AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Internet Banking: ಇಂದು 3 ತಾಸು ಸ್ಥಗಿತಗೊಳ್ಳಲಿರುವ ಎಸ್​ಬಿಐ ಇಂಟರ್​ನೆಟ್​​ ಬ್ಯಾಂಕಿಂಗ್​, ಯೊನೊ ಆ್ಯಪ್​ ಸೇವೆಗಳು; ಸಮಯ ಹೀಗಿದೆ ನೋಡಿ

SBI Yono App: ಎಸ್​ಬಿಐನ ಯೊನೊ ಆ್ಯಪ್​​ನಲ್ಲಿ 34.5 ಮಿಲಿಯನ್​ ಜನರು ರಿಜಿಸ್ಟರ್​ ಮಾಡಿಕೊಂಡಿದ್ದಾರೆ. ಏನಿಲ್ಲವೆಂದರೂ ದಿನಕ್ಕೆ 9 ಮಿಲಿಯನ್​ ಜನರು ಲಾಗಿನ್ ಆಗುತ್ತಾರೆ. 

SBI Internet Banking: ಇಂದು 3 ತಾಸು ಸ್ಥಗಿತಗೊಳ್ಳಲಿರುವ ಎಸ್​ಬಿಐ ಇಂಟರ್​ನೆಟ್​​ ಬ್ಯಾಂಕಿಂಗ್​, ಯೊನೊ ಆ್ಯಪ್​ ಸೇವೆಗಳು; ಸಮಯ ಹೀಗಿದೆ ನೋಡಿ
ಎಸ್​ಬಿಐ
TV9 Web
| Edited By: |

Updated on:Sep 04, 2021 | 12:31 PM

Share

ಇಂಟರ್​ನೆಟ್​ ಬ್ಯಾಂಕಿಂಗ್ (Internet Banking Services)​ ಸೇವೆಗಳಾದ ಯೊನೊ (Yono), ಯೊನೊ ಲೈಟ್ (Yono Lite)​, ಯೊನೊ ಬಿಜಿನೆಸ್ (Yono Business)​, ಐಎಂಪಿಎಸ್ (IMPS)​ ಮತ್ತು ಯುಪಿಐ (UPI)ಗಳು ಇಂದು ಸುಮಾರು ಮೂರು ತಾಸುಗಳ ಕಾಲ ಸ್ಥಗಿತಗೊಳ್ಳಲಿವೆ ಅಥವಾ ಅವುಗಳ ಕಾರ್ಯದಲ್ಲಿ ಅಡಚಣೆಯಾಗಲಿದೆ ಎಂದು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (State Bank Of India) ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ತಿಳಿಸಿದೆ. ಸೆಪ್ಟೆಂಬರ್​ 4ರ ರಾತ್ರಿ 10.30ಯಿಂದ ರಾತ್ರಿ 1.30 (ಸೆಪ್ಟೆಂಬರ್​ 5)ರವರೆಗೆ ಯೊನೊ, ಯೊನೊ ಲೈಟ್​, ಯೊನೊ, ಯೊನೊ ಲೈಟ್​, ಯೊನೊ ಬಿಜಿನೆಸ್​, ಐಎಂಪಿಎಸ್​ ಮತ್ತು ಯುಪಿಐಗಳಿಗೆ ಸಂಬಂಧಪ್ಟ ನಿರ್ವಹಣಾ ಕೆಲಸ ಇರುವುದರಿಂದ ಈ ಅಡಚಣೆ ಉಂಟಾಗಲಿದೆ ಎಂದು ಎಸ್​​ಬಿಐ ಮಾಹಿತಿ ನೀಡಿದೆ. ಹಾಗೇ ಅನಾನುಕೂಲತೆಗಾಗಿ ಕ್ಷಮೆಯನ್ನೂ ಕೇಳಿದೆ.

ಬ್ಯಾಂಕ್​ಗಳು ಕೆಲವು ನಿರ್ವಹಣಾ ಕೆಲಸ ಮತ್ತು ತಮ್ಮ ಸೇವೆಗಳಲ್ಲಿ ಏನಾದರೂ ಅಪ್​ಗ್ರೇಡ್ ಮಾಡಿಕೊಳ್ಳುವ ಕಾರ್ಯ ಇದ್ದಾಗ ಹೀಗೆ ನೆಟ್​ಬ್ಯಾಂಕಿಂಗ್​, ಎಟಿಎಂ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿಕೊಳ್ಳುತ್ತವೆ. ಹಾಗೇ, ಇದೀಗ ಎಸ್​ಬಿಐ ಕೂಡ ತನ್ನ ಡಿಜಿಟಲ್​ ಬ್ಯಾಂಕಿಂಗ್​ ಸೇವೆಗಳ ನಿರ್ವಹಣೆಗಾಗಿ ಇಂದು ರಾತ್ರಿ 10.30ರಿಂದ ಮೂರು ತಾಸು ಸ್ಥಗಿತಗೊಳಿಸಲಿದೆ. ದೇಶದ ಅತ್ಯಂತ ದೊಡ್ಡ ಬ್ಯಾಂಕ್​ ಆಗಿರುವ ಎಸ್​ಬಿಐ 85 ಮಿಲಿಯನ್​ಗೂ ಅಧಿಕ ಇಂಟರ್​ನೆಟ್​ ಬ್ಯಾಂಕಿಂಗ್​ ಬಳಕೆದಾರರನ್ನು ಹೊಂದಿದೆ. ಹಾಗೇ, ಮೊಬೈಲ್​ ಬ್ಯಾಂಕಿಂಗ್​ ಬಳಕೆದಾರರು 19 ಮಿಲಿಯನ್​ಗೂ ಹೆಚ್ಚಿನ ಜನರಿದ್ದಾರೆ. ಇದರ ಯೊನೊ ಆ್ಯಪ್​​ನಲ್ಲಿ 34.5 ಮಿಲಿಯನ್​ ಜನರು ರಿಜಿಸ್ಟರ್​ ಮಾಡಿಕೊಂಡಿದ್ದಾರೆ. ಏನಿಲ್ಲವೆಂದರೂ ದಿನಕ್ಕೆ 9 ಮಿಲಿಯನ್​ ಜನರು ಲಾಗಿನ್ ಆಗುತ್ತಾರೆ.

ಇದನ್ನೂ ಓದಿ: ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಆದಾಯ ಮಿತಿಗೆ ತಿದ್ದುಪಡಿ ತರಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

ಬೆಳಗಾವಿಯಲ್ಲಿ ಬಿಜೆಪಿ ಶಾಸಕನ ಹುಟ್ಟು ಹಬ್ಬದ ವಿಡಿಯೋ ವೈರಲ್; ಹೂವಿನ ಮಳೆ ಸುರಿಸಿದ ಪೊಲೀಸರು

Published On - 12:30 pm, Sat, 4 September 21

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?