AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಸಿಕೆಗಾಗಿ ಅಮೆರಿಕ ಮೊರೆ ಹೋಗಲು ಮುಂದಾದ ಜನ, ಟೂರಿಸ್ಟ್‌ ಸಂಸ್ಥೆಗಳಿಂದ ಪ್ಯಾಕೇಜ್.. ಇದೆಷ್ಟು ಸೇಫ್

ಕೊರೊನಾ ಹೆಮ್ಮಾರಿ ಅಟ್ಟಹಾಸಕ್ಕೆ ಇಡೀ ವಿಶ್ವವೇ ತತ್ತರಿಸುತ್ತಿದೆ. ಕೊರೊನಾಗೆ ಬೆಚ್ಚಿಬಿದ್ದ ಜನ ಲಸಿಕೆಗಾಗಿ ಅಮೆರಿಕ ಮೊರೆ ಹೋಗ್ತಿದ್ದಾರೆ. ಮುಂಬೈ ಮೂಲದ ಸಂಸ್ಥೆಯೊಂದು ಕೊರೊನಾ ವ್ಯಾಕ್ಸಿನ್ ಟೂರ್ ಆಫರ್ ನೀಡ್ತಿದೆ.

ಲಸಿಕೆಗಾಗಿ ಅಮೆರಿಕ ಮೊರೆ ಹೋಗಲು ಮುಂದಾದ ಜನ, ಟೂರಿಸ್ಟ್‌ ಸಂಸ್ಥೆಗಳಿಂದ ಪ್ಯಾಕೇಜ್.. ಇದೆಷ್ಟು ಸೇಫ್
ಕೊರೊನಾ ವ್ಯಾಕ್ಸಿನ್
ಆಯೇಷಾ ಬಾನು
|

Updated on:Nov 29, 2020 | 9:40 AM

Share

ಬೆಂಗಳೂರು: ಕೊರೊನಾ.. ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿರುವ ಕೊರೊನಾ ಭಯ ಇನ್ನೂ ಕಡಿಮೆಯಾಗಿಲ್ಲ. ಎರಡನೇ ಅಲೆಯ ಆತಂಕ ಹೆಚ್ಚಾಗಿದೆ. ಲಸಿಕೆಯ ನಿರೀಕ್ಷೆಯಲ್ಲಿ ದೇಶ ಕಾಯುತ್ತಿದೆ. ಮೂರು ತಿಂಗಳಲ್ಲಿ ಲಸಿಕೆ ನೀಡಲಾಗುತ್ತೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಕೊರೊನಾ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ಹೀಗಾಗಿ ವ್ಯಾಕ್ಸಿನ್ ಕೊಡಿಸುವ ನೆಪದಲ್ಲಿ ಅಮೆರಿಕ ಟೂರ್‌ ಪ್ಯಾಕೇಜ್ ನೀಡಿ ಹಣ ಮಾಡಲು ಟೂರಿಸ್ಟ್‌ ಸಂಸ್ಥೆಗಳು ಮುಂದಾಗಿವೆ.

ಭಾರತದಲ್ಲಿ ಕೊರೊನಾ ಲಸಿಕೆ ಸಿಗುವ ಮುನ್ನವೇ ಅಮೆರಿಕದಿಂದ ಲಸಿಕೆ ಪಡೆದು ಬೇಗ ಗುಣಮುಖರಾಗಬೇಕು ಎಂದು ಕೆಲವರು ಚಿಂತಿಸುತ್ತಿದ್ದಾರೆ. ಹೀಗಾಗಿ ಭಾರತೀಯರು ಅಮೆರಿಕಕ್ಕೆ ಹಾರಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕೆಲ ಟೂರಿಸ್ಟ್‌ ಸಂಸ್ಥೆಗಳು ವ್ಯಾಕ್ಸಿನ್ ಕೊಡಿಸೋ ನೆಪದಲ್ಲಿ ಜನರನ್ನು ಸೆಳೆಯಲು ಕೊವಿಡ್ ವ್ಯಾಕ್ಸಿನ್ ಟೂರಿಸಂ ‌ಪ್ಯಾಕೇಜ್‌ನಲ್ಲಿ ಭರ್ಜರಿ ಆಫರ್ ನೀಡ್ತಿದ್ದಾರೆ.

ಕೊರೊನಾದಿಂದ ಲಾಭ ಮಾಡಿಕೊಳ್ತಿರುವ ಟೂರಿಸ್ಟ್ ಸಂಸ್ಥೆಗಳು: ಮುಂಬೈ ಮೂಲದ ಸಂಸ್ಥೆಯೊಂದು ಕೊರೊನಾ ವ್ಯಾಕ್ಸಿನ್ ಟೂರ್ ಆಫರ್ ನೀಡಿದೆ. ಕೇವಲ 1 ಲಕ್ಷದ 50 ಸಾವಿರ ರೂಪಾಯಿ ಕೊಟ್ಟರೆ ಅಮೆರಿಕಕ್ಕೆ ಟೂರ್ ಹೋಗಬಹುದು. 4 ದಿನ 4 ಸ್ಟಾರ್ ಡಿಲಕ್ಸ್ ಹೋಟೆಲ್‌ನಲ್ಲಿರುವುದಕ್ಕೆ ವ್ಯವಸ್ಥೆ ಇರುತ್ತೆ. ಏರ್​ಪೋರ್ಟ್​​​ನಿಂದ ಟ್ರಾನ್ಸ್​​ಪೋರ್ಟ್ ಸೌಲಭ್ಯ. ಇವುಗಳ ಜೊತೆಗೆ ಒಂದು ಡೋಸ್ ಕೊರೊನಾ ವ್ಯಾಕ್ಸಿನ್ ಅಂತ ಒಳ್ಳೆ ಒಳ್ಳೆ ಆಕರ್ಶಕ ಆಫರ್​ಗಳನ್ನು ನೀಡುತ್ತಿದ್ದಾರೆ. ಈ ವ್ಯಾಕ್ಸಿನ್ ಪಡೆಯಲು ಕಡ್ಡಾಯ ಅಮೆರಿಕ ವೀಸಾ ಇರಬೇಕು. ಇಂತಹ ಆಫರ್‌ ನೀಡಿ ಟೂರಿಸ್ಟ್ ಸಂಸ್ಥೆಗಳು ಬುಕಿಂಗ್‌ಗೆ ಮುಂದಾಗಿದ್ದಾರೆ.

ಈ‌ ಪ್ಯಾಕೇಜ್​ಗಳು ಎಷ್ಟು ಸೇಫ್ ? ಇನ್ನು ಸಮಯ ಬಳಸಿಕೊಂಡು ಟೂರಿಸ್ಟ್ ಸಂಸ್ಥೆಗಳು ಹಣ ಮಾಡೋಕೆ ಮುಂದಾಗಿವೆ. ಆದರೆ ಇವು ಎಷ್ಟು ಸೇಫ್ ಅನ್ನೋದೇ ಒಂದು ಡೊಡ್ಡ ಪ್ರಶ್ನೆ. ಅಮೆರಿಕಕ್ಕೆ ಹೋದ್ರೆ ವ್ಯಾಕ್ಸಿನ್ ಲಭ್ಯದ ಬಗ್ಗೆ ಮಾಹಿತಿ ಇಲ್ಲ. ವಿದೇಶಿಗರಿಗೆ ಅಲ್ಲಿ ಲಸಿಕೆ ಲಭ್ಯದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅಮೆರಿಕಕ್ಕೆ ಹೋದ್ರು ವ್ಯಾಕ್ಸಿನ್ ಸಿಗೋದು ಡೌಟ್ ಅಂತ ತಜ್ಞರು ಹೇಳ್ತಿದ್ದಾರೆ. ಹೀಗಾಗಿ ಸದ್ಯ ಜನರು ಗೊಂದಲಕ್ಕೆ ಈಡಾಗಿದ್ದಾರೆ.

Published On - 9:39 am, Sun, 29 November 20

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ