AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಕೋಟಿ ಡೋಸ್​ ಕೊವಿಡ್​ 19 ಲಸಿಕೆ ನೀಡಿ, ಹೆಗ್ಗಳಿಕೆಗೆ ಪಾತ್ರವಾದ ಜಿಲ್ಲೆ ಇದು; ಕೊವಿನ್​ ಆ್ಯಪ್​​ನಲ್ಲಿ ಮಾಹಿತಿ ಬಿಡುಗಡೆ

ಮುಂಬೈನಲ್ಲಿ ಇದುವರೆಗೆ ಒಟ್ಟು 507 ಕೇಂದ್ರಗಳಲ್ಲಿ ಕೊವಿಡ್​ 19 ಲಸಿಕೆ ನೀಡಲಾಗಿದೆ. ಅದರಲ್ಲಿ 325 ಸರ್ಕಾರಿ ಕೊರೊನಾ ಲಸಿಕೆ ಕೇಂದ್ರಗಳಾಗಿದ್ದು, 182 ಖಾಸಗಿ ಆಸ್ಪತ್ರೆಗಳ ಕೇಂದ್ರಗಳಾಗಿವೆ.

1 ಕೋಟಿ ಡೋಸ್​ ಕೊವಿಡ್​ 19 ಲಸಿಕೆ ನೀಡಿ, ಹೆಗ್ಗಳಿಕೆಗೆ ಪಾತ್ರವಾದ ಜಿಲ್ಲೆ ಇದು; ಕೊವಿನ್​ ಆ್ಯಪ್​​ನಲ್ಲಿ ಮಾಹಿತಿ ಬಿಡುಗಡೆ
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on: Sep 04, 2021 | 1:20 PM

Share

ಇದುವರೆಗೆ 1 ಕೋಟಿಗೂ ಅಧಿಕ ಡೋಸ್​ ಲಸಿಕೆ (Covid 19 Vaccine) ನೀಡಿದ ದೇಶದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಮುಂಬೈ (Mumbai) ಪಾತ್ರವಾಗಿದೆ. ದೇಶದಲ್ಲಿ ಜನವರಿಯಿಂದ ಕೊವಿಡ್​ 19 ಲಸಿಕೆ ಅಭಿಯಾನ ಶುರುವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಮುಂಬೈನಲ್ಲಿ 1,00,63,497 ಡೋಸ್​ ಲಸಿಕೆ ನೀಡಲಾಗಿದೆ. 72,75,134 ಜನರಿಗೆ ಮೊದಲ ಡೋಸ್​ ಮಾತ್ರ ಲಸಿಕೆ ಪಡೆದಿದ್ದು, 27,88,363 ಜನರಿಗೆ ಎರಡೂ ಡೋಸ್​ ಸಂಪೂರ್ಣವಾಗಿದೆ. ಈ ಬಗ್ಗೆ ಕೊವಿನ್​ ಆ್ಯಪ್ (CoWIN App)​​ನಲ್ಲಿ ಅಪ್​ಡೇಟ್​ ಆಗಿದೆ.

ಮುಂಬೈನಲ್ಲಿ ಇದುವರೆಗೆ ಒಟ್ಟು 507 ಕೇಂದ್ರಗಳಲ್ಲಿ ಕೊವಿಡ್​ 19 ಲಸಿಕೆ ನೀಡಲಾಗಿದೆ. ಅದರಲ್ಲಿ 325 ಸರ್ಕಾರಿ ಕೊರೊನಾ ಲಸಿಕೆ ಕೇಂದ್ರಗಳಾಗಿದ್ದು, 182 ಖಾಸಗಿ ಆಸ್ಪತ್ರೆಗಳ ಕೇಂದ್ರಗಳಾಗಿವೆ. ಕಳೆದ 30 ದಿನಗಳಲ್ಲಿ ಆಗಸ್ಟ್​​ 27ರಂದು ಅತಿಹೆಚ್ಚು ಅಂದರೆ 1,77,017 ಜನರಿಗೆ ಕೊವಿಡ್ 19 ಲಸಿಕೆ ನೀಡಲಾಗಿದೆ. ಹಾಗೇ, ಆಗಸ್ಟ್​ 21ರಂದು 1,63,775 ಡೋಸ್, ಆಗಸ್ಟ್​ 23ರಂದು 1,53,881 ಡೋಸ್​ ಲಸಿಕೆ ನೀಡಲಾಗಿದೆ ಎಂದು ಕೊವಿನ್​​ನಲ್ಲಿ ಉಲ್ಲೇಖಿಸಲಾಗಿದೆ.

ಮುಂಬೈನಲ್ಲಿ ಕಳೆದ ಮೂರು ದಿನಗಳಿಂದ, ಒಂದು ದಿನದಲ್ಲಿ 400ಕ್ಕೂ ಅಧಿಕ ಕೊವಿಡ್​ 19 ಪ್ರಕರಣಗಳು ದಾಖಲಾಗುತ್ತಿವೆ. ಹಾಗೇ, ಶುಕ್ರವಾರ ಕೂಡ 422 ಕೇಸ್​ಗಳು ದಾಖಲಾಗಿವೆ. ಇದೀಗ ಒಟ್ಟಾರೆ ಸೋಂಕಿತರ ಸಂಖ್ಯೆ  7,45,434ಕ್ಕೆ ಏರಿಕೆಯಾಗಿದ್ದು, ಇಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ  15,987ಕ್ಕೆ ಏರಿದೆ ಎಂದು ಬೃಹನ್​ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ (BMC) ಮಾಹಿತಿ ನೀಡಿದೆ.  ಏಪ್ರಿಲ್​ನಲ್ಲಿ ಮುಂಬೈನಲ್ಲಿ ಒಂದು ದಿನದಲ್ಲಿ 11,163 ಕೊವಿಡ್​ 19 ಪ್ರಕರಣಗಳು ದಾಖಲಾಗಿದ್ದು, ಸದ್ಯ ಈ ವರ್ಷದ ಅತ್ಯಂತ ಹೆಚ್ಚು ಕೇಸ್​ಗಳು ಅದೇ ಆಗಿದೆ. ಇನ್ನು ಕೊವಿಡ್​ 19 ಶುರುವಾದಾಗಿನಿಂದಲೂ ಮುಂಬೈ-ಮಹಾರಾಷ್ಟ್ರದಲ್ಲಿ ವಿಪರೀತ ಸೋಂಕಿನ ಸಂಖ್ಯೆ ಇದ್ದೇಇದೆ. ಈಗ  ತುಸು ಇಳಿಮುಖವಾಗಿದೆ. ಲಸಿಕಾ ಅಭಿಯಾನಕ್ಕೂ ವೇಗ ಸಿಕ್ಕಿದೆ.

ಇದನ್ನ ಓದಿ: SBI Internet Banking: ಇಂದು 3 ತಾಸು ಸ್ಥಗಿತಗೊಳ್ಳಲಿರುವ ಎಸ್​ಬಿಐ ಇಂಟರ್​ನೆಟ್​​ ಬ್ಯಾಂಕಿಂಗ್​, ಯೊನೊ ಆ್ಯಪ್​ ಸೇವೆಗಳು; ಸಮಯ ಹೀಗಿದೆ ನೋಡಿ

Virender Sehwag: ಕೆಬಿಸಿಯಲ್ಲಿ ಭರ್ಜರಿ ಆಟವಾಡಿದ ವೀರು- ದಾದಾ; ಸೆಹ್ವಾಗ್- ಗಂಗೂಲಿಗೆ ₹ 25 ಲಕ್ಷ ಗೆದ್ದುಕೊಟ್ಟ ಪ್ರಶ್ನೆ ಇಲ್ಲಿದೆ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!