AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದುಕೊಂಡಿರುವುದು ಎಲ್ಲಿ?

ಕೊರೊನಾ ಮಹಾಮಾರಿ ಕಾಡುತ್ತಿರುವಾಗ ಮುಕೇಶ್​ ಅಂಬಾನಿ ಕುಂಟುಂಬಸ್ತರು ಸೈಲೆಂಟಾಗಿ, ಯಾವುದೇ ಪ್ರಚಾರವಿಲ್ಲದೆ ಕೊರೊನಾದಿಂದ ದೂರವಾಗಿ ಉಳಿಯಲು ಗುಜರಾತ್​ನ ಜಾಮ್​ನಗರದಲ್ಲಿರುವ ತಮ್ಮದೇ ರಿಲಯನ್ಸ್​ ನಗರ ಸುರಕ್ಷಿತ ಪ್ರದೇಶ ಎಂದು ಅಲ್ಲಿ ವಾಸಿಸುತ್ತಿದ್ದಾರೆ. ಕೊರೊನಾ ಹಾವಳಿ ಕಡಿಮೆಯಾದ ಮೇಲೆ 2-3 ತಿಂಗಳ ಬಳಿಕ ಆಂಟಿಲಾಗೆ ವಾಪಸು ರುವ ಆಲೋಚನೆ ಮಾಡಿದ್ದಾರೆ ಮುಕೇಶ್​ ಅಂಬಾನಿ ಎಂದು ತಿಳಿದುಬಂದಿದೆ.

ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದುಕೊಂಡಿರುವುದು ಎಲ್ಲಿ?
ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದಿಕೊಂಡಿರುವುದು ಎಲ್ಲಿ?
ಸಾಧು ಶ್ರೀನಾಥ್​
| Edited By: |

Updated on:Apr 15, 2021 | 7:15 PM

Share

ದಶಕದ ಹಿಂದೆ ಆಂಟಿಲಾ ಎಂಬ ಬೆಟ್ಟದೆತ್ತರದ ಬಂಗಲೆ ಪ್ರವೇಶಿಸಿದ್ದ ಏಷ್ಯಾದ ಆಗರ್ಭ ಶ್ರೀಮಂತ ಮುಕೇಶ್ ಅಭಮಾನಿ ಕುಟುಂಬಸ್ಥರು ಈಗ ಎಲ್ಲಿದ್ದಾರೆ? ಎಂಬುದು ಕುತೂಹಲಕಾರಿಯಾಗಿದೆ. ಜಸ್ಟ್​ ವಾಜೆ ಎಂಬ ಪೊಲೀಸ್​ ಅಧಿಕಾರಿ ತನ್ನ ಆಂಟಿಲಾ ಎದುರಿನಲ್ಲಿಯೇ ಆರ್​ಡಿಎಕ್ಸ್​ಗಳನ್ನು ಇಟ್ಟುಬಿಟ್ಟ ಎಂಬ ಕಹಿ ಸುದ್ದಿ ಕಿವಿಗೆ ಬಿದ್ದಿದ್ದೇ ಮುಕೇಶ್​ ಅಂಬಾನಿ ಕುಟುಂಬಸ್ತರು ಕನಲಿಹೋಗಿದ್ದರು. ಅಂಥಾದ್ದರಲ್ಲಿ ಮಹಾರಾಷ್ಟ್ರದಲ್ಲಿ ಈಗ ಅತಿ ದೊಡ್ಡ ಭಯೋತ್ಪಾದಕ ಎಂದ್ರೆ ಕೊರೊನಾ ಮಹಾಮಾರಿ ಎಂಬಂತಾಗಿದೆ. ಇಂತಹ ಕೊರೊನಾ ಮಾರಿಗೆ ಹೆದರಿ ಮುಕೇಶ್​ ಅಂಬಾನಿಯ ಇಡೀ ಕುಟುಂಬ ಇದೀಗ ಮುಂಬೈ ಮಹಾನಗರವನ್ನು ತೊರೆದಿದೆ ಎಂದು ತಿಳಿದುಬಂದಿದೆ.

ಹೌದು ಮಹಾರಾಷ್ಟ್ರದಲ್ಲಿ ಕೊರೊನಾ ಕಾಟ ಮಿತಿಮೀರಿದೆ. ಅದು ಎತ್ತರದ ಆಂಟಿಲಾದಲ್ಲಿದ್ದರೂ ಬಿಡುವಂತಹುದ್ದಲ್ಲ; ಹಾಗಿದೆ ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ. ಪರಿಸ್ಥಿತಿ ಹೀಗಿರುವಾಗ ಮುಕೇಶ್​ ಅಂಬಾನಿ ಯಾವ ಧೈರ್ಯದ ಮೇಲೆ ಆಂಟಿಲಾದಲ್ಲಿ ಉಳಿದುಕೊಂಡಾರು? ಹಾಗೆಂದೇ ಅವರ ಇಡೀ ಪರಿವಾರ ಮುಂಬೈ ತೊರೆದು ಹೋಗಿದೆ.

ಕೊಲಾಬದಲ್ಲಿ ಕೂಡುಕುಟುಂಬಸ್ಥರಾಗಿ ತಂಗಿದ್ದ ಅಂಬಾನಿಗಳು..

Sea Wind is a residential project in Cuffe Parade

ಕೊಲಾಬದಲ್ಲಿ ಕೂಡುಕುಟುಂಬಸ್ಥರಾಗಿ ತಂಗಿದ್ದ ಅಂಬಾನಿಗಳು..

2011ರಲ್ಲಿ 24 ಅಂತಸ್ತಿನ ಇದೇ ಆಂಟಿಲಾ ಗೃಹಪ್ರವೇಶ ಮಾಡುವುದಕ್ಕೂ ಮುನ್ನ ಮುಕೇಶ್​ ಅಂಬಾನಿ ಕುಟುಂಬಸ್ತರು ಮುಂಬೈನ ಆಗಿನ ಪ್ರತಿಷ್ಠಿತ ಪ್ರದೇಶವಾದ ಕೊಲಾಬದಲ್ಲಿ ಕೂಡುಕುಟುಂಬವಾಗಿ ತಂಗಿದ್ದರು. ಅರಬ್ಬೀ ಸಮುದ್ರದ ಸಮ್ಮುಖದಲ್ಲಿ ಅಲ್ಲಿ ಕಫ್​ ಪರೇಡ್​ನಲ್ಲಿ ಸೀ ವಿಂಡ್​ ಎಂಬ ವಸತಿ ಸಮುಚ್ಚಯದಲ್ಲಿ 14 ಅಂತಸ್ತಿನ ಭವ್ಯ ಬಂಗ್ಲೆಯಲ್ಲಿ ನೆಲೆಸಿದ್ದರು. ಧೀರೂಭಾಯಿ ಅಂಬಾನಿ ಕಾಲಾಂತರವಾದ ಮೇಲೆ ಒಡಹುಟ್ಟಿದ ಅನಿಲ್ ಅಂಬಾನಿ ಹಿರಿಯ ಸೋದರ ಮುಕೇಶ್​ ಜೊತೆ ಕ್ಯಾತೆ ತೆಗೆದಾಗ ತಾಯಿ ಕೋಕಿಲಾಬೆನ್​ ಅನಿವಾರ್ಯವಾಗಿ ಸೀ ವಿಂಡ್​ ಮನೆಯನ್ನು ತೊರೆದಿದ್ದರು.

Mukesh Ambani 27 story home Antilia which has three helipads

ಬೆಟ್ಟದೆತ್ತರದ ಆಂಟಿಲಾ ಬಂಗಲೆ ಬಿಟ್ಟು ಜಾಂ​ನಗರಕ್ಕೆ ತೆರಳಿದ ಮುಕೇಶ್​ ಅಂಬಾನಿ ಕುಟುಂಬ

ಈಗ ಕೊರೊನಾ ಮಹಾಮಾರಿ ಕಾಡುತ್ತಿರುವಾಗ ಮುಕೇಶ್​ ಅಂಬಾನಿ ಕುಂಟುಂಬಸ್ತರು ಸೈಲೆಂಟಾಗಿ, ಯಾವುದೇ ಪ್ರಚಾರವಿಲ್ಲದೆ ಕೊರೊನಾದಿಂದ ದೂರವಾಗಿ ಉಳಿಯಲು ಗುಜರಾತ್​ನ ಜಾಮ್​ನಗರದಲ್ಲಿರುವ ತಮ್ಮದೇ ರಿಲಯನ್ಸ್​ ನಗರ ಸುರಕ್ಷಿತ ಪ್ರದೇಶ ಎಂದು ಅಲ್ಲಿ ವಾಸಿಸುತ್ತಿದ್ದಾರೆ. ಕೊರೊನಾ ಹಾವಳಿ ಕಡಿಮೆಯಾದ ಮೇಲೆ 2-3 ತಿಂಗಳ ಬಳಿಕ ಆಂಟಿಲಾಗೆ ವಾಪಸು ಬರುವ ಆಲೋಚನೆ ಮಾಡಿದ್ದಾರೆ ಮುಕೇಶ್​ ಅಂಬಾನಿ ಎಂದು ತಿಳಿದುಬಂದಿದೆ.

Published On - 5:06 pm, Thu, 15 April 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?