ಹಾರ್ವರ್ಡ್​ ವಿಶ್ವವಿದ್ಯಾಲಯದ ಹೆಸರು ಹೇಳಿ ಪತ್ರಕರ್ತೆ ನಿಧಿ ರಜ್ದಾನ್​ಗೆ ವಂಚನೆ

ಕಳೆದ ಜೂನ್​ ತಿಂಗಳಲ್ಲಿ ನಿಧಿ ಟ್ವೀಟ್​ ಮಾಡಿ, ಸುದ್ದಿ ವಾಹಿನಿ ತೊರೆಯುತ್ತಿದ್ದೇನೆ. ಹಾರ್ವರ್ಡ್​ ವಿಶ್ವ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಪಕಿಯಾಗಿ ಕೆಲಸ ಸಿಕ್ಕಿದೆ ಎಂದು ಬರೆದುಕೊಂಡಿದ್ದರು. ಆದರೆ, ಇದು ಮೋಸದ ಜಾಲ ಎಂದು ಆರು ತಿಂಗಳ ನಂತರ ಗೊತ್ತಾಗಿದೆ.

ಹಾರ್ವರ್ಡ್​ ವಿಶ್ವವಿದ್ಯಾಲಯದ ಹೆಸರು ಹೇಳಿ ಪತ್ರಕರ್ತೆ ನಿಧಿ ರಜ್ದಾನ್​ಗೆ ವಂಚನೆ
ಪತ್ರಕರ್ತೆ ನಿಧಿ ರಜ್ದಾನ್​
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 15, 2021 | 7:58 PM

ಹಿರಿಯ ಪತ್ರಕರ್ತೆ ಹಾಗೂ ನ್ಯೂಸ್​ ಆ್ಯಂಕರ್​ ನಿಧಿ ರಜ್ದಾನ್ ಫಿಶಿಂಗ್​ (phishing) ಜಾಲಕ್ಕೆ ಸಿಲುಕಿ ಮೋಸ ಹೋಗಿದ್ದಾರೆ. ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ಕೆಲಸ ನೀಡುವುದಾಗಿ ನಂಬಿಸಿ ನಿಧಿಗೆ ಮೋಸ ಮಾಡಲಾಗಿದೆ.

ಕಳೆದ ಜೂನ್​ ತಿಂಗಳಲ್ಲಿ ನಿಧಿ ಟ್ವೀಟ್​ ಮಾಡಿ, ಸುದ್ದಿ ವಾಹಿನಿ ತೊರೆಯುತ್ತಿದ್ದೇನೆ. ಹಾರ್ವರ್ಡ್​ ವಿಶ್ವ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಸಿಕ್ಕಿದೆ ಎಂದು ಬರೆದುಕೊಂಡಿದ್ದರು. ಆದರೆ, ಇದು ಮೋಸದ ಜಾಲ ಎಂದು ಆರು ತಿಂಗಳ ನಂತರ ಗೊತ್ತಾಗಿದೆ.

ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪಾಠ ಮಾಡಲು ಅವಕಾಶ ನೀಡುತ್ತಿದ್ದೇವೆ. ನೀವು ಸಹಾಯಕ ಪ್ರಾಧ್ಯಾಪಕಿಯಾಗಿ ಸೇರ್ಪಡೆಯಾಗಿ ಎಂದು ಕಳೆದ ವರ್ಷ ನಿಧಿ ಅವರಿಗೆ ಇ-ಮೇಲ್​ ಮೂಲಕ ಕೋರಲಾಗಿತ್ತು. ಹಾರ್ವರ್ಡ್​ ವಿಶ್ವವಿದ್ಯಾಲಯದವರೇ ಇದನ್ನು ಕಳುಹಿಸಿದ್ದಾರೆ ಎಂದು ನಂಬಿದ ನಿಧಿ, ಆಫರ್​ ಒಪ್ಪಿಕೊಂಡಿದ್ದರು. ಅಲ್ಲದೆ, ಇ-ಮೇಲ್​ ಕಳುಹಿಸಿದವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು.

ಆಫರ್​ ಲೆಟರ್​ ಸಿಕ್ಕ ಬೆನ್ನಲ್ಲೇ ನಿಧಿ ತಾವು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ರಾಜೀನಾಮೆ ನೀಡಿದ್ದರು. ಸೆಪ್ಟೆಂಬರ್​ 2020ರಂದು ಇವರಿಗೆ ಹಾರ್ವರ್ಡ್​ ವಿಶ್ವವಿದ್ಯಾಲಯಕ್ಕೆ ಜಾಯಿನ್​ ಆಗಲು ಸೂಚಿಸಲಾಗಿತ್ತು. ಆದರೆ, ಕೊರೊನಾ ಕಾರಣದಿಂದ ಹಾರ್ವರ್ಡ್​ ವಿಶ್ವವಿದ್ಯಾಲಯದ ತರಗತಿಗಳು ಜನವರಿ 2021ರವರೆಗೆ ಮುಂದೂಡಲ್ಪಟ್ಟಿವೆ ಎಂದು ನಿಧಿಗೆ ಇ-ಮೇಲ್​ ಮೂಲಕ ತಿಳಿಸಲಾಗಿತ್ತು.

ಈಗ ಮತ್ತೆ ವಿಚಾರಣೆ ಮಾಡಿದಾಗ, ತರಗತಿಗೆ ಆರಂಭ ಆಗೋದು ಕೊಂಚ ವಿಳಂಬವಾಗಬಹುದು ಎಂದು ಆ ಕಡೆಯಿಂದ ಉತ್ತರ ಬಂದಿತ್ತು. ಈ ವೇಳೆ ಅನುಮಾನಗೊಂಡ ನಿಧಿ, ನೇರವಾಗಿ ಹಾರ್ವರ್ಡ್​ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಈ ವೇಳೆ ಆ ರೀತಿಯ ಯಾವುದೇ ಆಫರ್​ ಕೊಟ್ಟಿಲ್ಲ ಎನ್ನುವ ವಿಚಾರ ಬಯಲಾಗಿದೆ. ಅಲ್ಲದೆ, ನಿಧಿ ಅವರ ಖಾಸಗಿ ಮಾಹಿತಿ ಕೂಡ ಕದ್ದಿರುವ ವಿಚಾರ ಕೂಡ ಹೊರ ಬಿದ್ದಿದೆ. ಸದ್ಯ, ನಿಧಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಫಿಶಿಂಗ್​ ವಂಚನೆ ಕೆಲ ಕಂಪೆನಿ ಹೆಸರನ್ನು ಅಥವಾ ವ್ಯಕ್ತಿ ಬಳಕೆ ಮಾಡಿಕೊಂಡು ನಡೆಸುವ ವಂಚನೆ. ಖಾಸಗಿ ಮಾಹಿತಿ ಕದಿಯಲು ಈ ತಂತ್ರ ಬಳಕೆ ಮಾಡಲಾಗುತ್ತದೆ.

ವಿವಾದಿತ ‘ಕೊವ್ಯಾಕ್ಸಿನ್​’ ಲಸಿಕೆ ಸ್ವೀಕರಿಸಿದ ಪತ್ರಕರ್ತೆ.. ನೀವೂ ಲಸಿಕೆ ಸ್ವೀಕರಿಸಿ ಎಂದು ಜನಸಾಮಾನ್ಯರಿಗೆ ಕರೆ

Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ