AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವೀಂದ್ರನಾಥ ಟ್ಯಾಗೋರ್ ಕೈಬರಹದ ರಾಷ್ಟ್ರಗೀತೆಯ ಅನುವಾದ ಪಠ್ಯ ಹಂಚಿಕೊಂಡ ನೊಬೆಲ್ ಸಮಿತಿ

"'ಜನ ಗಣ ಮನ' ಎಂಬುದು ಭಾರತದ ರಾಷ್ಟ್ರಗೀತೆಯಾಗಿದ್ದು, ಮೂಲತಃ 1913 ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಬಂಗಾಳಿ ಭಾಷೆಯಲ್ಲಿ ರಚಿಸಿದ್ದಾರೆ. ಚಿತ್ರ: ಟಾಗೋರ್ ಅವರ ಜನ ಗಣ ಮನದ ಇಂಗ್ಲಿಷ್ ಅನುವಾದ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಲಾಗಿದೆ.

ರವೀಂದ್ರನಾಥ ಟ್ಯಾಗೋರ್ ಕೈಬರಹದ ರಾಷ್ಟ್ರಗೀತೆಯ ಅನುವಾದ ಪಠ್ಯ ಹಂಚಿಕೊಂಡ ನೊಬೆಲ್ ಸಮಿತಿ
ರವೀಂದ್ರನಾಥ ಟ್ಯಾಗೋರ್
ರಶ್ಮಿ ಕಲ್ಲಕಟ್ಟ
|

Updated on: Aug 15, 2024 | 8:47 PM

Share

ದೆಹಲಿ ಆಗಸ್ಟ್ 15: ಭಾರತವು 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು (78th Independence Day) ಆಚರಿಸುತ್ತಿರುವಾಗ, ನೊಬೆಲ್ ಸಮಿತಿಯು ದೇಶದ ರಾಷ್ಟ್ರಗೀತೆಯನ್ನು ರಚಿಸಿದ ವ್ಯಕ್ತಿಯನ್ನು ನೆನಪಿಸಿಕೊಂಡಿದೆ. ನೊಬೆಲ್ ಪ್ರಶಸ್ತಿ ಹ್ಯಾಂಡಲ್, ತಮ್ಮ ಎಕ್ಸ್ ಪೋಸ್ಟ್ ನಲ್ಲಿ ರವೀಂದ್ರನಾಥ ಟ್ಯಾಗೋರ್ (Rabindranath Tagore) ಅವರೇ ಬರೆದ ‘ಜನ ಗಣ ಮನ’ದ ಇಂಗ್ಲಿಷ್ ಅನುವಾದವನ್ನು ಹಂಚಿಕೊಂಡಿದೆ. ಈ ಟಿಪ್ಪಣಿಯು ಖ್ಯಾತ ಬಂಗಾಳಿ ಕವಿಮತ್ತು ಸಮಾಜ ಸುಧಾರಕ ಟ್ಯಾಗೋರ್ ಅವರ ಪ್ರತಿಭೆಯನ್ನು ತೋರಿಸಿತ್ತದೆ. ರಬೀಂದ್ರರ ಪದಪ್ರಯೋಗದಲ್ಲಿ ಅವರಪಾಂಡಿತ್ಯವನ್ನು ಕಾಣಬಹುದು.

“‘ಜನ ಗಣ ಮನ’ ಎಂಬುದು ಭಾರತದ ರಾಷ್ಟ್ರಗೀತೆಯಾಗಿದ್ದು, ಮೂಲತಃ 1913 ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಬಂಗಾಳಿ ಭಾಷೆಯಲ್ಲಿ ರಚಿಸಿದ್ದಾರೆ. ಚಿತ್ರ: ಟಾಗೋರ್ ಅವರ ಜನ ಗಣ ಮನದ ಇಂಗ್ಲಿಷ್ ಅನುವಾದ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಲಾಗಿದೆ.

ಮೂಲತಃ ಡಿಸೆಂಬರ್ 1911 ರಲ್ಲಿ ಬಂಗಾಳಿ ಭಾಷೆಯಲ್ಲಿ ‘ಭಾರತೋ ಭಾಗ್ಯೋ ಬಿಧಾತ’ ಎಂದು ರಚಿಸಲಾಯಿತು. ಹಾಡಿನ ಮೊದಲ ಚರಣವನ್ನು ಜನವರಿ 1950 ರಲ್ಲಿ ಭಾರತೀಯ ಸಂವಿಧಾನವು ರಾಷ್ಟ್ರಗೀತೆಯಾಗಿ ಅಂಗೀಕರಿಸಿತು.

ರವೀಂದ್ರನಾಥ ಟ್ಯಾಗೋರ್ ಅವರ ಮೂಲ ಕೈಬರಹದ ಅನುವಾದದಲ್ಲಿ ನೋಡಿದಂತೆ ‘ಭಾರತೋ ಭಾಗ್ಯೋ ಬಿಧಾತ’ ಎಂಬ ಇಂಗ್ಲಿಷ್ ಹೆಸರು ‘ದಿ ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ’. ಇದೇ ವೇಳೆ ‘ಜನ ಗಣ ಮನ’ ಅನ್ನು ‘ನೀನು ಎಲ್ಲ ಜನರ ಮನಸ್ಸಿನ ಅಧಿಪತಿ’ ಎಂದು ಅನುವಾದಿಸಲಾಯಿತು.

ಇದನ್ನೂ ಓದಿ: Rahul Gandhi: ಸ್ವಾತಂತ್ರ್ಯವೇ ನಮ್ಮ ದೊಡ್ಡ ರಕ್ಷಣಾ ಕವಚ; ರಾಹುಲ್ ಗಾಂಧಿ

ಈ ಟ್ವೀಟ್ ಸುಮಾರು 179,000 ಕ್ಕಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.. ಇದನ್ನು 1300 ಬಾರಿ ರೀಟ್ವೀಟ್ ಮಾಡಲಾಗಿದೆ. ರವೀಂದ್ರನಾಥ ಟ್ಯಾಗೋರ್ ಅವರು ಕವಿ, ಗೀತರಚನೆಕಾರ, ಬರಹಗಾರ, ವರ್ಣಚಿತ್ರಕಾರ, ನಾಟಕಕಾರ, ಸಂಯೋಜಕ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕ, ಅವರು ಬಂಗಾಳಿ ಸಾಹಿತ್ಯ ಮತ್ತು ಸಂಗೀತವನ್ನು ಮರುರೂಪಿಸಿದರು. ಅವರಿಗೆ 1913 ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಮಹತ್ತರ ಪ್ರಶಸ್ತಿಯನ್ನು ಗೆದ್ದ ಯುರೋಪಿಯನ್ ಅಲ್ಲದ ಮೊದಲ ಗೀತರಚನೆಕಾರರಾಗಿದ್ದಾರೆ ಟ್ಯಾಗೋರ್.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್