AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾನ್​ಹೋಲ್ ದುರಂತದಿಂದ ಮುಂಬೈ ಮಹಿಳೆ ಸಾವಿನ ಬಳಿ ಹೆಚ್ಚಾಯ್ತು ಚರ್ಚೆ

ಎರಕಹೊಯ್ದ ಕಬ್ಬಿಣದಿಂದ ಮ್ಯಾನ್ ಹೋಲ್ ಕವರ್​ಗಳನ್ನು ಮಾಡಲಾಗಿದ್ದು, ಕಾಳಸಂತೆಯಲ್ಲಿ ಉತ್ತಮ ಬೆಲೆ ಸಿಗುತ್ತಿವೆ. ಇವುಗಳು ಸಣ್ಣ ಕಳ್ಳರ ಟಾರ್ಗೆಟ್ ಆಗಿದೆ. ಮಹಿಳೆಯೊಬ್ಬರು ಮ್ಯಾನ್​ಹೋಲ್​ಗೆ ಬಿದ್ದು ಸಾವನ್ನಪ್ಪಿದ ಬಳಿಕ ಈ ಬಗ್ಗೆ ಚರ್ಚೆಗಳು ಶುರುವಾಗಿವೆ.

ಮ್ಯಾನ್​ಹೋಲ್ ದುರಂತದಿಂದ ಮುಂಬೈ ಮಹಿಳೆ ಸಾವಿನ ಬಳಿ ಹೆಚ್ಚಾಯ್ತು ಚರ್ಚೆ
ಮ್ಯಾನ್‌ಹೋಲ್‌
ಸುಷ್ಮಾ ಚಕ್ರೆ
|

Updated on: Sep 26, 2024 | 9:17 PM

Share

ಮುಂಬೈ: ಕಳೆದ ರಾತ್ರಿ ಜಲಾವೃತ ರಸ್ತೆಯ ಮ್ಯಾನ್‌ಹೋಲ್‌ಗೆ ಬಿದ್ದು 45 ವರ್ಷದ ವಿಮಲ ಅನಿಲ್ ಗಾಯಕ್‌ವಾಡ್ ಸಾವನ್ನಪ್ಪಿದ್ದು, ಮುಂಬೈನ ಮ್ಯಾನ್‌ಹೋಲ್ ದುರಂತಗಳು ಮತ್ತು ಕಳೆದ ಕೆಲವು ವರ್ಷಗಳಿಂದ ಸಾವನ್ನಪ್ಪಿದ ಜನರ ಸಂಖ್ಯೆಯ ಮೇಲೆ ಬೆಳಕು ಚೆಲ್ಲಿದೆ. ಈ ವರ್ಷವೇ ಮುಂಬೈ ಸಿಟಿಯಲ್ಲಿ ಅತ್ಯಧಿಕ ಮ್ಯಾನ್‌ಹೋಲ್ ದುರಂತಗಳು ಸಂಭವಿಸಿ 7 ಜನರು ಸಾವನ್ನಪ್ಪಿದ್ದಾರೆ.

ಕಳೆದ ತಿಂಗಳು, ಸುನಿಲ್ ವಾಕೋಡ್ ಎಂಬ ಕಾರ್ಮಿಕನು ನಾಗರಿಕ ಮಂಡಳಿಯ ಅನುಮತಿಯಿಲ್ಲದೆ ಚರಂಡಿಗಳನ್ನು ಸ್ವಚ್ಛಗೊಳಿಸಲು ಬೋರಿವಲಿ ಪಶ್ಚಿಮದಲ್ಲಿ ಬಿಎಂಸಿ ಮ್ಯಾನ್‌ಹೋಲ್ ಅನ್ನು ತೆರೆದಿದ್ದ. ಬಳಿಕ ಅದರಲ್ಲಿ ಬಿದ್ದು ಮೃತಪಟ್ಟಿದ್ದ. ಇದಕ್ಕೂ ಮೊದಲು, ಏಪ್ರಿಲ್‌ನಲ್ಲಿ ರಘು ಸೋಲಂಕಿ, ಜಾವೇದ್ ಶೇಖ್ ಮತ್ತು ಅವರ ಸಹೋದರ ಅಕಿಬ್ ಶೇಖ್ ಮಲಾಡ್ ಪೂರ್ವದಲ್ಲಿ ಮ್ಯಾನ್‌ಹೋಲ್‌ಗೆ ಬಿದ್ದಿದ್ದರು. 30 ಅಡಿ ಆಳದ ಮ್ಯಾನ್‌ಹೋಲ್‌ಗೆ ರಘು ಬಿದ್ದಿದ್ದು, ಸಹೋದರರಾದ ಜಾವೇದ್ ಮತ್ತು ಅಕಿಬ್ ಅವರನ್ನು ರಕ್ಷಿಸಲು ಯತ್ನಿಸಿದ್ದರು. ಈ ಘಟನೆಯಲ್ಲಿ ರಘು ಮತ್ತು ಜಾವೇದ್ ಸಾವನ್ನಪ್ಪಿದ್ದರು.

ಮಾರ್ಚ್‌ನಲ್ಲಿ ಮ್ಯಾನ್‌ಹೋಲ್ ದುರಂತವು 3 ಜೀವಗಳನ್ನು ಬಲಿ ತೆಗೆದುಕೊಂಡಿತು. ಕಾರ್ಮಿಕರಾದ ಸೂರಜ್ ಕೇವಟ್, ಬಿಕಾಸ್ ಕೇವಟ್ ಮತ್ತು ರಾಮ್ಲಗನ್ ಕೇವಟ್ ಮಲಾಡ್ ಪಶ್ಚಿಮದಲ್ಲಿ ಒಳಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಅದರ ಚೇಂಬರ್‌ಗೆ ಬಿದ್ದು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಮುಂಬೈನಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಮ್ಯಾನ್‌ಹೋಲ್‌ಗೆ ಬಿದ್ದು ಇದೀಗ 45 ವರ್ಷದ ವಿಮಲ ಅನಿಲ್ ಗಾಯಕ್ವಾಡ್ ಸಾವನ್ನಪ್ಪಿದ್ದಾರೆ. 2017ರಲ್ಲಿ, ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ದೀಪಕ್ ಅಮ್ರಾಪುರ್ಕರ್ ಅವರು ಭಾರೀ ಮಳೆಯ ಸಮಯದಲ್ಲಿ ಪ್ರಭಾದೇವಿ ಬಳಿ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ್ದರು. 2 ದಿನಗಳ ನಂತರ ವರ್ಲಿ ಬಳಿ ಆತನ ಶವ ಪತ್ತೆಯಾಗಿತ್ತು. ಮುಂದಿನ ವರ್ಷ 18 ವರ್ಷದ ಅರ್ಜುನ್ ಮಲಾಡ್‌ನಲ್ಲಿ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ್ದರು.

35 ವರ್ಷದ ಗೃಹಿಣಿ ಹಾಗೂ ಎರಡು ಮಕ್ಕಳ ತಾಯಿ ಶೀತಲ್ ಭಾನುಶಾಲಿ ಘಾಟ್‌ಕೋಪರ್‌ನಲ್ಲಿ ಭಾರೀ ಮಳೆಯ ಸಂದರ್ಭದಲ್ಲಿ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ್ದರು. ನಂತರ ಆಕೆಯ ಶವ ಹಾಜಿ ಅಲಿ ಬಳಿ ಪತ್ತೆಯಾಗಿತ್ತು.

ಕಳೆದ ಕೆಲವು ವರ್ಷಗಳಿಂದ ಮುಂಬೈನಲ್ಲಿ ಮ್ಯಾನ್‌ಹೋಲ್ ಕವರ್ ಕಳ್ಳತನ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಕಳೆದ ವರ್ಷ 791 ಮ್ಯಾನ್‌ಹೋಲ್ ಕವರ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಅದಕ್ಕೂ ಹಿಂದಿನ ವರ್ಷ, ಅಂತಹ ಪ್ರಕರಣಗಳ ಸಂಖ್ಯೆ 836 ಆಗಿತ್ತು. ಇದು ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚು ಎನ್ನಲಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ರಸ್ತೆ ಅಪಘಾತದಲ್ಲಿ KPTCL​​​ನ ಇಬ್ಬರು ಸಿಬ್ಬಂದಿ, ಓರ್ವ ಲೈನ್​ ಮ್ಯಾನ್​ ಸಾವು

ಮ್ಯಾನ್‌ಹೋಲ್ ಕವರ್‌ಗಳು ಎರಕಹೊಯ್ದ ಕಬ್ಬಿಣದಿಂದ ಮಾಡಲ್ಪಟ್ಟಿರುತ್ತವೆ. ಕಾಳಸಂತೆಯಲ್ಲಿ 3,000 ರೂ.ನಿಂದ 5,000 ರೂ.ವರೆಗೆ ಉತ್ತಮ ಬೆಲೆಯನ್ನು ಪಡೆಯುತ್ತವೆ. ಇದು ಸಣ್ಣ ಕಳ್ಳರ ಮುಖ್ಯ ಟಾರ್ಗೆಟ್ ಆಗಿದೆ.

ದೀಪಕ್ ಅಮ್ರಾಪುರ್ಕರ್ ಅವರ ಸಾವಿನ ನಂತರ, ಬಾಂಬೆ ಹೈಕೋರ್ಟ್, ಕಳ್ಳರಿಂದ ಕವರ್‌ಗಳನ್ನು ರಕ್ಷಿಸಲು ಮ್ಯಾನ್‌ಹೋಲ್‌ಗಳ ಮೇಲೆ ಪ್ರಿವೆಂಟಿವ್ ಗ್ರಿಲ್‌ಗಳನ್ನು ಅಳವಡಿಸುವಂತೆ ಬಿಎಂಸಿಗೆ ಸೂಚಿಸಿತ್ತು. ಕಳೆದ ವರ್ಷ ನಡೆದ ವಿಚಾರಣೆಯಲ್ಲಿ, ನಗರದ ಒಟ್ಟು 74,682 ಮ್ಯಾನ್‌ಹೋಲ್‌ಗಳ ಪೈಕಿ 1,908 ಮ್ಯಾನ್‌ಹೋಲ್‌ಗಳಲ್ಲಿ ಮಾತ್ರ ಗ್ರಿಲ್‌ಗಳನ್ನು ಅಳವಡಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ