AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಸಿಕೆಗಾಗಿ ಅಮೆರಿಕ ಮೊರೆ ಹೋಗಲು ಮುಂದಾದ ಜನ, ಟೂರಿಸ್ಟ್‌ ಸಂಸ್ಥೆಗಳಿಂದ ಪ್ಯಾಕೇಜ್.. ಇದೆಷ್ಟು ಸೇಫ್

ಕೊರೊನಾ ಹೆಮ್ಮಾರಿ ಅಟ್ಟಹಾಸಕ್ಕೆ ಇಡೀ ವಿಶ್ವವೇ ತತ್ತರಿಸುತ್ತಿದೆ. ಕೊರೊನಾಗೆ ಬೆಚ್ಚಿಬಿದ್ದ ಜನ ಲಸಿಕೆಗಾಗಿ ಅಮೆರಿಕ ಮೊರೆ ಹೋಗ್ತಿದ್ದಾರೆ. ಮುಂಬೈ ಮೂಲದ ಸಂಸ್ಥೆಯೊಂದು ಕೊರೊನಾ ವ್ಯಾಕ್ಸಿನ್ ಟೂರ್ ಆಫರ್ ನೀಡ್ತಿದೆ.

ಲಸಿಕೆಗಾಗಿ ಅಮೆರಿಕ ಮೊರೆ ಹೋಗಲು ಮುಂದಾದ ಜನ, ಟೂರಿಸ್ಟ್‌ ಸಂಸ್ಥೆಗಳಿಂದ ಪ್ಯಾಕೇಜ್.. ಇದೆಷ್ಟು ಸೇಫ್
ಕೊರೊನಾ ವ್ಯಾಕ್ಸಿನ್
ಆಯೇಷಾ ಬಾನು
|

Updated on:Nov 29, 2020 | 9:40 AM

Share

ಬೆಂಗಳೂರು: ಕೊರೊನಾ.. ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿರುವ ಕೊರೊನಾ ಭಯ ಇನ್ನೂ ಕಡಿಮೆಯಾಗಿಲ್ಲ. ಎರಡನೇ ಅಲೆಯ ಆತಂಕ ಹೆಚ್ಚಾಗಿದೆ. ಲಸಿಕೆಯ ನಿರೀಕ್ಷೆಯಲ್ಲಿ ದೇಶ ಕಾಯುತ್ತಿದೆ. ಮೂರು ತಿಂಗಳಲ್ಲಿ ಲಸಿಕೆ ನೀಡಲಾಗುತ್ತೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಕೊರೊನಾ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ಹೀಗಾಗಿ ವ್ಯಾಕ್ಸಿನ್ ಕೊಡಿಸುವ ನೆಪದಲ್ಲಿ ಅಮೆರಿಕ ಟೂರ್‌ ಪ್ಯಾಕೇಜ್ ನೀಡಿ ಹಣ ಮಾಡಲು ಟೂರಿಸ್ಟ್‌ ಸಂಸ್ಥೆಗಳು ಮುಂದಾಗಿವೆ.

ಭಾರತದಲ್ಲಿ ಕೊರೊನಾ ಲಸಿಕೆ ಸಿಗುವ ಮುನ್ನವೇ ಅಮೆರಿಕದಿಂದ ಲಸಿಕೆ ಪಡೆದು ಬೇಗ ಗುಣಮುಖರಾಗಬೇಕು ಎಂದು ಕೆಲವರು ಚಿಂತಿಸುತ್ತಿದ್ದಾರೆ. ಹೀಗಾಗಿ ಭಾರತೀಯರು ಅಮೆರಿಕಕ್ಕೆ ಹಾರಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕೆಲ ಟೂರಿಸ್ಟ್‌ ಸಂಸ್ಥೆಗಳು ವ್ಯಾಕ್ಸಿನ್ ಕೊಡಿಸೋ ನೆಪದಲ್ಲಿ ಜನರನ್ನು ಸೆಳೆಯಲು ಕೊವಿಡ್ ವ್ಯಾಕ್ಸಿನ್ ಟೂರಿಸಂ ‌ಪ್ಯಾಕೇಜ್‌ನಲ್ಲಿ ಭರ್ಜರಿ ಆಫರ್ ನೀಡ್ತಿದ್ದಾರೆ.

ಕೊರೊನಾದಿಂದ ಲಾಭ ಮಾಡಿಕೊಳ್ತಿರುವ ಟೂರಿಸ್ಟ್ ಸಂಸ್ಥೆಗಳು: ಮುಂಬೈ ಮೂಲದ ಸಂಸ್ಥೆಯೊಂದು ಕೊರೊನಾ ವ್ಯಾಕ್ಸಿನ್ ಟೂರ್ ಆಫರ್ ನೀಡಿದೆ. ಕೇವಲ 1 ಲಕ್ಷದ 50 ಸಾವಿರ ರೂಪಾಯಿ ಕೊಟ್ಟರೆ ಅಮೆರಿಕಕ್ಕೆ ಟೂರ್ ಹೋಗಬಹುದು. 4 ದಿನ 4 ಸ್ಟಾರ್ ಡಿಲಕ್ಸ್ ಹೋಟೆಲ್‌ನಲ್ಲಿರುವುದಕ್ಕೆ ವ್ಯವಸ್ಥೆ ಇರುತ್ತೆ. ಏರ್​ಪೋರ್ಟ್​​​ನಿಂದ ಟ್ರಾನ್ಸ್​​ಪೋರ್ಟ್ ಸೌಲಭ್ಯ. ಇವುಗಳ ಜೊತೆಗೆ ಒಂದು ಡೋಸ್ ಕೊರೊನಾ ವ್ಯಾಕ್ಸಿನ್ ಅಂತ ಒಳ್ಳೆ ಒಳ್ಳೆ ಆಕರ್ಶಕ ಆಫರ್​ಗಳನ್ನು ನೀಡುತ್ತಿದ್ದಾರೆ. ಈ ವ್ಯಾಕ್ಸಿನ್ ಪಡೆಯಲು ಕಡ್ಡಾಯ ಅಮೆರಿಕ ವೀಸಾ ಇರಬೇಕು. ಇಂತಹ ಆಫರ್‌ ನೀಡಿ ಟೂರಿಸ್ಟ್ ಸಂಸ್ಥೆಗಳು ಬುಕಿಂಗ್‌ಗೆ ಮುಂದಾಗಿದ್ದಾರೆ.

ಈ‌ ಪ್ಯಾಕೇಜ್​ಗಳು ಎಷ್ಟು ಸೇಫ್ ? ಇನ್ನು ಸಮಯ ಬಳಸಿಕೊಂಡು ಟೂರಿಸ್ಟ್ ಸಂಸ್ಥೆಗಳು ಹಣ ಮಾಡೋಕೆ ಮುಂದಾಗಿವೆ. ಆದರೆ ಇವು ಎಷ್ಟು ಸೇಫ್ ಅನ್ನೋದೇ ಒಂದು ಡೊಡ್ಡ ಪ್ರಶ್ನೆ. ಅಮೆರಿಕಕ್ಕೆ ಹೋದ್ರೆ ವ್ಯಾಕ್ಸಿನ್ ಲಭ್ಯದ ಬಗ್ಗೆ ಮಾಹಿತಿ ಇಲ್ಲ. ವಿದೇಶಿಗರಿಗೆ ಅಲ್ಲಿ ಲಸಿಕೆ ಲಭ್ಯದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅಮೆರಿಕಕ್ಕೆ ಹೋದ್ರು ವ್ಯಾಕ್ಸಿನ್ ಸಿಗೋದು ಡೌಟ್ ಅಂತ ತಜ್ಞರು ಹೇಳ್ತಿದ್ದಾರೆ. ಹೀಗಾಗಿ ಸದ್ಯ ಜನರು ಗೊಂದಲಕ್ಕೆ ಈಡಾಗಿದ್ದಾರೆ.

Published On - 9:39 am, Sun, 29 November 20

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?