ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದುಕೊಂಡಿರುವುದು ಎಲ್ಲಿ?

ಕೊರೊನಾ ಮಹಾಮಾರಿ ಕಾಡುತ್ತಿರುವಾಗ ಮುಕೇಶ್​ ಅಂಬಾನಿ ಕುಂಟುಂಬಸ್ತರು ಸೈಲೆಂಟಾಗಿ, ಯಾವುದೇ ಪ್ರಚಾರವಿಲ್ಲದೆ ಕೊರೊನಾದಿಂದ ದೂರವಾಗಿ ಉಳಿಯಲು ಗುಜರಾತ್​ನ ಜಾಮ್​ನಗರದಲ್ಲಿರುವ ತಮ್ಮದೇ ರಿಲಯನ್ಸ್​ ನಗರ ಸುರಕ್ಷಿತ ಪ್ರದೇಶ ಎಂದು ಅಲ್ಲಿ ವಾಸಿಸುತ್ತಿದ್ದಾರೆ. ಕೊರೊನಾ ಹಾವಳಿ ಕಡಿಮೆಯಾದ ಮೇಲೆ 2-3 ತಿಂಗಳ ಬಳಿಕ ಆಂಟಿಲಾಗೆ ವಾಪಸು ರುವ ಆಲೋಚನೆ ಮಾಡಿದ್ದಾರೆ ಮುಕೇಶ್​ ಅಂಬಾನಿ ಎಂದು ತಿಳಿದುಬಂದಿದೆ.

ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದುಕೊಂಡಿರುವುದು ಎಲ್ಲಿ?
ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದಿಕೊಂಡಿರುವುದು ಎಲ್ಲಿ?
ಸಾಧು ಶ್ರೀನಾಥ್​ Edited By:

Updated on: Apr 15, 2021 | 7:15 PM

ದಶಕದ ಹಿಂದೆ ಆಂಟಿಲಾ ಎಂಬ ಬೆಟ್ಟದೆತ್ತರದ ಬಂಗಲೆ ಪ್ರವೇಶಿಸಿದ್ದ ಏಷ್ಯಾದ ಆಗರ್ಭ ಶ್ರೀಮಂತ ಮುಕೇಶ್ ಅಭಮಾನಿ ಕುಟುಂಬಸ್ಥರು ಈಗ ಎಲ್ಲಿದ್ದಾರೆ? ಎಂಬುದು ಕುತೂಹಲಕಾರಿಯಾಗಿದೆ. ಜಸ್ಟ್​ ವಾಜೆ ಎಂಬ ಪೊಲೀಸ್​ ಅಧಿಕಾರಿ ತನ್ನ ಆಂಟಿಲಾ ಎದುರಿನಲ್ಲಿಯೇ ಆರ್​ಡಿಎಕ್ಸ್​ಗಳನ್ನು ಇಟ್ಟುಬಿಟ್ಟ ಎಂಬ ಕಹಿ ಸುದ್ದಿ ಕಿವಿಗೆ ಬಿದ್ದಿದ್ದೇ ಮುಕೇಶ್​ ಅಂಬಾನಿ ಕುಟುಂಬಸ್ತರು ಕನಲಿಹೋಗಿದ್ದರು. ಅಂಥಾದ್ದರಲ್ಲಿ ಮಹಾರಾಷ್ಟ್ರದಲ್ಲಿ ಈಗ ಅತಿ ದೊಡ್ಡ ಭಯೋತ್ಪಾದಕ ಎಂದ್ರೆ ಕೊರೊನಾ ಮಹಾಮಾರಿ ಎಂಬಂತಾಗಿದೆ. ಇಂತಹ ಕೊರೊನಾ ಮಾರಿಗೆ ಹೆದರಿ ಮುಕೇಶ್​ ಅಂಬಾನಿಯ ಇಡೀ ಕುಟುಂಬ ಇದೀಗ ಮುಂಬೈ ಮಹಾನಗರವನ್ನು ತೊರೆದಿದೆ ಎಂದು ತಿಳಿದುಬಂದಿದೆ.

ಹೌದು ಮಹಾರಾಷ್ಟ್ರದಲ್ಲಿ ಕೊರೊನಾ ಕಾಟ ಮಿತಿಮೀರಿದೆ. ಅದು ಎತ್ತರದ ಆಂಟಿಲಾದಲ್ಲಿದ್ದರೂ ಬಿಡುವಂತಹುದ್ದಲ್ಲ; ಹಾಗಿದೆ ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ. ಪರಿಸ್ಥಿತಿ ಹೀಗಿರುವಾಗ ಮುಕೇಶ್​ ಅಂಬಾನಿ ಯಾವ ಧೈರ್ಯದ ಮೇಲೆ ಆಂಟಿಲಾದಲ್ಲಿ ಉಳಿದುಕೊಂಡಾರು? ಹಾಗೆಂದೇ ಅವರ ಇಡೀ ಪರಿವಾರ ಮುಂಬೈ ತೊರೆದು ಹೋಗಿದೆ.

ಕೊಲಾಬದಲ್ಲಿ ಕೂಡುಕುಟುಂಬಸ್ಥರಾಗಿ ತಂಗಿದ್ದ ಅಂಬಾನಿಗಳು..

ಕೊಲಾಬದಲ್ಲಿ ಕೂಡುಕುಟುಂಬಸ್ಥರಾಗಿ ತಂಗಿದ್ದ ಅಂಬಾನಿಗಳು..

2011ರಲ್ಲಿ 24 ಅಂತಸ್ತಿನ ಇದೇ ಆಂಟಿಲಾ ಗೃಹಪ್ರವೇಶ ಮಾಡುವುದಕ್ಕೂ ಮುನ್ನ ಮುಕೇಶ್​ ಅಂಬಾನಿ ಕುಟುಂಬಸ್ತರು ಮುಂಬೈನ ಆಗಿನ ಪ್ರತಿಷ್ಠಿತ ಪ್ರದೇಶವಾದ ಕೊಲಾಬದಲ್ಲಿ ಕೂಡುಕುಟುಂಬವಾಗಿ ತಂಗಿದ್ದರು. ಅರಬ್ಬೀ ಸಮುದ್ರದ ಸಮ್ಮುಖದಲ್ಲಿ ಅಲ್ಲಿ ಕಫ್​ ಪರೇಡ್​ನಲ್ಲಿ ಸೀ ವಿಂಡ್​ ಎಂಬ ವಸತಿ ಸಮುಚ್ಚಯದಲ್ಲಿ 14 ಅಂತಸ್ತಿನ ಭವ್ಯ ಬಂಗ್ಲೆಯಲ್ಲಿ ನೆಲೆಸಿದ್ದರು. ಧೀರೂಭಾಯಿ ಅಂಬಾನಿ ಕಾಲಾಂತರವಾದ ಮೇಲೆ ಒಡಹುಟ್ಟಿದ ಅನಿಲ್ ಅಂಬಾನಿ ಹಿರಿಯ ಸೋದರ ಮುಕೇಶ್​ ಜೊತೆ ಕ್ಯಾತೆ ತೆಗೆದಾಗ ತಾಯಿ ಕೋಕಿಲಾಬೆನ್​ ಅನಿವಾರ್ಯವಾಗಿ ಸೀ ವಿಂಡ್​ ಮನೆಯನ್ನು ತೊರೆದಿದ್ದರು.

ಬೆಟ್ಟದೆತ್ತರದ ಆಂಟಿಲಾ ಬಂಗಲೆ ಬಿಟ್ಟು ಜಾಂ​ನಗರಕ್ಕೆ ತೆರಳಿದ ಮುಕೇಶ್​ ಅಂಬಾನಿ ಕುಟುಂಬ

ಈಗ ಕೊರೊನಾ ಮಹಾಮಾರಿ ಕಾಡುತ್ತಿರುವಾಗ ಮುಕೇಶ್​ ಅಂಬಾನಿ ಕುಂಟುಂಬಸ್ತರು ಸೈಲೆಂಟಾಗಿ, ಯಾವುದೇ ಪ್ರಚಾರವಿಲ್ಲದೆ ಕೊರೊನಾದಿಂದ ದೂರವಾಗಿ ಉಳಿಯಲು ಗುಜರಾತ್​ನ ಜಾಮ್​ನಗರದಲ್ಲಿರುವ ತಮ್ಮದೇ ರಿಲಯನ್ಸ್​ ನಗರ ಸುರಕ್ಷಿತ ಪ್ರದೇಶ ಎಂದು ಅಲ್ಲಿ ವಾಸಿಸುತ್ತಿದ್ದಾರೆ. ಕೊರೊನಾ ಹಾವಳಿ ಕಡಿಮೆಯಾದ ಮೇಲೆ 2-3 ತಿಂಗಳ ಬಳಿಕ ಆಂಟಿಲಾಗೆ ವಾಪಸು ಬರುವ ಆಲೋಚನೆ ಮಾಡಿದ್ದಾರೆ ಮುಕೇಶ್​ ಅಂಬಾನಿ ಎಂದು ತಿಳಿದುಬಂದಿದೆ.

Published On - 5:06 pm, Thu, 15 April 21

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us