AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜರಂಗ ದಳಕ್ಕೆ ನಿರ್ಬಂಧ ಹೇರುವ ಅಗತ್ಯವಿಲ್ಲ; ಸಂಸದೀಯ ಸಮಿತಿಗೆ ಫೇಸ್​ಬುಕ್​ ವಿವರಣೆ

ಬಜರಂಗದಳದ ಮೇಲೆ ನಿಷೇಧ ಹೇರುವಂಥ ಸಂಗತಿಗಳು ಫೇಸ್​ಬುಕ್​ನ ಸತ್ಯ ಪರಿಶೀಲನಾ ತಂಡಕ್ಕೆ ಗೋಚರಿಸಿಲ್ಲವೆಂದು ಭಾರತದ ಫೇಸ್​ಬುಕ್ ಭಾರತ ಘಟಕದ ಮುಖ್ಯಸ್ಥ ಅಜಿತ್ ಮೋಹನ್ ಬುಧವಾರ ಸಂಸದೀಯ ಸಮಿತಿಯ ಮುಂದೆ ಹೇಳಿದರು.

ಬಜರಂಗ ದಳಕ್ಕೆ ನಿರ್ಬಂಧ ಹೇರುವ ಅಗತ್ಯವಿಲ್ಲ; ಸಂಸದೀಯ ಸಮಿತಿಗೆ ಫೇಸ್​ಬುಕ್​ ವಿವರಣೆ
ಪ್ರಾತಿನಿಧಿಕ ಚಿತ್ರ
guruganesh bhat
| Edited By: |

Updated on:Dec 17, 2020 | 2:18 PM

Share

ದೆಹಲಿ: ಬಜರಂಗದಳದ ಮೇಲೆ ನಿಷೇಧ ಹೇರುವಂಥ ಸಂಗತಿಗಳು ಫೇಸ್​ಬುಕ್​ನ ಸತ್ಯಪರಿಶೀಲನಾ ತಂಡಕ್ಕೆ ಗೋಚರಿಸಿಲ್ಲವೆಂದು ಕಂಪನಿಯ ಭಾರತೀಯ ಘಟಕದ ಮುಖ್ಯಸ್ಥ ಅಜಿತ್ ಮೋಹನ್ ಬುಧವಾರ ಸಂಸದೀಯ ಸಮಿತಿಯ ಮುಂದೆ ಹೇಳಿದರು.

ಅಮೆರಿಕದ ವಾಲ್​ಸ್ಟ್ರೀಟ್ ಜರ್ನಲ್ ದಿನಪತ್ರಿಕೆಯು, ಬಜರಂಗದಳಕ್ಕೆ ವೇದಿಕೆ ಕಲ್ಪಿಸಿಕೊಡುವುದನ್ನು ನಿರ್ಬಂಧಿಸಿದರೆ ಫೇಸ್​ಬುಕ್​ನ ವಹಿವಾಟು ಮತ್ತು ಸಿಬ್ಬಂದಿಗೆ ಅಪಾಯವಾಗುವ ಸಾಧ್ಯತೆ ಇದೆ. ಅದಕ್ಕಾಗಿ ಫೇಸ್​ಬುಕ್​ ಬಜರಂಗದಳದ ಚಟುವಟಿಕೆಗಳಿಗೆ ನಿಷೇಧ ಹೇರುತ್ತಿಲ್ಲ ಎಂದು ವರದಿ ಮಾಡಿದ ಹಿನ್ನೆಲೆಯಲ್ಲಿ ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿಯು ನಾಗರಿಕರ ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದ ವಿಷಯವನ್ನು ಚರ್ಚಿಸಲು ಮೋಹನ್ ಅವರನ್ನು ಕರೆಸಿಕೊಂಡ ಸಂದರ್ಭದಲ್ಲಿ ಭಾರತೀಯ ಸಾರ್ವಜನಿಕ ನೀತಿ ನಿರ್ದೇಶಕ ಶಿವನಾಥ ತುಕ್ರಲ್ ಕೂಡ ಹಾಜರಿದ್ದರು.

ಅವರನ್ನು ಮತ್ತಷ್ಟು ಪ್ರಶ್ನಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ‘ಫೇಸ್​ಬುಕ್​ನಲ್ಲಿ ಬಜರಂಗದಳ ಸಾಮಾಜಿಕ ಮಾಧ್ಯಮ ನೀತಿಗಳನ್ನು ಉಲ್ಲಂಘಿಸಿರುವುದು ನಿಜವಲ್ಲದಿದ್ದರೆ ಫೇಸ್‌ಬುಕ್, ವಾಲ್​ ಸ್ಟ್ರೀಟ್ ಜರ್ನಲ್ ವರದಿಯನ್ನು ಯಾಕೆ ನಿರಾಕರಿಸಲಿಲ್ಲ’ ಎಂದು ಪ್ರಶ್ನಿಸಿದರು.

Published On - 2:17 pm, Thu, 17 December 20