ಮಾವೋವಾದಿ ನಾಯಕ ರವೀಂದರ್ ಗಂಜು ಮನೆ ಮುಟ್ಟುಗೋಲು ಹಾಕಿದ ಎನ್ಐಎ

ಪ್ರಮುಖ ಮಾವೋವಾದಿ ನಾಯಕ ಮತ್ತು ನಿಷೇಧಿತ ಸಂಘಟನೆ, ಸಿಪಿಐ (ಮಾವೋವಾದಿ) ನ ಪ್ರಾದೇಶಿಕ ಸಮಿತಿ ಸದಸ್ಯ ರವೀಂದರ್ ಗಂಜು, ಕಾನೂನು ಜಾರಿ ಸಂಸ್ಥೆಗಳಿಗೆ ದೀರ್ಘಕಾಲದಿಂದ ಕಂಟಕವಾಗಿದ್ದಾರೆ. ಎನ್ಐಎ ತನಿಖೆಗಳು ಆತನ ವ್ಯಾಪಕ ಕ್ರಿಮಿನಲ್ ಒಳಗೊಳ್ಳುವಿಕೆಯನ್ನು ಬಹಿರಂಗಪಡಿಸಿವೆ, ಇದು ಜಾರ್ಖಂಡ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಅವನ ವಿರುದ್ಧ 55 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲು ಕಾರಣವಾಗಿದೆ.

ಮಾವೋವಾದಿ ನಾಯಕ ರವೀಂದರ್ ಗಂಜು ಮನೆ ಮುಟ್ಟುಗೋಲು ಹಾಕಿದ ಎನ್ಐಎ
ಎನ್ಐಎ(ಪ್ರಾತಿನಿಧಿಕ ಚಿತ್ರ)
ರಶ್ಮಿ ಕಲ್ಲಕಟ್ಟ

Updated on: Nov 01, 2023 | 9:01 PM

ದೆಹಲಿ ನವೆಂಬರ್ 01: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಮುಖ ಮಾವೋವಾದಿ (Maoist) ರವೀಂದರ್ ಗಂಜುಗೆ(Ravinder Ganjhu) ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಮಾವೋವಾದಿ ಬಂಡಾಯವನ್ನು ಎದುರಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. ಸ್ಥಳೀಯ ಗುತ್ತಿಗೆದಾರರು ಮತ್ತು ಉದ್ಯಮಿಗಳಿಂದ ಸುಲಿಗೆ ಮತ್ತು ಲೆವಿ ಸಂಗ್ರಹಣೆಯ ಮೂಲಕ ಪಡೆದ ಹಣದಿಂದ ಪ್ರಶ್ನೆಯಲ್ಲಿರುವ ಆಸ್ತಿ, ಮನೆ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶೇಷ ಭಯೋತ್ಪಾದನಾ ನಿಗ್ರಹ ಕಾನೂನು ಜಾರಿ ಸಂಸ್ಥೆಯ ಈ ಕ್ರಮವು ಮಾವೋವಾದಿ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳ ಅನ್ವೇಷಣೆಯ ಭಾಗವಾಗಿ ಬರುತ್ತದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಸೆಕ್ಷನ್ 25(1) ರ ನಿಬಂಧನೆಗಳ ಅಡಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ.

ಪ್ರಮುಖ ಮಾವೋವಾದಿ ನಾಯಕ ಮತ್ತು ನಿಷೇಧಿತ ಸಂಘಟನೆ, ಸಿಪಿಐ (ಮಾವೋವಾದಿ) ನ ಪ್ರಾದೇಶಿಕ ಸಮಿತಿ ಸದಸ್ಯ ರವೀಂದರ್ ಗಂಜು, ಕಾನೂನು ಜಾರಿ ಸಂಸ್ಥೆಗಳಿಗೆ ದೀರ್ಘಕಾಲದಿಂದ ಕಂಟಕವಾಗಿದ್ದಾರೆ. ಎನ್ಐಎ ತನಿಖೆಗಳು ಆತನ ವ್ಯಾಪಕ ಕ್ರಿಮಿನಲ್ ಒಳಗೊಳ್ಳುವಿಕೆಯನ್ನು ಬಹಿರಂಗಪಡಿಸಿವೆ, ಇದು ಜಾರ್ಖಂಡ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಅವನ ವಿರುದ್ಧ 55 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲು ಕಾರಣವಾಗಿದೆ.

ಜಾರ್ಖಂಡ್ ಸರ್ಕಾರ ಮತ್ತು ಎನ್‌ಐಎ ಗಂಜು ಒಡ್ಡಿದ ಬೆದರಿಕೆಯನ್ನು ಗುರುತಿಸಿದ್ದು, ಆತನ ಪತ್ತೆಹಚ್ಚುವವವರಿಗೆ ಬಹುಮಾನಗಳನ್ನು ಘೋಷಿಸಿವೆ. ಆತನನ್ನು ಸೆರೆಹಿಡಿಯುವ ಯಾವುದೇ ಮಾಹಿತಿಗೆ ಜಾರ್ಖಂಡ್ ಸರ್ಕಾರ ₹ 15 ಲಕ್ಷ ಬಹುಮಾನವನ್ನು ಘೋಷಿಸಿದ್ದು NIA ₹ 5 ಲಕ್ಷ ಹೆಚ್ಚುವರಿ ಬಹುಮಾನವನ್ನು ನೀಡಿದೆ.

ರವೀಂದರ್ ಗಂಜು ಅವರು ಸಿಪಿಐ (ಮಾವೋವಾದಿ) ನಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ ಮತ್ತು ಸಂಘಟನೆಯ ಕಾರ್ಯಕರ್ತರು ನಡೆಸಿದ ಹಲವಾರು ಭಯೋತ್ಪಾದಕ ಕೃತ್ಯಗಳನ್ನು ಸಂಘಟಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

ಎಡಪಂಥೀಯ ಉಗ್ರವಾದ

ಎರಡು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು (ಎಲ್‌ಡಬ್ಲ್ಯುಇ) ದೇಶದಿಂದ ಸಂಪೂರ್ಣವಾಗಿ ತೊಡೆದುಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಹೇಳಿದ್ದಾರೆ. ನಕ್ಸಲರಿಂದ ಮುಕ್ತವಾದ ಪ್ರದೇಶಗಳಲ್ಲಿ ಸಮಸ್ಯೆ ಮತ್ತೆ ಪುನರುಜ್ಜೀವನಗೊಳ್ಳದಂತೆ ನಿರಂತರ ಕಣ್ಗಾವಲು ಅಗತ್ಯವನ್ನು ಅವರು ಒತ್ತಿ ಹೇಳಿದ್ದರು. ಎಲ್‌ಡಬ್ಲ್ಯೂಇ ಪೀಡಿತ ರಾಜ್ಯಗಳಲ್ಲಿನ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಕಳೆದ ತಿಂಗಳು ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾ, ಮೋದಿ ಸರ್ಕಾರವು 2014 ರಿಂದ ಎಡಪಂಥೀಯ ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಹೇಳಿದರು.

ಪರಿಶೀಲನಾ ಸಭೆಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಒಡಿಶಾ, ಬಿಹಾರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯ ಸಚಿವರು ಪ್ರತಿನಿಧಿಸುವ ಸಭೆಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಭಾಗವಹಿಸಿದ್ದರು. ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರು ಸಮಸ್ಯೆಯ ವಿರುದ್ಧ ಹೋರಾಡಲು ಅರೆಸೇನಾ ಪಡೆಗಳ ನಿರಂತರ ನಿಯೋಜನೆಯನ್ನು ಪ್ರತಿಪಾದಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us