AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀರತ್: ಮಾಡದ ತಪ್ಪಿಗೆ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಕಾನೂನು ಹೋರಾಟ ನಡೆಸುತ್ತಲೇ ವಕೀಲನಾದ ಯುವಕ!

ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಅಮಿತ್ ಚೌಧರಿ ಕಾನೂನು ಅಧ್ಯಯನವನ್ನು ಪೂರ್ಣಗೊಳಿಸಿದರು. ಬಳಿಕ ತಮ್ಮ ವಿರುದ್ಧದ ಕೊಲೆ ಪ್ರಕರಣದಲ್ಲಿ ತಾವೇ ವಾದ ಮಂಡಿಸಿದರು. ಚರ್ಚೆಗಳು ಮತ್ತು ಸಾಕ್ಷಿಗಳ ವಿಚಾರಣೆಯ ಮೂಲಕ, ನ್ಯಾಯಾಲಯವು 12 ವರ್ಷಗಳ ನಂತರ ಕೊಲೆ ಆರೋಪದಿಂದ ಅವರನ್ನು ಖುಲಾಸೆಗೊಳಿಸಿತು.

ಮೀರತ್: ಮಾಡದ ತಪ್ಪಿಗೆ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಕಾನೂನು ಹೋರಾಟ ನಡೆಸುತ್ತಲೇ ವಕೀಲನಾದ ಯುವಕ!
ಅಮಿತ್ ಚೌಧರಿImage Credit source: News9
Follow us
Ganapathi Sharma
|

Updated on: Dec 13, 2023 | 11:21 AM

ಮೀರತ್, ಡಿಸೆಂಬರ್ 13: ಕೊಲೆ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡು ಜೈಲುಪಾಲಾದ ಯುವಕನೊಬ್ಬ ಜಾಮೀನಿನ ಮೇಲೆ ಹೊರಬಂದು, ಕಾನೂನು ಹೋರಾಟ ನಡೆಸುತ್ತಲೇ ಕಾನೂನು ಪದವಿ ಪಡೆದು ವಕೀಲನಾದ ಸಿನಿಮೀಯ ವಿದ್ಯಮಾನ ಉತ್ತರ ಪ್ರದೇಶ (Uttar Pradesh) ಮೀರತ್​ನಲ್ಲಿ (Meerut) ಬೆಳಕಿಗೆ ಬಂದಿದೆ. ಮೀರತ್​ನ ಬಾಗ್​ಪತ್ ನಿವಾಸಿಯಾದ ಅಮಿತ್ ಚೌಧರಿ ಎಂಬ 18 ವರ್ಷ ವಯಸ್ಸಿನ ಯುವಕನನ್ನು (12 ವರ್ಷಗಳ ಹಿಂದೆ) ಪೊಲೀಸರು ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಸಿದ್ದಾರೆ. ಪರಿಣಾಮವಾಗಿ ಆತ ಜೈಲುಪಾಲಾಗಬೇಕಾಯಿತು. ಆ ಸಂದರ್ಭ ಪದವಿ ಓದುತ್ತಿದ್ದ ಅಮಿತ್​ಗೆ ಅದನ್ನು ಮುಂದುವರಿಸಲಾಗಲಿಲ್ಲ. ಆದರೆ, ಅಪರಾಧವೆಸಗದೇ ಜೈಲುಪಾಲಾದ ಅಮಿತ್​ ಕಂಬಿ ಎಣಿಸುತ್ತಲೇ ವಕೀಲನಾಗಬೇಕೆಂಬ ದೃಢ ಸಂಕಲ್ಪ ಮಾಡಿದರು.

ಅದಾದ 2 ವರ್ಷಗಳ ನಂತರ ಅಮಿತ್​ಗೆ ಜಾಮೀನು ದೊರೆತು ಬಿಡುಗಡೆಯಾದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಅಮಿತ್ ಚೌಧರಿ ಕಾನೂನು ಅಧ್ಯಯನವನ್ನು ಪೂರ್ಣಗೊಳಿಸಿದರು. ಬಳಿಕ ತಮ್ಮ ವಿರುದ್ಧದ ಕೊಲೆ ಪ್ರಕರಣದಲ್ಲಿ ತಾವೇ ವಾದ ಮಂಡಿಸಿದರು. ಚರ್ಚೆಗಳು ಮತ್ತು ಸಾಕ್ಷಿಗಳ ವಿಚಾರಣೆಯ ಮೂಲಕ, ನ್ಯಾಯಾಲಯವು 12 ವರ್ಷಗಳ ನಂತರ ಕೊಲೆ ಆರೋಪದಿಂದ ಅವರನ್ನು ಖುಲಾಸೆಗೊಳಿಸಿತು.

ಇದರೊಂದಿಗೆ, ಕೊಲೆ ಪ್ರಕರಣದಲ್ಲಿ ಜೈಲುಪಾಲಾದ 18 ವರ್ಷಗಳ ನಂತರ, ಅಂದರೆ ಅಮಿತ್​ 30 ನೇ ವಯಸ್ಸಿನಲ್ಲಿ ನ್ಯಾಯಾಲಯವು ಅವರನ್ನು ದೋಷಮುಕ್ತಗೊಳಿಸಿತು.

ಸೇನೆ ಸೇರುವ ಕನಸು ಕಂಡಿದ್ದ ಅಮಿತ್

ಆರಂಭದಲ್ಲಿ ಸೇನೆಗೆ ಸೇರುವ ಕನಸು ಕಂಡಿದ್ದ ಅಮಿತ್ ಅದಕ್ಕಾಗಿ ಶ್ರಮಿಸಿ, 74ನೇ ಬೆಟಾಲಿಯನ್‌ನಿಂದ ಎನ್‌ಸಿಸಿಯಲ್ಲಿ ಸಿ ಸರ್ಟಿಫಿಕೇಟ್ ಗಳಿಸಿದ್ದರು. ದುರದೃಷ್ಟವಶಾತ್, ಸೆರೆವಾಸದಿಂದಾಗಿ ಸೇನೆ ಸೇರುವ ಕನಸು ನನಸಾಗಲೇ ಇಲ್ಲ.

ಇದನ್ನೂ ಓದಿ: ಲಂಚ ಕೇಳಿದ ಜಗತಿಯಾಲ್ ಸರ್ಕಾರಿ ನೌಕರನಿಗೆ ಜನ ಹೇಗೆ ಸತ್ಕಾರ ಮಾಡಿದರು ನೋಡಿ!

ಅಮಿತ್ ಎದುರಿಸಿದ ಸಂಕಷ್ಟಗಳು

18 ರಿಂದ 30 ನೇ ವಯಸ್ಸಿನ ನಡುವಣ ಅವಧಿಯಲ್ಲಿ ಅಮಿತ್ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ವಕೀಲರಾಗಲು ಅವರು ತಮ್ಮ ಜಿಲ್ಲೆಯನ್ನು ತೊರೆದು ಗುರುಗ್ರಾಮದಲ್ಲಿ ವಾಸಿಸಬೇಕಾಯಿತು. ಅವರು ಕಾನೂನು ಅಭ್ಯಾಸ ಮಾಡಿದರು, ಮಾಸಿಕ 3,000 ರೂ. ಗಳಿಸುವ ಉದ್ಯೋಗವನ್ನು ಪಡೆದರು. ಅದರ ನೆರವಿನಿಂದ ಅಧ್ಯಯನವನ್ನು ಪೂರ್ಣಗೊಳಿಸಿದರು. ಘರ್ಷಣೆಗಳ ಹೊರತಾಗಿಯೂ, ಅಮಿತ್ ಚೌಧರಿ ಅವರು ತಮ್ಮ ಪ್ರಕರಣವನ್ನು ಸಮರ್ಥಿಸಿಕೊಂಡರು ಮತ್ತು ಸಾಕ್ಷಿಗಳು ಮತ್ತು ಪುರಾವೆಗಳ ಆಧಾರದ ಮೇಲೆ ನ್ಯಾಯಾಲಯದಲ್ಲಿ ತಮ್ಮನ್ನು ತಾವೇ ಖುಲಾಸೆಗೊಳಿಸಿಕೊಂಡರು. ಈಗ ಅಮಿತ್ ಮೀರತ್ ಕೋರ್ಟ್‌ನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ