AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದುಕೊಂಡಿರುವುದು ಎಲ್ಲಿ?

ಕೊರೊನಾ ಮಹಾಮಾರಿ ಕಾಡುತ್ತಿರುವಾಗ ಮುಕೇಶ್​ ಅಂಬಾನಿ ಕುಂಟುಂಬಸ್ತರು ಸೈಲೆಂಟಾಗಿ, ಯಾವುದೇ ಪ್ರಚಾರವಿಲ್ಲದೆ ಕೊರೊನಾದಿಂದ ದೂರವಾಗಿ ಉಳಿಯಲು ಗುಜರಾತ್​ನ ಜಾಮ್​ನಗರದಲ್ಲಿರುವ ತಮ್ಮದೇ ರಿಲಯನ್ಸ್​ ನಗರ ಸುರಕ್ಷಿತ ಪ್ರದೇಶ ಎಂದು ಅಲ್ಲಿ ವಾಸಿಸುತ್ತಿದ್ದಾರೆ. ಕೊರೊನಾ ಹಾವಳಿ ಕಡಿಮೆಯಾದ ಮೇಲೆ 2-3 ತಿಂಗಳ ಬಳಿಕ ಆಂಟಿಲಾಗೆ ವಾಪಸು ರುವ ಆಲೋಚನೆ ಮಾಡಿದ್ದಾರೆ ಮುಕೇಶ್​ ಅಂಬಾನಿ ಎಂದು ತಿಳಿದುಬಂದಿದೆ.

ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದುಕೊಂಡಿರುವುದು ಎಲ್ಲಿ?
ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದಿಕೊಂಡಿರುವುದು ಎಲ್ಲಿ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Apr 15, 2021 | 7:15 PM

Share

ದಶಕದ ಹಿಂದೆ ಆಂಟಿಲಾ ಎಂಬ ಬೆಟ್ಟದೆತ್ತರದ ಬಂಗಲೆ ಪ್ರವೇಶಿಸಿದ್ದ ಏಷ್ಯಾದ ಆಗರ್ಭ ಶ್ರೀಮಂತ ಮುಕೇಶ್ ಅಭಮಾನಿ ಕುಟುಂಬಸ್ಥರು ಈಗ ಎಲ್ಲಿದ್ದಾರೆ? ಎಂಬುದು ಕುತೂಹಲಕಾರಿಯಾಗಿದೆ. ಜಸ್ಟ್​ ವಾಜೆ ಎಂಬ ಪೊಲೀಸ್​ ಅಧಿಕಾರಿ ತನ್ನ ಆಂಟಿಲಾ ಎದುರಿನಲ್ಲಿಯೇ ಆರ್​ಡಿಎಕ್ಸ್​ಗಳನ್ನು ಇಟ್ಟುಬಿಟ್ಟ ಎಂಬ ಕಹಿ ಸುದ್ದಿ ಕಿವಿಗೆ ಬಿದ್ದಿದ್ದೇ ಮುಕೇಶ್​ ಅಂಬಾನಿ ಕುಟುಂಬಸ್ತರು ಕನಲಿಹೋಗಿದ್ದರು. ಅಂಥಾದ್ದರಲ್ಲಿ ಮಹಾರಾಷ್ಟ್ರದಲ್ಲಿ ಈಗ ಅತಿ ದೊಡ್ಡ ಭಯೋತ್ಪಾದಕ ಎಂದ್ರೆ ಕೊರೊನಾ ಮಹಾಮಾರಿ ಎಂಬಂತಾಗಿದೆ. ಇಂತಹ ಕೊರೊನಾ ಮಾರಿಗೆ ಹೆದರಿ ಮುಕೇಶ್​ ಅಂಬಾನಿಯ ಇಡೀ ಕುಟುಂಬ ಇದೀಗ ಮುಂಬೈ ಮಹಾನಗರವನ್ನು ತೊರೆದಿದೆ ಎಂದು ತಿಳಿದುಬಂದಿದೆ.

ಹೌದು ಮಹಾರಾಷ್ಟ್ರದಲ್ಲಿ ಕೊರೊನಾ ಕಾಟ ಮಿತಿಮೀರಿದೆ. ಅದು ಎತ್ತರದ ಆಂಟಿಲಾದಲ್ಲಿದ್ದರೂ ಬಿಡುವಂತಹುದ್ದಲ್ಲ; ಹಾಗಿದೆ ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ. ಪರಿಸ್ಥಿತಿ ಹೀಗಿರುವಾಗ ಮುಕೇಶ್​ ಅಂಬಾನಿ ಯಾವ ಧೈರ್ಯದ ಮೇಲೆ ಆಂಟಿಲಾದಲ್ಲಿ ಉಳಿದುಕೊಂಡಾರು? ಹಾಗೆಂದೇ ಅವರ ಇಡೀ ಪರಿವಾರ ಮುಂಬೈ ತೊರೆದು ಹೋಗಿದೆ.

ಕೊಲಾಬದಲ್ಲಿ ಕೂಡುಕುಟುಂಬಸ್ಥರಾಗಿ ತಂಗಿದ್ದ ಅಂಬಾನಿಗಳು..

Sea Wind is a residential project in Cuffe Parade

ಕೊಲಾಬದಲ್ಲಿ ಕೂಡುಕುಟುಂಬಸ್ಥರಾಗಿ ತಂಗಿದ್ದ ಅಂಬಾನಿಗಳು..

2011ರಲ್ಲಿ 24 ಅಂತಸ್ತಿನ ಇದೇ ಆಂಟಿಲಾ ಗೃಹಪ್ರವೇಶ ಮಾಡುವುದಕ್ಕೂ ಮುನ್ನ ಮುಕೇಶ್​ ಅಂಬಾನಿ ಕುಟುಂಬಸ್ತರು ಮುಂಬೈನ ಆಗಿನ ಪ್ರತಿಷ್ಠಿತ ಪ್ರದೇಶವಾದ ಕೊಲಾಬದಲ್ಲಿ ಕೂಡುಕುಟುಂಬವಾಗಿ ತಂಗಿದ್ದರು. ಅರಬ್ಬೀ ಸಮುದ್ರದ ಸಮ್ಮುಖದಲ್ಲಿ ಅಲ್ಲಿ ಕಫ್​ ಪರೇಡ್​ನಲ್ಲಿ ಸೀ ವಿಂಡ್​ ಎಂಬ ವಸತಿ ಸಮುಚ್ಚಯದಲ್ಲಿ 14 ಅಂತಸ್ತಿನ ಭವ್ಯ ಬಂಗ್ಲೆಯಲ್ಲಿ ನೆಲೆಸಿದ್ದರು. ಧೀರೂಭಾಯಿ ಅಂಬಾನಿ ಕಾಲಾಂತರವಾದ ಮೇಲೆ ಒಡಹುಟ್ಟಿದ ಅನಿಲ್ ಅಂಬಾನಿ ಹಿರಿಯ ಸೋದರ ಮುಕೇಶ್​ ಜೊತೆ ಕ್ಯಾತೆ ತೆಗೆದಾಗ ತಾಯಿ ಕೋಕಿಲಾಬೆನ್​ ಅನಿವಾರ್ಯವಾಗಿ ಸೀ ವಿಂಡ್​ ಮನೆಯನ್ನು ತೊರೆದಿದ್ದರು.

Mukesh Ambani 27 story home Antilia which has three helipads

ಬೆಟ್ಟದೆತ್ತರದ ಆಂಟಿಲಾ ಬಂಗಲೆ ಬಿಟ್ಟು ಜಾಂ​ನಗರಕ್ಕೆ ತೆರಳಿದ ಮುಕೇಶ್​ ಅಂಬಾನಿ ಕುಟುಂಬ

ಈಗ ಕೊರೊನಾ ಮಹಾಮಾರಿ ಕಾಡುತ್ತಿರುವಾಗ ಮುಕೇಶ್​ ಅಂಬಾನಿ ಕುಂಟುಂಬಸ್ತರು ಸೈಲೆಂಟಾಗಿ, ಯಾವುದೇ ಪ್ರಚಾರವಿಲ್ಲದೆ ಕೊರೊನಾದಿಂದ ದೂರವಾಗಿ ಉಳಿಯಲು ಗುಜರಾತ್​ನ ಜಾಮ್​ನಗರದಲ್ಲಿರುವ ತಮ್ಮದೇ ರಿಲಯನ್ಸ್​ ನಗರ ಸುರಕ್ಷಿತ ಪ್ರದೇಶ ಎಂದು ಅಲ್ಲಿ ವಾಸಿಸುತ್ತಿದ್ದಾರೆ. ಕೊರೊನಾ ಹಾವಳಿ ಕಡಿಮೆಯಾದ ಮೇಲೆ 2-3 ತಿಂಗಳ ಬಳಿಕ ಆಂಟಿಲಾಗೆ ವಾಪಸು ಬರುವ ಆಲೋಚನೆ ಮಾಡಿದ್ದಾರೆ ಮುಕೇಶ್​ ಅಂಬಾನಿ ಎಂದು ತಿಳಿದುಬಂದಿದೆ.

Published On - 5:06 pm, Thu, 15 April 21

Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!