AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ ರೈತ ತಯಾರಿಸಿದ ವಿಶೇಷ ವಾಹನ; ಪೆಟ್ರೋಲ್​-ಡೀಸೆಲ್​ ಬೇಡ್ವೇ ಬೇಡ, ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 300 ಕಿಮೀ ದೂರ ಓಡಿಸಬಹುದು !

ವಾಹನ ತಯಾರಿಕೆಯಲ್ಲಿ ನನಗೆ ಇಬ್ಬರು ಸಹಾಯ ಮಾಡಿದ್ದಾರೆ. ಮೋಟಾರ್ ವೈಂಡಿಂಗ್​, ಎಲೆಕ್ಟ್ರಿಕಲ್​ ಸಾಮಗ್ರಿಗಳ ಅಳವಡಿಕೆ ಸೇರಿ ಎಲ್ಲ ಕೆಲಸವನ್ನೂ ನಾವು ಮನೆಯಲ್ಲೇ ಮಾಡಿದ್ದೇವೆ. ವಿದ್ಯುತ್​ ಉಪಕರಣಗಳ ಬಗ್ಗೆ ನನ್ನ ಸ್ನೇಹಿತರೊಬ್ಬರು ಸಲಹೆಗಳನ್ನು ನೀಡಿದ್ದಾರೆ ಎಂದು ಎಎನ್​ಐಗೆ ಸುಶೀಲ್​ ತಿಳಿಸಿದ್ದಾರೆ.

ಒಡಿಶಾ ರೈತ ತಯಾರಿಸಿದ ವಿಶೇಷ ವಾಹನ; ಪೆಟ್ರೋಲ್​-ಡೀಸೆಲ್​ ಬೇಡ್ವೇ ಬೇಡ, ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 300 ಕಿಮೀ ದೂರ ಓಡಿಸಬಹುದು !
ಸುಶೀಲ್​ ಅಗರ್​ವಾಲ್ ಮತ್ತು ಅವರು ತಯಾರಿಸಿದ ವಾಹನ
Lakshmi Hegde
|

Updated on:Mar 14, 2021 | 7:25 PM

Share

ಭುವನೇಶ್ವರ್: ಯಾರಲ್ಲಿ ಏನು ಪ್ರತಿಭೆ-ಶಕ್ತಿ ಇರುತ್ತದೆ ಎಂಬುದನ್ನು ಸುಲಭಕ್ಕೆ ಅಳೆಯಲು ಸಾಧ್ಯವೇ ಇಲ್ಲ..ಇಲ್ಲಿ ನೋಡಿ, ಸಾಮಾನ್ಯ ರೈತನೊಬ್ಬ ಸೌರಶಕ್ತಿ ಚಾಲಿತ ಬ್ಯಾಟರಿಯನ್ನು ಹಾಕಿ ಓಡಿಸಬಹುದಾದ ನಾಲ್ಕು ಚಕ್ರಗಳ ವಾಹನವೊಂದನ್ನು ತಯಾರಿಸಿ ಅಚ್ಚರಿಗೆ ಕಾರಣವಾಗಿದ್ದಾರೆ. ಇಂಟರ್​ನೆಟ್​ನಲ್ಲಂತೂ ಹೀರೋ ಆಗಿಬಿಟ್ಟಿದ್ದಾರೆ. ಇವರ ಹೆಸರು ಸುಶೀಲ್ ಅಗರ್​ವಾಲ್​. ಓಡಿಶಾದ ಮಯೂರ್​ಭಂಜ್​ನ ಉಪವಿಭಾಗವಾದ ಕಾರಂಜಿಯಾದ ನಿವಾಸಿ. ಇದೀಗ ವಿಭಿನ್ನವಾದ ವಾಹನವೊಂದನ್ನು ಸಿದ್ಧಪಡಿಸಿದ್ದಾರೆ. ಈ ವಾಹನದ ವಿಶೇಷತೆಯೆಂದರೆ ಇದು 850 ವ್ಯಾಟರ್​ ಮೋಟಾರ್​, 100 Ah/54 ವೋಲ್ಟ್ಸ್​​ನ ಬ್ಯಾಟರಿಯಿಂದ ಚಲಿಸುತ್ತದೆ. ನೀವು ಒಮ್ಮೆ ಪೂರ್ತಿ ಚಾರ್ಜ್​ ಮಾಡಿಬಿಟ್ಟರೆ ಬರೋಬ್ಬರಿ 300 ಕಿಮೀ ದೂರ ಓಡಿಸಬಹುದು.

ಮನೆಯಲ್ಲೇ ಇದೆ ವರ್ಕ್​ಶಾಪ್​ ಸುಶೀಲ್​ ಅಗರ್​ವಾಲ್​ ಈ ವಾಹನ ತಯಾರಿಸಲು ಶುರುಮಾಡಿದ್ದು ಲಾಕ್​ಡೌನ್​ ಸಮಯದಲ್ಲಿ. ಇದಕ್ಕಾಗಿ ಮನೆಯಲ್ಲೇ ಒಂದು ಕೋಣೆಯನ್ನು ಮೀಸಲಿಟ್ಟಿದ್ದರು. ಅಲ್ಲಿಯೇ ವಿಭಿನ್ನ ವಾಹನ ರೆಡಿ ಆಗಿದೆ. ವಾಹನಕ್ಕೆ ಅಳವಡಿಸಲಾದ ಬ್ಯಾಟರಿಗಳು ಚಾರ್ಜ್​ ಆಗಲು ಸುಮಾರು ಎಂಟರಿಂದ ಎಂಟೂವರೆ ತಾಸು ಬೇಕು. ನಿಧಾನಕ್ಕೆ ಚಾರ್ಜ್​ ಆದರೂ 10ವರ್ಷಗಳ ಕಾಲ ಬಾಳಿಕೆಗೆ ಬರುತ್ತವೆ. ಹಾಗೆ ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿಕೊಂಡರೆ 300 ಕಿಮೀ ದೂರವನ್ನು ನಿರಾತಂಕವಾಗಿ ಕ್ರಮಿಸಬಹುದು ಎನ್ನುತ್ತಾರೆ ಸುಶೀಲ್​​ ಅಗರ್​ವಾಲ್​.

ವಾಹನ ತಯಾರಿಕೆಯಲ್ಲಿ ನನಗೆ ಇಬ್ಬರು ಸಹಾಯ ಮಾಡಿದ್ದಾರೆ. ಮೋಟಾರ್ ವೈಂಡಿಂಗ್​, ಎಲೆಕ್ಟ್ರಿಕಲ್​ ಸಾಮಗ್ರಿಗಳ ಅಳವಡಿಕೆ ಸೇರಿ ಎಲ್ಲ ಕೆಲಸವನ್ನೂ ನಾವು ಮನೆಯಲ್ಲೇ ಮಾಡಿದ್ದೇವೆ. ವಿದ್ಯುತ್​ ಉಪಕರಣಗಳ ಬಗ್ಗೆ ನನ್ನ ಸ್ನೇಹಿತರೊಬ್ಬರು ಸಲಹೆಗಳನ್ನು ನೀಡಿದ್ದಾರೆ ಎಂದು ಎಎನ್​ಐಗೆ ಸುಶೀಲ್​ ತಿಳಿಸಿದ್ದಾರೆ. ಲಾಕ್​ಡೌನ್​ ಶುರುವಾದಾಗ ಕೆಲಸ ಶುರು ಮಾಡಿದ್ದೆವು. ಅದು ಪೂರ್ಣಗೊಳ್ಳಲು ಮೂರು ತಿಂಗಳು ಬೇಕಾಯಿತು. ಒಂದು ನಾಲ್ಕು ಚಕ್ರದ ವಾಹನ ತಯಾರಿಸಬೇಕು ಎಂದು ಯೋಚನೆ ಬಂದಾಗ ಕಾರ್ಯರೂಪಕ್ಕೆ ಇಳಿದೆ. ಲಾಕ್​ಡೌನ್​ ಮುಗಿಯುತ್ತಿದ್ದಂತೆ ಇಂಧನ ಬೆಲೆ ಏರಿಕೆಯಾಗುತ್ತದೆ ಎಂಬುದು ನನಗೆ ಪಕ್ಕಾ ಗೊತ್ತಿತ್ತು. ಹಾಗಾಗಿ ಎಷ್ಟಾಗತ್ತೋ ಅಷ್ಟು ಬೇಗ, ಪೆಟ್ರೋಲ್​, ಡೀಸೆಲ್​ ಅಗತ್ಯವಿಲ್ಲದ ಒಂದು ಸ್ವಂತ ಕಾರನ್ನು ಹೊಂದಲು ಬಯಸಿದ್ದೆ. ಅದರ ಪರಿಣಾಮವಾಗಿ ಹೀಗೊಂದು ಸೌರಶಕ್ತಿ ಚಾಲಿತ ಬ್ಯಾಟರಿಯಿಂದ ಓಡುವ ವಾಹನ ಸಿದ್ಧಪಡಿಸಿದೆ ಎಂದೂ ಹೇಳಿದ್ದಾರೆ. ಹಾಗೇ, ಇದಕ್ಕಾಗಿ ಕೆಲವು ಪುಸ್ತಕ, ಯೂಟ್ಯೂಬ್ ವಿಡಿಯೋಗಳನ್ನೂ ನೋಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ಒಡಿಶಾದ ಈ ರೈತನ ಬಗ್ಗೆ ನೆಟ್ಟಿಗರು ಸಂತೋಷ ವ್ಯಕ್ತಪಡಿಸಿದ್ದಾರೆ. ಇಂಥ ವಾಹನಗಳು ಪರಿಸರ ಸ್ನೇಹಿಯಾಗಿರುತ್ತವೆ. ಸರ್ಕಾರಗಳು ಗಮನಕೊಡಬೇಕು ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಒಂದು ಬಿಟ್​ ಕಾಯಿನ್​ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ!

ಜೊಮ್ಯಾಟೊ ಫುಡ್​ ಡೆಲಿವರಿ ಬಾಯ್ ಕಾಮರಾಜು​ ಪರ ನಿಂತ ಬಾಲಿವುಡ್​ನ ಖ್ಯಾತ​ ನಟಿ; ಆರೋಪ ಮಾಡಿದ ಮಹಿಳೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ

Published On - 7:22 pm, Sun, 14 March 21

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ