AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಕೋಟಿ ಡೋಸ್​ ಕೊವಿಡ್​ 19 ಲಸಿಕೆ ನೀಡಿ, ಹೆಗ್ಗಳಿಕೆಗೆ ಪಾತ್ರವಾದ ಜಿಲ್ಲೆ ಇದು; ಕೊವಿನ್​ ಆ್ಯಪ್​​ನಲ್ಲಿ ಮಾಹಿತಿ ಬಿಡುಗಡೆ

ಮುಂಬೈನಲ್ಲಿ ಇದುವರೆಗೆ ಒಟ್ಟು 507 ಕೇಂದ್ರಗಳಲ್ಲಿ ಕೊವಿಡ್​ 19 ಲಸಿಕೆ ನೀಡಲಾಗಿದೆ. ಅದರಲ್ಲಿ 325 ಸರ್ಕಾರಿ ಕೊರೊನಾ ಲಸಿಕೆ ಕೇಂದ್ರಗಳಾಗಿದ್ದು, 182 ಖಾಸಗಿ ಆಸ್ಪತ್ರೆಗಳ ಕೇಂದ್ರಗಳಾಗಿವೆ.

1 ಕೋಟಿ ಡೋಸ್​ ಕೊವಿಡ್​ 19 ಲಸಿಕೆ ನೀಡಿ, ಹೆಗ್ಗಳಿಕೆಗೆ ಪಾತ್ರವಾದ ಜಿಲ್ಲೆ ಇದು; ಕೊವಿನ್​ ಆ್ಯಪ್​​ನಲ್ಲಿ ಮಾಹಿತಿ ಬಿಡುಗಡೆ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Sep 04, 2021 | 1:20 PM

Share

ಇದುವರೆಗೆ 1 ಕೋಟಿಗೂ ಅಧಿಕ ಡೋಸ್​ ಲಸಿಕೆ (Covid 19 Vaccine) ನೀಡಿದ ದೇಶದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಮುಂಬೈ (Mumbai) ಪಾತ್ರವಾಗಿದೆ. ದೇಶದಲ್ಲಿ ಜನವರಿಯಿಂದ ಕೊವಿಡ್​ 19 ಲಸಿಕೆ ಅಭಿಯಾನ ಶುರುವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಮುಂಬೈನಲ್ಲಿ 1,00,63,497 ಡೋಸ್​ ಲಸಿಕೆ ನೀಡಲಾಗಿದೆ. 72,75,134 ಜನರಿಗೆ ಮೊದಲ ಡೋಸ್​ ಮಾತ್ರ ಲಸಿಕೆ ಪಡೆದಿದ್ದು, 27,88,363 ಜನರಿಗೆ ಎರಡೂ ಡೋಸ್​ ಸಂಪೂರ್ಣವಾಗಿದೆ. ಈ ಬಗ್ಗೆ ಕೊವಿನ್​ ಆ್ಯಪ್ (CoWIN App)​​ನಲ್ಲಿ ಅಪ್​ಡೇಟ್​ ಆಗಿದೆ.

ಮುಂಬೈನಲ್ಲಿ ಇದುವರೆಗೆ ಒಟ್ಟು 507 ಕೇಂದ್ರಗಳಲ್ಲಿ ಕೊವಿಡ್​ 19 ಲಸಿಕೆ ನೀಡಲಾಗಿದೆ. ಅದರಲ್ಲಿ 325 ಸರ್ಕಾರಿ ಕೊರೊನಾ ಲಸಿಕೆ ಕೇಂದ್ರಗಳಾಗಿದ್ದು, 182 ಖಾಸಗಿ ಆಸ್ಪತ್ರೆಗಳ ಕೇಂದ್ರಗಳಾಗಿವೆ. ಕಳೆದ 30 ದಿನಗಳಲ್ಲಿ ಆಗಸ್ಟ್​​ 27ರಂದು ಅತಿಹೆಚ್ಚು ಅಂದರೆ 1,77,017 ಜನರಿಗೆ ಕೊವಿಡ್ 19 ಲಸಿಕೆ ನೀಡಲಾಗಿದೆ. ಹಾಗೇ, ಆಗಸ್ಟ್​ 21ರಂದು 1,63,775 ಡೋಸ್, ಆಗಸ್ಟ್​ 23ರಂದು 1,53,881 ಡೋಸ್​ ಲಸಿಕೆ ನೀಡಲಾಗಿದೆ ಎಂದು ಕೊವಿನ್​​ನಲ್ಲಿ ಉಲ್ಲೇಖಿಸಲಾಗಿದೆ.

ಮುಂಬೈನಲ್ಲಿ ಕಳೆದ ಮೂರು ದಿನಗಳಿಂದ, ಒಂದು ದಿನದಲ್ಲಿ 400ಕ್ಕೂ ಅಧಿಕ ಕೊವಿಡ್​ 19 ಪ್ರಕರಣಗಳು ದಾಖಲಾಗುತ್ತಿವೆ. ಹಾಗೇ, ಶುಕ್ರವಾರ ಕೂಡ 422 ಕೇಸ್​ಗಳು ದಾಖಲಾಗಿವೆ. ಇದೀಗ ಒಟ್ಟಾರೆ ಸೋಂಕಿತರ ಸಂಖ್ಯೆ  7,45,434ಕ್ಕೆ ಏರಿಕೆಯಾಗಿದ್ದು, ಇಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ  15,987ಕ್ಕೆ ಏರಿದೆ ಎಂದು ಬೃಹನ್​ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ (BMC) ಮಾಹಿತಿ ನೀಡಿದೆ.  ಏಪ್ರಿಲ್​ನಲ್ಲಿ ಮುಂಬೈನಲ್ಲಿ ಒಂದು ದಿನದಲ್ಲಿ 11,163 ಕೊವಿಡ್​ 19 ಪ್ರಕರಣಗಳು ದಾಖಲಾಗಿದ್ದು, ಸದ್ಯ ಈ ವರ್ಷದ ಅತ್ಯಂತ ಹೆಚ್ಚು ಕೇಸ್​ಗಳು ಅದೇ ಆಗಿದೆ. ಇನ್ನು ಕೊವಿಡ್​ 19 ಶುರುವಾದಾಗಿನಿಂದಲೂ ಮುಂಬೈ-ಮಹಾರಾಷ್ಟ್ರದಲ್ಲಿ ವಿಪರೀತ ಸೋಂಕಿನ ಸಂಖ್ಯೆ ಇದ್ದೇಇದೆ. ಈಗ  ತುಸು ಇಳಿಮುಖವಾಗಿದೆ. ಲಸಿಕಾ ಅಭಿಯಾನಕ್ಕೂ ವೇಗ ಸಿಕ್ಕಿದೆ.

ಇದನ್ನ ಓದಿ: SBI Internet Banking: ಇಂದು 3 ತಾಸು ಸ್ಥಗಿತಗೊಳ್ಳಲಿರುವ ಎಸ್​ಬಿಐ ಇಂಟರ್​ನೆಟ್​​ ಬ್ಯಾಂಕಿಂಗ್​, ಯೊನೊ ಆ್ಯಪ್​ ಸೇವೆಗಳು; ಸಮಯ ಹೀಗಿದೆ ನೋಡಿ

Virender Sehwag: ಕೆಬಿಸಿಯಲ್ಲಿ ಭರ್ಜರಿ ಆಟವಾಡಿದ ವೀರು- ದಾದಾ; ಸೆಹ್ವಾಗ್- ಗಂಗೂಲಿಗೆ ₹ 25 ಲಕ್ಷ ಗೆದ್ದುಕೊಟ್ಟ ಪ್ರಶ್ನೆ ಇಲ್ಲಿದೆ

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ