AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ: ದೇವಸ್ಥಾನದಿಂದ ಶ್ರೀಕೃಷ್ಣನ ಆಭರಣಗಳನ್ನು ಕದ್ದು 9 ವರ್ಷಗಳ ನಂತರ ತಪ್ಪೊಪ್ಪಿಗೆ ಟಿಪ್ಪಣಿಯೊಂದಿಗೆ ಮರಳಿಸಿದ ಕಳ್ಳ

2014 ರಲ್ಲಿ, ಯಜ್ಞಶಾಲೆಯಲ್ಲಿ (ಯಜ್ಞದ ಆಚರಣೆ ನಡೆಯುವ ಸ್ಥಳದಲ್ಲಿ) ಯಜ್ಞದ ಸಮಯದಲ್ಲಿ, ನಾನು ಈಆಭರಣಗಳನ್ನು ತೆಗೆದುಕೊಂಡಿದ್ದೇನೆ.ಕಳೆದ 9 ವರ್ಷಗಳಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದೆ. ಹಾಗಾಗಿ ನಾನು ನು ಅವುಗಳನ್ನು ಒಪ್ಪಿಸುತ್ತೇನೆ ಎಂಬ ಟಿಪ್ಪಣಿ ಜತೆ ಕಳ್ಳ ಆಭರಣಗಳನ್ನು ಮರಳಿಸಿದ್ದಾನೆ.

ಒಡಿಶಾ: ದೇವಸ್ಥಾನದಿಂದ ಶ್ರೀಕೃಷ್ಣನ ಆಭರಣಗಳನ್ನು ಕದ್ದು 9 ವರ್ಷಗಳ ನಂತರ ತಪ್ಪೊಪ್ಪಿಗೆ ಟಿಪ್ಪಣಿಯೊಂದಿಗೆ ಮರಳಿಸಿದ ಕಳ್ಳ
ಶ್ರೀಕೃಷ್ಣನ ಆಭರಣImage Credit source: India Today
ರಶ್ಮಿ ಕಲ್ಲಕಟ್ಟ
|

Updated on:May 17, 2023 | 6:03 PM

Share

ಒಡಿಶಾದ (Odisha) ಗೋಪಿನಾಥಪುರದ(Gopinathpur) ಗೋಪಿನಾಥ ದೇಗುಲದಲ್ಲಿ ಶ್ರೀಕೃಷ್ಣನ ಆಭರಣಗಳನ್ನು ಕದ್ದ ಕಳ್ಳನೊಬ್ಬ 9 ವರ್ಷಗಳ ನಂತರ ಅವುಗಳನ್ನು ಹಿಂದಿರುಗಿಸಿದ್ದಾನೆ. ತಾನು ಕದ್ದಂದಿನಿಂದ ದುಃಸ್ವಪ್ನಗಳು ಕಾಡುತ್ತಿವೆ ಎಂಬ ಟಿಪ್ಪಣಿಯೊಂದಿಗೆ ಈತ ಆಭರಣಗಳನ್ನು ಮರಳಿಸಿದ್ದಾನೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಆ ವ್ಯಕ್ತಿ ಇತ್ತೀಚೆಗೆ ಭಗವದ್ಗೀತೆಯನ್ನು ಓದಿದ್ದು,ತನ್ನ ತಪ್ಪಿನ ಅರಿವಾಗಿದೆ.ಈ ಆಭರಣಗಳು ದೇವಾಲಯದ ಪ್ರಧಾನ ದೇವತೆಗಳಾದ ಕೃಷ್ಣ ಮತ್ತು ರಾಧೆಯರಿಗೆ ಸೇರಿದ್ದು, ಲಕ್ಷಗಟ್ಟಲೆ ಬೆಲೆಬಾಳುವಂಥದ್ದು,

2014 ರಲ್ಲಿ, ಯಜ್ಞಶಾಲೆಯಲ್ಲಿ (ಯಜ್ಞದ ಆಚರಣೆ ನಡೆಯುವ ಸ್ಥಳದಲ್ಲಿ) ಯಜ್ಞದ ಸಮಯದಲ್ಲಿ, ನಾನು ಈಆಭರಣಗಳನ್ನು ತೆಗೆದುಕೊಂಡಿದ್ದೇನೆ.ಕಳೆದ 9 ವರ್ಷಗಳಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದೆ. ಹಾಗಾಗಿ ನಾನು ನು ಅವುಗಳನ್ನು ಒಪ್ಪಿಸುತ್ತೇನೆ ಎಂಬ ಟಿಪ್ಪಣಿ ಜತೆ ಕಳ್ಳ ಆಭರಣಗಳನ್ನು ಮರಳಿಸಿದ್ದಾನೆ. ಕಳ್ಳತನವಾಗಿದ್ದ ಶಿರಸ್ತ್ರಾಣ, ಕಿವಿಯೋಲೆ, ಬಳೆ, ಕೊಳಲು ಇದ್ದ ಬ್ಯಾಗ್‌ನ ಆಭರಣಗಳನ್ನು ದೇವಸ್ಥಾನದ ಮುಂಬಾಗಿಲ ಬಳಿ ಬಿಟ್ಟು ಅರ್ಚಕ ದೇಬೇಶ್ ಚಂದ್ರ ಮೊಹಂತಿ ಹೆಸರನ್ನು ಟಿಪ್ಪಣಿಯಲ್ಲಿ ಬರೆದಿದ್ದಾನೆ. ಈ ಆಭರಣಗಳ ಜೊತೆಗೆ ಹೆಚ್ಚುವರಿಯಾಗಿ 300 ರೂ.ಗಳನ್ನು ಇರಿಸಿದ್ದಾನೆ.

ಶ್ರೀಕೃಷ್ಣನ ಬೋಧನೆಯಿಂದ ಪ್ರೇರಿತನಾದ ಕಳ್ಳನು ಕದ್ದ ಆಭರಣಗಳನ್ನು ದೇವಾಲಯಕ್ಕೆ ಹಿಂದಿರುಗಿಸಲು ನಿರ್ಧರಿಸಿದನು ಎಂದು ಅವನು ತನ್ನ ಟಿಪ್ಪಣಿಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಭಾರತದಲ್ಲಿ ಪ್ರೇಮ ವಿವಾಹವಾದವರಲ್ಲೇ ಜಾಸ್ತಿ ವಿಚ್ಛೇದನ: ಸುಪ್ರೀಂಕೋರ್ಟ್

ಕಳ್ಳತನವಾದ ಚಿನ್ನಾಭರಣಗಳು ವಾಪಸ್ ಬಂದಿರುವುದು ದೇವಸ್ಥಾನದ ಅಧಿಕಾರಿಗಳು ಹಾಗೂ ಭಕ್ತರಲ್ಲಿ ಸಂತಸ ತಂದಿದೆ. ಪಶ್ಚಾತ್ತಾಪ ಪಡುವ ಕಳ್ಳನ ಕೃತ್ಯ ಮತ್ತು ಶ್ರೀಕೃಷ್ಣನ ಬೋಧನೆಗಳ ಮಹತ್ವವನ್ನು ಅವನು ಅರಿತುಕೊಂಡಿರುವುದು ಭಗವದ್ಗೀತೆಯ ಶಕ್ತಿಗೆ ಸಾಕ್ಷಿಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Wed, 17 May 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್