AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿ ಬೆಂಗಾವಲು ಪಡೆಗೆ ನಾಲ್ಕು ಐಷಾರಾಮಿ ಬೆಂಜ್​ ಎಸ್​ಯುವಿ ಸೇರ್ಪಡೆ: ಹೇಗಿದೆ ಗೊತ್ತಾ ಭದ್ರತೆ?

ಬೆಂಜ್​ ಜಿ63 ಎಎಂಜಿ ಎಸ್​ಯುವಿ ಐಷಾರಾಮಿ ಜೊತೆಗೆ ಸಾಕಷ್ಟು ಆಯ್ಕೆ ಹೊಂದಿದೆ. 0-100 ಕಿಮೀ ವೇಗವನ್ನು ಕೇವಲ 4.5 ಸೆಕೆಂಡ್​ನಲ್ಲಿ ಮುಟ್ಟುವ ಸಾಮರ್ಥ್ಯವನ್ನು ಈ ವಾಹನ ಹೊಂದಿದೆ. ಗರಿಷ್ಠ 220 ಕಿ.ಮೀ ವೇಗದಲ್ಲಿ ಇದು ಸಂಚರಿಸಬಲ್ಲದು.

ಅಂಬಾನಿ ಬೆಂಗಾವಲು ಪಡೆಗೆ ನಾಲ್ಕು ಐಷಾರಾಮಿ ಬೆಂಜ್​ ಎಸ್​ಯುವಿ ಸೇರ್ಪಡೆ: ಹೇಗಿದೆ ಗೊತ್ತಾ ಭದ್ರತೆ?
ಅಂಬಾನಿ ಸಂಚಾರ ಮಾಡುತ್ತಿರುವ ವಾಹನ
ರಾಜೇಶ್ ದುಗ್ಗುಮನೆ
|

Updated on:Jan 17, 2021 | 6:24 PM

Share

ಮುಂಬೈ: ಭಾರತದ ಶ್ರೀಮಂತರ ಸಾಲಿನಲ್ಲಿ ಮೊದಲಿಗರಾಗಿರುವ ರಿಲಯನ್ಸ್​ ಸಂಸ್ಥೆಯ ಒಡೆಯ ಮುಕೇಶ್​ ಅಂಬಾನಿಗೆ Z+ ಭದ್ರತೆ ಒದಗಿಸಲಾಗುತ್ತಿದೆ. ವಿಶೇಷ ಎಂದರೆ, ಈಗ ಅವರ ಬೆಂಗಾವಲು ಪಡೆಗೆ ನಾಲ್ಕು ಮರ್ಸಿಡಿಸ್​ ಬೆಂಜ್​ ಜಿ63 ಎಎಂಜಿ ಎಸ್​ಯುವಿ ಸೇರ್ಪಡೆ ಆಗಿದೆ.

ಹೌದು, ಮುಂಬೈ ರಸ್ತೆಯಲ್ಲಿ ಅಂಬಾನಿ ಸಂಚಾರ ಮಾಡಿದ್ದು, ಈ ವೇಳೆ ಹೊಸದಾಗಿ ಸೇರ್ಪಡೆ ಆಗಿರುವ ಬೆಂಜ್​ ಜಿ63 ಎಎಂಜಿ ಕಾಣಿಸಿದೆ. ನಾಲ್ಕು ವಾಹನಗಳ ಮೌಲ್ಯ ಸುಮಾರು 12 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಂದರೆ, ಒಂದು ವಾಹನದ ಬೆಲೆ ಮೂರು ಕೋಟಿ ರೂಪಾಯಿ.

ಇದರ ಜೊತೆಗೆ ಸಾಕಷ್ಟು ಐಷಾರಾಮಿ ಕಾರುಗಳು ಅಂಬಾನಿ ಅವರ ಭದ್ರತಾ ಪಡೆಯಲ್ಲಿವೆ. ಲ್ಯಾಂಡ್​ ರೋವರ್ ಡಿಸ್ಕವರಿ ಸ್ಪೋರ್ಟ್ಸ್​​, ಬಿಎಂಡಬ್ಲ್ಯು 5, ಫೋರ್ಡ್ ಎಂಡೀವರ್​, ಟೊಯಾಟೋ ಫಾರ್ಚೂನರ್​ ವಾಹನಗಳು ಅಂಬಾನಿಗೆ ಭದ್ರತೆ ನೀಡುತ್ತಿವೆ.

ಬೆಂಜ್​ ಜಿ63 ಎಎಂಜಿ ಎಸ್​ಯುವಿ ಐಷಾರಾಮಿ ಜೊತೆಗೆ ಸಾಕಷ್ಟು ಆಯ್ಕೆಗಳನ್ನು ಹೊಂದಿದೆ. 0-100 ಕಿಮೀ ವೇಗವನ್ನು ಕೇವಲ 4.5 ಸೆಕೆಂಡ್​ನಲ್ಲಿ ತಲುಪುವ ಸಾಮರ್ಥ್ಯವನ್ನು ಈ ವಾಹನ ಹೊಂದಿದೆ. ಗರಿಷ್ಠ 220 ಕಿ.ಮೀ ವೇಗದಲ್ಲಿ ಸಂಚಾರ ಸಾಧ್ಯ.  ಅಲ್ಲದೆ, ಸಾಕಷ್ಟು ಸುರಕ್ಷಿತ ವಾಹನಗಳ ಸಾಲಿನಲ್ಲಿ ಮರ್ಸಿಡಿಸ್​ ಬೆಂಜ್​ ಜಿ63 ಎಎಂಜಿ ಎಸ್​ಯುವಿ ಕೂಡ ಇದೆ.

ಪ್ರತಿ ತಿಂಗಳು ಅಂಬಾನಿ ಭದ್ರತೆಗೆ 15-16 ಲಕ್ಷ ವೆಚ್ಚವಾಗಲಿದೆ. ಈ ಹಣವನ್ನು ಸರ್ಕಾರಕ್ಕೆ ಅಂಬಾನಿ ಪಾವತಿ ಮಾಡುತ್ತಾರೆ. ಹೀಗಾಗಿ, ಇಲ್ಲಿ ಭದ್ರತಾ ಸಿಬ್ಬಂದಿಗೆ ವಾಹನ ನೀಡಿದ್ದು ಕೂಡ ಅಂಬಾನಿಯೇ.

ಷೇರು ಬೆಲೆಯಲ್ಲಿ ಮೋಸ: ಮುಕೇಶ್ ಅಂಬಾನಿಗೂ ದಂಡ.. ರಿಲಯನ್ಸ್ ಸಮೂಹಕ್ಕೆ 70 ಕೋಟಿ ರೂ ದಂಡ ವಿಧಿಸಿದ ಸೆಬಿ

Published On - 1:37 pm, Sun, 17 January 21

Follow Us
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ