AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karachi Bakery | ಪ್ರಸಿದ್ಧ ಕರಾಚಿ ಬೇಕರಿ ಸ್ಥಗಿತ: ನಾವೇ ಮುಚ್ಚಿಸಿದ್ದೇವೆ ಎಂದ ಎಂಎನ್​ಎಸ್​; ಕೊರೊನಾ ಆರ್ಥಿಕ ಹಿನ್ನಡೆ ಎಂದ ಮಾಲೀಕ

Karachi Bakery: ಕರಾಚಿ ಬೇಕರಿ ಸ್ಥಗಿತದ ಹಿಂದೆ ಪಕ್ಷದ ಪಾತ್ರವಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಇನ್ನೋರ್ವ ಮುಖಂಡ ಸಂದೀಪ್ ದೇಶಪಾಂಡೆ ತಿಳಿಸಿದ್ದಾರೆ. ಆದರೆ, ಕೊರೊನಾ ಲಾಕ್​ಡೌನ್​ನಿಂದ ಉಂಟಾದ ಆರ್ಥಿಕ ಹಿನ್ನೆಡೆಯಿಂದ ಬೇಕರಿಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

Karachi Bakery | ಪ್ರಸಿದ್ಧ ಕರಾಚಿ ಬೇಕರಿ ಸ್ಥಗಿತ: ನಾವೇ ಮುಚ್ಚಿಸಿದ್ದೇವೆ ಎಂದ ಎಂಎನ್​ಎಸ್​; ಕೊರೊನಾ ಆರ್ಥಿಕ ಹಿನ್ನಡೆ ಎಂದ ಮಾಲೀಕ
ಐತಿಹಾಸಿಕ ಬೇಕರಿ ಸ್ಥಗಿತದ ಹಿಂದಿನ ಕಾರಣವೇನು?
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Mar 05, 2021 | 12:03 PM

ಮುಂಬೈ: ರಾಷ್ಟ್ರಮಟ್ಟದಲ್ಲಿ ಅದರ ಹೆಸರಿನಿಂದಲೇ ಆಗಾಗ ಸುದ್ದಿಯಲ್ಲಿ ಇರುತ್ತಿದ್ದ ಪ್ರಸಿದ್ಧ ‘ಕರಾಚಿ ಬೇಕರಿ’ ಮುಚ್ಚಲ್ಪಟ್ಟಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಉಪಾಧ್ಯಕ್ಷ ಹಾಜಿ ಸೈಫ್ ಶೇಖ್ @mnshajisaif ಅವರ ಟ್ವಿಟರ್ ಹ್ಯಾಂಡಲ್​ನಿಂದ ಟ್ವೀಟ್ ಮಾಡಲಾಗಿದೆ. ಬೇಕರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಕರಾಚಿ ಬೇಕರಿಯ ಎದುರು ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ನಮ್ಮ ಪ್ರತಿಭಟನೆಗೆ ಮಣಿದು ಮುಂಬೈನಲ್ಲಿದ್ದ ಕರಾಚಿ ಬೇಕರಿಯ ಏಕೈಕ ಶಾಖೆಯು ಸ್ಥಗಿತಗೊಂಡಿದೆ ಎಂದು ಟ್ವೀಟ್ ತಿಳಿಸಿದೆ. ಆದರೆ ಕರಾಚಿ ಬೇಕರಿ ಸ್ಥಗಿತದ ಹಿಂದೆ ಪಕ್ಷದ ಪಾತ್ರವಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಇನ್ನೋರ್ವ ಮುಖಂಡ ಸಂದೀಪ್ ದೇಶಪಾಂಡೆ ತಿಳಿಸಿದ್ದಾರೆ. ಆದರೆ, ಕೊರೊನಾ ಲಾಕ್​ಡೌನ್​ನಿಂದ ಉಂಟಾದ ಆರ್ಥಿಕ ಹಿನ್ನೆಡೆಯಿಂದ ಬೇಕರಿಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಮುಂಬೈನ ಅತಿ ಹಳೆಯ ಮತ್ತು ಪ್ರಸಿದ್ಧ ಬೇಕರಿಗಳಲ್ಲೊಂದಾದ ‘ಕರಾಚಿ ಬೇಕರಿ’ ತನ್ನ ಹೆಸರಿನಿಂದಲೇ ಹಲವರ ನಿದ್ದೆಗೆಡಿಸಿತ್ತು. ಹೈದರಾಬಾದ್ ಮೂಲದ ಬೇಕರಿ ಸರಪಳಿಯಾದ ‘ಕರಾಚಿ ಬೇಕರಿ’ಯನ್ನು ಕರಾಚಿಯಿಂದ ಭಾರತಕ್ಕೆ ವಲಸೆ ಬಂದಿದ್ದ ಸಿಂಧಿ ಹಿಂದೂ ಕುಟುಂಬವೊಂದು ನಿರ್ವಹಿಸುತ್ತಿತ್ತು. ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಕರಾಚಿ ಬೇಕರಿಯ ಮಳಿಗೆಯಿದ್ದು, ಇದೀಗ ಈ ಮಳಿಗೆಯು ತಮ್ಮ ಪ್ರತಿಭಟನೆಯಿಂದ ಮುಚ್ಚಲ್ಪಟ್ಟಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಉಪಾಧ್ಯಕ್ಷ ಹಾಜಿ ಸೈಫ್ ಶೇಖ್ ಅವರ ಟ್ವಿಟರ್ ಹ್ಯಾಂಡಲ್ ತಿಳಿಸಿದೆ.

2020ರ ನವೆಂಬರ್​ನಲ್ಲಿ ಕರಾಚಿ ಬೇಕರಿಯ ಹೆಸರು ಅಸಂಖ್ಯಾತ ಭಾರತೀಯರ ಮತ್ತು ದೇಶದ ಸೈನ್ಯದ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಆರೋಪಿಸಿ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಉಪಾಧ್ಯಕ್ಷ ಹಾಜಿ ಸೈಫ್ ಶೇಖ್ ಲೀಗಲ್ ನೋಟಿಸ್ ನೀಡಿದ್ದರು. ಅಲ್ಲದೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಬೇಕರಿಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.

ಶಿವಸೇನಾ ಪಕ್ಷದ ಪ್ರಮುಖರಾದ ಸಂಜಯ್ ರಾವುತ್ ಸೇರಿ ಕೆಲ ಮುಖಂಡರು ಸಹ ಕರಾಚಿ ಬೇಕರಿಯ ಹೆಸರು ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ್ದರು. ಅಲ್ಲದೇ,ತಮ್ಮ ಪಕ್ಷ ಕರಾಚಿ ಬೇಕರಿ ಹೆಸರಿನ ವಿರುದ್ಧ ನಿಲುವನ್ನು ತಳೆದಿರುವುದಾಗಿ ಸ್ಪಷ್ಟಪಡಿಸಿದ್ದರು.

ಆದರೆ, ಕರಾಚಿ ಬೇಕರಿಯ ಮಾಲೀಕರು, ‘ಈ ಹೆಸರು ಪ್ರಸಿದ್ಧವಾಗಿದ್ದು ಐತಿಹಾಸಿಕವೂ ಆಗಿದೆ. ಈ ಕಾರಣಗಳಿಂದ ಕರಾಚಿ ಬೇಕರಿ ಹೆಸರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.

ಕರಾಚಿ ಬೇಕರಿ ಸ್ಥಗಿತದಿಂದ ಮುಂಬೈವಾಸಿ ನೆಟ್ಟಿಗರು ಬೇಸರಗೊಂಡಿದ್ದು, ‘ಅತ್ಯಂತ ಉತ್ತಮ ಹಣ್ಣಿನ ಬಿಸ್ಕತ್​ಗಳನ್ನು ಇನ್ನು ಮುಂದೆ ಕಳೆದುಕೊಳ್ಳುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: IPL 2021 Auction LIVE: ಜಮೀಸನ್​ 15 ಕೋಟಿಗೆ ಆರ್​ಸಿಬಿ ಪಾಲು, ಮುಂಬೈ ಸೇರಿದ ಅರ್ಜುನ್​ ತೆಂಡೂಲ್ಕರ್​

Explainer | Arjun Mark 1A Tank: ಭೂಸೇನೆಗೆ ಅರ್ಜುನ್​ ಟ್ಯಾಂಕ್ ಸೇರ್ಪಡೆ: ಏನು ವೈಶಿಷ್ಟ್ಯ? ಏಕೆ ಮುಖ್ಯ?

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!