AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸಲ್ಮಾನರು ಸೀಗಡಿ ತಿನ್ನಬೇಡಿ ಎಂದು ಫತ್ವಾ ಹೊರಡಿಸಿದ ಯೂನಿವರ್ಸಿಟಿ! ದ್ವಂದ್ವದಲ್ಲಿ ಮುಸ್ಲಿಮರು, ಶುರುವಾಗಿದೆ ಗೊಂದಲ

ಮುಸಲ್ಮಾನರ ಹಬ್ಬದಲ್ಲಿ ಸೀಗಡಿ ಖಾದ್ಯ ಇರಬೇಕು.. ಆದರೆ ಅದನ್ನು ತಿನ್ನಬೇಡಿ ಎಂದು ಡೀಮ್ಡ್ ಯೂನಿವರ್ಸಿಟಿ ಫತ್ವಾ ಹೊರಡಿಸಿದೆ! ಇದರಿಂದ ಗೊಂದಲ ಶುರುವಾಗಿದೆ! ಫತ್ವಾ ಹೊರಡಿಸಿದ ಇಸ್ಲಾಮಿಕ್ ಸಂಸ್ಥೆಯನ್ನು ದೇಶಾದ್ಯಂತ ಮುಸ್ಲಿಮರು ವ್ಯಾಪಕವಾಗಿ ಮೆಚ್ಚಿದ್ದಾರೆ. ಅದೇ ಸಮಯದಲ್ಲಿ, ಇನ್ನು ಕೆಲವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಅದೀಗ ಬಿಸಿ ವಿಷಯವಾಗಿದೆ.

ಮುಸಲ್ಮಾನರು ಸೀಗಡಿ ತಿನ್ನಬೇಡಿ ಎಂದು ಫತ್ವಾ ಹೊರಡಿಸಿದ ಯೂನಿವರ್ಸಿಟಿ! ದ್ವಂದ್ವದಲ್ಲಿ ಮುಸ್ಲಿಮರು, ಶುರುವಾಗಿದೆ ಗೊಂದಲ
ಮುಸಲ್ಮಾನರು ಸೀಗಡಿ ತಿನ್ನಬೇಡಿ -ಫತ್ವಾ ಹೊರಡಿಸಿದ ಯೂನಿವರ್ಸಿಟಿ!
Follow us
ಸಾಧು ಶ್ರೀನಾಥ್​
|

Updated on: Aug 22, 2023 | 2:29 PM

ಹೈದರಾಬಾದ್, ಆಗಸ್ಟ್ 22: ದೇಶಾದ್ಯಂತ ಮುಸ್ಲಿಮರು (Muslims) ಸೀಗಡಿ (prawns) ತಿನ್ನುವುದನ್ನು ನಿಷೇಧಿಸಿ ಇಸ್ಲಾಮಿಕ್ ಡೀಮ್ಡ್ ವಿಶ್ವವಿದ್ಯಾಲಯವೊಂದು (Hyderabad Jamia Nizamia university) ಫತ್ವಾ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸೀಗಡಿ ತಿನ್ನುವುದು ಇಸ್ಲಾಮಿಕ್ ಸಂಪ್ರದಾಯಗಳಿಗೆ ವಿರುದ್ಧವೇನೂ ಅಲ್ಲ ಎಂದು ಮೀನುಪ್ರಿಯರು ಫತ್ವಾ ವಿರುದ್ಧ ಅಸಹಿಷ್ಣುತೆ ತೋರಿಸುತ್ತಿದ್ದಾರೆ. ನಿಜವಾದ ಸೀಗಡಿ ಬಳಕೆಯ ಮೇಲೆ ವಿಶ್ವವಿದ್ಯಾಲಯವು ಫತ್ವಾ ಹೊರಡಿಸಿರುವುದು ಹಿಂದಿನ ಕಾರಣವೇನು? ಏಕೆ ನಿಷೇಧಿಸಲಾಗಿದೆ? ಎಂಬ ಪ್ರಶ್ನೆಗಳು ಈಗ ದೇಶಾದ್ಯಂತ ಚರ್ಚೆಗೆ ಆಹಾರವಾಗಿವೆ. ಹಳೆ ಪಟ್ಟಣದಲ್ಲಿರುವ ಇಸ್ಲಾಮಿಕ್ ಸಂಘಟನೆಯೊಂದು ಮುಸ್ಲಿಮರಿಗೆ ಸೀಗಡಿ ತಿನ್ನಲು ಅನುಮತಿ ನಿರಾಕರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಸೀಗಡಿ ಮೀನು ಅಲ್ಲ ಎಂದು ಹೇಳಲಾಗಿದೆ. ಒಂದೂವರೆ ಶತಮಾನದ ಇತಿಹಾಸವಿರುವ ಇಸ್ಲಾಮಿಕ್ ಸಂಘಟನೆಯೂ ಕೂಡ ಮುಸ್ಲಿಮರು ಸೀಗಡಿ ತಿನ್ನುವುದು ಸರಿಯಲ್ಲ ಎಂದು ಫತ್ವಾ ಹೊರಡಿಸುವ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದೆ. ಸೀಗಡಿ ಮಾತ್ರವಲ್ಲ ಏಡಿಗಳೂ ತಿನ್ನಲು ಯೋಗ್ಯವಲ್ಲ ಎಂದು ಫತ್ವಾ ಹೇಳುತ್ತದೆ.

ಆದರೆ ಈ ಫತ್ವಾ ಬಗ್ಗೆ ಮೀನು ಪ್ರಿಯರು ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಮುಸ್ಲಿಂ ವಿದ್ವಾಂಸರು ಸಹ ಇದನ್ನ ಒಪ್ಪುವುದಿಲ್ಲ. ಇಸ್ಲಾಮಿಕ್ ಕಾನೂನಿನ ಪ್ರಕಾರ ಆಹಾರದಲ್ಲಿ ಮೂರು ವರ್ಗಗಳಿವೆ. ಅವುಗಳನ್ನು ಹಲಾಲ್, ಹರಾಮ್ ಮತ್ತು ಮಕ್ರುಹಾ ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಹಲಾಲ್ ಮಾತ್ರ ಮುಸ್ಲಿಮರಿಗೆ ಅವಕಾಶ ನೀಡುತ್ತದೆ. ಹರಾಮ್ ಅನ್ನು ನಿಷೇಧಿತ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದಕ್ಕೆ ನೀಡಿರುವ ವಿವರಣೆಯಲ್ಲಿ ಭಿನ್ನಾಭಿಪ್ರಾಯಗಳಿವೆ. ಸೀಗಡಿ ಒಂದು ಕೀಟ ಜಾತಿಗೆ ಸೇರಿದ್ದು, ಮೀನಿನ ಜಾತಿಯಲ್ಲ ಎಂಬುದು ಇಸ್ಲಾಮಿಕ್ ಸಂಘಟನೆಯ ಪ್ರತಿಪಾದನೆ. ಹಾಗಾಗಿಯೇ ಅವುಗಳ ಬಳಕೆ ಕುರಿತು ಫತ್ವಾ ಹೊರಡಿಸಿದ್ದೇವೆ ಎನ್ನುತ್ತಾರೆ ವಿವಿ ಮುಖಂಡರು. ಮಶ್ರೂಹವನ್ನು ದ್ವೇಷಿಸಿದರೂ ತಿನ್ನಬಹುದು ಎಂದು ಮೀನು ಪ್ರಿಯರು ಹಾಗೂ ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಾಲದಲ್ಲಿ ಸೀಗಡಿಯನ್ನು ಮಕ್ರೂಹ್ ಎಂದು ಪರಿಗಣಿಸುತ್ತಿದ್ದ ದಾರ್-ಉಲ್-ಉಲೂಮ್, ಈಗ ಹಲಾಲ್ ಎಂದು ಘೋಷಿಸಿದ್ದರಿಂದ ಮುಸ್ಲಿಮರು ಸಂತೋಷದಿಂದ ಸೀಗಡಿ ತಿನ್ನುತ್ತಿದ್ದಾರೆ.

Also Read: ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮೊದಲು ಮುಸ್ಲಿಮರು ಹಿಂದೂಗಳಾಗಿದ್ದರು: ಗುಲಾಂ ನಬಿ ಆಜಾದ್

ಮುಸ್ಲಿಂ ಮನೆಗಳಲ್ಲಿ ಸೀಗಡಿ ಖಾದ್ಯವಿಲ್ಲದೆ ಯಾವುದೇ ಕಾರ್ಯವು ಪೂರ್ಣಗೊಳ್ಳುವುದಿಲ್ಲ. ಆ ಅಡುಗೆ ಅವರಲ್ಲಿ ತುಂಬಾ ಜನಪ್ರಿಯವಾಗಿದೆ. ಇಸ್ಲಾಮಿಕ್ ವಿಶ್ವವಿದ್ಯಾನಿಲಯವು ಮುಸಲ್ಮಾನರು ಹೆಚ್ಚು ಇಷ್ಟಪಡುವ ಸೀಗಡಿಗಳು ಮೀನಿನ ಜಾತಿಗೆ ಸೇರಿವೆ ಎಂದು ತೀರ್ಮಾನಿ, ತಕ್ಷಣವೇ ಫತ್ವಾ ಹೊರಡಿಸಿದೆ. ಅದೀಗ ವಿವಾದಕ್ಕೆ ಆಸ್ಪದ ನೀಡಿದೆ. ಫತ್ವಾ ಹೊರಡಿಸಿದ ಇಸ್ಲಾಮಿಕ್ ಸಂಸ್ಥೆಯನ್ನು ದೇಶಾದ್ಯಂತ ಮುಸ್ಲಿಮರು ವ್ಯಾಪಕವಾಗಿ ಮೆಚ್ಚಿದ್ದಾರೆ. ಸೀಗಡಿ ಸೇವನೆಯನ್ನು ನಿಷೇಧಿಸಿ ಸಂಸ್ಥೆ ಹೊರಡಿಸಿರುವ ಫತ್ವಾವನ್ನು ಗೌರವಿಸಲಾಗಿದೆ. ಅದೇ ಸಮಯದಲ್ಲಿ, ಇನ್ನು ಕೆಲವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಅದೀಗ ಬಿಸಿ ವಿಷಯವಾಗಿದೆ. ವಾರ್ಸಿಟಿ ಫತ್ವಾವನ್ನು ಸಾಕಷ್ಟು ಸಂಶೋಧನೆಯ ನಂತರವೇ ಬಿಡುಗಡೆ ಮಾಡಲಾಗಿದೆ ಎಂದು ಕೆಲವರು ಹೇಳುತ್ತಾರೆ. ಒಟ್ಟಿನಲ್ಲಿ ಸೀಗಡಿ ಸೇವನೆಯ ಮೇಲಿನ ಫತ್ವಾ ಸಂಚಲನ ಮೂಡಿಸಿದ್ದರೂ ಅಚ್ಚರಿಯಿಲ್ಲ. ಈ ಹಿನ್ನೆಲೆಯಲ್ಲಿ ಸೀಗಡಿ ತಿನ್ನಬೇಕೋ ಬೇಡವೋ ಎಂಬ ದ್ವಂದ್ವದಲ್ಲಿ ಮುಸ್ಲಿಮರು ಇದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಸುಹಾಸ್ ಕೊಲೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ: ಪ್ರದೀಪ್ ಸರಿಪಲ್ಲ
ಸುಹಾಸ್ ಕೊಲೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ: ಪ್ರದೀಪ್ ಸರಿಪಲ್ಲ
ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಸಿಎಂ ಹೇಳಿದ್ದಿಷ್ಟು
ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಸಿಎಂ ಹೇಳಿದ್ದಿಷ್ಟು
ಕೊಲೆಯಾದವ ಮತ್ತು ಆರೋಪಿಗಳೆಲ್ಲ ಅಸ್ಸಾಂ ಮೂಲದವರು, ಮದ್ಯದ ಅಮಲಿನಲ್ಲಿ ಹತ್ಯೆ
ಕೊಲೆಯಾದವ ಮತ್ತು ಆರೋಪಿಗಳೆಲ್ಲ ಅಸ್ಸಾಂ ಮೂಲದವರು, ಮದ್ಯದ ಅಮಲಿನಲ್ಲಿ ಹತ್ಯೆ
ಶ್ವೇತಾ ಮನೆ ಬಿಟ್ಟು ಹೋಗ್ತಿದ್ಳು, ನನ್ನಮ್ಮನನ್ನು ಹೊಡೆಯುತ್ತಿದ್ದಳು: ರಘು
ಶ್ವೇತಾ ಮನೆ ಬಿಟ್ಟು ಹೋಗ್ತಿದ್ಳು, ನನ್ನಮ್ಮನನ್ನು ಹೊಡೆಯುತ್ತಿದ್ದಳು: ರಘು
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
ಊಟ ಕೊಡುವುದು ತಡವಾಗಿದ್ದಕ್ಕೆ ರೆಸ್ಟೋರೆಂಟ್​ ಧ್ವಂಸ
ಊಟ ಕೊಡುವುದು ತಡವಾಗಿದ್ದಕ್ಕೆ ರೆಸ್ಟೋರೆಂಟ್​ ಧ್ವಂಸ