕಡಿಮೆಯಾದ ಮೇಲೆ 2-3 ತಿಂಗಳ ಬಳಿಕ ಆಂಟಿಲಾಗೆ ವಾಪಸು ಬರುವ ಆಲೋಚನೆ ಮಾಡಿದ್ದಾರೆ ಮುಕೇಶ್​ ಅಂಬಾನಿ ಎಂದು ತಿಳಿದುಬಂದಿದೆ.

Published On - 5:06 pm, Thu, 15 April 21

ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ